ಕಾಯಿಲೆಯ ಕುರಿತಾದ ಸತ್ಯ
ಕರ್ತರಿಗೆ ಸ್ತೋತ್ರ. ಏಕೆಂದರೆ ಮುಂದೋಟಗಾರನಾಗಿರುವ ನಮ್ಮ ಕರ್ತರು ನಮ್ಮ ಶೋಧನೆಗಳಿಗೆ ಮಾತ್ರವಲ್ಲದೆ ನಮ್ಮ ಕಾಯಿಲೆಗಳ ಬಗ್ಗೆಯೂ ಸಹಾನುಭೂತಿ ತೋರಿಸಬಲ್ಲರು

ದೈವಿಕ ಸಂದೇಶಗಳು


ಪವಿತ್ರಾತ್ಮನ ತುಂಬಿಸುವಿಕೆಯನ್ನು ಪಡೆಯಿರಿ
ನೀವು ಪ್ರಯತ್ನಿಸಿ, ಪ್ರಯತ್ನಿಸಿ ಸೋತಿದ್ದೀರಾ? ಮತ್ತೊಮ್ಮೆ ಪ್ರಯತ್ನಿಸಲು ಹೋಗಿ ನಿಮ್ಮ ನಂಬಿಕೆ ಕಡಿಮೆಯಾಗಿದೆ..
ಯೇಸು ಮತ್ತು ಅಪೊಸ್ತಲರ ಹಣಕಾಸಿನ ಧೋರಣೆ
ಹಣಕಾಸಿನ ವಿಚಾರದಲ್ಲಿ ಯೇಸುವು ನಮಗೆ ನೀಡಿರುವ ಒಂದು ಉದಾಹರಣೆಯು, ಆತನ ಸೇವೆ ಮಾಡುವ ಎಲ್ಲಾ ಜನರು ಹಾಗೂ ಎಲ್ಲಾ..
ನಾವು ನಂಬುವ ಸತ್ಯಗಳು
ಸತ್ಯವು, ಗಟ್ಟಿಯಾದ ಕೂಗಾಗಿದೆ ಮತ್ತು ಸ್ಪಷ್ಠವಾಗಿದೆ

ಪುಸ್ತಕಗಳು


ಸೋಲಿನ ಉದ್ದೇಶ
ನೀವು ನಿಮ್ಮನ್ನು ”ನಿರೀಕ್ಷೆಯಿಲ್ಲದ ಸೋತವರು” ಎಂಬುದಾಗಿ ಕಾಣುತ್ತೀರೋ?ಒಂದು ವೇಳೆ ನೀವು ಸಾವಿರ..
ವಿಸ್ಮಯಕರವಾದ ಸತ್ಯಾಂಶಗಳು
ದೇವರ ಮತ್ತು ಮನುಷ್ಯನ ಬಗೆಗಿನ ಪ್ರಾಥಮಿಕ ಪುಸ್ತಕ
ನಿನ್ನ ವೈರಿಯನ್ನು ತಿಳಿದುಕೋ
ಯೌವನಸ್ಥರೆ, ಸೈತಾನನ ಅಕ್ರಮಣಕರವಾದ ಗುರಿಯು ನಿವೇ ಆಗಿದ್ದೀರಿ ಎಂಬುದಾಗಿ ನಿಮಗೆ ಗೊತ್ತಾ? ಆತನು..
ಅಧಿಕ (19)

ನಾವು ನಂಬುವುದು

Body: 
Christian Fellowship Church, Bangalore - 2015
Christian Fellowship Church, Bangalore - 2015

ನಾವು ನಂಬುವುದು:-

ಸತ್ಯವೇದವು (ಬೈಬಲಿನ ೬೬ ಪುಸ್ತಕಗಳು) ದೇವರ ವಾಕ್ಯವಾಗಿದೆ, ಇದು ದೇವರಿಂದ ಪ್ರೇರೇಪಿತವಾದ ಮತ್ತು ಇಹಲೋಕದಲ್ಲಿ ನಾವು ಜೀವಿಸಲು ಮಾರ್ಗದರ್ಶಿಯಾಗಿದೆ.

ಏಕೈಕ ದೇವರು, ತಂದೆ, ಮಗ, ಪವಿತ್ರಾತ್ಮನಲ್ಲಿ ನಿತ್ಯತ್ವಕ್ಕೂ ಜೀವಿಸುವವನಾಗಿದ್ದಾನೆ.

ಯೇಸುಕ್ರಿಸ್ತನು ದೇವರಾಗಿದ್ದರೂ, ಆತನು ಕನ್ಯೆಯಲ್ಲಿ ಜನಿಸಿದನು; ಆತನು ಮಾನವನಾದನು; ಆತನು ಪಾಪವಿಲ್ಲದ ಪರಿಪೂರ್ಣ ಜೀವಿತವನ್ನು ಜೀವಿಸಿದನು; ನಮ್ಮ ಪಾಪ ಪರಿಹಾರಕ್ಕಾಗಿ ನಮ್ಮ ಬದಲಿಗೆ ಸತ್ತನು; ಆತನು ಶರೀರದಾರಿಯಾಗಿ ಪುನರುತ್ಠಾನನಾದನು; ಆತನು ತಂದೆಯ ಬಳಿ ಏರಿ ಹೋಗಿದ್ದು, ಮತ್ತೆ ತನ್ನ ಭಕ್ತರಿಗಾಗಿ ತಾನೇ ಭೂಮಿಗೆ ತಿರುಗಿ ಬರುವನು.

ಮಾನವ ಜೀವಿಯು ಪಾಪದಲ್ಲಿ ಸತ್ತು ಪೂರ್ಣವಾಗಿ ನಾಶವಾಗಿದ್ದಾನೆ. ಮತ್ತು ತಾನು ಕ್ಷಮಾಪಣೆಯನ್ನು ಪಡೆಯಲು ಮಾನಸಂತರಪಟ್ಟು ನಮ್ಮ ಕರ್ತ ಯೇಸುಕ್ರಿಸ್ತನ ಸಾವು ಮತ್ತು ಪುನರುತ್ಠಾನದಲ್ಲಿ ನಂಬಿಕೆ ಇಡುವುದೇ ಏಕೈಕ ಮಾರ್ಗವಾಗಿದೆ.

ಪವಿತ್ರಾತ್ಮನ ಪುನ:ಶ್ಚೇತನ ಕೆಲಸದಿಂದ ಒಬ್ಬ ವ್ಯಕ್ತಿಯು ಹೊಸದಾಗಿ ಹುಟ್ಟಿ ದೇವರ ಮಗುವಾಗುತ್ತಾನೆ.

ಕ್ರಿಸ್ತನ ಮೇಲಿನ ನಂಬಿಕೆಯಿಂದ ಮಾತ್ರ ನೀತಿಕರಿಸಲ್ಪಡುವುದು; ಇದರ ರುಜುವಾತು - ದೇವರ ಮಹಿಮೆಗಾಗಿ ಮಾಡುವ ಒಳ್ಳೆಯ ಕಾರ್ಯಗಳಲ್ಲಿದೆ.

ದೀಕ್ಷಾಸ್ನಾನವನ್ನು ಹೊಸದಾಗಿ ಹುಟ್ಟಿದ ನಂತರ , ತಂದೆಯ, ಮಗನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ಕೊಡುವುದಾಗಿದೆ.

ನಮ್ಮ ಜೀವಿತ ಮತ್ತು ವಾಕ್ಯದಲ್ಲಿ ಕ್ರಿಸ್ತನಿಗೆ ಸಾಕ್ಷಿಯಾಗಿರಲು ಬಲವುಳ್ಳವರಾಗುವಂತೆ, ಯಾವಾಗಲೂ ಪವಿತ್ರಾತ್ಮನಿಂದ ತುಂಬಿಸಲ್ಪಡುವುದು ಬಹು ಅವಶ್ಯವಾಗಿದೆ.

ನೀತಿವಂತರು ಪುನರುತ್ಠಾನ ಹೊಂದಿ ನಿತ್ಯಜೀವಕ್ಕೂ ಮತ್ತು ಅನೀತಿವಂತರು ಪುನರುತ್ಠಾನ ಹೊಂದಿ ನಿತ್ಯನಾಶನಕ್ಕೂ ಹೋಗುವರು-ಎಂಬುದರಲ್ಲಿ.

ಅಧಿಕ