ಎಲ್ಲಾ ಪ್ರವಾದಿಗಳು ದೇವರ ಜನರ ಮಧ್ಯದಲ್ಲಿ ಉಳಿದವರ ಬಗ್ಗೆ ಮಾತನಾಡಿದರು. ದೇವರ ಜನರ ಮಧ್ಯದಲ್ಲಿ ಆತ್ಮಿಕತೆಯು ಕ್ಷೀಣಿಸುವಂತಹ ಸಮಯದಲ್ಲಿ, ಕೆಲವು ಮಂದಿ ದೇವರಿಗೆ ನಂಬಿಗಸ್ಥರಾಗಿ ಹೇಗೆ ಉಳಿದುಕೊಳ್ಳುತ್ತಾರೆ ಎಂಬುದರ ಬಗ್ಗೆ ಅವರು ಮಾತನಾಡಿದರು.
ಹಳೆಯ ಒಡಂಬಡಿಕೆಯಲ್ಲಿ ಬರೆದಿರುವ ಸಂಗತಿಗಳು ನಮ್ಮ ಮಾರ್ಗದರ್ಶನಕ್ಕಾಗಿ ಬರೆಯಲ್ಪಟ್ಟಿವೆ (1ಕೊರಿ10:11). ಹಿಂದೆ ಇಸ್ರಾಯೇಲ್ಯರಲ್ಲಿ ಅವನತಿಯಿದ್ದಂತೆ, ಇಂದೂ ಕ್ರೈಸ್ತರಲ್ಲಿ ಅವನತಿಯಿದೆ. ಇಸ್ರಾಯೇಲ್ ಮತ್ತು ಯೂದ ಎರಡು ರಾಜ್ಯಗಳು - ಕ್ರೈಸ್ತ ಸಾಮ್ರಾಜ್ಯದ ಎರಡು ಪಂಗಡಗಳ ಚಿತ್ರಣವಾಗಿವೆ. ಹತ್ತು ಕುಲಗಳ ಇಸ್ರಾಯೇಲ್ ರಾಜ್ಯವು ಪ್ರಮುಖ ಕ್ರೈಸ್ತ ಪಂಗಡಗಳನ್ನು ಸಂಕೇತಿಸುತ್ತದೆ, ಮತ್ತು ಎರಡು ಕುಲಗಳ ಯೂದವು ಅನುರೂಪವಾಗಿರದ, ಸಣ್ಣ ಗುಂಪುಗಳನ್ನು ಸಂಕೇತಿಸುತ್ತದೆ. ಆದರೆ ಇವೆರಡೂ ಪಂಗಡಗಳು ಇಂದು ಅವನತಿಯನ್ನು ಕಾಣುತ್ತಿವೆ. ಹಳೇ ಒಡಂಬಡಿಕೆಯಲ್ಲಿ ಯೂದವು ಇಸ್ರಾಯೇಲಿನ ತಪ್ಪಿನಿಂದ ಪಾಠ ಕಲಿಯಲಿಲ್ಲ. ಅನುರೂಪವಾಗಿರದ ಗುಂಪುಗಳು ಇಂದು ದೊಡ್ಡ ಪ್ರಮುಖ ಪಂಗಡಗಳು ಮಾಡಿದ ತಪ್ಪುಗಳಿಂದ ಪಾಠ ಕಲಿತಿಲ್ಲ, ಅವರು ಮಾಡಿದ ತಪ್ಪುಗಳನ್ನೇ ಇವರೂ ಮಾಡಿದ್ದಾರೆ. ಅಂತಿಮವಾಗಿ, ಎರಡೂ ಗುಂಪುಗಳಿಂದ ಇಂದು ದೇವರು ಉಳಿದಿರುವವರನ್ನು ಆರಿಸಿದ್ದಾನೆ. ಧಾರ್ಮಿಕ ಪಂಗಡಗಳಲ್ಲಿ ಮತ್ತು ಸ್ವತಂತ್ರ ಪಂಗಡಗಳಲ್ಲಿ ಇಂದು ಆತ್ಮಿಕ ಅವನತಿ ಇದೆ. ಆದರೆ, ಇವೆಲ್ಲದರೆ ನಡುವೆ, ದೇವರಿಗಾಗಿ ತಮ್ಮ ಹೃದಯವನ್ನು ಮೀಸಲಾಗಿಟ್ಟಿರುವ ಕೆಲವರು ಇನ್ನೂ ಇದ್ದಾರೆ. ಅವರೆಲ್ಲರೂ ಒಂದೇ ಪಂಗಡದಲ್ಲಿಲ್ಲ. ಅವರು ದೇವರನ್ನು ಪ್ರೀತಿಸಿ, ಎಲ್ಲಾ ವಿಷಯಗಳಲ್ಲಿ ಅವನನ್ನೇ ಸನ್ಮಾನಿಸಲು ಪ್ರಯತ್ನಿಸುತ್ತಿರುವ ಪರುಷ ಮತ್ತು ಸ್ತ್ರೀಯರು ಎಲ್ಲಾ ಪಂಗಡಗಳಲ್ಲಿ ಇದ್ದಾರೆ. ಅವರು ಶುದ್ದರು, ಪವಿತ್ರಾತ್ಮನಿಂದ ತುಂಬಿದವರು ಮತ್ತು ವಾಗ್ವದಗಳಲ್ಲಿ ಭಾಗಿಗಳಾಗುವವರಲ್ಲ. ಅವರು ತಮ್ಮ ನಾಲಿಗೆಯ ಉಪಯೋಗದ ಬಗ್ಗೆ ಜಾಗರೂಕರಾಗಿರುವವರು ಮತ್ತು ಹಣದ ಬಗ್ಗೆ ಬಹಳ ನಂಬಿಗಸ್ತರಾಗಿರುವವರು. ಈ ದಿನಗಳಲ್ಲಿ ದೇವರು ಇಂಥಹ ಜನರನ್ನು ತನ್ನ ಉಳಿದಿರುವವರನ್ನಾಗಿ ಒಗ್ಗೂಡಿಸುತ್ತಿದ್ದಾನೆ. ಪ್ರವಾದಿಗಳ ಮುಖ್ಯ ಉದ್ದೇಶವು ಯಾವಾಗಲೂ ಪುನ:ಸ್ಥಾಪನೆಯಾಗಿತ್ತು. ಉಳಿದಿರುವವರು ಯೇಸುವಿನ ಬರೋಣಕ್ಕೆ ಸಿದ್ಧತೆ ನಡೆಸಿದವರಾಗಿದ್ದವರು. ಕರ್ತನು ಹುಟ್ಟಿದಾಗ, ಅಲ್ಲಿ ಉಳಿದವರಿದ್ದರು - ದೇವಾಲಯದಲ್ಲಿ ಸಿಮಿಯೋನ ಮತ್ತು ಅನ್ನ, ಸ್ನಾನಿಕ ಯೋಹಾನ, ಕುರುಬರು, ಮತ್ತು ಪೂರ್ವದ ಕೆಲವು ಜ್ಞಾನಿಗಳು. ಇಂದು ಕೂಡ, ಕರ್ತನ ಬರುವಿಕೆಗೆ ಸಿದ್ಧತೆ ನಡೆಸುತ್ತಿರುವ ಕೆಲವರು ಕ್ರೈಸ್ತ ಸಾಮ್ರಾಜ್ಯದಲ್ಲಿ ಉಳಿದಿರುವವರು ಕೆಲವರಿದ್ದಾರೆ.
ಚೆಫನ್ಯನು ಹೇಳುತ್ತಾನೆ, "ಆತನ ನ್ಯಾಯತೀರ್ಪುಗಳನ್ನು ಮಾಡುವ ಲೋಕದ ದೀನರೆಲ್ಲರೇ ಕರ್ತನನ್ನು ಹುಡುಕಿರಿ, ನೀತಿಯನ್ನು ಹುಡುಕಿರಿ, ವಿನಯವನ್ನು ಹುಡುಕಿರಿ"(ಚೆಫನ್ಯ2:3). ಎಂಥಹ ಮಾತು? "ವಿನಯವನ್ನು ಹುಡುಕಿರಿ" ದೇವರು ವಿನಯವಂತರನ್ನು ಆಶೀರ್ವದಿಸುತ್ತಾನೆಂಬುದನ್ನು ಚೆಫನ್ಯನು ಅರ್ಥಮಾಡಿಕೊಂಡನು. ಒಂದು ಕಡೆ ಬಾಬಿಲೋನಿನ ಗರ್ವ ಮತ್ತು ಇನ್ನೊಂದು ಕಡೆ ಯೆರೂಸಲೇಮಿನಲ್ಲಿ ಉಳಿದವರ ದೀನತೆ. ಕಾಯಿನ ಮತ್ತು ಹೇಬೆಲನ ಕಾಲದಿಂದ ಮಾನವತೆಯಲ್ಲಿ ಎರಡು ತೊರೆಗಳು ಹರಿಯುತ್ತಿವೆ - ಬಾಬಿಲೋನ್ ಮತ್ತು ಯೆರೂಸಲೇಮ್. ಬಾಬಿಲೋನ್ ಭ್ರಷ್ಟ ಮತ್ತು ಧಾರ್ಮಿಕ ವ್ಯವಸ್ಥೆ. ಯೆರುಸಲೇಮ್, ದೇವರ ನಿಜವಾದ ದೇವರ ಸಭೆ. ಪವಾಡಗಳು, ಅದ್ಭುತಗಳು, ಈ ಸಭೆಯ ಗುಣಲಕ್ಷಣಗಳಲ್ಲ, ಬದಲಾಗಿ ದೀನತೆಯೇ ಅದರ ಗುಣಲಕ್ಷಣವಾಗಿದೆ. ಅಲ್ಲಿಯವರು ಇನ್ನೂ ಹೆಚ್ಚಾಗಿ ದೀನತೆಯನ್ನು ಕಂಡುಕೊಳ್ಳುವುದರಲ್ಲಿ ಪ್ರಯಾಸಪಡುವುದಿಲ್ಲ.
ಹಾಗಾದರೆ, ಉಳಿದವರಿಗೆ ಸೇರಲ್ಪಟ್ಟವರು ಎದುರಿಸುವ ಅಪಾಯವೇನು? ತಮ್ಮನ್ನೇ ಬೇರೆ ಸಭೆಗಳೊಡನೆ ಹೋಲಿಸಿ, ತಾವು ಅವರಿಗಿಂತ ಉನ್ನತವಾಗಿದ್ದೇವೆಂದು ತಮ್ಮನ್ನೇ ಮಹಿಮೆಪಡಿಸುವ ಅಪಾಯ ಅವರಿಗಿದೆ. ನೀನು ಆ ರೀತಿ ಯೋಚಿಸಬೇಕೆಂಬುದನ್ನೇ ಸೈತಾನನು ಬಯಸುತ್ತಾನೆ. ಯಾಕೆಂದರೆ, ನೀನು ಹಾಗೆ ಯೋಚಿಸಲು ಆರಂಭಿಸಿದಾಗ, ದೇವರು ನಿನ್ನ ವೈರಿಯಾಗುತ್ತಾನೆ ಮತ್ತು ನೀನು ಯಾರನ್ನು ಹೀಯಾಳಿಸುತ್ತೀಯೋ, ಅವರಂತೆಯೇ ನೀನೂ ಆಗುತ್ತೀಯ. ಎಷ್ಟು ಬೇಗ ಉಳಿದವರೂ ಬಾಬಿಲೋನಿನ ಭಾಗವಾಗಬಹುದೆಂಬುದನ್ನು ನೀನೇ ನೋಡು. ಆದ್ದರಿಂದ ನೀನು ದೀನತೆಯನ್ನು ಬೆನ್ನಟ್ಟು. ಸದಾಕಾಲವೂ ನಿನ್ನ ಮುಖವನ್ನು ಧೂಳಿನಲ್ಲಿಡು. ಇತರ ಜನರೊಂದಿಗೆ ನಿನ್ನನ್ನು ಎಂದಿಗೂ ಹೋಲಿಸಬೇಡ. ಯೇಸುವಿನೊಟ್ಟಿಗೆ ಮಾತ್ರ ನಿಮ್ಮನ್ನು ಹೊಲಿಸಿಕೊಳ್ಳಿರಿ. ಇಂದು ಉಳಿದವರೊಂದಿಗೆ ಸೇರಿದವರಿಗೆ ಇದೇ ನನ್ನ ಸಲಹೆ.
ಚೆಫನ್ಯನು ಪ್ರವಾದಿಸಿದ್ದೇನೆಂದರೆ, ಫಿಲಿಷ್ಟಿಯರ ಸ್ಥಳಗಳು ನಿರ್ಜನವಾಗಿ, ಹಾಳಾಗುತ್ತವೆ, ಆದರೆ ಕೆಲವು ಬದುಕುಳಿದವರನ್ನು (ಪುನ:, ಉಳಿದವರು) ದೇವರು ಆರೈಕೆ ಮಾಡುತ್ತಾರೆ (ಚೆಫನ್ಯ 2:4,7). ಈ ಉಳಿದವರನ್ನು ಇತರರು ಹಂಗಿಸುವರು ಮತ್ತು ತಮಾಷೆ ಮಾಡುವರು (ಚೆಫನ್ಯ2:8). ದಾನಿಯೇಲನ ಮತ್ತು ಆತನ ಮೂರು ಜನ ಸ್ನೇಹಿತರಂತೆ ಮತ್ತು ಪ್ರವಾದಿಗಳು ಹೇಳಿದ ಉಳಿದವರಂತೆ, ನೀವು ದೇವರಿಗಾಗಿ ನಿಲ್ಲುವುದಾದರೆ, ರಾಜಿಯಾಗುವ ಅನೇಕ ಕ್ರೈಸ್ತರು ನಿಮ್ಮನ್ನು ಹಂಗಿಸುತ್ತಾರೆ ಎಂಬುದನ್ನು ನಾನು ನಿಮಗೆ ಖಚಿತವಾಗಿ ಹೇಳುತ್ತೇನೆ. ಅವರು ನಿಮಗೆ ಹೀಗೆ ಹೇಳುತ್ತಾರೆ. "ನೀನು ಈ ಸಣ್ಣ ಧರ್ಮಾಂಧರ (ಮತಾಂಧರ) ಗುಂಪಿನಲ್ಲಿ ಸೇರದೇ ಇದ್ದಿದ್ದರೆ, ಎಂತಹ ಅದ್ಭುತವಾದ ಸೇವೆಯನ್ನು ನೀನು ಹೊಂದಿರುತ್ತಿದ್ದೆ". ಯಾವಾಗ ನಾನು ವಿಶಾಲವಾದ ಸೇವೆಯನ್ನು ಬಿಟ್ಟು, ಸ್ವಲ್ಪ ಜನರೊಟ್ಟಿಗೆ ನಮ್ಮ ಮನೆಯಲ್ಲಿ ಸಭೆಯಾಗಿ ಕೂಟ ಪ್ರಾರಂಭಿಸಿದಾಗ (1975ರಲ್ಲಿ) ಅನೇಕ ಕ್ರೈಸ್ತರು ನನಗೆ ಹೀಗೆ ಹೇಳಿದ್ದಾರೆ. ಅವರಲ್ಲಿ ಯಾರೊಬ್ಬನಿಗೂ ನಾನು ಕಿವಿಗೊಡದೇ ಇದ್ದುದಕ್ಕೆ ದೇವರಿಗೆ ನಾನು ಕೃತಜ್ಞನಾಗಿದ್ದೇನೆ. ನಾನು ಕರ್ತನಿಗೆ ಹೇಳಿದ್ದೇನೆಂದರೆ, "ಕರ್ತನೇ, ನಾನು ಒಬ್ಬ ಅಥವಾ ಇಬ್ಬರು ವಿಶ್ವಾಸಿಗಳೊಟ್ಟಿಗೆ ಮಾತ್ರ ಇದ್ದರೂ ತಲೆಕೆಡಿಸಿಕೊಳ್ಳುವುದಿಲ್ಲ. ನೀನು ಎಲ್ಲಿದ್ದೀಯೋ ಅಲ್ಲಿ ನಾನಿರಬೇಕು ಮತ್ತು ನಾನು ನಿನ್ನ ವಾಕ್ಯದ ಪೂರ್ಣ ಸತ್ಯವನ್ನು ಸಾರಬೇಕು. ಹಿಂಜಾರಿದ ಕ್ರೈಸ್ತ ಸಾಮ್ರಾಜ್ಯದ ನಾಯಕರ ಅಭಿಪ್ರಾಯಗಳಿಗಾಗಿ ನಾನು ಕಿಂಚಿತ್ತೂ ಗಮನಕೊಡುವುದಿಲ್ಲ. ಈ ರೀತಿಯ ನಿಲುವನ್ನು ತೆಗೆದುಕೊಂಡರೆ, ನೀವು ಅನೇಕ ರೀತಿಯ ವಿರೋಧವನ್ನು ಎದುರಿಸುತ್ತೀರಿ. ಆದರೆ ನೀವು ಕೊನೆಯ ತನಕ ಬಾಳಿದರೆ ಮಾತ್ರ, ನಿಮ್ಮ ಗುರಿಯನ್ನು ನೀವು ಸಂತೋಷದಿಂದ ತಲುಪುತ್ತೀರಿ. ನಿಮ್ಮ ಕಣ್ಣನ್ನು ಕರ್ತನ ಮೇಲೆ ನೆಡಿರಿ. ಕರ್ತನು ಹೀಗೆನ್ನುತ್ತಾನೆ. "ನಿಮ್ಮನ್ನು ಟೀಕಿಸುವವರ ಬಗ್ಗೆ ನೀವು ಚಿಂತೆ ಮಾಡಬೇಡಿ. ನನ್ನ ಸ್ವಂತ ಸಮಯದಲ್ಲಿ ನಾನು ಅದರೊಂದಿಗೆ ವ್ಯವಹರಿಸುತ್ತೇನೆ". ಇಂದು, ನನ್ನ ಟೀಕಾಕಾರರು ಮೌನವಾಗಿದ್ದಾರೆ. ದೇವರು ನಮ್ಮ ಮಧ್ಯದಲ್ಲಿ ಮಾಡಿದ ಕಾರ್ಯಗಳನ್ನು ನೋಡಿ ಅವರು ಬೆರಗಾಗುತ್ತಿದ್ದಾರೆ. ಹಂಗಿಸಲ್ಪಡುವ ಸಂದರ್ಭದಲ್ಲಿ ನೀವು ದೇವರಿಗಾಗಿ ನಿಲ್ಲುವುದಿಲ್ಲವಾದರೆ, ನೀವು ಹೋರಾಟವನ್ನು ಬಿಟ್ಟುಕೊಟ್ಟು, ರಾಜಿಗಾರರನ್ನು ಸೇರಿಕೊಳ್ಳುತ್ತೀರಿ.
ಉಳಿದವರ ಕೆಲವು ಗುಣಲಕ್ಷಣಗಳನ್ನು ಗಮನಿಸಿ: