ಕ್ರಿಸ್ತನ ದೇಹದಲ್ಲಿ ಒಬ್ಬರನ್ನೊಬ್ಬರು ಅಂಗೀಕರಿಸುವುದು
ದೇವರು ಅಂಗೀಕರಿಸಿದ ಇತರರನ್ನು ನಾವು ಸ್ವೀಕರಿಸದಿದ್ದರೆ, ನಾವು ಅಹಂಕಾರಿಗಳಾಗಿದ್ದೇವೆ ಮತ್ತು ನಾವು ಸ್ವತಃ ದೇವರಿಗಿಂತ ಹೆಚ್ಚು ಆತ್ಮಿಕರೆಂದು ಯೋಚಿಸುತ್ತಿದ್ದೇವೆ!

ದೈವಿಕ ಸಂದೇಶಗಳು


ನೀವು ಮಾಡುತ್ತಿರುವುದು ಶಿಷ್ಯರನ್ನೋ ಅಥವಾ..
ಶೇಷ್ಟ ಆಜ್ಞೆಯನ್ನು ನೋಡಿರಿ
ನಿರ್ಜೀವ ಕಾರ್ಯಗಳು
ನಿಜವಾಗಿಯೂ ನಿರ್ಜೀವ ಕಾರ್ಯಗಳು ಅಂದರೆ ಏನು ಎಂಬುದರ ಬಗ್ಗೆ ನಮಗೆ ಸ್ಪಷ್ಟವಾದ ತಿಳುವಳಿಕೆ ಇರುವುದು ತುಂಬಾ ಅಗತ್ಯವಾಗಿದೆ
ಸತ್ಯ ಮತ್ತು ಸುಳ್ಳಾದ ಸುವಾರ್ತೆ
ನೀವು ಕೇಳುವಂಥದ್ದು ಏನು? ನೀವು ಏನನ್ನು ಕೇಳಲು ನಿರೀಕ್ಷಿಸುತ್ತೀರಿ??

ಪುಸ್ತಕಗಳು


ದೈವೀಕ ಪುರುಷರ ಐವತ್ತು ಗುರುತುಗಳು
ವಿಶ್ವಾಸಿಗಳಿಗಾಗಿ - ನಿಜವಾದ ದೈವಿಕತೆ ಎಂದರೆ ಏನು ಎಂದು ವಿವರಿಸಲಾಗಿದೆ.
ಲೈಂಗಿಕತೆ, ಪ್ರೀತಿ ಮತ್ತು ಮದುವೆ
ಮತ್ತೊಬ್ಬರನ್ನು ಸಂಧಿಸುವಂತದ್ದು ಸರಿನಾ? ಪ್ರೀತಿಯಲ್ಲಿ ಬೀಳುವಂತದರ ಬಗ್ಗೆ ಏನು ಹಾಗಾದರೆ?..
ಪರಿಸಾಯರ ಐವತ್ತು ಗುರುತುಗಳು
ಒಬ್ಬ ವ್ಯಕ್ತಿ ಆಜ್ಞೆಗಳನ್ನು ಕೈಗೊಂಡಿರಬಹುದು, ಪವಿತ್ರತೆಯನ್ನು ಹಿಂದಟ್ಟಿ ಹೋಗುತ್ತಿರಬಹುದು..
ದೇವರ ಚಿತ್ತವನ್ನು ಹುಡುಕುವುದು
ವಿಧವಿಧವಾದ ವಿಷಯಗಳಲ್ಲಿ ದೇವರ ಚಿತ್ತವನ್ನು ಹುಡುಕುವುದು ಹೇಗೆ
ಅಧಿಕ (19)

ನಾವು ನಂಬುವುದು

Body: 
Christian Fellowship Church, Bangalore - 2015
Christian Fellowship Church, Bangalore - 2015

ನಾವು ನಂಬುವುದು:-

ಸತ್ಯವೇದವು (ಬೈಬಲಿನ ೬೬ ಪುಸ್ತಕಗಳು) ದೇವರ ವಾಕ್ಯವಾಗಿದೆ, ಇದು ದೇವರಿಂದ ಪ್ರೇರೇಪಿತವಾದ ಮತ್ತು ಇಹಲೋಕದಲ್ಲಿ ನಾವು ಜೀವಿಸಲು ಮಾರ್ಗದರ್ಶಿಯಾಗಿದೆ.

ಏಕೈಕ ದೇವರು, ತಂದೆ, ಮಗ, ಪವಿತ್ರಾತ್ಮನಲ್ಲಿ ನಿತ್ಯತ್ವಕ್ಕೂ ಜೀವಿಸುವವನಾಗಿದ್ದಾನೆ.

ಯೇಸುಕ್ರಿಸ್ತನು ದೇವರಾಗಿದ್ದರೂ, ಆತನು ಕನ್ಯೆಯಲ್ಲಿ ಜನಿಸಿದನು; ಆತನು ಮಾನವನಾದನು; ಆತನು ಪಾಪವಿಲ್ಲದ ಪರಿಪೂರ್ಣ ಜೀವಿತವನ್ನು ಜೀವಿಸಿದನು; ನಮ್ಮ ಪಾಪ ಪರಿಹಾರಕ್ಕಾಗಿ ನಮ್ಮ ಬದಲಿಗೆ ಸತ್ತನು; ಆತನು ಶರೀರದಾರಿಯಾಗಿ ಪುನರುತ್ಠಾನನಾದನು; ಆತನು ತಂದೆಯ ಬಳಿ ಏರಿ ಹೋಗಿದ್ದು, ಮತ್ತೆ ತನ್ನ ಭಕ್ತರಿಗಾಗಿ ತಾನೇ ಭೂಮಿಗೆ ತಿರುಗಿ ಬರುವನು.

ಮಾನವ ಜೀವಿಯು ಪಾಪದಲ್ಲಿ ಸತ್ತು ಪೂರ್ಣವಾಗಿ ನಾಶವಾಗಿದ್ದಾನೆ. ಮತ್ತು ತಾನು ಕ್ಷಮಾಪಣೆಯನ್ನು ಪಡೆಯಲು ಮಾನಸಂತರಪಟ್ಟು ನಮ್ಮ ಕರ್ತ ಯೇಸುಕ್ರಿಸ್ತನ ಸಾವು ಮತ್ತು ಪುನರುತ್ಠಾನದಲ್ಲಿ ನಂಬಿಕೆ ಇಡುವುದೇ ಏಕೈಕ ಮಾರ್ಗವಾಗಿದೆ.

ಪವಿತ್ರಾತ್ಮನ ಪುನ:ಶ್ಚೇತನ ಕೆಲಸದಿಂದ ಒಬ್ಬ ವ್ಯಕ್ತಿಯು ಹೊಸದಾಗಿ ಹುಟ್ಟಿ ದೇವರ ಮಗುವಾಗುತ್ತಾನೆ.

ಕ್ರಿಸ್ತನ ಮೇಲಿನ ನಂಬಿಕೆಯಿಂದ ಮಾತ್ರ ನೀತಿಕರಿಸಲ್ಪಡುವುದು; ಇದರ ರುಜುವಾತು - ದೇವರ ಮಹಿಮೆಗಾಗಿ ಮಾಡುವ ಒಳ್ಳೆಯ ಕಾರ್ಯಗಳಲ್ಲಿದೆ.

ದೀಕ್ಷಾಸ್ನಾನವನ್ನು ಹೊಸದಾಗಿ ಹುಟ್ಟಿದ ನಂತರ , ತಂದೆಯ, ಮಗನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ಕೊಡುವುದಾಗಿದೆ.

ನಮ್ಮ ಜೀವಿತ ಮತ್ತು ವಾಕ್ಯದಲ್ಲಿ ಕ್ರಿಸ್ತನಿಗೆ ಸಾಕ್ಷಿಯಾಗಿರಲು ಬಲವುಳ್ಳವರಾಗುವಂತೆ, ಯಾವಾಗಲೂ ಪವಿತ್ರಾತ್ಮನಿಂದ ತುಂಬಿಸಲ್ಪಡುವುದು ಬಹು ಅವಶ್ಯವಾಗಿದೆ.

ನೀತಿವಂತರು ಪುನರುತ್ಠಾನ ಹೊಂದಿ ನಿತ್ಯಜೀವಕ್ಕೂ ಮತ್ತು ಅನೀತಿವಂತರು ಪುನರುತ್ಠಾನ ಹೊಂದಿ ನಿತ್ಯನಾಶನಕ್ಕೂ ಹೋಗುವರು-ಎಂಬುದರಲ್ಲಿ.

ಅಧಿಕ