ಯೇಸುವು ನಮಗೆ ಜನರನ್ನು ಮತಾಂತರ ಮಾಡಲು ಆದೇಶಿಸಲಿಲ್ಲ - ಆದರೆ ಎಲ್ಲೆಡೆ ಶಿಷ್ಯಂದಿರನ್ನು ಮಾಡುವಂತೆ ಹೇಳಿದರು. ಹಾಗಾಗಿ ಸಭೆಯು ಒಂದು ಪರಿಶುದ್ಧವಾದ ಸಾಕ್ಷಿಯನ್ನು ಹೊಂದಬೇಕಾದರೆ, ಮೊದಲನೆಯದಾಗಿ, ನಾವು ನಮ್ಮ ಸಭೆಯ ಅಂಗವಾಗಲು ಬಯಸುವ ಪ್ರತಿಯೊಬ್ಬನಿಗೆ, ಶಿಷ್ಯನಾಗಲು ಪಾಲಿಸಬೇಕಾದ ಷರತ್ತುಗಳನ್ನು ಸ್ಪಷ್ಟವಾಗಿ ಕಲಿಸಬೇಕು; ಅದರ ಜೊತೆಗೆ, ಶಿಷ್ಯತ್ವವು ನಮ್ಮ ಖಾಸಗಿ ಜೀವನ, ಕುಟುಂಬದ ಜೀವನ ಹಾಗೂ ಸಭೆಯ ಜೀವನದಲ್ಲಿ ಎಂತಹ ಬದಲಾವಣೆಗಳನ್ನು ತರುತ್ತದೆ ಎನ್ನುವುದನ್ನು ಅವರಿಗೆ ತೋರಿಸಿಕೊಡಬೇಕು.
ಎಲ್ಲಕ್ಕೂ ಮೊದಲು, ನಾವು ಲೂಕ. 14:26-33 ರಲ್ಲಿ ಯೇಸುವು ಶಿಷ್ಯರಾಗಲು ಬಯಸುವವರಿಗೆ ನೀಡಿದ ಮೂರು ಅವಶ್ಯಕ ಷರತ್ತುಗಳನ್ನು ಕಲಿಸಬೇಕು:
ಎರಡನೆಯದಾಗಿ, ಪರ್ವತ ಪ್ರಸಂಗದಲ್ಲಿ (ಮತ್ತಾಯ 5, 6 ಮತ್ತು7ರಲ್ಲಿ) ಯೇಸುವು ಕಲಿಸಿಕೊಟ್ಟ ಎಲ್ಲಾ ವಿಷಯಗಳನ್ನು ಮತ್ತು ನಮ್ಮನ್ನು ಎಚ್ಚರಿಸಲು ಹೇಳಿದ ಪ್ರತಿಯೊಂದು ಮಾತನ್ನು ನಾವು ಸ್ಪಷ್ಟವಾಗಿ ಮತ್ತು ವಿವರವಾಗಿ ತೋರಿಸಿ ಕೊಡಬೇಕು. ಆ ಪ್ರಸಂಗದ ಅಂತ್ಯದಲ್ಲಿ ಯೇಸುವು ಮೂರು ಉದಾಹರಣೆಗಳನ್ನು ನೀಡಿದರು:
ಮೂರನೆಯದಾಗಿ, ಪವಿತ್ರಾತ್ಮನಿಂದ ತುಂಬಿಸಲ್ಪಡುವದಕ್ಕಾಗಿ ದೇವರನ್ನು ಬೇಡಿಕೊಳ್ಳುವಂತೆ ಸಭೆಯಲ್ಲಿ ಪ್ರತಿಯೊಬ್ಬರನ್ನೂ ನಾವು ಪ್ರೋತ್ಸಾಹಿಸಬೇಕು - ಏಕೆಂದರೆ ಸ್ವ-ಪ್ರಯತ್ನದ ಮೂಲಕ ಮೇಲೆ ತೋರಿಸಲಾದ ಉನ್ನತ ಮಟ್ಟಕ್ಕೆ ಏರಲು ಯಾರಿಗೂ ಸಾಧ್ಯವಿಲ್ಲ. ಆದರೆ ಪವಿತ್ರಾತ್ಮನು ನಮಗೆ ಕೊಡುವ ಬಲದ ಮೂಲಕ ಇದು ಸಾಧ್ಯವಾಗುತ್ತದೆ (ಅ.ಕೃ. 1:8; ಎಫೆಸ 5:18).
ನಾಲ್ಕನೆಯದಾಗಿ, ಪ್ರತಿಯೊಬ್ಬ ವಿಶ್ವಾಸಿಯೂ ಪರಲೋಕದಲ್ಲಿರುವ ದೇವರು ತನ್ನ ಸ್ವಂತ ತಂದೆಯಾಗಿದ್ದಾರೆ ಎಂದು ತಿಳಕೊಳ್ಳುವಂತೆ ನಾವು ಅವರನ್ನು ನಡೆಸಬೇಕು, ಮತ್ತು ಆ ಮೂಲಕ ಅವರು ಈ ಲೋಕದ ದುಷ್ಟತನ ಮತ್ತು ಅನಿಶ್ಚಿತತೆಯ ನಡುವೆಯೂ, ತಮ್ಮ ತಂದೆಯಲ್ಲಿ ಸುರಕ್ಷತೆಯನ್ನು ಕಂಡುಕೊಳ್ಳುವರು.
ಐದನೆಯದಾಗಿ, ಯೇಸುವು "ಎಲ್ಲಾ ವಿಷಯಗಳಲ್ಲಿ ನಮಗೆ ಸಮನಾಗಿ" ಮಾಡಲ್ಪಟ್ಟನು (ಇಬ್ರಿ. 2:17) ಮತ್ತು ಆತನು "ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿಯಾದನು" (ಇಬ್ರಿ. 4:15), ಎಂಬ ಶ್ರೇಷ್ಠವಾದ ಸತ್ಯವನ್ನು ಜನರಿಗೆ ಬೋಧಿಸಬೇಕು, ಏಕೆಂದರೆ ಇದರಿಂದ ಎಲ್ಲರೂ "ಕ್ರಿಸ್ತನು ನಡೆದಂತೆಯೇ ತಾನೂ ನಡೆಯುತ್ತೇನೆ" (1 ಯೋಹಾ. 2:6) ಎಂಬ ನಂಬಿಕೆಯನ್ನು ಹೊಂದಲು ಸಾಧ್ಯವಾಗುತ್ತದೆ.
ನಾವು ನಮ್ಮ ಸಭೆಯನ್ನು ಆರಂಭಿಸಿದಾಗ ಮೇಲಿನ ಸತ್ಯಾಂಶಗಳನ್ನು ಅನೇಕ ತಿಂಗಳುಗಳ ವರೆಗೆ ಅಭ್ಯಾಸಿಸಿದೆವು. ಇದರ ಫಲವಾಗಿ ಉತ್ತಮ ಫಲಿತಾಂಶಗಳನ್ನೂ ಸಹ ಪಡೆದುಕೊಂಡೆವು. ಹೀಗೆ ಮಾಡುವುದರಿಂದ ಮಾತ್ರವೇ ಕರ್ತನಿಗಾಗಿ ಒಂದು ಪರಿಶುದ್ಧವಾದ ಸಾಕ್ಷಿಯನ್ನು - ಒಂದು ಹೊಸ ಒಡಂಬಡಿಕೆಯ ಸಭೆಯನ್ನು - ಬೆಳೆಸಬಹುದು!