ಸೋಲಿನ ಉದ್ದೇಶ

ಬರೆದಿರುವವರು :   ಝ್ಯಾಕ್ ಪೂನನ್
    Download Formats:

ಅಧ್ಯಾಯ
ಈ ಪುಸ್ತಕವು ಮತ್ತು ನೀವು

ನೀವು ನಿಮ್ಮನ್ನು ”ನಿರೀಕ್ಷೆಯಿಲ್ಲದ ಸೋತವರು” ಎಂಬುದಾಗಿ ಕಾಣುತ್ತೀರೋ? ನೀವು ದೇವರನ್ನು ಮೆಚ್ಚಿಸುವ ನಿಮ್ಮ ಪ್ರಯತ್ನಗಳಲ್ಲಿ ಪುನ: ಪುನ: ಸೋತವರಾಗಿದ್ದೀರೋ? ನೀವು ನಿಮ್ಮ ಜೀವಿತವನ್ನೇ ಹಾಳು ಮಾಡಿಕೊಂಡಿರುವಿರೋ?

ಹಾಗಾದರೆ, ಈ ಪುಸ್ತಕವು ನಿಮಗಾಗಿರುತ್ತದೆ.

ದೇವರು ತನ್ನ ಮಕ್ಕಳ ಸೋಲಿನ ಮುಖಾಂತರವೂ ತನ್ನ ಮಹಿಮೆಯುಳ್ಳ ಉದ್ದೇಶವನ್ನು ನೆರವೇರಿಸಬಲ್ಲನು ಎಂಬುದು ಅತಿಶಯವಾದ ಸತ್ಯ. ನೀವು ಗತಕಾಲದಲ್ಲಿ ಎಂಥಾ ಮಹಾ ತಪ್ಪನ್ನು ಮಾಡಿದ್ದರೂ ಇಂದು ನೀವು ಹೊಸ ಪ್ರಾರಂಭವನ್ನು ಮಾಡಲು ಸಾಧ್ಯ. ನೀವು ಸಾವಿರ ಹೊಸ ಪ್ರಾರಂಭಗಳನ್ನು ಗತಕಾಲದಲ್ಲಿ ಮಾಡಿ ಮಾಡಿ ಸೋತಿದ್ದರೂ ನೀವು 1001ನೇ ಹೊಸ ಪ್ರಾರಂಭವನ್ನು ಇಂದು ಮಾಡಲು ಸಾಧ್ಯ. ದೇವರು ತನ್ನ ಪರಿಪೂರ್ಣ ಯೋಜನೆಯನ್ನು ನಿಮ್ಮ ಜೀವಿತದಲ್ಲಿ ನೇರವೇರಿಸಲು ಶಕ್ತನಾಗಿದ್ದಾನೆ.

ಒಂದು ವೇಳೆ ದೇವರು ತನ್ನ ಮಕ್ಕಳಿಗಾಗಿ ಅದ್ಭುತವನ್ನು ಮಾಡದೇ ಇರುವುದಕ್ಕೆ ಕಾರಣ, ಅವರು ಗತಕಾಲದಲ್ಲಿ ಸೋತಿದ್ದರಿಂದ ಅಲ್ಲ, ಆದರೆ ಅವರು ಈಗ ಆತನ ಮೇಲೆ ಭರವಸೆ ಇಡದೇ ಹೋಗಿರುವುದೇ ಆಗಿದೆ.

ನೀವು ನಿಮ್ಮ ಜೀವಿತದ ಅಂತ್ಯಕ್ಕೆ ಬಂದು ”ಬಿಟ್ಟು ಬಿಡಬೇಕು” ಎಂದು ಯೋಚಿಸುತ್ತಿದ್ದರೆ, ಈ ಪುಸ್ತಕವು ನಿಮಗಾಗಿ ಉತ್ತೇಜನದ ಮಾತನ್ನು ಹೊಂದಿರುತ್ತದೆ. ಮುಂದೆ ಓದಿರಿ . . . .

ಅಧ್ಯಾಯ 1
ಮನುಷ್ಯನ ಸೋಲಿನಲ್ಲಿ ದೇವರ ಉದ್ದೇಶ

ಈಗ ಲೂಕ 22:31,32. ವಾಕ್ಯಗಳನ್ನು ನಾವು ಓದಿಕೊಳ್ಳೋಣ. ಇಲ್ಲಿ "ಸಿಮೋನನೇ, ಸಿಮೋನನೇ, ಇಗೋ, ಸೈತಾನನು ನಿನ್ನನ್ನು ಗೋಧಿಯಂತೆ ತೂರಬೇಕೆಂದು ಅಪ್ಪಣೆ ಪಡೆದಿದ್ದಾನೆ. ಆದರೆ ನಿನ್ನ ನಂಬಿಕೆಯು ಕುಂದದಂತೆ ನಾನು ನಿನಗೋಸ್ಕರ ಬೇಡಿಕೊಂಡಿದ್ದೇನೆ. ನೀನು ನನ್ನ ಕಡೆ ತಿರುಗಿಕೊಂಡ ಮೇಲೆ ನಿನ್ನ ಸಹೋದರರನ್ನು ಬಲಪಡಿಸು." ಎಂದು ಯೇಸುವು ಪೇತ್ರನಿಗೆ ಮುಂದಿರುವ ಅಪಾಯವನ್ನು ಪರಿಗಣಿಸಿ ಎಚ್ಚರಿಸುತ್ತಾನೆ.

ಆ ರಾತ್ರಿಯೇ ಪೇತ್ರನು ಪ್ರಭುವನ್ನು ಮೂರು ಬಾರಿ ನಿರಾಕರಿಸಿದ್ದನ್ನು ನಾವು ತಿಳಿದಿದ್ದೇವೆ. "ಪೇತ್ರನೇ ನೀನು ನನ್ನನ್ನು ಅರಿಯೆನೆಂದು ಮೂರು ಬಾರಿ ಅಲ್ಲಗಳೆಯುವುದಕ್ಕಿಂತ ಮುಂಚೆ ಈ ದಿವಸ ಕೋಳಿ ಕೂಗುವುದಿಲ್ಲ ಎಂದು ನಿನಗೆ ಹೇಳುತ್ತೇನೆ" ಎಂದು ಯೇಸು ಪೇತ್ರನಿಗೆ ಹೇಳಿದನು (ವಾಕ್ಯ 34).

ಇಂದು ನಾನು ನಿಮ್ಮೊಂದಿಗೆ ಮನುಷ್ಯನ ಸೋಲಿನಲ್ಲಿ ದೇವರ ಉದ್ದೇಶದ ಬಗ್ಗೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ. ಈ ವಿಷಯವು ನಿರಾಶೆಯಲ್ಲಿ ಸೋತು ಅದರಿಂದ ಬೇಸರ ಹಾಗೂ ಧೈರ್ಯಗುಂದಿರುವ ನಮ್ಮಂಥಹ ಹಲವರಿಗೆ ಪ್ರೋತ್ಸಾಹವನ್ನು ಕೊಡುತ್ತದೆ.

ಈಗ ನಮ್ಮ ಮೊದಲ ಪ್ರಶ್ನೆ, ದೇವರು ಸೋಲನ್ನು ಅನುಮತಿಸುತ್ತಾನೆಯೇ? ಸೋಲಿನಲ್ಲಿ ಏನಾದರೂ ಉದ್ದೇಶವಿದೆಯೇ? ಅಥವಾ ದೇವರ ನಿರ್ದಿಷ್ಟ ಇಚ್ಛೆಯಲ್ಲಿ ಸೋಲು ಯಾವುದೇ ಉದ್ದೇಶರಹಿತವಾದುದೇ ಹಾಗೂ ದೇವರು ಸೋತವರನ್ನು ತನ್ನ ಯಾವುದೇ ಉದ್ದೇಶಗಳಲ್ಲಿ ಮುನ್ನಡೆಸುವುದಿಲ್ಲವೇ?

ಈ ಮೇಲಿನ ವಾಕ್ಯಗಳನ್ನು ಓದಿದಾಗ, ಪೇತ್ರನು ತನ್ನನ್ನು ನಿರಾಕರಿಸುವುದರಲ್ಲಿ ದೇವರು ಅವನನ್ನು ತಡೆಯದಿದ್ದನ್ನು ನಾವು ನೋಡುತ್ತೇವೆ. ಏಕೆ "ಸಿಮೋನನೇ ನೀನು ನನ್ನನ್ನು ಒಂದು ಬಾರಿಯು ನಿರಾಕರಿಸದ ಹಾಗೆ ಪ್ರಾರ್ಥಿಸುತ್ತೇನೆ" ಎಂದು ಹೇಳಲಿಲ್ಲ? ಪೇತ್ರನು ಬಿದ್ದರೂ ಅವನ ನಂಬಿಕೆ ಮಾತ್ರ ಸೋಲದಿರಲೆಂದು ಪ್ರಭುವು ಪ್ರಾರ್ಥಿಸಿದ್ದೇಕೆ?? ಕರ್ತನು ಪೇತ್ರನು ಬೀಳದಿರಲೆಂದು ಪ್ರಾರ್ಥಿಸದೇ ಇದ್ದದ್ದು ಒಂದು ಕುತೂಹಲಕಾರಿ ಸಂಗತಿಯಲ್ಲವೆ?

ನಮ್ಮಲ್ಲಿ ಹಲವರು ಪ್ರಭುವು ನಾವು ಎಂದೂ ಸೋಲದಂತೆ, ಬೀಳದಂತೆ ಇರಲು ಪ್ರಾರ್ಥಿಸಬೇಕೆಂದು ಇಷ್ಟಪಡುತ್ತೇವೆ. ನಮ್ಮನ್ನು ಕುರಿತು "ಪ್ರಿಯ ಮಗನೇ, ಮಗಳೇ, ನೀನು ಎಂದಿಗೂ ಬೀಳಬಾರದು ಸೋಲಬಾರದು" ಎಂದು ಪ್ರಾರ್ಥಿಸಬೇಕೆಂದು ನಾವು ಇಚ್ಛಿಸುತ್ತೇವೆ. ಆಶ್ಚರ್ಯವೆಂದರೆ, ನಮ್ಮ ಪ್ರಭುವು ಹಾಗೆ ಪ್ರಾರ್ಥಿಸುವುದಿಲ್ಲ.

ಸಿಮೋನನಿಗಾಗಿ ಯೇಸುವು ಹೇಗೆ ಪ್ರಾರ್ಥಿಸಿದನು? ಸೈತಾನನು ಅವನನ್ನು ಶೋಧಿಸಿದಾಗ ಅವನ ನಂಬಿಕೆಯು ಕುಂದಬಾರದೆಂದು. ಪೇತ್ರನು ಶೋಧನೆಯಲ್ಲಿ ಬೀಳಬಾರದೆಂದು ಪ್ರಾರ್ಥಿಸಲಿಲ್ಲ.

ಬದಲಾಗಿ ಆತನು ಶೋಧಿಸಲ್ಪಟ್ಟಾಗ ದೇವರ ಪರಿಪೂರ್ಣ ಪ್ರೀತಿಯ ಮೇಲಿನ ಅವನ ನಂಬಿಕೆಯು ಸೋಲಬಾರದೆಂದು. ಆದ್ದರಿಂದ ಪೇತ್ರನು ಸೋಲಿನ ತಳಭಾಗವನ್ನು ತಲುಪಿದಾಗಲೂ ಸಹ "ದೇವರು ನನ್ನನ್ನು ಇನ್ನೂ ಪ್ರೀತಿಸುತ್ತಾನೆಂದು" ನಿವೇದಿಸಿದನು. ಇದೇ ನಂಬಿಕೆಯಾಗಿದೆ, ಇದೇ ಅರಿಕೆಯನ್ನು ನಾವು ಯಾವಾಗಲೂ ನಮ್ಮ ಹೃದಯದಲ್ಲಿ ಮತ್ತು ಬಾಯಿಯಲ್ಲಿ ಮಾಡುತ್ತಿರಬೇಕು. ಎಷ್ಟು ಆಳದಲ್ಲಿ ಬಿದ್ದಿದ್ದರೂ ಪರವಾಗಿಲ್ಲ - ನಾವು ಹೇಗಿದ್ದೇವೊ, ಹಾಗೆಯೆ ದೇವರು ನಮ್ಮನ್ನು ಪ್ರೀತಿಸುತ್ತಾನೆ.

ಇದೇ ಅ ತಪ್ಪಿಹೋದ ದುಂದುಗಾರ ಮಗನ ಮನವರಿಕೆಯಾಗಿತ್ತು. ಅವನು ಅತೀ ಕೀಳು ಸ್ಥಿತಿಯನ್ನು ತಲುಪಿದರೂ ಸಹ ಆ ಸಮಯದಲ್ಲಿ ತನ್ನನ್ನು ತನ್ನ ತಂದೆಯು ಇನ್ನೂ ಪ್ರೀತಿಸುತ್ತಾನೆಂದು ನಂಬಿದ್ದನು. ಹಂದಿಗಳ ಆಹಾರವನ್ನು ತಿನ್ನುವ ಮಟ್ಟಕ್ಕೆ ಇಳಿದ ಅವನಿಗಿಂತ ಕೀಳುಮಟ್ಟಕ್ಕೆ ಬೇರೆ ಯಾರೂ ಇಳಿಯುವುದಿಲ್ಲವೆಂದು ನಾನು ಭಾವಿಸುತ್ತೇನೆ. ಆ ಹುಡುಗನು ಪೂರ್ಣ ತಳಮಟ್ಟಕ್ಕೆ ಇಳಿದಿದ್ದನು. ಆದರೆ ಈ ಸ್ಥಿತಿಯಲ್ಲಿ ಅವನು ಒಂದು ವಿಷಯವನ್ನು ಮಾತ್ರ ನೆನಪಿನಲ್ಲಿ ಇಟ್ಟುಕೊಂಡಿದ್ದನು. ಅದು ಅವನ ತಂದೆಯು ತನ್ನನ್ನು ಇನ್ನೂ ಪ್ರೀತಿಸುತ್ತಾನೆಂದು ಇಲ್ಲವಾದಲ್ಲಿ ಅವನೆಂದಿಗೂ ತನ್ನ ಮನೆಗೆ ಹಿಂದಿರುಗುತ್ತಿರಲಿಲ್ಲ ಅಥವಾ ಅವನ ತಂದೆಯು ತೀರಿಕೊಂಡಿದ್ದಾನೆಂದೂ, ಈಗ ಹಿರಿಯಣ್ಣನು ಮನೆಯ ಉಸ್ತುವಾರಿಯಲ್ಲಿದ್ದಾನೆಂದು ತಿಳಿದಿದ್ದರೆ ಅವನು ಮನೆಗೆ ಹಿಂದಿರುಗುತ್ತಿದ್ದನೆ? ಖಂಡಿತವಾಗಿ ಇಲ್ಲ.

ಅವನಿಗೆ ತನ್ನ ಹಿರಿಯಣ್ಣನ ಸ್ವಭಾವ ಚೆನ್ನಾಗಿ ತಿಳಿದಿತ್ತು. ಅದನ್ನು ತಿಳಿದ ಅವನು ಎಂದಿಗೂ ಹಿಂದಿರುಗಿ ಬರುತ್ತಿರಲಿಲ್ಲ. ಅವನು ಬರಲು ಒಂದು ಮುಖ್ಯ ಕಾರಣವೇನೆಂದರೆ, ಅವನಿಗೆ ತನ್ನ ತಂದೆಯ ಪ್ರೀತಿಯ ಮೇಲಿದ್ದ ನಂಬಿಕೆ. ಕೆಲವು ಪಾಪಿಗಳು ಇಂದಿನ ಹಲವು ಸಭೆಗಳಲ್ಲಿ ಈ ಸಾಮ್ಯದಲ್ಲಿ ಹೇಳಿರುವ ತರಹದ ಹಿರಿಯಣ್ಣನಂತಿರುವ ಹಿರಿಯರು ಅಥವಾ ಪಾಸ್ಟರ್‌ಗಳನ್ನು ನೋಡುವುದರಿಂದ ಇಂಥಹ ಸಭೆಗಳಿಗೆ ಬರುವುದಿಲ್ಲ.

ಈ ಪಾಪಿಗಳು ಸಭೆಗೆ ಬರದಿದ್ದಕ್ಕೆ ಅವರನ್ನು ಅರೋಪಿಸುವುದು ಸರಿಯಲ್ಲ. ಈ ಹಿಂದಿನ ಸಾಮ್ಯದಲ್ಲಿನ ತಂದೆಯಂತಹ ಆತ್ಮವುಳ್ಳ ಹಿರಿಯರು ಸಭೆಯಲ್ಲಿದ್ದರೆ ಖಂಡಿತವಾಗಿಯೂ ಅತೀ ಕೆಳ ದರ್ಜೆಯ ಪಾಪಿಗಳೂ ಸಹ ತಮ್ಮ ರಕ್ಷಣೆಯನ್ನು ಅರಸಿ ಸಭೆಯನ್ನು ಹುಡುಕಿಕೊಂಡು, ಯೇಸುವನ್ನು ಹುಡುಕಿಕೊಂಡು ಬಂದ ರೀತಿಯಲ್ಲಿ ಬರುತ್ತಾರೆ. ನಮ್ಮ ಸಭೆಗಳಿಗಳಲ್ಲಿ ಸಹ ಹೀಗೆಯೇ ಇರಬೇಕು. ಅತೀ ಪಾಪಿಗಳೂ ಸಹ ನಮ್ಮ ಸಭಾ ಕೂಟಗಳಿಗೆ ಬರಲು ಇಷ್ಟಪಡಬೇಕು. ನಮ್ಮ ಮಧ್ಯೆ ಯೇಸು ಇದ್ದರೆ ಇದು ಖಂಡಿತ ಸಾಧ್ಯ. ಎಂಥಹ ಘೋರ ಪಾಪಿಗಳೂ ಕೂಡ ನಮ್ಮಲ್ಲಿಗೆ ಬಂದು ರಕ್ಷಣೆಯನ್ನು ಪಡೆಯುತ್ತಾರೆ.

ಯಾರು ಸಂಪೂರ್ಣವಾಗಿ ಸೋತು ತಮ್ಮ ಜೀವಿತವನ್ನು ಹೊಲಸು ಮಾಡಿಕೊಂಡು ಪೂರ್ಣ ತಳಭಾಗಕ್ಕೆ ತಲುಪಿದ್ದಾರೋ ಅಂಥವರಿಗೆಲ್ಲಾ ನಿರೀಕ್ಷೆ ಇದೆ. ಅಂಥಹ ಸ್ಥಿತಿಯಿಂದ ನಿಮ್ಮನ್ನು ತೆಗೆದು ಮಹಿಮೆಯ ತುತ್ತ ತುದಿಗೆ ತಲುಪಿಸುವ ಶಕ್ತಿ ಪ್ರಭು ಯೇಸುವಿಗಿದೆ.

ನಮಗಾಗಿ ಯಾವಾಗಲು ಆತನ ಪ್ರಾರ್ಥನೆಯೇನೆಂದರೆ ದೇವರ ಪ್ರೀತಿಯಲ್ಲಿ ನಮ್ಮ ನಂಬಿಕೆ ಯಾವ ಸಮಯದಲ್ಲೂ ಕುಂದಬಾರದೆಂಬುದೇ. ಈ ಸಂದೇಶವು ಇಂದು ನಿಮಗೆ ಅವಶ್ಯ ಇಲ್ಲದಿರಬಹುದು. ಆದರೆ ಮುಂದೊಂದು ದಿನ ನಿಮಗೆ ಖಂಡಿತವಾಗಿ ಬೇಕಾಗಬಹುದು. ಅದು ನೀವು ಪೂರ್ಣ ತಳಭಾಗವನ್ನು ತಲುಪಿದಾಗ, ಆ ದಿನ ನೀವು ಎಲ್ಲಿದ್ದರೂ ಎಷ್ಟು ತಲಭಾಗಕ್ಕೆ ಬಿದ್ದಿದ್ದರೂ ಸಹ ದೇವರು ನಿಮ್ಮನ್ನಿನ್ನೂ ಪ್ರೀತಿಸುತ್ತಾನೆಂದು ನೆನಪಿಡಿ.

ದೇವರು ನಮ್ಮನ್ನಿನ್ನೂ ಪ್ರೀತಿಸುತ್ತಾನೆಂದು ನಂಬುವುದೇ ನಂಬಿಕೆಯ ಮೂಲವಾಗಿರುತ್ತದೆ. ಆತನು ಪಾಪವನ್ನು ಪ್ರೀತಿಸುವುದಿಲ್ಲ ಹಾಗೂ ನಾವು ಪಾಪದಲ್ಲಿ ಮುಂದುವರಿಯಬೇಕೆಂದೂ ಸಹ ಬಯಸುವುದಿಲ್ಲ. ಆತನು ರೋಗಕ್ಕೊಳಗಾದ ಮಗುವನ್ನು ಪ್ರೀತಿಸಿ ಆ ಮಗುವಿನಲ್ಲಿರುವ ರೋಗವನ್ನು ದ್ವೇಷಿಸುವ ತಂದೆಯಂತೆ ಇದ್ದಾನೆ. ಪೂರ್ಣವಾಗಿ ಕುಷ್ಠರೋಗದಿಂದಲೂ ಅಥವಾ ಕ್ಷಯರೋಗದಿಂದಲೂ ನರಳುತ್ತಿರುವ ತನ್ನ ಮಗುವನ್ನು ನೋಡುವ ತಾಯಿಯನ್ನು ನೆನಪಿಸಿಕೊಳ್ಳಿ. ಆ ತಾಯಿಯು ತನ್ನ ಮಗುವಿನಲ್ಲಿರುವ ರೋಗವನ್ನು ಪೂರ್ಣವಾಗಿ ಹಗೆ ಮಾಡಿದರೂ ಸಹ ಆ ಮಗುವನ್ನು ಎಷ್ಟೊಂದು ಪ್ರೀತಿಸುತ್ತಾಳೆ. ಹಾಗೆಯೇ ದೇವರು ಪಾಪವನ್ನು ದ್ವೇಷಿಸಿದರೂ ಸಹ ಪಾಪಿಗಳನ್ನು ಪ್ರೀತಿಸುತ್ತಾನೆ.

ಪಾಪಿಗಳಿಗಾಗಿ ದೇವರಿಗಿರುವ ಪ್ರೀತಿಯನ್ನು ಹಾಗೂ ಪಾಪದ ಮೇಲಿರುವ ಆತನ ದ್ವೇಷವನ್ನು ಕಲ್ವಾರಿ ಶಿಲುಬೆಯ ಮೇಲೆ ನಾವು ನೋಡುತ್ತೇವೆ. ಆತನು ಯೇಸುವನ್ನು ಶಿಲುಬೆಯ ಮೇಲೆ ನಮಗೋಸ್ಕರ ಸಾಯುವಂತೆ ಮಾಡಿದ್ದು, ನಮ್ಮ ಮೇಲೆ ಆತನಿಗಿರುವ ಪ್ರೀತಿಯನ್ನು ಹಾಗೂ ಯೇಸುವು ಲೋಕದ ಪಾಪವನ್ನು ಶಿಲುಬೆಯಲ್ಲಿ ತನ್ನ ಮೇಲೆ ಹೊತ್ತುಕೊಂಡಾಗ ನಿರ್ದಾಕ್ಷಿಣ್ಯವಾಗಿ ಯೇಸುವಿನಿಂದ ತನ್ನ ಮುಖ ತಿರುಗಿಸಿದ್ದು ಪಾಪದ ಮೇಲೆ ಆತನಿಗಿರುವ ಹಗೆಯನ್ನು ತೋರಿಸುತ್ತದೆ.

ಪ್ರೀತಿಭರಿತ ದೇವರು ಜನರನ್ನು ಹೇಗೆ ನರಕ್ಕಕೆ ಕಳುಹಿಸುತ್ತಾನೆಂದು ಜನರು ಕೆಲವು ಭಾರಿ ಕೇಳುತ್ತಾರೆ? ನರಕವೆಂದರೆ ಹೇಗಿದೆ? ನರಕವೆಂದರೆ ದೇವರಿಂದ ಸಂಪೂರ್ಣವಾಗಿ ತ್ಯಜಿಸಲ್ಪಟ್ಟಿದ್ದು ಅದು ದೇವರಿಲ್ಲದ ಸ್ಥಳವಾಗಿದೆ.

ಈ ಭೂಮಿಯನ್ನು ದೇವರಿನ್ನೂ ತ್ಯಜಿಸಿಲ್ಲ. ಆದ್ದರಿಂದ ಇನ್ನೂ ಬಹಳಷ್ಟು ಒಳ್ಳೇತನವನ್ನು ಮತ್ತು ಸೌಂದರ್ಯವನ್ನು ನೋಡುತ್ತೇವೆ. ಮಾನವನಲ್ಲಿರುವ ಸಭ್ಯತೆ ಮತ್ತು ಒಳ್ಳೇತನವನ್ನು ನೋಡಿ ಪಿಶಾಚಿಗಳು ಎಲ್ಲಾ ಮನುಷ್ಯರನ್ನು ತನ್ನ ವಶಮಾಡಲು ಪ್ರಯತ್ನಿಸುತ್ತವೆ. ಆದರೆ ದೇವರು ಮನುಷ್ಯರ ಸುತ್ತಲೂ ಒಂದು ತಡೆಯಂತಹ ಗೋಡೆಯನ್ನು ನಿರ್ಮಿಸಿರುವ ಕಾರಣ ಅವು ಇಷ್ಟಪಟ್ಟರೂ ಸಹ ಅವು ವಶಮಾಡಿಕೋಳ್ಳಲು ಸಾಧ್ಯವಿಲ್ಲ. ಆರೋಗ್ಯ ಸಂಪತ್ತು ಹಾಗೂ ಹಲವಾರು ಅನುಕೂಲಗಳು ಸಹ ದೇವರ ಕರುಣೆಯಿಂದಲೆ ಮನುಷ್ಯನಿಗೆ ಲಭಿಸಿದ್ದಾಗಿದೆ.

ಆ ಎಲ್ಲಾ ಆಶೀರ್ವಾದಗಳೂ ಕೂಡ ಒಳ್ಳೇಯ ಹಾಗೂ ಕೆಟ್ಟ ಜನಗಳಿಗೆ ದೇವರಿಂದ ಕೊಡಲ್ಪಟ್ಟಿವೆ. ಇವುಗಳೆಲ್ಲಾ ದೇವರು ಈ ಲೋಕವನ್ನಿನ್ನೂ ತೈಜಿಸಿಲ್ಲವೆಂಬುದನ್ನು ತೋರಿಸುತ್ತದೆ. ಆದರೆ ನರಕವು ಹೀಗಿರುವುದಿಲ್ಲ. ನರಕದಲ್ಲಿ ಕರುಣೆಯೇ ಇರುವುದಿಲ್ಲ. ಏಕೆಂದರೆ ನರಕವು ಪೂರ್ಣವಾಗಿ ದೇವರು ತ್ಯಜಿಸಿರುವ ಸ್ಥಳವಾಗಿದೆ.

ಬಹಳಷ್ಟು ಅವಿಶ್ವಾಸಿಗಳಲ್ಲಿಯೂ ಒಳ್ಳೆಯತನವಿರುವುದನ್ನು ನೋಡಿದಾಗ ಅವರಲ್ಲಿ ದೇವರ ಪ್ರೋತ್ಸಾಹವಿನ್ನೂ ಇರುವುದನ್ನು ಈ ಲೋಕದಲ್ಲಿ ಕಾಣಬಹುದಾಗಿದೆ. ಆದರೆ ಇದೇ ಜನರು ನರಕಕ್ಕೆ ಹೋದಾಗ ಪಿಶಾಚಿಯಂತೆ ದುಷ್ಟತನವನ್ನು ಹೊಂದುತ್ತಾರೆ. ಕಾರಣ ದೇವರ ಕರುಣೆಯು ಅವರ ಜೀವಿತದಿಂದ ತೆಗೆಯಲ್ಪಡುವುದರಿಂದ ಹೀಗಾಗುತ್ತದೆ. ನರಕಕ್ಕೆ ಹೋದಾಗ ಮಾತ್ರ ಜನರು ಮೊದಲ ಬಾರಿಗೆ ದೇವರಿಂದ ಸಂಪೂರ್ಣವಾಗಿ ತೈಜಿಸಲ್ಪಡುವುದೆಂದರೇನೆಂದು ಅನುಭವಿಸುತ್ತಾರೆ. ಇದನ್ನೆ ಯೇಸುವು ಶಿಲುಬೆಯಲ್ಲಿ ಅನುಭವಿಸಿದ್ದಾಗಿರುತ್ತದೆ. ಶಿಲುಬೆಯ ಮೇಲೆ ದೇವರು ಯೇಸುವನ್ನು ತ್ಯಜಿಸಿದಾಗ ಆ ಮೂರು ತಾಸುಗಳ ಕಾಲ ಕತ್ತಲಿನಲ್ಲಿ ಆತನು ನರಕದ ಯಾತನೆಯನ್ನು ಅನುಭವಿಸಿದನು. ಅಲ್ಲಿ ನಾವು ಪಾಪವನ್ನು ದೇವರು ಎಷ್ಟು ದ್ವೇಷಿಸುತ್ತಾರೆಂಬುದನ್ನು ನೋಡುತ್ತೇವೆ.

ಹಾಗಿದ್ದರೆ ಉತ್ತರ ಏನು? ಇಂಥಹ ಪೀತಿಯುಳ್ಳ ದೇವರು ಜನರನ್ನು ನರಕಕ್ಕೆ ಕಳುಹಿಸುತ್ತಾನೆಯೇ? ಈ ಪ್ರಶ್ನೆಗೆ ಉತ್ತರವು ಮುಂದಿನ ಪ್ರಶ್ನೆಯ ಉತ್ತರದಲ್ಲಿ ಅಡಕವಾಗಿದೆ. ಈ ಲೋಕದ ಪಾಪವು ತನ್ನ ಸ್ವಂತ ಮಗನ ಮೇಲೆ ಬಿದ್ದಾಗ ನರಕ ಯಾತನೆಯನ್ನು ಅನುಭವಿಸಲು ಪ್ರೀತಿಯುಳ್ಳ ದೇವರು ಅನುಮತಿಸುತ್ತಾರೆಯೇ, ಅದನ್ನು ಮಾಡುವವರಾದರೆ ಜನರನ್ನು ಸಹ ನರಕಕ್ಕೆ ಕಳುಹಿಸುತ್ತಾನೆಂಬುದು ಸತ್ಯ. ಯಾರು ದೇವರಿಗೆ ನಾನು ನಿನ್ನ ಮಾತನ್ನು ಕೇಳುವುದಿಲ್ಲ. ನಾನು ನನ್ನ ಹಾದಿಯನ್ನು ಆರಿಸಿಕೊಂಡಿದ್ದೇನೆ. ಎಂದೆಂದಿಗೂ ನಾನದರಲ್ಲೇ ಮುಂದುವರೆಯುತ್ತೇನೆ ಎಂದು ಹೇಳಿ ಪಾಪದಲ್ಲಿಯೇ ಮುಂದುವರಿಯುತ್ತರೆಯೋ ಅಂಥವರಿಂದ ಪ್ರೀತಿ ಪೂರ್ವಕ ದೇವರ ತನ್ನ ಮುಖವನ್ನು ತಿರುಗಿಕೊಳ್ಳುತ್ತಾನೆ.

ಪವಿತ್ರ ಗ್ರಂಥದ ಜ್ಞಾನೋಕ್ತಿ 29:1 ರಲ್ಲಿ ವಿಸ್ತಾರ ಅನುವಾದ ಹೇಳುತ್ತದೆ.ಅನೇಕ ಸಲ ತಿದ್ದಿದರೂ ಸಲಹೆಯನ್ನು ಸ್ವೀಕರಿಸದವನು ಒಂದು ದಿನ ಇದ್ದಕ್ಕಿದ್ದ ಹಾಗೆ ಇನ್ರ್ನೆಂದು ಅವಕಾಶವೂ ಸಿಕ್ಕದಂತೆ ನಾಶವಾಗುವನು. ಯಾರು ದೇವರ ಪ್ರೀತಿಯ ಅಹ್ವಾನಗಳನ್ನು ತಿರಸ್ಕರಿಸುತ್ತಾನೋ ಅವನು ಅಪಾಚಿiದಲ್ಲಿದ್ದಾನೆ.

ಈ ಸೂಕ್ಷ್ಮ ಪ್ರಜ್ಞೆಯ ಸಹೋದರ ಸಹೋದರಿಯರು ಇದನ್ನು ಕೇಳಿ ಧೈರ್ಯಗೆಡಬೇಕೆಂದು ನಾನು ಅಪೇಕ್ಷೆ ಪಡುವುದಿಲ್ಲ. ಏಕೆಂದರೆ ಈ ವಾಕ್ಯವು ಪಾಪದಲ್ಲಿ ಎಡವಿ ಬೀಳುವವರಿಗಾಗಿ ಬರೆದಿರುವುದಿಲ್ಲ. ಆದರೆ ಯಾರೂ ಪಾಪವನ್ನು ಪೀತಿಸುತ್ತಾರೋ ಹಾಗೂ ಅದರಲ್ಲೇ ಮುಂದುವರಿಯುತ್ತಾರೋ ಅವರನ್ನು ಎಚ್ಚರಿಸಲು ಬರೆದಿದ್ದಾಗಿದೆ. ಇದನ್ನು ಶುದ್ದವಾಗಿ ಜೀವಿಸಲು ಪ್ರಯತ್ನಿಸುತ್ತಾ ಆಕಸ್ಮಿಕವಾಗಿ ಬೀಳುವವರಿಗೆ ಬರೆದಿಲ್ಲ. ಯಾರೂ ದೇವರನ್ನು ತಡೆದು ಪಾಪಮಾಡುತ್ತಾ ಇರಲು ಪ್ರೀತಿಸುತ್ತಾರೋ ಅಂಥಹ ತಿರುಗಿಬೀಳುವವರಿಗೆ ಬರೆದಿದೆ.

ನೀನು ತಿರುಗಿಬೀಳುವವನಾಗಿರಬಹ್ಮದೆಂದು ಹೇಗೆ ತಿಳಿಯಬಹುದು. ಅದು ಬಹಳ ಸುಲಭ. ನಿನಗೆ ನಿಜವಾಗಿ ಪಶ್ಚಾತ್ತಾಪ ಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವ ಆಶೆ ಇದೆಯಾ ಎಂದು ನಿನ್ನನ್ನು ನೀನು ಪ್ರಶ್ನಿಸಿಕೋ. ನಿನ್ನಲ್ಲಿ ಕಿಚಿಚಿತ್ತಾದರೂ ದೇವರ ಕಡೆಗೆ ತಿರುಗಿ ಆತನನ್ನು ಪ್ರೀತಿಸಬೇಕೆನ್ನುವ ಅಶೆ ಇದ್ದರೆ ಪವಿತ್ರಾತ್ಮನು ಇಗೋ ನಿನ್ನ ಜೀವಿತದಲ್ಲಿ ಕೆಲಸ ಮಾಡುತ್ತಿದ್ದಾನೆಚಿತಲೂ ಹಾಗೂ ದೇವರು ನಿನ್ನನ್ನು ತನ್ನ ಕಡೆಗೆ ಸೆಳೆಯಲು ಪ್ರಯತ್ನಿಸುತ್ತಿರುವುದಗಿಯೂ ಧೃಡವಾಗುತ್ತದೆ. ನೀನು ಸೋತವನಾಗಿರಬಹುದು. ಆದರೆ ತಿರುಗಿಬೀಳುವವನಲ್ಲ. ತಿರುಗಿಬೀಳುವವನಿಗೂ ಹಾಗೂ ಸೋತವನಿಗೂ ಬಹಳ ವ್ಯತ್ಯಾಸವಿದೆ.

ದೇವರು ಒಂದು ಉದ್ದೇಶದಿಂದಲೇ ಪೇತ್ರನಿಗೆ ಸೋಲನ್ನು ಅನುಮತಿಸಿದನು. ಆ ಉದ್ದೇಶವು ಪೇತ್ರನನ್ನು ತೂರುವುದಾಗಿತ್ತು. ಸೈತಾನನು ಪೇತ್ರನನ್ನು ಸಂಪೂರ್ಣವಾಗಿ ನಾಶ ಮಾಡಲು ಇಚ್ಛಿಸಿದನು. ಆದರೆ ದೇವರು ಅದಕ್ಕೆ ಅವಕಾಶ ಕೊಡಲಿಲ್ಲ. ದೇವರು ನಮ್ಮ ಸಾಮರ್ಥ್ಯಕ್ಕೆ ಮೀರಿ ಪರೀಕ್ಷಿಸಲು ಅಥವಾ ಶೋದಿಸಲ್ಪಡಲು ಅನುಮತಿಸುವುದಿಲ್ಲ. ಈ ಸೋಲಿನ ಫಲಿತಾಂಶವಾಗಿ ಪೇತ್ರನು ಆತನ ಜೀವನದ ಬಹಳಷ್ಟು ಹೊಟ್ಟಿನಿಂದ ಶುದ್ಧೀಕರಿಸಲ್ಪಟ್ಟನು. ಇದೇ ದೇವರು ನಮ್ಮ ಜೀವನದಲ್ಲಿ ಅನುಮತಿಸುವ ಸೋಲಿನ ನಿಜವಾದ ಉದ್ದೇಶವಾಗಿರುತ್ತದೆ.

ನಮ್ಮ ಜೀವನದಿಂದ ಈ ಹೊಟ್ಟನ್ನು ತೆಗೆಯಲ್ಪಡುವುದು ಒಳ್ಳೆಯದಲ್ಲವೇ? ಖಂಡಿತವಾಗಿ. ಒಬ್ಬ ರೈತನು ತಾನು ಬೆಳೆದ ಗೋಧಿಯನ್ನು ಉಪಯೋಗಿಸಲು ಕೊಯ್ದು ನಂತರ ಅದನ್ನು ತೂರಿ ಅದರಲ್ಲಿನ ಹೊಟ್ಟನ್ನು ತೆಗೆಯುವುದು ಬಹಳ ಅವಶ್ಯಕ.

ನಮ್ಮ ಜೀವನದಲ್ಲಿನ ಹೊಟ್ಟನ್ನು ತೆಗೆಯಲು ದೇವರು ಸೈತಾನನನ್ನು ಉಪಯೋಗಿಸಿಕೊಳ್ಳುತ್ತಾನೆ. ಆಶ್ಚರ್ಯವೇನೆಂದರೆ ದೇವರು ಈ ಉದ್ದೇಶವನ್ನು ನಾವು ಆಗಾಗ್ಗೆ ಸೋಲುವುದರ ಮೂಲಕ ಸಾಧಿಸುತ್ತಾನೆ. ಪೇತ್ರನಲ್ಲಿ ದೇವರು ಉದ್ದೇಶವನ್ನು ಪೂರೈಸಲು ಸೈತಾನನನ್ನು ಬಳಸಿದಂತೆಯೇ ನಮ್ಮ ಜೀವನದಲ್ಲಿಯೂ ತನ್ನ ಉದ್ಧೇಶವನ್ನು ಸೈತಾನನಿಂದ ಬಳಸುತ್ತಾನೆ. ನಮ್ಮೆಲ್ಲರಲ್ಲಿಯೂ ಬಹಳವಾಗಿ ಹೊಟ್ಟಿದೆ - ಅಹಂಕಾರ, ಆತ್ಮ ವಿಶ್ವಾಸ ಮತ್ತು ಸ್ವನೀತಿಯೆಂಬ ಹೊಟ್ಟು. ದೇವರು ಸೈತಾನನನ್ನು ಉಪಯೋಗಿಸಿ ನಾವು ಆಗಾಗ್ಗೆ ಬೀಳುವಂತೆ ಮಾಡುವುದರ ಮೂಲಕ ಈ ಹೊಟ್ಟನ್ನು ಸಂಪೂರ್ಣವಾಗಿ ತೆಗೆದು ಬಿಡುತ್ತಾನೆ.

ನಿಮ್ಮ ಜೀವಿತದಲ್ಲಿಯೂ ಪ್ರಭುವು ಈ ಉದ್ದೇಶವನ್ನು ಪೂರ್ಣಗೋಳಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆಯೆ ಎಂದು ನಿಮಗೆ ಮಾತ್ರ ತಿಳಿದಿದೆ. ಈ ಹೊಟ್ಟು ತೆಗೆದು ಹಾಕಲ್ಪಡುತ್ತಿದ್ದರೆ ನೀವು ದೀನರೂ ಮತ್ತು ಕಡಿಮೆ ಸ್ವನೀತಿ ಉಳ್ಳವರಾಗಿರುವುದು ಖಂಡಿತ ಹಾಗೂ ಸೋತವರನ್ನು ಕೀಳಾಗಿ ನೋಡುವುದಿಲ್ಲ. ನಿಮ್ಮನ್ನು ನೀವು ಉತ್ತಮರೆಂದು ಎಂದೂ ಪರಿಗಣಿಸುವುದಿಲ್ಲ. ನಾನು ಮೊದಲೇ ತಿಳಿಸಿದಂತೆ ನಮ್ಮ ಜೀವನದಲ್ಲಿ ಆಗಾಗ್ಗೆ ಸೋಲನ್ನು ಅನುಮತಿಸುವುದರೊಂದಿಗೆ ಸೈತಾನನು ನಮ್ಮಿಂದ ಹೊಟ್ಟನ್ನು ತೆಗೆಯುವಂತೆ ದೇವರು ಮಾಡುತ್ತಾನೆ. ಆದ್ದರಿಂದ ನಿನ್ನ ಸೋಲಿಗಾಗಿ ಧೈರ್ಯಗೆಡಬೇಕಾಗಿಲ್ಲ. ನೀನಿನ್ನೂ ದೇವರ ಆಭಯ ಹಸ್ತದಲ್ಲಿದ್ದಿಯೇ ನಿನ್ನ ಸೋಲಿನ ಮರುಕಳಿಕೆಯಿಂದ ಒಂದು ಮಹಿಮಾನ್ವಿತ ಉದ್ದೇಶವು ಪೂರೈಸಲ್ಪಡುತ್ತಿದೆ. ಆದರೆ ಅಂತಹ ಸಂದರ್ಭಗಳಲ್ಲಿ ನೀನು ದೇವರ ಪ್ರೀತಿಯ ಮೇಲಿನ ನಿನ್ನ ನಂಬಿಕೆಯನ್ನು ಕಳೆದುಕೊಳ್ಳಬಾರದು. ಇದನ್ನೆ ಅಂದು ಯೇಸುವು ಪೇತ್ರನಿಗಾಗಿ ಪ್ರಾರ್ಥಿಸಿದ್ದು ಹಾಗೂ ಇಂದು ಕೂಡಾ ನಮ್ಮೆಲ್ಲರಿಗಾಗಿ ಪ್ರಾರ್ಥಿಸುತ್ತಿರುವ ಪ್ರಾರ್ಥನೆಯಾಗಿದೆ. ಅವರು ನಾವೆಂದೂ ಸೋಲಬಾರದೆಂದೂ ಪ್ರಾರ್ಥಿಸುತ್ತಿಲ್ಲ. ಬದಲಾಗಿ ಎಂಥಹ ತಳ-ಭಾಗಕ್ಕೆ ಇಳಿದರೂ ದೇವರ ಪ್ರೀತಿಯಲ್ಲಿನ ನಮ್ಮ ವಿಶ್ವಾಸ ಎಂದಿಗೂ ಅಲುಗಾಡದೇ ಇರಬೇಕೆಂದು ಪ್ರಾರ್ಥಿಸುತ್ತಾರೆ. ನಮ್ಮ ಹಲವು ಸೋಲಿನ ಅನುಭವಗಳ ಮೂಲಕ ಮಾತ್ರ ನಾವು ಈ ಶೂನ್ಯ ಸ್ಥಿತಿಗೆ ತಲುಪುವುದು ಮತ್ತು ನಿಜವಾಗಿ ಮುರಿಯಲ್ಪಡುವುದು ಸಾಧ್ಯವಾಗುತ್ತದೆ. ಪ್ರೇತ್ರನು ಈ ಸ್ಥಿತಿಗೆ ಇಳಿದಾಗ ಅವನಿಗೆ ಎರಡನೆಯ ಪರಿವರ್ತನೆಯ ಅನುಭವವಾಯಿತು.(ಲೂಕ 22:32) ಅವನು ತಿರುಗಿಕೊಂಡನು. ಯೇಸು ಪೇತ್ರನಿಗಾಗಿ ಮಾಡಿದ ಪ್ರಾರ್ಥನೆಯ ಫಲವು ಅವನು ತನ್ನ ಪೂರ್ಣ ಕೆಳಸ್ಥಿತಿಯನ್ನು ಮುಟ್ಟಿ ತಿರುಗಿಕೊಂಡಾಗ ಕಾಣಬಹುದಾಗಿದೆ. ಇಲ್ಲಿ ಅವನು ಧೈರ್ಯ-ಕಳೆದುಕೊಳ್ಳಲಿಲ್ಲ. ನಂಬಿಕೆ ಕಳೆದುಕೊಂಡು ಬಿದ್ದುಬಿಡಲಿಲ್ಲ. ಅವನು ಎದ್ದನು.

ದೇವರು ಪೇತ್ರನಿಗೆ ಬಹಳ ದೂರದವರೆಗೆ ಹೋಗಲು ಬಿಟ್ಟನು. ಆದರೆ ಅವನು ಆ ಹಗ್ಗದ ಕೊನೆಯನ್ನು ತಲುಪಿದಾಗ ಅವನನ್ನು ಎಳೆದುಕೊಂಡನು.

ದೇವರ ಮಗುವಾಗಿರುವುದು ಒಂದು ಅದ್ಭುತವಾದ ವಿಷಯವಾಗಿದೆ. ದೇವರು ನಮ್ಮನ್ನು ಹಿಡಿದುಕೊಂಡಾಗ ನಮ್ಮುನ್ನು ರಕ್ಷಿಸುವುದಕ್ಕಾಗಿ ಬಿಗಿಯಾದ ಹಗ್ಗವನ್ನು ನಮ್ಮ ಸುತ್ತಲೂ ಕಟ್ಟುತ್ತಾನೆ. ಆ ಹಗ್ಗವು ಬಹಳ ಸಡಿಲವಾಗಿರುವುದರಿಂದ ಅದರೊಳಗೆ ಸಾವಿರಾರು ಬಾರಿ ನೀವು ಬೀಳಬಹುದು ಹಾಗೂ ದೇವರಿಂದ ಬಹಳ ದೂರ ಕೂಡ ಸರಿಯಬಹುದು. ಆದರೆ ಒಂದು ದಿನ ನೀವು ಆ ಹಗ್ಗದ ಕೊನೆಯನ್ನು ತಲುಪಿದಾಗ ದೇವರು ನಿಮ್ಮನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತಾನೆ. ಅಂಥಹ ಸಂದರ್ಭದಲ್ಲಿ ನೀವು ಆ ಹಗ್ಗವನ್ನು ಕತ್ತರಿಸಿ ಓಡಿ ಹೋಗುವುದಾಗಿ ನಿರ್ಧರಿಸಬಹುದು ಅಥವಾ ದೇವರ ದಯೆಯನ್ನು ನೋಡಿ ನಿನ್ನ ಹೃದಯ ಮುರಿದು ಮರುಗಿ ಆತನೆಡೆಗೆ ಹಿಂದಿರುಗಬಹುದು. ಇದನ್ನೆ ಪೇತ್ರನು ಮಾಡಿದ್ದು. ಅವನು ಅತ್ತು ಪ್ರಭುವಿನ ಕಡೆಗೆ ತಿರುಗಿಕೊಂಡನು. ಆದರೆ ಇಸ್ಕರಿಯೋತ ಯೂದನು ಇದನ್ನು ಮಾಡಲಿಲ್ಲ. ತನ್ನ ಜೀವನದ ಮೇಲಿನ ದೇವರ ಅಧಿಕಾರದ ವಿರುದ್ಧ ತಿರುಗಿ ಬಿದ್ದು ಹಗ್ಗವನ್ನು ಕಡಿದು ನಿತ್ಯತ್ವಕ್ಕೆ ದೂರವಾದನು. ಆದರೆ ನೀವು ಪೇತ್ರನು ಮಾಡಿದ್ದನ್ನೆ ಮಾಡುವಿರೆಂದು ನಂಬುತ್ತೇನೆ.

ನಂತರ ಯೇಸುವು ಪೇತ್ರನಿಗೆ, "ನೀವು ನನ್ನ ಕಡೆಗೆ ತಿರುಗಿ ಬಲಹೊಂದಿದ ಮೇಲೆ ನಿನ್ನ ಸಹೋದರರನ್ನು ಬಲಪಡಿಸು" ಎಂದು ಹೇಳಿದನು. ನಾವು ಮುರಿಯಲ್ಪಟ್ಟ ನಂತರವೇ ಇತರರನ್ನು ಬಲಪಡಿಸುವಷ್ಟು ಬಲಶಾಲಿಗಳಾಗುತ್ತೇವೆ. ಪೇತ್ರನು ನಿಶಕ್ತನಾಗಿ ಮುರಿಯಲ್ಪಟ್ಟ ನಂತರವೇ ತನ್ನ ಸಹೋದರ ಸಹೋದರಿಯರನ್ನು ಬಲಪಡಿಸಲು ಸಾಕಷ್ಟು ಬಲಹೊಂದಿದನು. ಪೇತ್ರನ ಈ ಸೋಲಿನ ಅನುಭವದ ಮುಖಾಂತರವೇ ಆತ್ಮಭರಿತ ಸೇವೆಗೆ ಅವನು ಸಿದ್ಧನಾದನೆಂದು ನಾವು ಹೇಳಬಹುದು. ಅಕಸ್ಮತ್ತಾಗಿ ಅವನು ತನ್ನ ಜೀವಿತದಲ್ಲಿ ಈ ಸೋಲನ್ನು ಅನುಭವಿಸದೇ ಪವಿತ್ರಾತ್ಮಭರಿತನಾಗಿದ್ದರೆ ಪಂಚಶತ್ತಮ ದಿನ ಒಬ್ಬ ಅಹಂಕಾರಿ ಮನುಷ್ಯನಂತೆ ನಿಂತು ಎಂದೂ ಸೋಲನ್ನು ಅನುಭವಿಸದ ಒಬ್ಬ ಮೇದಾವಿಯಂತೆ ಎಲ್ಲಾ ಕೀಳು ಪಾಪಿಗಳ ಮುಂದೆ ಅವರನ್ನು ಬಹಳ ಕೀಳಾದ ದೃಷ್ಠಿಯಿಂದ ನೋಡಿ ಮಾತನಾಡುತ್ತಿದ್ದನೇನೊ.

ದೇವರು ಅಹಂಕಾರಿಗಳನ್ನು ವಿರೋಧಿಸುವುದರಿಂದ ದೇವರು ಅವನನ್ನು ವಿರೋಧಿಸುತ್ತಿದ್ದರು. ಪವಿತ್ರಾತ್ಮಭರಿತವಾದ ಬಹಳಷ್ಟು ಕ್ರೈಸ್ತರನ್ನು ಈ ದುರಂತವೇ ಆವರಿಸಿಕೊಂಡಿರುವುದು ಶೋಚನಿಯ. ಅವರೆಂದೂ ಮುರಿದವರಲ್ಲ. ಅವರು ನಿಜವಾಗಿಯೂ ಆತ್ಮಭರಿತರಾಗಿರಬಹುದು. ಆದರೆ ಅವರು ಮುರಿದವರಲ್ಲ ಹಾಗೂ ಅವರ ಅಹಂಕಾರದಿಂದ ಅಭಿಷೇಕವನ್ನು ಬಹಳ ಬೇಗ ಕಳೆದುಕೊಂಡಿದ್ದಾರೆ. ನನ್ನ ಸ್ವಂತ ಜೀವಿತದಲ್ಲಿ ಪವಿತ್ರಾತ್ಮಭರಿತನಾಗುವುದಕ್ಕೆ ಬಹಳ ಮೊದಲೇ ಮುರಿಯುವಿಕೆಯ ಹಾಗೂ ಶಿಲುಬೆಯ ಹಾದಿಯ ಸತ್ಯವನ್ನು ದೇವರು ನನಗೆ ಕಲಿಸಿದನು. ಇದು ಬಹಳ ಒಳ್ಳೆಯದಾಯಿತು. ಏಕೆಂದರೆ ಇದು ನನ್ನನ್ನು ದೇವರಿಂದ ದೂರ ಹೋಗುವುದನ್ನು ತಡೆಯಿತು. ಬಹಳ ವರ್ಷಗಳ ಸೋಲುಗಳಿಂದ, ಹೌದು, ದಿನ ಬಿಟ್ಟು ದಿನ ಹಲವು ವರ್ಷಗಳ ಸೋಲುಗಳಿಂದ ನನ್ನ ಸ್ವನೀತಿ ಹಾಗೂ ಸ್ವಭರವಸೆಯನ್ನು ದೇವರು ನಾಶಗೊಳಿಸಿದನು. ನಾನು ನನ್ನ 6೦ ವರ್ಷಗಳ ರೇಖಾ ನಕ್ಷೆಯನ್ನು ಬರೆಯುವುದಾದರೆ ಅದು ಸಾಧಾರಣವಾಗಿ ಹೀಗಿರಬಹುದು; ನಾನು ಹುಟ್ಟಿದಾಗ ಯಾವ ಪಾಪವೂ ಮಾಡದೇ ಎಲ್ಲಾ ಮಕ್ಕಳಂತೆ ಮುಗ್ಧ ಮತ್ತು ಸಿಹಿಯಾಗಿ ಮಟ್ಟವು ಬಹಳ ಎತ್ತರದಲ್ಲಿತ್ತು.

ದೇವರಿಂದ ಹೊಸ ಹುಟ್ಟು ಪಡೆದ (ಸುಮಾರು 19 ವರ್ಷದವನಾಗಿದ್ದಾಗ) ನಂತರ ಹಲವು ವರ್ಷಗಳು ಚೆನ್ನಾಗಿ ಜರುಗಿದವು. ನನ್ನ ರೇಖಾ ನಕ್ಷೆಯು ಮೆಲ್ಲನೆ ಮೇಲೇರಲು ಪ್ರಾರಂಭವಾಯಿತು. ಹಾಗೆ ದೇವರು ನನ್ನ ಸೇವೆಯನ್ನು ಅಶೀರ್ವದಿಸಿದಂತೆ ನಾನು ಕ್ರಿಸ್ತೀಯ ಕ್ಷೇತ್ರಗಳಲ್ಲಿ ಖ್ಯಾತನಾದಂತೆ ನನ್ನ ರೇಖಾನಕ್ಷೆಯು ನನಗರಿವಿಲ್ಲದಂತೆಯೇ ಕೆಳಮುಖವಾಗಿ ಇಳಿಯಲು ಪ್ರಾರಂಭವಾಯಿತು. ಹೊರಗೆ ನಾನು ಖ್ಯಾತ ಬೋಧಕನಾಗಿದ್ದೆ. ಆದರೆ ನನ್ನ ಒಳ ಜೀವಿತ ಮತ್ತು ದೇವರ ಜೊತೆಗಿನ ನಡೆಯು ಹದಗೆಡುತ್ತಾ ಬಂತು.

ಒಳ ಜೀವಿತದಲ್ಲಿ ಒಬ್ಬ ಹಿಂಜರಿದವನಾಗಿದ್ದೆ. ನಂತರ ನಾನೊಂದು ಮಟ್ಟಕ್ಕೆ ಇಳಿದೆನೆಂದರೆ ನನ್ನ ಜೀವನದ ರೇಖಾನಕ್ಷೆಯು ಸಂಪೂರ್ಣ ತಳಭಾಗಕ್ಕೆ ಬಡಿಯಿತೆಂದು ಹೇಳಬಹುದು. ಇದು ಸುಮಾರು 26 ವರ್ಷಗಳ ಹಿಂದೆ. ಇಂಥಹ ಸಂದರ್ಭದಲ್ಲಿ ನಾನು ನನ್ನ ಜೀವನದ ನನ್ನೆಲ್ಲಾ ಸೇವೆಯನ್ನು ಬಿಡಬೇಕೆಂದಿದ್ದೆ. ಏಕೆಂದರೆ ನಾನು ಆಚರಣೆ ಮಾಡಲಾರದನ್ನು ಜನರಿಗೆ ಬೋಧಿಸುತ್ತಾ ಮೋಸಗೊಳಿಸಬಾರದೆಂದು ಇಷ್ಟಪಟ್ಟೆ. ಆ ನನ್ನ ಹಿಂಜರಿತ ಹಾಗೂ ಕಪಟತನಕ್ಕೆ ನಾನು ದೇವರ ತೀರ್ಪಿಗೆ ಅರ್ಹನಾಗಿದ್ದೆ. ಆದರೆ ನನ್ನನ್ನು ನ್ಯಾಯತೀರ್ಮಾನಿಸಿ ನರಕಕ್ಕೆ ಕಳುಹಿಸುವ ಬದಲು ದೇವರು ಏನು ಮಾಡಿದನು ಗೊತ್ತೆ? ಆತನು ನನ್ನನ್ನು ಪವಿತ್ರಾತ್ಮನಿಂದ ತುಂಬಿಸಿದನು.

ಏಕೆ ಹೀಗೆ ಮಾಡಿದನು? ಏಕೆಂದರೆ ದೇವರ ಹಾದಿ ನಮ್ಮ ಹಾದಿಯಲ್ಲ. ಇದರ ಅದ್ಭುತವನ್ನು ಅರಿವು ಮಾಡಲು ನಿಮಗೆ ಒಂದು ದುಷ್ಟಾಂತವನ್ನು ಉಪಯೋಗಿಸುತ್ತೇನೆ. ನೀವೊಂದು ಬೃಹತ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಆ ಸಮಯದಲ್ಲಿ ಅಲ್ಲಿನ ಅಪ್ಪಣೆಗಳನ್ನು ಅನುಸರಿಸದೇ ಸಂಸ್ಥೆಯ ಒಳ್ಳೆಯತನದ ಪ್ರಯೋಜನ ಪಡೆದು ಅದರ ಹೆಸರನ್ನು ಹಾಳುಮಾಡುತ್ತಿರುವಿರೆಂದು ಯೋಚಿಸಿ. ಒಂದು ದಿನ ಬಹಳ ಅಹಿತಕರವಾದ ತಪ್ಪನ್ನು ಮಾಡುತ್ತೀರಿ. ಅದೂ ಬಹಳ ಗಂಭೀರವಾದದ್ದಾಗಿದೆ. ಆಗ ಆ ಸಂಸ್ಥೆಯ ಮುಖ್ಯ ನಿರ್ದೇಶಕರು ನಿಮ್ಮಲ್ಲಿಗೆ ಬಂದು ನಿಮ್ಮನ್ನು ಕೆಲಸದಿಂದ ತೆಗೆಯುವ ಬದಲು ಹೀಗೆಂದು ಹೇಳುತ್ತಾರೆ: ನಮ್ಮ ಆಡಳಿತ ಮಂಡಳಿಯು ಇಂದಿನವರೆಗೆ ನೀವು ಮಾಡಿರುವ ಎಲ್ಲಾ ತಪ್ಪುಗಳನ್ನು ಕ್ಷಮಿಸಿ ಇಂದಿನಿಂದ ನಿಮ್ಮ ಸಂಬಳವನ್ನು ಮೂರರಷ್ಟು ಜಾಸ್ತಿ ಮಾಡಲು ನಿರ್ಧರಿಸಿದ್ದೇವೆ.

ಈ ರೀತಿ ನಡೆಯುದೆಂದೂ ಊಹಿಸುತ್ತೀರಾ ಇಲ್ಲವಾ ಹಾಗಿದ್ದರೆ ಇದು ದೇವರ ಹಾದಿಯು ಮನುಷ್ಯನ ಹಾದಿಯಲ್ಲವೆಂದು ತೋರಿಸುತ್ತದೆ. ಏಕೆಂದರೆ 25 ವರ್ಷಗಳ ಕೆಳಗೆ ಇದನ್ನೇ ದೇವರು ನನಗೆ ಮಾಡಿದ್ದು.

ದೇವರು ಹೀಗೆ ಉಪಚರಿಸಿದ್ದರ ಫಲಿತಾಂಶವೇನಾಯಿತು?. ಅಂದಿನಿಂದ ದೇವರ ದಯೆಯ ಪ್ರಯೋಜನ ಪಡೆದುಕೊಂಡು ಇನ್ನೂ ಹೆಚ್ಚು ಪಾಪವನ್ನು ಮಾಡುವಂತಾಯಿತೋ? ಇಲ್ಲ, ಇದಕ್ಕೆ ವಿರುದ್ಧವಾಗಿ ರೋಮ 2:4ರಲ್ಲಿ ಹೇಳುವಂತೆ ಆತನ ಒಳ್ಳೆತನವು ನನ್ನನ್ನು ಪಶ್ಚಾತ್ತಾಪಕ್ಕೆ ನಡೆಸಿತು. ಇದು ನನ್ನನ್ನು ಅತೀ ಮರುಗುವಿಕೆಗೂ ಮತ್ತು ಮುರುಯುವಿಕೆಗೂ ನಡೆಸಿತು.

ದೇವರ ಒಳ್ಳೆಯತನವು ಅಂದಿನಿಂದ ನನ್ನನ್ನು ಮುರಿದು ಶುದ್ಧ ಹಾಗೂ ಪವಿತ್ರ ಜೀವನವನ್ನು ನಡೆಸಲು ಹಾತೊರೆಯುವಂತೆ ಮಾಡಿತು. ಆದರೆ ಇಲ್ಲಿ ನಿಮ್ಮೊಂದಿಗೆ ಪ್ರಾಮಾಣಿಕನಾಗಿರಬೇಕೆಂದು ಬಯಸುತ್ತೇನೆ. ಅಂದಿನಿಂದ ನನ್ನ ಜೀವನದ ರೇಖಾನಕ್ಷೆಯು ಸ್ಥಿರವಾಗಿ ಮೇಲೆರಲಿಲ್ಲ. ಹಲವರು ಹೋರಾಡುವ ಕ್ರೈಸ್ತರಂತೆ ನನ್ನಲ್ಲಿ ಇನ್ನೂ ಏರುಪೇರುಗಳಿದ್ದವು. ಪೌಲನು ಹೇಳಿದಂತೆ ಹೊರಗೆ ಕಲಹ ಹಾಗೂ ಒಳಗೆ ಕಳವಳವಿತ್ತು. ಮನಗುಂದಿದಾಗ ಸಂತೈಸಲು ನನಗಿನ್ನೂ ಸಹೋದರರಿಂದ ಸಹಾಯ ಬೇಕಿತ್ತು. (2 ಕೊರಿಂಥ 7:5,6). ಆದರೆ ನಾನಿನ್ನೂ ಪ್ರರ್ಣತೆಯ ಕಡೆಗೆ ಹಾತೊರೆದು ನಡೆಯುತ್ತಿದ್ದೇನೆ.

ದೇವರು ತನ್ನ ಮಾರ್ಗವನ್ನು ನನ್ನೊಂದಿಗೆ ಅಳವಡಿಸಿಕೊಳ್ಳಲು ಈ ಸೋಲಿನ ಕುಣಿಯಲ್ಲಿ ನನ್ನನ್ನು ಆಗಾಗ್ಗೆ ಬೀಳಲು ಅನುಮತಿಸಬೇಕಾಯಿತು. ಇಂಥಹ ಶೂನ್ಯ ಸ್ಥಿತಿಗೆ ನನ್ನನ್ನು ತರಲು ದೇವರಿಗೆ ನಾನು ಹೊಸದಾಗಿ ಹುಟ್ಟಿದ ದಿನದಿಂದ ಸುಮಾರು 16 ವರ್ಷಗಳು ಹಿಡಿದವು. ಆಗ ನಾನು 35 ವರ್ಷದವನಾಗಿದ್ದೆನು. ನನ್ನ ಸುಮಾರು ಅರ್ಧ ಜೀವಿತವು ಮುಗಿದಿತ್ತು. ನನ್ನಷ್ಟು ನೀವು ಮೊಂಡರಲ್ಲದಿರುವುದಾದರೆ ನಿಮಗೆ ಇಷ್ಟೊಂದು ವರ್ಷಗಳು ತೆಗೆದುಕೊಳ್ಳದೇ ಇರಬಹುದು. ನೀವೆಂದೂ ನಿಮ್ಮ ನಿರೀಕ್ಷೆಯನ್ನು ಬಿಟ್ಟು ಕೊಡಬಾರದೆಂಬ ಕಾರಣಕ್ಕೆ ನಿಮ್ಮನ್ನು ಪ್ರೋತ್ಸಾಹಿಸಲು ನನ್ನ ಜೀವಿತದಲ್ಲೇ ಇದನ್ನು ಮಾಡಿದ್ದಾನೆಂದರೆ, ನಿಮ್ಮಲ್ಲಿ ಯಾರಿಗಾದರೂ ಅದನ್ನು ಮಾಡಲು ಆತನು ಶಕ್ತನಾಗಿದ್ದಾನೆ. ನಿರೀಕ್ಷೆಗೆ ಮೀರಿ ಯಾರೂ ಇಲ್ಲ. ನೀವು ಇದ್ನನು ಕೇಳಿಸಿಕೊಂಡಿರಾ. ನಿರೀಕ್ಷೆಗೆ ಮೀರಿ ಯಾರು ಇಲ್ಲ. ನೀವು ಜೀವದಿಂದಿರುವವರೆಗೆ ನಿಮಗೆಲ್ಲರಿಗೂ ನಿರೀಕ್ಷೆ ಇದೆ. ನೀವು ಸತ್ತರೆ ಮಾತ್ರ ನಿಮ್ಮ ನಿರೀಕ್ಷೆ ಕಳೆದು ಹೋಗುತ್ತದೆ.

ಪೇತ್ರನು ದೇವರು ಮೆಚ್ಚುವಂತವನಾಗುವ ಮೊದಲು ಈ ಶೂನ್ಯ ಸ್ಥಿತಿಗೆ ಬರುವಂತ್ದು ಬಹಳ ಅವಶ್ಯವಿತ್ತು. ನಾವು ಒಂದು ಬಾರಿ ಈ ತಳವನ್ನು ಮುಟ್ಟಿದ ಮೇಲೆ ಇತರರು ಇಂಥಹ ಸ್ಥಳದಲ್ಲಿದ್ದರೆ ಅವರನ್ನು ನಿಂದಿಸುವುದಿಲ್ಲ ಹಾಗೂ ಯಾವ ಪಾಪಿಗಳನ್ನು ಅಥವಾ ಹಿಂಜಾರಿದ ವಿಶ್ವಾಸಿಗಳನ್ನು ಅಥವಾ ಬಿದ್ದ ಕ್ರೈಸ್ತ ನಾಯಕರುಗಳನ್ನು ಸಹ ಕೀಳಾಗಿ ನೋಡುವುದಿಲ್ಲ. ನಾವು ನಮ್ಮ ಜೀವನದಲ್ಲಿ ಒಂದು ಬಾರಿ ಅತೀ ಹೀನ ಸೋಲನ್ನು ನೋಡುವುದರಿಂದ ನಮ್ಮ ಪಾಪದ ಮೇಲಿನ ಜಯದ ಬಗ್ಗೆ ಯಾವಾಗಲೂ ಹೆಮ್ಮೆ ಪಡುವುದಿಲ್ಲ.

ಆದ್ದರಿಂದ ಪೇತ್ರನು ಇತರ ಕ್ರೈಸ್ತರನ್ನು ನಿನ್ನ ಹಿಂದಿನ ಪಾಪಗಳಿಂದ ಶುದ್ಧನಾದದನ್ನು ಮರೆಯಬೇಡ. (2 ಪೇತ್ರ 1:9) ಎಂದು ಎಚ್ಚರಿಸುತ್ತಾನೆ ಹಾಗೂ ಅವರೇನಾದರೂ ಮರೆತುಬಿಟ್ಟರೆ ಅಂಥವರು ಕುರುಡರು, ದೂರದೃಷ್ಟಿ ಇಲ್ಲದವನಾಗಿರಲು ಇಚ್ಚಿಸುವುದಿಲ್ಲ. ನಾನು ಯಾವಾಗಲೂ ಪರಲೋಕದ ಮತ್ತು ನಿತ್ಯತ್ವದ ಮಹತ್ವಗಳ ದೂರದೃಷ್ಟಿ ಹೊಂದಿದದವನಾಗಿರಬೇಕೆಂದು ಇಷ್ಟಪಡುತ್ತೇನೆ.

ಈ ದೂರದೃಷ್ಟಿ ಇಲ್ಲದವರು ಯಾರು? ಪಾಪದ ಸುಖಾನುಭವ ವಸ್ತುಗಳು ಆಸ್ತಿ ಪಾಸ್ತಿ ಹಾಗೂ ಮನುಷ್ಯರ ಮಾನ ಗೌರವಗಳಿಗೆ ಮಹತ್ವ ಕೊಡುವವರೇ ಇಂಥವರಾಗಿದ್ದಾರೆ. ಇಂಥವರೆಲ್ಲರೂ ದೂರದೃಷ್ಟಿ ಇಲ್ಲದವರಾಗಿದ್ದಾರೆ. ಇಂಥಹ ವಿಶ್ವಾಸಿಗಳಿಗೋಸ್ಕರ ನಾವು ದುಃಖ ಪಡಬೇಕು. ಕೇವಲ 1೦ ಅಡಿ ಅಂತರದಲ್ಲಿರುವ ಭೌತಿಕ ವಸ್ತುಗಳನ್ನು ನೋಡಲು ಸಾಧ್ಯವಾಗದ ಮನುಷ್ಯನನ್ನು ನೀವು ನೋಡಿದರೆ ನಿಮಗೆ ಕೋಪ ಬರುವುದಿಲ್ಲ. ಬದಲಿಗೆ ದುಃಖವಾಗುತ್ತದೆ. ಒಬ್ಬನು ಪುಸ್ತಕ ಓದಲು ತನ್ನ ಕಣ್ಣಿನಿಂದ ಕೇವಲ ಎರಡು ಇಂಚು ದೂರದಲ್ಲಿ ಇಟ್ಟುಕೊಂಡು ಓದಬೇಕಾದರೆ ಅವನನ್ನು ನೋಡಿ ನೀವು ಕೋಪಗೊಳ್ಳುವುದಿಲ್ಲ. ನಿಮಗೆ ಮರುಕವಾಗುತ್ತದೆ. ಅಲ್ಲವೇ? ಒಬ್ಬನು ಕಣ್ಣಿನ ವೈದ್ಯನಲ್ಲಿಗೆ ಹೋಗಿ ಅವನು ತೋರಿಸಿದ ಪಟ್ಟಿಯ ಮೇಲಿನ ದಪ್ಪನೆಯ ಅಕ್ಷರಗಳಲ್ಲಿನ ಆ ಆಕ್ಷರವು ಧ ತರಹ ಕಾಣಿಸುತ್ತಿದೆ ಎಂದರೆ ಆ ವೈದ್ಯನು ಅವನ ಮೇಲೆ ಕೋಪಗೊಳ್ಳುತ್ತಾನೆಯೇ? ನಿಜವಾಗಿಯೂ ಇಲ್ಲ. ಅವನಿಗೆ ದು:ಖವಾಗುತ್ತದೆ.

ಹಾಗೆಯೇ ಇಂದು ನಾವು ಹಣವನ್ನು ಮತ್ತು ಪಾಪದ ಸುಃಖ ಹಾಗೂ ಜನರ ಮೆಚ್ಚುಗೆಗಾಗಿ ಜೀವಿಸುವ ದೂರದೃಷ್ಟಿರಹಿತ ವಿಶ್ವಾಸಿಗಳನ್ನು ನೋಡಿದಾಗ ಅವರನ್ನು ಗದರಿಸುವುದರಲ್ಲಿ ಪ್ರಯೋಜನವಿಲ್ಲ. ಅವರಿಗಾಗಿ ದುಃಖಪಡಬೇಕು. ಏಕೆಂದರೆ ಅವರು ಗಾಢ ದೃಷ್ಟಿ ದೋಷವುಳ್ಳವರಾಗಿದ್ದಾರೆ. ಅವರು ಒಂದು ದಿನ ದೇವರ ಮುಂದೆ ನಿಂತಾಗ ಅತೀ ವ್ಯಥೆ ಪಡುತ್ತಾರೆ. ಇಂಥಹ ವಿಶ್ವಾಸಿಗಳು ಅನೇಕರಿದ್ದಾರೆ. ಅವರೇಕೆ ಕುರುಡರಾಗಿದ್ದಾರೆಂದು ನಿಮಗೆ ಗೊತ್ತಿದೆಯಾ? ಅವರು ಒಂದು ತಮ್ಮ ಹಿಂದಿನ ಪಾಪಗಳಿಂದ ಶುದ್ಧರಾಗಿದ್ದಾರೆಂದು ಮರೆತುಬಿಟ್ಟಿದ್ದಾರೆ. (2ಪೇತ್ರ1:9). ದೇವರು ಹಳ್ಳದಿಂದ ಹೊರಗೆಳೆದಿದ್ದನ್ನು ಮರೆತುಬಿಟ್ಟಿದ್ದಾರೆ. ದೇವರು ಅವರನ್ನು ಅಗಾಗ್ಗೆ ಆಶೀರ್ವದಿಸುವ ಬಗ್ಗೆ ಅಹಂಕಾರಿಗಳಾಗಿದ್ದಾರೆ.

ದೇವರು ನನ್ನನ್ನು ಹಳ್ಳದಿಂದ ಮೇಲೆಳೆದಿದ್ದನ್ನು ನಾನೆಂದೂ ಮರೆಯಲು ಇಚ್ಚಿಸುವುದಿಲ್ಲ. ನಾನು ಮಾಡಿದ ಎಲ್ಲಾ ಪಾಪಗಳನ್ನು ದೇವರೆಂದಿಗೂ ನೆನಪು ಮಾಡಿಕೊಳ್ಳುವುದಿಲ್ಲ ಹಾಗೂ ನನ್ನೆಲ್ಲಾ ಪಾಪಗಳನ್ನು ಆತನು ಅಳಿಸಿಹಾಕಿದ್ದಾನೆ ಎಂದು ನನಗೆ ತಿಳಿದಿದೆ. ಕ್ರಿಸ್ತನ ರಕ್ತದಿಂದ ನಾನು ನೀತಿಕರಿಸಲ್ಪಟ್ಟಿರುವುದರಿಂದ (ರೋಮ 5:9) ಇಂದು ನಾನು 6೦ ವರ್ಷ ಜೀವನದಲ್ಲಿ ಒಂದು ಪಾಪವನ್ನೂ ಮಾಡದವನಂತೆ ದೇವರ ಮುಂದೆ ನಿಲ್ಲುತ್ತೇನೆ. ಹೀಗೆಯೇ ದೇವರು ಕೂಡಾ ನನ್ನನ್ನು ನೋಡುತ್ತಾನೆ. ಆದರೆ ಒಮ್ಮೆ ನಾನೇನಾಗಿದ್ದೆ ಎಂಬುದನ್ನು ನಾನೆಂದೂ ಮರೆಯುವುದಿಲ್ಲ. ನಿನ್ನ ಪಾಪಗಳನ್ನೆಂದೆಗೂ ನೆನಪು ಮಾಡಿಕೊಳ್ಳುವುದಿಲ್ಲ ಎಂದು ದೇವರು ನನಗೆ ಹೇಳುತ್ತಾನೆ. (ಇಬ್ರಿಯ 8:12).

ನನ್ನ ಹಿಂದಿನ ಪಾಪಗಳ ಮುಖಾಂತರ ನನ್ನ ನೆನಪಿನಲ್ಲಿ ಸೈತಾನನು ನನ್ನನ್ನು ಖಂಡಿಸುವಂತೆ ಅಥವಾ ಮನಗುಂದಿಸುವ ಹಾಗೆ ಅವಕಾಶ ಕೊಡುವುದಿಲ್ಲ. ಇಲ್ಲ. ಖಂಡಿತವಾಗಿ ಇಲ್ಲ. ಏಕೆಂದರೆ ಯೇಸುಕ್ರಿಸ್ತನಲ್ಲಿರುವವರಿಗೆ ಎಂದಿಗೂ ಖಂಡನೆಯಿಲ್ಲ. ರೋಮ 8:1. ದುರಾತ್ಮನು ನನ್ನನ್ನು ಖಂಡಿಸಲು ಬಂದಾಗ "ಯೇಸುವಿನ ರಕ್ತವು ನನ್ನನ್ನು ಎಲ್ಲಾ ಪಾಪಗಳಿಂದ ಶುಧ್ದಿಕರಿಸಿದೆ" ಎಂದು ಅವನ ಮುಖದ ಮೇಲೆ ಹೊಡೆದ ಹಾಗೆ ಹೇಳಿಬಿಡುತೇನೆ. ನಾನು ಸೈತಾನನನ್ನು ಯಜ್ಞದ ಕುರಿಯ ರಕ್ತದಿಂದ ಜಯಿಸುತ್ತೇನೆ (ಪ್ರಕ 12:11). ಆದರೆ ಒಮ್ಮೆ ನಾನಿದ್ದ ಹಳ್ಳವನ್ನು ದೇವರು ನನ್ನನ್ನು ಭೇಟಿ ಮಾಡಿ ಆತನ ಪವಿತ್ರಾತ್ಮನಿಂದ ತುಂಬಿಸಿದ್ದನ್ನು ನಾನೆಂದೂ ಮರೆಯುವುದಿಲ್ಲ.

ಒಮ್ಮೆ ದೇವರು ಯೆಹೂದಕ್ಕೆ ಹೇಳಿದಂತೆ ನಾನೂ ಹೀಗಿದ್ದೆನು. ಹುಟ್ಟಿದಂದಿನಿಂದ ಯಾರಿಗೂ ಬೇಡವಾದ ಅಸಹ್ಯಪಟ್ಟು ಹೊಲದಲ್ಲಿ ಬಿಸಾಡಿದ ಮಗುವಿನಂತೆ ಕರ್ತನು ನನ್ನ ಬಳಿಯಿಂದ ಹಾದು ಹೋಗುವಾಗ ನನ್ನ ಸ್ವಂತ ರಕ್ತದಲ್ಲಿ ಹೊರಳಾಡುತ್ತಿರುವುದನ್ನು ನೋಡಿದನು. ನನ್ನನ್ನು ತೊಳೆದನು. ನಯವಾದ ನಾರು ಮಡಿಯನ್ನು ನನಗೆ ಉಡಿಸಿದನು. ಅವರ ವೈಭವದಿಂದ ಪರಿಪೂರ್ಣಗೊಳಿಸಿದನು (ಯೆಹೆಜ್ಕೆಲ 16:5, 6,9,1೦,14)/. ನಿಮ್ಮಲ್ಲಿ ಬಹಳಷ್ಟು ಮಂದಿ ಪವಿತ್ರಾತ್ಮಭರಿತರಾಗಿದ್ದೀರಿ. ಆದರೆ ನನ್ನ ಸಹೋದರ ಸಹೋದರಿಯರೇ ನಿಮ್ಮನ್ನು ಮುರಿಯುವುದರಲ್ಲಿ ಹಾಗೂ ನಿಮ್ಮ ಸ್ವ ಭರವಸೆ ಅಹಂಕಾರವನ್ನು ನಾಶಗೊಳಿಸುವಲ್ಲಿ ದೇವರು ಯಶಸ್ವಿಯಾಗಿದ್ದಾರೆಂದು ನನಗೆ ಭರವಸೆ ಇಲ್ಲ. ಹಾಗಿದ್ದರೆ ಅದನ್ನು ಕಂಡು ಹಿಡಿಯುವುದು ಬಹಳ ಸುಲಭ. ಈ ಕೆಳಗಿನ ಪ್ರಶ್ನೆಗಳನ್ನು ನೀವು ಕೇಳಿಕೊಳ್ಳಿ. ಮೊದಲಿಗೆ ಇತರರನ್ನು ನೀವು ಕೀಳಾಗಿ ನೋಡುತ್ತೀರಾ? - ಬಹುಶ: ಬೇರೆ ಪಂಗಡದಲ್ಲಿರುವವರನ್ನು ಹಲವಾರು ಭೋದನೆಗಳ ಸಂಬಂಧವಾಗಿ ವ್ಯತ್ಯಾಸವಾದ ಅಭಿಪ್ರಾಯಗಳಿರಬಹುದು. ಆದರೆ ಅವರ‍್ಯಾರನ್ನು ಕೀಳಾಗಿ ನೋಡಬಾರದು. ನಾನು ಪ್ರಾಮಾಣಿಕವಾಗಿ ಹೇಳುವುದಾದರೆ, ಬೇರೆ ಪಂಗಡದ ಕ್ರೈಸ್ತರನ್ನು ನನಗಿಂತ ಒಳ್ಳೆಯ ಜನರೆಂದು ನಾನು ಎಣಿಸುತ್ತೇನೆ. ನಮ್ಮ ಮಧ್ಯ ಬೋಧನೆಗಳ ವ್ಯತ್ಯಾಸದಿಂದ ಅವರೊಂದಿಗೆ ಸೇವೆ ಮಾಡುವುದು ಸಾಧ್ಯವಿಲ್ಲ. ಆದರೆ ಅವರನ್ನು ಕೀಳಾಗಿ ನೋಡುವುದಿಲ್ಲ.

ಆ ಫರಿಸಾಯ ಹೇಳಿದಂತೆ ಇತರರಂತೆ ನಾನಿಲ್ಲ. ಆದ್ದರಿಂದ ನಾನು ನಿಮಗೆ ಸ್ತೋತ್ರ ಸಲ್ಲಿಸುತ್ತೇನೆ (ಲೂಕ 18:11) ಎಂದು ಎಂದಾದರೂ ಹೀಗೆ ಹೇಲಿದ್ದೀರಾ? ಹಾಗಿದ್ದರೆ ನೀವು ಎಂಥಹ ಪವಿತ್ರಾತ್ಮಭರಿತರಾದ ಅನುಭವವನ್ನು ಹೊಂದಿದ್ದರೂ ನೀವು ಮುರಿದವರಲ್ಲ. ನಂತರ ಎರಡನೆಯ ಪ್ರಶ್ನೆ. ನಿಮ್ಮ ಸಾಧನೆ ಹಾಗೂ ಆತ್ಮೀಕ ಬೆಳವಣಿಗೆಯ ಬಗ್ಗೆ ನೀವು ಹೆಮ್ಮೆ ಪಡುತ್ತೀರಾ?

ಒಬ್ಬ ಮುರಿದಂತಹ ಮನುಷ್ಯನು ತನ್ನ ಮಾಂಸದಲ್ಲಿ (ಶರೀರದಲ್ಲಿ) ಒಳ್ಳೆಯದಾದಂಥದ್ದು ಯಾವುದೂ ಇಲ್ಲವೆಂಬುದನ್ನು ಅರಿತವನಾಗಿರುತ್ತಾನೆ. ಅದ್ದರಿಂದ ಆತನ ಸೇವೆಯಲ್ಲಿ ಹೊಂದುವ ಯಾವುದೇ ಫಲಕ್ಕಾಗಿ ಸಿಗುವ ಎಲ್ಲಾ ಗೌರವವನ್ನೂ ದೇವರಿಗೆ ಕೊಡುವುದರಲ್ಲಿ ಆತುರನಾಗಿರುತ್ತಾನೆ.

ಅಧ್ಯಾಯ 1
ಮನುಷ್ಯನ ಸೋಲಿನಲ್ಲಿ ದೇವರ ಉದ್ದೇಶ

[ಮುರಿಯಲ್ಪಟ್ಟ ಮನುಷ್ಯನ ಎರಡು ಮುಖ್ಯ ಗುಣಗಳಿವು:

  • 1. ವಿಶ್ವಾಸಿ ಅಥವಾ ಅವಿಶ್ವಾಸಿ ಯಾರನ್ನೂ ಅವನು ಕೀಳಾಗಿ ನೋಡುವುದಿಲ್ಲ.
  • 2. ಅವನು ತನ್ನ ಸೇವೆಯಲ್ಲಿ ಅಥವಾ ಆತ್ಮೀಕ ಬೆಳವಣಿಗೆಯಲ್ಲಿ ಹೆಮ್ಮೆ ಪಡುವುದಿಲ್ಲ.
  • ದೇವರು ಒಬ್ಬ ಮನುಷ್ಯನನ್ನು ಮುರಿದಿದ್ದಕ್ಕೆ ಯಾಕೋಬನು ಒಂದು ಒಳ್ಳೆಯ ಉದಾರಹಣೆಯಾಗಿದ್ದಾನೆ. ಅವನು ದೇವರನ್ನು ಎರಡು ಬಾರಿ ಸಂಧಿಸಿದನು. ಒಂದು ಬೇತೇಲಿನಲ್ಲಿ (ಆದಿಕಾಂಡ 28) ಇನ್ನೊಂದು ಪೆನಿಯೇಲಿನಲ್ಲಿ (ಆದಿಕಾಂಡ 32). ಬೇತೇಲ್ ಎಂದರೆ ದೇವರ ಮನೆ (ಸಭೆಯು) ಮತ್ತು ಪೆನೆಯೇಲ್ ಎಂದರೆ ದೇವರ ಮುಖ ಎಂದರ್ಥ. ನಾವೆಲ್ಲರೂ ಸಭೆಗಿಂಥ ಮುಂದೆ ಸಾಗಿ ದೇವರ ಮುಖವನ್ನು ನೋಡುವ ಅವಶ್ಯಕತೆ ಇದೆ.

    ಬೇತೇಲಿನಲ್ಲಿ ಸೂರ್ಯಾಸ್ತಮಾನವಾಯಿತು (ಆದಿಕಾಂಡ 28:11) ಎಂದು ಹೇಳುತ್ತದೆ. ಇದು ಭೌಗೋಳಿಕ ಸಂಗತಿಯಾದರೂ ಯಾಕೋಬನ ಜೀವನದಲ್ಲಿ ನಡೆಯುವುದನ್ನು ಅದು ಸೂಚಿಸುವಂಥದ್ದಾಗಿದೆ. ಏಕೆಂದರೆ ಮುಂದಿನ 2೦ ವರ್ಷಗಳು ಅವನಿಗೆ ಕಾರ್ಗತ್ತಲೆಯ ಅವಧಿಯಾಗಿತ್ತು. ನಂತರ ಪೆನೀಯೇಲಿನಲ್ಲಿ ಸೂರ್ಯೊದಯವಾಯಿತು (ಆದಿಕಾಂಡ 32:31) ಎಂದು ಹೇಳುತ್ತದೆ. ಇದೂ ಭೌಗೋಳಿಕ ಸಂಗತಿಯಾದರೂ ಯಾಕೋಬನು ಕಡೆಗೂ ದೇವರ ಬೆಳಕಿಗೆ ಬಂದದ್ದನ್ನು ತೋರಿಸುತ್ತದೆ.

    ಪೇತ್ರನ ಎರಡು ಪರಿವರ್ತನೆಯಿಂದ ಬಹಳಷ್ಟು ವಿಶ್ವಾಸಿಗಳು ಯಾರು ಕಾಲಾಂತರದಲ್ಲಿ ದೇವರೊಂದಿಗೆ ನಡೆದಿರುತ್ತಾರೋ ಅವರೆಲ್ಲರೂ ಸಹ ದೇವರೊಂದಿಗೆ ಎರಡು ಬಾರಿ ಭೇಟಿಯನ್ನು ಅನುಭವಿಸಿರುತ್ತಾರೆ. ಮೊದಲನೆಯದು ಅವರ ಹೊಸ ಹುಟ್ಟಿನ ಮೂಲಕ ದೇವರ ಮನೆಯನ್ನು (ಸಭೆ) ಪ್ರವೇಶಿಸುವುದು ಹಾಗೂ ಎರಡನೆಯದು ಅವರ ಮುಖಾಮುಖಿಯಾಗಿ ದೇವರನ್ನು ಭೇಟಿಯಾಗಿ ಪವಿತ್ರಾತ್ಮಭರಿತರಾಗಿ ತಮ್ಮ ಜೀವನವನ್ನೇ ಮಾರ್ಪಡಿಸಿದ ಸಂದರ್ಭ. ಬೇತೇಲಿನಲ್ಲಿ ಯಾಕೋಬನು ಒಂದು ಏಣಿಯು ಭೂಮಿಯಿಂದ ಸ್ವರ್ಗದವರೆಗೆ ಚಾಚಿಕೊಂಡಿರುವುದನ್ನು ಕನಸಿನಲ್ಲಿ ಕಂಡನು. ಯೇಸುವು ಯೋಹಾನ 1:51 ರಲ್ಲಿ ಏಣಿಯು ಭೂಮಿಯಿಂದ ಸ್ವರ್ಗಕ್ಕೇರಿ ಹೋಗುವ ಮಾರ್ಗವೆಂದು ಹಾಗೂ ಇದು ತನ್ನನ್ನೇ ನಿದರ್ಶಿಸುವುದೆಂದೂ ಅನುವಾದಿಸುತ್ತಾನೆ. ಆದ್ದರಿಂದ ಇಲ್ಲಿ ಯಾಕೋಬನು ಯೇಸುವು ಸ್ವರ್ಗದ ಹಾದಿಯನ್ನು ತೆರೆಯುವಂತೆ ಪ್ರವಾದನೆಯ ದರ್ಶನವನ್ನು ಕಂಡಿದ್ದನು. ನಂತರ ಕನಸಿನಲ್ಲಿ ಕರ್ತನು ಯಾಕೋಬನಿಗೆ ಹಲವು ವಾಗ್ದಾನಗಳನ್ನು ಮಾಡಿದ್ದನು. ಆದರೆ ಯಾಕೋಬನು ಬಹಳ ಪ್ರಾಪಂಚಿಕ ಮನಸ್ಸುಳ್ಳವನಾಗಿದ್ದರಿಂದ ಅವನು ಕೇವಲ ಪ್ರಾಪಂಚಿಕ ಭದ್ರತೆ, ಶಾರೀರಿಕ ಆರೋಗ್ಯ ಹಾಗೂ ಆರ್ಥಿಕ ಅಭಿವೃದ್ದಿ ಇವುಗಳ ಬಗ್ಗೆ ಅಲೋಚಿಸಿದನು. ಆದ್ದರಿಂದ ಅವನು ದೇವರಿಗೆ "ಕರ್ತನೇ ಈ ಪ್ರಯಾಣದಲ್ಲಿ ನನ್ನ ಆಹಾರ ಬಟ್ಟೆಯ ಸೌಲಭ್ಯವನ್ನು ನೋಡಿಕೊಂಡು ಕ್ಷೇಮವಾಗಿ ಮನೆಗೆ ಹಿಂದಿರಿಗಿಸಿದರೆ ನನ್ನ ಆದಾಯದಲ್ಲಿ ಶೇಕಡ 1೦ ಭಾಗವನ್ನು ನಿನಗೆ ಕೊಡುವೆನು ಎಂದನು. ಯಾಕೋಬನು ದೇವರನ್ನು ತನ್ನನ್ನು ನೋಡಿಕೊಳ್ಳುವ ಕಾವಲುಗಾರನಂತೆ ನೋಡಿದನು ಹಾಗೂ ತಾನು ಹೇಳಿದ್ದಂತೆ ಮಾಡಿದರೆ ತನ್ನ ಆದಾಯದಲ್ಲಿ ಶೇಕಡ 1೦ ಭಾಗ ಸಂಬಳವನ್ನು ಕೊಡುವುದಾಗಿ ತಿಳಿಸಿದನು.

    ಇಂದು ಬಹಳಷ್ಟು ವಿಶ್ವಾಸಿಗಳು ಕೂಡಾ ದೇವರನ್ನು ಹೀಗೆಯೇ ಉಪಚರಿಸುತ್ತಾರೆ. ಅವರು ಆತನಿಂದ ಕೇವಲ ಲೌಕಿಕ ಅನುಕೂಲಗಳನ್ನು ಅಪೇಕ್ಷಿಸುತ್ತಾರೆ. ಹಾಗೇ ದೇವರು ಅವರ ಬೇಡಿಕೆಗಳನ್ನು ಪೂರೈಸಿದರೆ ತಪ್ಪದೇ ಸಭಾಕೂಟಗಳಿಗೆ ಹಾಜರಾಗುತ್ತಾರೆ ಮತ್ತು ಕರ್ತನ ಕೆಲಸಕ್ಕೆ ಅವರ ಆದಾಯದ ಸ್ವಲ್ಪ ಹಣವನ್ನು ಕೊಡುತ್ತಾರೆ. ಇಂಥವರು ದೇವರೊಂದಿಗೆ ವ್ಯಾಪಾರ ಮಾಡುತ್ತಿರುತ್ತಾರೆ. ಈ ಲೋಕದ ವ್ಯಾಪಾರಿಯಂತೆ ಯಾವಾಗಲೂ ತಮ್ಮ ಅದಾಯದ ಅನುಕೂಲಗಳನ್ನು ನೋಡಿಕೊಳ್ಳುತ್ತಾರೆ.

    ಯಾಕೋಬನು ತನ್ನ 2೦ ವರ್ಷಗಳನ್ನು ಈ ಲೋಕದ ವಸ್ತುಗಳನ್ನು ದೋಚಿಕೊಳ್ಳುವುದರಲ್ಲಿಯೂ ಕಳೆದನು. ಅವನು ಲಾಬಾನನ ಕುಟುಂಬದಿಂದ ತನ್ನ ಹೆಂಡತಿಯನ್ನು ದೋಚಿಕೊಳ್ಳಲು ಪ್ರಯತ್ನಿಸಿದನು ಹಾಗೂ ಇಬ್ಬರನ್ನೂ ಹೊಂದಿಕೊಂಡನು. ಆದರೆ ಅವನಿಗೆ ಇಬ್ಬರೂ ಬೇಕಿರಲಿಲ್ಲ. ಆದರೆ ಇಬ್ಬರೂ ಸಿಕ್ಕಿದರು. ನಂತರ ಲಾಬನನ್ನು ಮೋಸಗೊಳಿಸಿ ಅವನ ಕುರಿಗಳನ್ನು ಹೊಂದಿ ಶ್ರೀಮಂತನಾದನು. ಲಾಬಾನನ ಮನೆಗೆ ಹೋದಾಗ ಬಿಡಿಗಾಸಿಲ್ಲದ ಬಡವನಂತೆ ಹೋದರೂ ಅಲ್ಲಿ ಅವನು ಶ್ರೀಮಂತನಾದನು. ಸಂಶಯವಿಲ್ಲದೇ ಇಂದು ಬಹಳಷ್ಟು ವಿಶ್ವಾಸಿಗಳೂ ಹೇಳಿಕೊಳ್ಳುವಂತೆ ತನ್ನ ಅಭಿವೃದ್ದಿಗೆ ದೇವರ ಅಶೀರ್ವಾದವೇ ಕಾರಣ ಎಂದು ಹೇಳಿಕೊಂಡಿರಬಹುದು. ಆದರೆ ದೇವರ ಆಶೀರ್ವಾದದ ನಿಜ ಗುರುತೇನು ಅಭಿವೃದ್ದಿಯೋ? ಇಲ್ಲ. ಬದಲಿಗೆ ಕ್ರಿಸ್ತನಂತೆ ನಮ್ಮ ಗುಣ ಮಾರ್ಪಾಡುವುದು ಆಗಿರುತ್ತದೆ. ನಿಮ್ಮ ಜೀವಿತವು ದೇವರಿಗೆ ಮತ್ತು ಜನರಿಗೆ ಪ್ರಯೋಜನವಿಲ್ಲದ್ದಾಗಿದ್ದರೆ ನಿಮಗೆ ಒಳ್ಳೆಯ ಕೆಲಸ, ಒಳ್ಳೆಯ ಮನೆ ಮತ್ತು ಅನುಕೂಲಗಳಿದ್ದೇನು ಪ್ರಯೋಜನ? ಆದರೆ ಯಕೋಬನೊಂದಿಗಿನ ವ್ಯವಹಾರವನ್ನು ದೇವರಿನ್ನೂ ಮುಗಿಸಿರಲಿಲ್ಲ. ಪೆನೀಯೇಲನಲ್ಲಿ ಮತ್ತೆ ದೇವರು ಅವನನ್ನು ಭೇಟಿಯಾದರು.

    ನನ್ನ ಪ್ರಿಯ ಸಹೋದರ ಸಹೋದರಿಯರೇ, ಇಲ್ಲಿ ನಾನು ಹೇಳ ಬಯಸುವುದು ನಿಮಗೆ ದೇವರೊಂದಿಗೆ ಎರಡನೆಯ ಭೇಟಿಯ ಅವಶ್ಯಕತೆ ಇದೆ. ಆ ಭೇಟಿಯು ನೀವು ಜೀವನದ ತಳಭಾಗವನ್ನು ಮುಟ್ಟಿದಾಗ ದೇವರು ನಿಮ್ಮನ್ನು ನ್ಯಾಯತೀರ್ಮಾನಿಸಿ ನರಕಕ್ಕೆ ಕಳುಹಿಸದೇ ಪವಿತ್ರಾತ್ಮಭರಿತರಾಗಿರಿಸುವುದು.

    ಆದಿಕಾಂಡ 32ರಲ್ಲಿ ಓದುತ್ತೇವೆ. ಯಾಕೋಬನ ಸಹೋದರ ಏಸಾವನು ತನ್ನನ್ನು ಸಂಧಿಸಲು ಬರುವುದನ್ನು ಕೇಳಿದಾಗ ಬಹಳ ಭಯಪಟ್ಟನು. (2೦ ವರ್ಷಗಳ ಹಿಂದೆ ಮೋಸಮಾಡಿ ಈತನಿಂದ ಜೇಷ್ಠ ಪುತ್ರನ ಹಕ್ಕನ್ನು ಪಡೆದಿದ್ದನು). ಏಸಾವನು ಬಂದು ತನ್ನನ್ನು ಕೊಂದುಹಾಕಿ ಬಿಡುವನೆಂದುಕೊಂಡಿದ್ದನು. ದೇವರು ನಮ್ಮನ್ನು ಹೆದರುವಂತಹ ಪರಿಸ್ಥಿತಿಯನ್ನು ಅನುಮತಿಸುವುದು ಒಳ್ಳೆಯದಾಗಿರುತ್ತದೆ. ಏಕೆಂದರೆ ಜನರು ಏನು ಮಾಡುತ್ತಾರೋ ಎಂಬ ಭಯ ಬಂದಾಗ ನಾವು ದೇವರಲ್ಲಿಗೆ ಓಡುತ್ತೇವೆ. ಪೆನೀಯೇಲಿನಲ್ಲಿ ಯಾಕೋಬನು ಒಬ್ಬನೇ ಇದ್ದನು. (ಆದಿಕಾಂಡ 32:24). ದೇವರು ನಮ್ಮನ್ನು ಸಂಧಿಸುವ ಮೊದಲು ಒಬ್ಬಂಟಿಗರನ್ನಾಗಿ ಮಾಡಬೇಕು. ಆದ್ದರಿಂದ ಇಂದಿನ ದಿನಗಳಲ್ಲಿ ಪ್ರಪಂಚದ ಜೀವಿತವು ಬಹಳ ಅವಸರದಲ್ಲಿ ಸಾಗುವಂತೆ (ವಿಶೇಷವಾಗಿ ನಗರಗಳಲ್ಲಿ) ಸೈತಾನನು ನಿಯಮಿಸಿದ್ದಾನೆ. ಇದರಿಂದ ಹಲವಾರು ವಿಶ್ವಾಸಿಗಳಿಗೆ ದೇವರೊಂದಿಗೆ ಒಬ್ಬರೇ ಸಮಯ ಕಳೆಯಲು ಸಮಯವೇ ಸಿಕ್ಕದಂತಾಗಿದೆ ಹಾಗೂ ಇಂದಿನ ಕ್ರೈಸ್ತ ರಾಜ್ಯದ ದುರಂತವೆಂದರೆ ಜನರ ಜೀವಿತವು ಎಷ್ಟು ಅವಿಶ್ರಾತಿವುಳ್ಳದ್ದಾಗಿದೆ ಎಂದರೆ ದೇವರೆಂಬ ಪದವು ಅವರ ದಿನಚರಿಯಲ್ಲಿ ಇಲ್ಲವೇ ಇಲ್ಲದ್ದಾಗಿದೆ.

    ದೇವರು ಯಾಕೋಬನೊಂದಿಗೆ ಆ ರಾತ್ರಿ ಹಲವು ಗಂಟೆಗಳ ಕಾಲ ಹೋರಾಟ ನಡೆಸಿದನು. ಆದರೆ ಯಾಕೋಬನು ಶರಣಾಗಲಿಲ್ಲ. ಯಾಕೋಬನ ಕಳೆದ 2೦ ವರ್ಷಗಳಲ್ಲಿ ನಡೆದದಕ್ಕೆ ಈ ಹೋರಾಟವು ಒಂದು ಚಿಹ್ನೆಯಾಗಿತ್ತು. ದೇವರು ಯಾಕೋಬನ ಮೊಂಡುತನವನ್ನು ನೋಡಿ ಕೊನೆಗೆ ಅವನ ತೊಡೆಯ ಕೀಲನ್ನು ಸ್ಥಳಾಂತರಿಸಿದನು. ಆಗ ಯಾಕೋಬನು ಕೇವಲ 4೦ ವರ್ಷ ವಯಸ್ಸಿನವನಾಗಿದ್ದು ಬಹಳ ಬಲಶಾಲಿಯಾಗಿದ್ದನು. ಅವನ ಅಜ್ಜ ಅಬ್ರಹಾಮನು ಸುಮಾರು 175 ವರ್ಷಗಳ ಕಾಲ ಬದುಕಿದ್ದನು. ಅದ್ದರಿಂದ ಯಾಕೋಬನು ಇನ್ನೂ ಶೇಕಡ 75 ಭಾಗದಷ್ಟು ಜೀವಿತವು ಉಳಿದಿದ್ದು ಅವನ ತನ್ನ ಹರೆಯದ ಮುಂಚೂಣಿಯಲ್ಲಿದ್ದನೆಂದು ಹೇಳಬಹುದು. ಈ ತೊಡೆಯ ಕೀಲಿನ ಸ್ಥಳಾಂತರಗೊಂಡಿದ್ದು ಈ ಯೌವನ ಪ್ರಾಯದಲ್ಲಿ ಅವನಿಗೆ ಇಷ್ಟವಿಲ್ಲದ್ದಾಗಿತ್ತು ಹಾಗೂ ಇದು ಅವನ ಭವಿಷ್ಯದ ಎಲ್ಲಾ ಯೋಜನೆಗಳನ್ನು ಮುರಿದು ಬೀಳಿಸಿತ್ತು. ಇಂದಿನ ಸರಾಸರಿ ಆಯಸ್ಸನ್ನು ಹೋಲಿಸುವುದಾದರೆ ಸುಮಾರು 2೦ ವರ್ಷ ಪ್ರಾಯದಲ್ಲಿದ್ದವನು ತನ್ನ ಸೊಂಟ ಮುರಿದುಕೊಂಡು ಊರುಗೋಲಿನ ಆಶ್ರಯದಿಂದ ಮುಂದಿನ ಜೀವನವೆಲ್ಲಾ ಕಳೆದಂತೆ ಇದೊಂದು ಬೇಸರದ ಸಂಗತಿಯಾಗಿತ್ತು. ಇದರ ನಂತರ ಯಾಕೋಬನು ತನ್ನ ಉಳಿದೆಲ್ಲಾ ಜೀವಿತದಲ್ಲಿ ಈ ಊರುಗೋಲಿನ ಸಹಾಯವಿಲ್ಲದೇ ನಡೆಯದಂತಾದನು.

    ದೇವರು ಯಾಕೋಬನನ್ನು ಹಲವಾರು ವಿಧಗಳಲ್ಲಿ ಮುರಿಯಲು ಪ್ರಯತ್ನಿಸಿದನು. ಆದರೆ ಯಶಸ್ವಿಯಾಗಲಿಲ್ಲ. ಕಡೆಗೆ ಈ ಶಾಶ್ವತವಾದ ಶಾರೀರಿಕ ಊನವನ್ನು ಮಾಡಿಬಿಟ್ಟನು. ಇದೇ ಯಾಕೋಬನ ಮುರಿಯುವಿಕೆಯಲ್ಲಿ ಯಶಸ್ವಿಯಾಯಿತು. ಇದೇ ಉಚಿತವಾದರೆ ನಮಗೂ ದೇವರು ಇದನ್ನೇ ಮಾಡುತ್ತಾನೆ. ಆತನು ಯಾರನ್ನು ಪ್ರೀತಿಸುತ್ತಾನೋ ಅವರನ್ನು ಹೆಚ್ಚಿನ ಅಪಾಯಗಳಿಂದ ರಕ್ಷಿಸಲು ಶಿಕ್ಷಿಸುತ್ತಾನೆ ಹಾಗೂ ತಿದ್ದುತ್ತಾನೆ. ದೇವರು ನಿಮ್ಮನ್ನು ತಿದ್ದುವುದನ್ನು ನಿಲ್ಲಿಸಿಬಿಟ್ಟರೆ ನಿಮಗೆ ಆರೋಗ್ಯ ಹಣ ಹಾಗೂ ಐಶ್ವರ್ಯಗಳನ್ನು ಕೊಟ್ಟು ನೀವು ಒಂದು ಹಿಂಜಾರಿದ ಜೀವನವನ್ನು ನಡೆಸಲು ಅನುಮತಿಸಿ ನಿಮ್ಮ ಜೀವಿತವು ಇತರರಿಗೆ ಹಾಗೂ ದೇವರಿಗೆ ಪ್ರಯೋಜನವಿಲ್ಲದಂತಾಗಿಸುತ್ತಾರೆ. ಆದರೆ ಇದು ಯಾರಿಗೆ ಬೇಕು? ನಾನಚಿತೂ ಆತನ ಯೋಜನೆ ಹಾಗೂ ಉದ್ದೇಶಗಳಿಗೆ ತಕ್ಕಂತೆ ಆತನೊಂದಿಗೆ ಈ ಭೂಮಿಯಲ್ಲಿ ನಡೆಯಲು ನನ್ನನ್ನು ಮುರಿಯಲು ಹಾಗೂ ತೀವ್ರವಾಗಿ ಶಿಕ್ಷಿಸಲು (ಅವಶ್ಯವಿದ್ದರೆ ಶಾರೀರಿಕವಾಗಿ ಕೂಡಾ) ದೇವರನ್ನು ಅನುಮತಿಸುತ್ತೇನೆ.

    ಅಪೋಸ್ತಲ ಪೌಲನಿಗೆ ಕೂಡ ಮುರಿದಿರುವ ಸ್ಥಿತಿಯಲ್ಲಿ ಇರಿಸಲು ಶಾರೀರಿಕ ಮುಳ್ಳಿನ ಅವಶ್ಯಕವಿತ್ತು.(2ಕೋರಿಂಥ12:7) ಪೌಲನ ಈ ಮುಳ್ಳು ಅವನನ್ನು ಯಾವಾಗಲೂ ನೋಯಿಸಿದಂತಹ ಯಾವುದೋ ಶಾರೀರಿಕ ಊನವಾಗಿರಬಹುದು. ಈ ಸೈತಾನನ ದೂತನು ತೊಲಗಲೆಂದು ದೇವರಲ್ಲಿ ಅವನು ಮತ್ತೆ ಮತ್ತೆ ಪ್ರಾರ್ಥಿಸಿದನು. ಆದರೆ ದೇವರು ಇದು ಸೈತಾನನ ದೂತನಾದರೂ ಇದನ್ನು ನಿನ್ನಿಂದ ತೆಗೆಯುವುದಿಲ್ಲ. ನಿನ್ನನ್ನು ದೀನನಾಗಿಸಲು ಇದರ ಅವಶ್ಯಕತೆ ಇದೆ ಹಾಗೂ ಇದರಿಂದ ನೀನು ನನಗೂ ಇತರರಿಗೂ ಉಪಯುಕ್ತವಾಗಿರುತ್ತಿ ಎಂದು ಹೇಳಿದನು.

    ದೇವರು ಯಾಕೋಬನ ಸೊಂಟ ಮುರಿದ ನಂತರ ಸರಿ ನನ್ನ ಕೇಲಸವನ್ನು ಮಾಡಿದ್ದೇನೆ ನನ್ನನ್ನು ಹೋಗಲು ಬಿಡು ನಿನಗೆ ನಾನೆಂದೂ ಬೇಕಾಗಿರಲಿಲ್ಲ. ನಿನಗೆ ಬೇಕಾಗಿದ್ದದ್ದು ಹಣ ಮತ್ತು ಹೆಣ್ಣು ಎಂದು ಹೇಳಿದನು. ಆದರೆ ಯಾಕೋಬನು ಈಗ ದೇವರನ್ನು ಹೋಗಲು ಬಿಡಲಿಲ್ಲ. ಕೊನೆಗೂ ಅವನು ಬದಲಾದನು. ಹೆಣ್ಣು ಮತ್ತು ಅಭಿವೃದ್ದಿಯನ್ನು ಮಾತ್ರ ಹಿಡಿಯಲು ತನ್ನ ಜೀವನವನ್ನು ಕಳೆದ ಈ ಮನುಷ್ಯ ಈಗ ದೇವರನ್ನು ಹಿಡಿದು ನೀನು ನನ್ನನ್ನು ಆಶೀರ್ವದಿಸುವ ಹೊರತು ನಿನ್ನನ್ನು ಹೋಗಲು ಬಿಡುವುದಿಲ್ಲ ಎಂದು ಹೇಳಿದನು. ಯಾಕೋಬನ ಸೊಂಟ ಮುರಿದಾಗ ಎಚಿಥಹ ಅಮೋಘವಾದ ಕಾರ್ಯವು ಅವನ ಹೃದಯದಲ್ಲಿ ಕೈಗೊಂಡಿತ್ತೆಂದರೆ ಈಗ ದೇವರನ್ನು ಬಿಟ್ಟು ಬೇರೆ ಏನನ್ನೂ ಅಪೇಕ್ಷಿಸಲಿಲ್ಲ.

    ಒಂದು ಹಳೆಯ ಹೇಳಿಕೆಯಂತೆ ನಿನ್ನಲ್ಲಿ ದೇವರನ್ನು ಬಿಟ್ಟು ಬೇರೇನೂ ಉಳಿಯದಿದ್ದಾಗ ನಿನಗೆ ದೇವರೇ ಸಾಕೆನಿಸುವುದು. ಇದು ಸತ್ಯ. ಆಗ ದೇವರು ವಿಚಾರಿಸಿದನು. ನಿನ್ನ ಹೆಸರೇನು? ಯಕೋಬನು ನನ್ನ ಹೆಸರು ಯಾಕೋಬ ಎಂದು ಉತ್ತರಿಸುತ್ತಾನೆ. ಯಾಕೋಬ ಎಂದರೆ ಮೋಸಗಾರ ಎಚಿದರ್ಥ.

    ಕೊನೆಯ ಯಾಕೋಬನು ತಾನು ಮೊಸಗಾರನೆಂದು ಒಪ್ಪಿಕೊಳ್ಳುತ್ತಾನೆ. ನೀನು ಮೋಸಗಾರನೋ ನೀನು ಒಬ್ಬ ಆತ್ಮಿಕ ಮನುಷ್ಯನೆಂದು ಹೇಳಿಕೊಳ್ಳುತ್ತಾ ಮೋಸ ಮಾಡುತ್ತಿರುವಿಯಾ? ಹಾಗಿದ್ದರೆ ಇಂದು ದೇವರ ಮುಂದೆ ಪ್ರಾಮಾಣಿಕವಾಗಿ ನಾನೊಬ್ಬ ಕಪಟಿಯೆಂದು ಹೇಳಿಕೊಳ್ಮ್ಳತ್ತಿಯಾ? ಹಲವು ವರ್ಷಗಳ ಹಿಂದೆ ತನ್ನ ಕುರುಡ ತಂದೆ ಇಸಾಕನು ಅವನ ಹೆಸರನ್ನು ಕೇಳಿದಾಗ ಯಾಕೋಬನು ಏಸಾವ ಎಂಬುದಾಗಿ ನಾಟಕ ಮಾಡಿದ್ದನು. ಆದರೆ ಈಗ ಪ್ರಾಮಾಣಿಕನಾಗಿದ್ದನು. ತಕ್ಷಣ ದೇವರು ನೀನೆಂದಿಗೂ ಮೋಸಗಾರ(ಯಾಕೋಬ)ನಾಗಿರುವುದಿಲ್ಲ.(ವಾಕ್ಯ28) ಎಂದು ಅವನಿಗೆ ಹೇಳಿದನು. ಇದೊಂದು ಪ್ರೋತ್ಸಾಹಕ ವಾಕ್ಯವಲ್ಲವೇ?.

    ನೀವು ಕೇಳಿಸಿಕೊಂಡಿರಾ? ನೀವೆಂದೂ ಮೋಸಗಾರರಾಗಿರಬೇಕಾಗಿಲ್ಲ. ಹಲ್ಲೆಲ್ಲೂಯಾ! ಅಂದರೆ ನೀವು ಪಾಪದಲ್ಲಿ ಬೀಳುವುದಿಲ್ಲವೆಂದಲ್ಲ. ಆದರೆ ನಿಮ್ಮ ಜೀವನದಲ್ಲಿ ಎಂದಿಗೂ ಮೋಸವಿರುವುದಿಲ್ಲ. ನಿಮ್ಮ ಜೀವನದಲ್ಲಿ ಎಂದಿಗೂ ಕಪಟತನ ಕೂಡ ಇರುವುದಿಲ್ಲ. ನಂತರ ದೇವರು ಯಾಕೋಬನಿಗೆ "ಇಂದಿನಿಂದ ನಿನ್ನ ಹೆಸರು ಇಸ್ರಾಯೇಲ್(ದೇವರ ಯುವರಾಜ) ಏಕೆಂದರೆ ನೀನು ಜನರ ಮತ್ತು ದೇವರೊಂದಿಗೆ ಹೋರಾಡಿ ಜಯಗಳಿಸಿದ್ದಿ" ಎಂದು ಹೇಳಿದನು. ಮೋಸಗಾರನಿಂದ ದೇವರ ಯುವರಾಜನಾಗಿ ಎಂಥಹ ಪರಿವರ್ತನೆಯಲ್ಲವೇ? ಇದೇಲ್ಲಾ ಸಾಧ್ಯವಾದದ್ದು ಯಾಕೋಬನು ಮುರಿಯಲ್ಪಟ್ಟಾಗಲೇ. ಇದೇ ನಮ್ಮ ಕರೆಯುವಿಕೆಯಾಗಿದೆ. ಕ್ರಿಸ್ತನೊಂದಿಗೆ ಸಿಂಹಾಸನದಲ್ಲಿ ಯುವರಾಜನಂತೆ ಕುಳಿತು ಸೈತಾನನ ಮೇಲೆ ಆತ್ಮಿಕ ಅಧಿಕಾರವನ್ನು ಉಪಯೋಗಿಸುತ್ತಾ ಸೈತಾನನ ಹಿಡಿತದಲ್ಲಿರುವ ಜನರನ್ನು ಬಿಡಿಸುವುದೇ ಆಗಿದೆ. ಕ್ರಿಸ್ತನ ದೇಹದ ಸದಸ್ಯರಾದ ನಾವು ದೇವರ ಜನರೊಂದಿಗೆ ಶಕ್ತಿಯನ್ನು ಹೊಂದಿ ಜಯಗಳಿಸಬೇಕಾಗಿದೆ. ಆದರೆ ಇದು ನಾವು ಮುರಿದಾಗಲೇ ಸಾಧ್ಯವಾಗುತ್ತದೆ ಮತ್ತು ನಾವು ದೇವರೊಂದಿಗೆ ನಮ್ಮ ಕಪಟತನ ಹಾಗೂ ಮೋಸದ ಬಗ್ಗೆ ಪ್ರಾಮಾಣಿಕರಾದಾಗ ಮಾತ್ರ ಮುರಿಯಲ್ಪಡುತ್ತೇವೆ.

    ಬಹಳ ವರ್ಷಗಳ ನಂತರ ಯಾಕೋಬನ ವಂಶಸ್ಥನಾದ ನತಾನೀಯೇಲನನ್ನು ಯೇಸುವು ಭೇಟಿಯಾದಾಗ ಹೇಳಿದನು. ಇವನು ನಿಜವಾದ ಇಸ್ರಾಯೇಲನು ಇವನಲ್ಲಿ ಯಾಕೋಬನಿಲ್ಲ.(ಕಪಟವಿಲ್ಲ) ಎಂದು (ಯೋಹಾನ1:47). ನಂತರ ನತಾನೀಯೇಲನಿಗೆ ಯಾಕೋಬನಿಗೆ ಬೇತೇಲಿನಲ್ಲಿ ಕಾಣಿಸಿದ ಏಣಿಯ ಬಗ್ಗೆ ನೆನಪಿಸುತ್ತಾ ಅವನೂ ಒಬ್ಬ ಇಸ್ರಾಯೇಲನು ಎಂದು ಹೇಳಿದನು. ಇದು ನತಾನೀಯೇಲನು ಪರಿಪೂರ್ಣನಾಗಿದ್ದರಿಂದಲ್ಲ. ಬದಲಿಗೆ ಅವನಲ್ಲಿ ಯಾವುದೇ ಕಪಟತನ ಹಾಗೂ ಮೋಸವಿಲ್ಲದ್ದರಿಂದ. ಇಲ್ಲಿ ಹೇಳುತ್ತದೆ- ಕಡೆಗೆ ಯಕೋಬನು ದೇವರ ಮುಖವನ್ನು ನೋಡಿದ್ದರಿಂದ ಆ ಸ್ಥಳವನ್ನು ಅವನು ಪೇನೀಯೇಲ್ ಎಂದು ಕರೆದನು. ಬೇತೇಲಿನಲ್ಲಿ ದೇವರ ಮನೆಯೇ ಹೆಚ್ಚೆಂದುಕೊಂಡಿದ್ದನು. ನೀವು ಕೂಡಾ ದೇವರ ಮನೆಯಲ್ಲಿರಬಹುದು. ಆದರೆ ದೇವರ ಮುಖ ನೋಡದೇ ಇರಬಹುದು. ನಂತರ ನಿಮಗೆ ಎರಡನೆಯ ಭೇಟಿಯ ಅವಶ್ಯಕತೆ ಇದೆ. ಅಲ್ಲಿ ಆತನ ಮುಖವನ್ನು ಕಾಣುವಿರಿ. ಇಲ್ಲಿ ಯಾಕೋಬನು ಆಶ್ಚರ್ಯದೊಂದಿಗೆ ಹೇಳುತ್ತಾನೆ. ನಾನೀಗ ನಿನ್ನ ಮುಖ ನೋಡಿದೆ. ದೇವರೆ ನನ್ನ ಜೀವವು ರಕ್ಷಿಸಲ್ಪಟ್ಟಿತು. ನಾನು ಸಂಸ್ಥೆಯಿಂದ ತೆಗೆಯಲ್ಪಡಬೇಕಿತ್ತು. ಆದರೆ ನನ್ನ ಸಂಬಳವು ಮೂರರಷ್ಟು ಹೆಚ್ಚಿಸಲ್ಪಟ್ಟಿತು.

    ನಾನು ನರಕಕ್ಕೆ ಕಳುಹಿಸಲ್ಪಡಬೇಕಿತ್ತು. ಆದರೆ ಆತನು ನನ್ನನ್ನು ಪವಿತ್ರಾತ್ಮನಿಂದ ತುಂಬಿಸಿದನು. ಹಲ್ಲೆಲೂಯ!!

    ಏಕೆ ಬಹಳಷ್ಟು ವಿಶ್ವಾಸಿಗಳು ಪವಿತ್ರಾತ್ಮಭರಿತರಾಗಿಲ್ಲವೆಂಬುದರ ಕಾರಣ ಈಗ ನನಗೆ ತಿಳಿದೆದೆಯೆಂದು ಯೋಚಿಸುತ್ತೇನೆ. ಅವರು ಅದನ್ನು ಸಂಪಾದಿಸಲು ಪ್ರಯತ್ನಿಸುತ್ತಿದ್ದಾರೆ. ಇದೇ ರೀತಿಯಲ್ಲಿ ಹಲವಾರು ಧರ್ಮಗಳಲ್ಲಿ ಬಹಳಷ್ಟು ಯಥಾರ್ಥ ಜನರು ತಮ್ಮ ಪಾಪಕ್ಷಮೆಗಾಗಿ ಹುಡುಕುತ್ತಿದ್ದಾರೆ. ಅವರೇಕೆ ಪಾಪಕ್ಷಮೆ ಹೊಂದುವುದಿಲ್ಲ? ಏಕೆಂದರೆ ಅವರು ಅದನ್ನು ಸಂಪಾದಿಸಲು ಪ್ರಯತ್ನಿಸುತ್ತಿದ್ದಾರೆ.

    ನಿಮ್ಮ ಪಾಪಗಳಿಗಾಗಿ ಕ್ಷಮೆಯನ್ನು ಹೇಗೆ ಪಡೆದಿರಿ. ನೀವು ಅದನ್ನು ಸಂಪಾದಿಸಿಕೊಂಡಿರಾ ಅಥವಾ ಅದಕ್ಕೆ ಅರ್ಹರಾಗಿದ್ದೀರಾ? ನಿಮ್ಮ ಜೀವನದಲ್ಲಿ ಒಂದು ದಿನ ದೇವರ ಕ್ಷಮೆಗೆ ನೀವು ಯೋಗ್ಯರೆ ಅಲ್ಲವೆಂದು ನೀವು ತಿಳಿದುಕೊಂಡಿರಿ. ಆಗ ನೀವು ಒಬ್ಬ ಕ್ರೈಸ್ತನಂತಲ್ಲ ಒಬ್ಬ ಪಾಪಿಯಂತೆ ಬಂದಿರಿ ಹಾಗೂ ತಕ್ಷಣವೇ ನಿಮ್ಮ ಪಾಪಗಳು ಕ್ಷಮಿಸಲ್ಪಟ್ಟವು. ಇದೇ ರೀತಿಯಲ್ಲಿ ನಾವು ಪವಿತ್ರಾತ್ಮಭರಿತರಾಗಲು ಬರಬೇಕಿದೆ.

    ಇಂದು ಬಹಳಷ್ಟು ವಿಶ್ವಾಸಿಗಳು ಪವಿತ್ರಾತ್ಮಭರಿತರಾಗಲು ಉಪವಾಸ ಪ್ರಾರ್ಥನೆ ಮಾಡಿ ಕಾಯುತ್ತಿದ್ದಾರೆ. ಇದೆಲ್ಲಾ ಮಾಡುವುದರಿಂದ ಯಾವುದೇ ತಪ್ಪಿಲ್ಲ. ಅವೆಲ್ಲಾ ಒಳ್ಳೆಯದೇ. ಆದರೆ ಇದರಲ್ಲಿ ಯಾವುದನ್ನು ನೀವು ಪವಿತ್ರಾತ್ಮಭರಿತರಾಗಲು ಯೋಗ್ಯರಾಗುವುದಕ್ಕಾಗಿ ಮಾಡಿದರೆ ನೀವು ತಪ್ಪು ದಾರಿಯಲ್ಲಿದ್ದೀರಿ. ಅಂತಹ ಸಂದರ್ಭದಲ್ಲಿ ಪವಿತ್ರಾತ್ಮಭರಿತರಾಗದಿದ್ದರೆ ನೀವು ದೇವರನ್ನು ಪ್ರಶ್ನಿಸಬಹುದು: ಕರ್ತನೇ ನಾನು ಪ್ರಾರ್ಥಿಸಿದೆ, ಉಪವಾಸ ಮಾಡಿದೆ, ಕಾದೆ, ಆದರೆ ಏಕೆ ಇನ್ನೂ ನನ್ನನ್ನು ತುಂಬಿಸಿಲ್ಲ? ಎಂದು. ಆದರೆ ನೀವೆಂದೂ ಪವಿತ್ರಾತ್ಮನನ್ನು ಸಂಪಾದಿಸಲು ಹಾಗೂ ಅದಕ್ಕಾಗಿ ಯೋಗ್ಯರಾಗಲು ಸಾಧ್ಯವಿಲ್ಲವೋ ನೀವು ಪಾಪಕ್ಷಮೆಯನ್ನು ಸಂಪಾದಿಸಲು ಹಾಗೂ ಯೋಗ್ಯರಾಗಲು ಹೇಗೆ ಸಾಧ್ಯವಿಲ್ಲವೋ ಹಾಗೆ ಇವೆರಡೂ ದೇವರ ಉಡುಗೊರೆಯಾಗಿದೆ. ಅದಕ್ಕಾಗಿ ನೀವು ಏನನ್ನೂ ಕೊಡಲು ಸಾಧ್ಯವಿಲ್ಲ. ನೀವದನ್ನು ಉಚಿತವಾಗಿ ತೆಗೆದುಕೊಳ್ಳಬೇಕು. ಇಲ್ಲವೇ ನಿಮಗದು ಸಿಗುವುದೇ ಇಲ್ಲ.

    ದೇವರ ಉಡುಗೊರೆಗಳೆಲ್ಲವೂ ಉಚಿತವಾಗಿವೆ. ಆದರೆ ಮನುಷ್ಯನು ಅವುಗಳನ್ನು ಪಡೆಯಲು ಏನಾದರೂ ಕೊಡಲು ಪ್ರಯತ್ನಿಸುವುದರೊಂದಿಗೆ ಅವುಗಳನ್ನು ಪಡೆಯುವುದಿಲ್ಲ. ದೇವರ ಉಡುಗೊರೆಗಳನ್ನು ಹೊಂದಲು ನೀವು ಯೋಗ್ಯರಾಗಲು ಪ್ರಯತ್ನಿಸಿದರೆ ನೀವೆಂದಿಗೂ ಅವುಗಳನ್ನು ಹೊಂದುವುದಿಲ್ಲ. ನೀವಿನ್ನೂ ಪವಿತ್ರಾತ್ಮಭರಿತರಾಗದ್ದಕ್ಕೆ ಇದೇ ಮುಖ್ಯ ಕಾರಣವಿರಬಹುದು.

    ಯೇಸುವು ಈ ಭೂಮಿಯಲ್ಲಿದ್ದಾಗ ಫರಿಸಾಯರು ತಾವೇ ಪಾಪಕ್ಷಮೆಯನ್ನು ಪಡೆಯಲು ಎಲ್ಲರಿಗಿಂತ ಯೋಗ್ಯರಾದವರೆಂದು ಯೋಚಿಸಿದರು. ಆದರೆ ಅವರು ಅದನ್ನು ಪಡೆಯದೇ ನರಕಕ್ಕೆ ಹೋದರು. ಹಾಗೆ ಬಹು ಪಾಪಿಯಾಗಿದ್ದ ಮಗ್ದಲದ ಮರಿಯಳು ಪಾಪ ಪರಿಹಾರವನ್ನು ತಕ್ಷಣವೇ ಪಡೆದಳು ಅಪರಾಧ ಜೀವಿತವನ್ನೆ ನಡೆಸಿದ ಆ ಕಳ್ಳನು ಶಿಲುಬೆಗೇರಿಸಿದ ದಿನವೇ ಕ್ಷಣಮಾತ್ರದಲ್ಲೇ ಪಾಪಕ್ಷಮೆಯನ್ನು ಪಡೆದು ಪರದೈಸಿಗೆ ಹೋದನು.

    ದೇವರು ತನ್ನ ಒಳ್ಳೇ ಉಡುಗೊರೆಗಳನ್ನು ಅದಕ್ಕೆ ಯೋಗ್ಯರಲ್ಲದವರಿಗೆ ಕೊಡುತ್ತಾರೆ. ದ್ರಾಕ್ಷೆ ತೋಟದಲ್ಲಿ ಕೆಲಸ ಮಾಡಲು ಕಡೆಯ ಗಳಿಗೆಯಲ್ಲಿ ಬಂದವರಿಗೆ ಅವರು ಯಾವುದನ್ನೂ ಸ್ವೀಕರಿಸಲು ಅರ್ಹರಲ್ಲವೆಂದು ತಿಳಿದಿತ್ತು. ಆದರೆ ಮೊದಲು ಬಂದವರ ಸಂಬಳಕ್ಕೆ ಅರ್ಹರೆಂದು ಯೋಚಿಸಿದರು ಮತ್ತು ಅವರೇ ಕಡೆಯವರಾದರು. ದುಂದುಗಾರ ಮಗನ ದೃಷ್ಟಾಂತದಲ್ಲಿ ಆ ತಂದೆಯ ಕೈಯಲ್ಲಿ ಒಂದು ಉಂಗುರವಿತ್ತೆಂದು ನಾವು ಓದುತ್ತೇವೆ. ಒಂದು ದಿನ ಎಲ್ಲಾ ಹಣವನ್ನು ಹಾಳು ಮಾಡಿದ ಕಿರಿಯ ಮಗನಿಗೆ ಆ ಉಂಗುರವನ್ನು ಕೊಟ್ಟು ಬಿಟ್ಟನು. ಏಕೆ ಆ ಹಿರಿಯ ಮಗನಿಗೆ ಕೊಡಲಿಲ್ಲ. ಏಕೆಂದರೆ ಅವನು ಸ್ವನೀತಿ ಉಳ್ಳವನಾಗಿದ್ದನು. ಮಾನವ ದೃಷ್ಟಿಯಿಂದ ನೋಡುವುದಾದರೆ ಹಿರಿಯ ಮಗನೇ ಆ ಉಂಗುರಕ್ಕೆ ಯೋಗ್ಯನು ಆದರೆ ಆ ತಂದೆಯು ತನ್ನ ಕಿರಿಯ ಮಗನಿಗೆ ಕೊಟ್ಟು ಬಿಟ್ಟನು.

    ಅದು ದೇವರ ಮಾರ್ಗ ತನ್ನ ಸನ್ನಿಧಿಯಲ್ಲಿ ಯಾರು ಹೆಮ್ಮೆ ಪಡಬಾರದೆಂಬ ಕಾರಣಕ್ಕೆ ಮತ್ತು ಮನುಷ್ಯನ ಅಹಂಕಾರವನ್ನು ಅಡಗಿಸಲು ದೇವರು ಹೀಗೆ ಮಾಡುತ್ತಾರೆ. ಆತನ ಹಾದಿಯು ನಮ್ಮ ಹಾದಿಯಲ್ಲ ಮತ್ತು ಆತನ ಯೋಚನೆಯು ನಮ್ಮ ಯೋಚನೆಯಲ್ಲ.

    ನಾನಿಲ್ಲಿ ಒತ್ತಿ ಹೇಳಲು ಪ್ರಯತ್ನಿಸುತ್ತಿರುವ ಸತ್ಯವನ್ನು ನೀವು ಅರ್ಥಮಾಡಿಕೊಂಡರೆ, ದೇವರು ಮನುಷ್ಯನಲ್ಲಿ ಹೀಗೆ ವ್ಯವಹರಿಸುತ್ತಾರೆಂಬ ಮೂಲತತ್ವವನ್ನು ಅರ್ಥ ಮಾಡಿಕೊಂಡಂತಾಗುತ್ತದೆ. ಮೊದಲು ದೇವರ ದಯೆಯೇ ನನ್ನನ್ನು ಪಶ್ಚಾತ್ತಾಪಕ್ಕೆ ನಡೆಸಿತು. ನಂತರ ಆಗಾಗ್ಗೆ ಅನುಭವಿಸಿದ ಪ್ರತಿಯೊಂದು ದೇವರ ದಯೆಯು ನನ್ನನ್ನು ಇನ್ನೂ ಹೆಚ್ಚಿನ ಪಶ್ಚಾತ್ತಾಪಕ್ಕೆ ನಡೆಸಿತು.

    ದೇವರ ದಯೆಯೇ ನಿಮ್ಮನ್ನೂ ಸಹ ಪಶ್ಚಾತ್ತಾಪಕ್ಕೆ ನಡೆಸಲಿ. ಆತನು ಒಳ್ಳೆತನದ ದುರ್ಲಾಭ ಮಾಡಿಕೊಳ್ಳಬಾರದು. ದೇವರು ಹಲವರು ವಿಧಗಳಲ್ಲಿ ದಯಾವಂತರಾಗಿದ್ದಾರೆ. ಆದರೆ ಅವರು ದಯೆ ತೋರಿದಾಕ್ಷಣಕ್ಕೆ ನಮ್ಮ ವಿಷಯಗಳಲ್ಲಿ ಸಂತೋಷವಾಗಿದ್ದಾರೆಂದು ನಾವು ಪರಿಗಣಿಸಬಾರದು. ಇಲ್ಲ. ಅವರು ಎಲ್ಲಾ ಮನುಷ್ಯರಿಗೂ ದಯಾವಂತನು. ಅವರ ದಯೆಯು ಕೇವಲ ನಮ್ಮನ್ನು ಪಶ್ಚಾತ್ತಾಪಕ್ಕೆ ನಡೆಸುವುದಕ್ಕೋಸ್ಕರವಾಗಿದೆ ಹಾಗೂ ನಾವು ಯಾವುದೇ ಕಪಟವಿಲ್ಲದೆ ಅವರ ಕಡೆಗೆ ತಿರುಗಿಕೊಂಡರೆ ನಮ್ಮ ಕೈಯಲ್ಲೂ ಕೂಡಾ ಅವರ ಉಂಗುರವನ್ನು ತೊಡಿಸುತ್ತಾರೆ. ಅವರು ಆ ಉಂಗುರವನ್ನು ನಮ್ಮಂಥ ಪಾಪಿಗೋಸ್ಕರವೆಂತಲೇ ಇಟ್ಟಿದ್ದಾರೆ.

    ಒಮ್ಮೆ ಯೇಸು ಪರಿಸಾಯರನ್ನು ಕುರಿತು ಕ್ಷೇಮದಿಂದಿರುವವರಿಗೆ ವೈದ್ಯನ ಅಗತ್ಯವಿಲ್ಲ ಆದರೆ ಕ್ಷೇಮವಿಲ್ಲದವರಿಗೆ ವೈದ್ಯನ ಅಗತ್ಯವಿದೆ (ಮತ್ತಾಯ 9:12) ಎಂದು ಈ ಅಣಕು ಮಾತನ್ನು ಪ್ರೀತಿಯಿಂದ ಅವರನ್ನು ಎಚ್ಚರಿಸಲು ಹೇಳಿದನು. ಆದರೆ ಅವರು ಅರ್ಥಮಾಡಿಕೊಳ್ಳಲಿಲ್ಲ.

    ಯೇಸುವು ಯಾರು ತಮ್ಮನ್ನು ತಾವೇ ನೀತಿವಂತರೆಂದುಕೊಳ್ಳುತ್ತಾರೋ ಅಂತವರನ್ನು ಕರೆಯಲು ಬರಲಿಲ್ಲ. ಆದರೆ ಯಾರು ತಾವು ಪಾಪಿಗಳೆಂದು ಒಪ್ಪಿಕೊಳ್ಳುತ್ತಾರೋ ಅಂತವರಿಗಾಗಿ ಇಂದು ಹಲವರು ಆ ಫರಿಸಾಯರ ಹಾಗೆ ಕಪಟತನ, ಅಹಂಕಾರ ಹಾಗೂ ಸ್ವನೀತಿಯೆಂಬ ರೋಗಿಗಳಾಗಿದ್ದು ಅದನ್ನು ಅರಿಯದೇ ಇರುವುದೂ ಸಾಧ್ಯ. ಈ ರೋಗಗಳು ಏಡ್ಸ್ ಮತ್ತು ಕ್ಯಾನ್ಸರ್ ಗಳಿಗಿಂತ ಗಂಭೀರವಾದವುಗಳು ಹಾಗೂ ಕೊಲೆ ಮತ್ತು ವ್ಯಭಿಚಾರಗಳು ಇದರ ಮುಂದೆ ಶೀತ ಮತ್ತು ಜ್ವರವಿದ್ದಂತೆ. ಈ ರೋಗಗಳು ನಿಮ್ಮನ್ನು ಸಂಪೂರ್ಣವಾಗಿ ಹಾಳು ಮಾಡಿ ಬಿಡುತ್ತವೆ. ಕೊಲೆಗಾರರು ಮತ್ತು ವ್ಯಭಿಚಾರಿಗಳು ಅತೀ ರೋಗಿಗಳೆಂದು ನೀವು ಯೋಚಿಸಬಹುದು. ಆದರೆ ನಿಜವಾಗಿ ನೀವು ಅವರಿಗಿಂತ ಗಂಭೀರವಾದ ರೋಗಿಯಾಗಿರಬಹುದು.

    ದೇವರು ತನ್ನ ಜೀವ ಶಕ್ತಿ ಅಧಿಕಾರಗಳನ್ನು ನಮಗೆ ಕೊಡಬಯಸುತ್ತಾನೆ. ಅದ್ದರಿಂದ ನಾವು ಪೂರ್ಣವಾಗಿ ಮುರಿಯುವವರೆಗೆ ಪದೇ ಪದೇ ಸೋಲುವಂತೆ ಅನುಮತಿಸುತ್ತಾನೆ. ಯೋಬನ ಕಥೆಯಲ್ಲಿ ನಾವು ನೋಡುವುದಾದರೆ ದೇವರು ಅವನ ಆಸ್ತಿ, ಮಕ್ಕಳು ಹಾಗೂ ಆರೋಗ್ಯವನ್ನು ಕಳೆದುಕೊಳ್ಳುವಂತೆ ಅನುಮತಿಸುವುದರೊಂದಿಗೆ, ಅವನನ್ನು ಪೂರ್ಣ ತಳ ಭಾಗಕ್ಕೆ ತಂದನು. ಒಂದು ವಿಧದಲ್ಲಿ ಅವನು ತನ್ನ ಹೆಂಡತಿಯನ್ನೂ (ಆಕೆ ಅವನನ್ನು ಯಾವಾಗಲೂ ದೂಷಿಸುತ್ತಿದ್ದಳು) ಹಾಗೂ ಅವನ ಮೂರು ಜನ ಸ್ನೇಹಿತರನ್ನೂ (ಅವನನ್ನು ಅಪಾರ್ಥ ಮಾಡಿಕೊಂಡು ಖಂಡಿಸಿದರು) ಕಳೆದುಕೊಂಡನು.

    ಅವನ ಸ್ನೇಹಿತರು ಸ್ವನೀತಿಯುಳ್ಳ ಬೋಧಕರಾದರು ಹಾಗೂ ಅವನು ಬಿದ್ದಾಗ ಒದೆಯುವುದರಲ್ಲಿ ಸಂತೋಷಪಟ್ಟರು. ದೇವರು ತನ್ನ ದಯೆಯಿಂದ ಇದಕ್ಕೆ ಒಂದು ಕೊನೆ ತರುವವರೆಗೆ ಅವನನ್ನು ಒದೆಯುತ್ತಲೇ ಇದ್ದರು. ಈ ಎಲ್ಲಾ ಪರೀಕ್ಷೆಗಳ ಮಧ್ಯೆ ಯೋಬನು ತಾನು ಮತ್ತೆ ಮತ್ತೆ ನೀತಿಕರಿಸಿಕೊಳ್ಳುತ್ತಿದ್ದನು. ಕಡೆಗೆ ದೇವರು ಅವನೊಂದಿಗೆ ಮಾತನಾಡಿದಾಗಲೇ ಯೋಬನು ತನ್ನಲ್ಲಿನ ಸ್ವನೀತಿಯ ಮೋಸವನ್ನು ಕಂಡುಕೊಂಡು ಪಶ್ಚಾತ್ತಾಪಪಟ್ಟನು. ಅವನು ನೀತಿವಂತ ಮನುಷ್ಯನಾಗಿದ್ದನು. ಅದು ಒಳ್ಳೆಯದು. ಆದರೆ ದೇವರು ವ್ಯವಹರಿಸಿದ ನಂತರ ಅವನೊಬ್ಬ ಮುರಿದಂತಹ ಮನುಷ್ಯನಾದನು. ಅಂದಿನಿಂದ ಅವನು ದೇವರಲ್ಲಿ ಮಾತ್ರ ಸಂತೋಷಪಟ್ಟನು. ಹೀಗೆ ಯೋಬನಲ್ಲಿ ದೇವರು ಉದ್ದೇಶವು ಪೂರ್ಣವಾಯಿತು.

    ಯೋಬನು ಮುರಿಯಲ್ಪಟ್ಟಾಗ ದೇವರಿಗೆ ಏನು ಹೇಳುತ್ತಾನೆಂದು ಇಲ್ಲಿ ನೋಡಿ ಇಲ್ಲಿಯವರೆಗೆ ಈ ಬೋಧಕರಿಂದ ನನ್ನ ಕಿವಿಯಿಂದ ನಿನ್ನನ್ನು ಕುರಿತು ಕೇಳಿದ್ದೇನೆ. ಆದರೆ ಈಗ ನನ್ನ ಕಣ್ಣಿನಿಂದ ನಿನ್ನನ್ನು ಮುಖಾಮುಖಿ ನೋಡಿದೆನು (ಯೋಬ 42:5) ಅದೇ ಯೋಬನ ಪೇನೀಯೇಲ್ ಆಗಿತ್ತು ಹಾಗೂ ಅವನು ದೇವರು ಮುಖವನ್ನು ನೋಡಿದನು ಮತ್ತು ಅವನ ಜೀವವು ರಕ್ಷಿಸಲ್ಪಟ್ಟಿತು. ಇದರ ಫಲಿತಾಂಶವೇನಾಯಿತು? ಅವನು ಧೂಳಿನಲ್ಲಿಯೂ ಹಾಗೂ ಬೂದಿಯಲ್ಲಿಯೂ ಕುಳಿತು ಪಶ್ಚಾತ್ತಾಪಪಟ್ಟನು (ವಾಕ್ಯ 6). ಅ ಬೋಧಕರು ಹಲವಾರು ದಿನಗಳಲ್ಲಿ ಬೋಧನೆಯಿಂದ ಯೋಬನಲ್ಲಿ ಪೂರೈಸಲಾಗದ್ದನ್ನು ದೇವರು ಒಂದೇ ಕ್ಷಣದಲ್ಲಿ ತನ್ನ ದಯೆಯನ್ನು ಪ್ರಕಟಿಸುವುದರ ಮೂಲಕ ಪೂರೈಸಿದನು. ಇಲ್ಲಿ ಕೂಡಾ ದೇವರ ದಯೆಯೇ ಯೋಬನನ್ನು ಪಶ್ಚಾತ್ತಾಪಕ್ಕೆ ನಡೆಸಿತು.

    ನಮ್ಮಲ್ಲಿ ಹೆಚ್ಚಿನಾಂಶ ಜನರು ಸಭಾಕೂಟಗಳಲ್ಲಿ ಬೋಧಕರಿಂದ ದೇವರ ಬಗ್ಗೆ ಕೇಳುತ್ತಾರೆ. ಆದರೆ ನಮಗೆ ಬೇಕಿರುವುದು ದೇವರೊಂದಿಗಿನ ಮುಖಾಮುಖಿ ಭೇಟಿ ಹಾಗೂ ಅಲ್ಲಿ ಆತನ ದಯೆಯನ್ನು ನೋಡಿ ಅದರಿಂದ ಮುರಿಯಲ್ಪಡುವುದು.

    ಪೇತ್ರನಿಗಾದದ್ದು ಅದೇ. ಪ್ರಭುವನ್ನು ಮೂರು ಬಾರಿ ನಿರಾಕರಿಸಿದ ನಂತರ ಪ್ರಭುವಿನ ಮುಖವನ್ನು ನೋಡಿದನು. ಹಾಗೆ ಪೇತ್ರನೂ ಕೂಡಾ ತನ್ನ ಪೇನೀಯೇಲನ್ನು ಅನುಭವಿಸಿದನು. ಅಲ್ಲಿ ನಾವು ಓದುತ್ತೇವೆ. ಆಗ ಕರ್ತನು ಹಿಂದಿರುಗಿ ಪೇತ್ರನ ಕಡೆಗೆ ನೋಡಿದನು (ಲೂಕ 22:61) ಎಂದು. ಆ ನೋಟವು ಹೀಗಾಗುವುದೆಂದು ನಾನು ಹೇಳಿದ್ದೆನು ಎಂದು ಹೇಳುತ್ತಿರಲಿಲ್ಲ. ನನ್ನಲ್ಲಿ ವಿಶ್ವಾಸ ಕಳೆದುಕೊಳ್ಳಬೇಡ. ನಾನು ನಿನ್ನನ್ನು ಇದರಿಂದ ಹೊರಗೆ ನಡೆಸುತ್ತೇನೆ ಇಂದು ಹೇಳುವುದಾಗಿತ್ತು.

    ಇದರ ಫಲಿತಾಂಶವೇನಾಯಿತು? ಪೇತ್ರನು ಹೊರಗೆ ಹೋಗಿ ಬಹು ವ್ಯಥೆ ಪಟ್ಟು ಅತ್ತನು (ಲೂಕ 22:62). ಯೇಸುವಿನ ಅ ದಯಾಪೂರ್ಣ ಮತ್ತು ಕ್ಷಮಾಭರಿತ ನೋಟವು ಅ ಗಡಸು ಮೀನುಗಾರನ ಹೃದಯವನ್ನು ಮುರಿದುಬಿಟ್ಟಿತು.

    ಹಳೆಯ ಒಡಂಬಡಿಕೆಯಲ್ಲಿ ದೇವರು ಇಸಾಯೇಲಿಗೆ ಆರೋಗ್ಯ, ಐಶ್ವರ್ಯ ಮತ್ತು ಬಹಳಷ್ಟು ಲೌಕೀಕ ಆಶೀರ್ವಾದಗಳನ್ನು ವಾಗ್ದಾನಮಾಡಿದನು. ಅದೆಲ್ಲಕ್ಕೂ ಹೆಚ್ಚಿನದೆಂದರೆ - ಅದನ್ನು ಅರಣ್ಯಕಾಂಡದಲ್ಲಿ 6:22-26ರಲ್ಲಿ ತಿಳಿಸಲಾಗಿದೆ. ಇಲ್ಲಿ ಆರೋನನು ಜನರನ್ನು ಅಶೀರ್ವದಿಸಲು ಅಪ್ಪಣೆ ಪಡೆದು ಹೀಗೆ ಹೇಳುತ್ತಾನೆ. ಯೆಹೋವನು ತನ್ನ ಮುಖವನ್ನು ನಿಮ್ಮ ಕಡೆಗೆ ಪ್ರಕಾಶಿಸುವಂತೆ ಮಾಡಿ ನಿಮಗೆ ಕೃಪೆ ತೋರಿಸಲಿ. ಯೆಹೋವನು ತನ್ನ ಮುಖವನ್ನು ನಿಮ್ಮ ಕಡೆಗೆ ಎತ್ತಿ ನಿಮಗೆ ಸಮಾಧಾನ ಅನುಗ್ರಹಿಸಲಿ.

    ತಮ್ಮ ಜೀವಿತವನ್ನು ಬದಲು ಮಾಡುವ ದೇವರೊಂದಿಗಿನ ಮುಖಾಮುಖಿ ದರ್ಶನವನ್ನು ಹುಡುಕುವ ಬದಲು ಇಂದಿನ ಬಹಳಷ್ಟು ವಿಶ್ವಾಸಿಗಳು ಸ್ವಾರ್ಥಕ್ಕಾಗಿ ಆರೋಗ್ಯ ಹಾಗೂ ಐಶ್ವರ್ಯಗಳನ್ನು ಬೇಡುತ್ತಾರೆ ಹಾಗೂ ಹುಡುಕುತ್ತಾರೆ.(ಇದನ್ನು ಅವಿಶ್ವಾಸಿಗಳು ಯಾವ ಪ್ರಾರ್ಥನೆ ಮಾಡದೇ ಗಳಿಸುತ್ತಾರೆ) ಮತ್ತು ಭಾವನಾ ಅನುಭವಗಳನ್ನು ಬಯಸುತ್ತಾರೆ (ಇದರಲ್ಲಿ ಹೆಚ್ಚಿನಾಂಶ ಕೋಟಾ) ನಾವು ಶ್ರೀಮಂತರಾಗದಿದ್ದರೂ ಪರವಾಗಿಲ್ಲ ಮತ್ತು ಗುಣ ಹೊಂದದಿದ್ದರೂ ಪರವಾಗಿಲ್ಲ. ಆದರೆ ದೇವರ ಮುಖವನ್ನು ನೋಡಿದರೆ ನಮ್ಮೆಲ್ಲಾ ಅವಶ್ಯಕತೆಗಳು ಪೂರೈಸಲ್ಪಡುವುವು.

    ಯೋಬನು ದೇವರನ್ನು ಸಂಧಿಸಿದಾಗ ಅವನ ದೇಹವೆಲ್ಲಾ ಹುಣ್ಣಾಗಿತ್ತು. ಆದರೆ ಅವನು ತನ್ನನ್ನು ಗುಣಪಡಿಸುವುದಾಗಿ ದೇವರನ್ನು ಕೇಳಲಿಲ್ಲ. ಬದಲಿಗೆ ನಾನು ದೇವರ ಮುಖವನ್ನು ನೋಡಿದ್ದೇನೆ. ಅಷ್ಟೇ ಸಾಕು ಎಂದು ಅವನು ಹೇಳಿದನು. ಬಹಳ ವಿವೇಚನೆಯುಳ್ಳ ಮತ್ತು ದೇವರಿಂದ ವಾಕ್ಯ ಹೊಂದಿದ್ದೇವೆಂದು ಹೇಳಿಕೊಂಡ ಆ ಮೂರು ಬೋಧಕರು ಯೋಬನು ಕೆಲವು ಗುಪ್ತ ಪಾಪಗಳಿಂದ ತನ್ನ ಜೀವನದಲ್ಲಿ ಶಿಕ್ಷೆಗೊಳಗಾಗಿದ್ದಾನೆಂದು ತಿಳಿಸಿದರು. ಇಂದೂ ಸಹ ಇಂಥಹ ತಾವೇ ನೇಮಿಸಿಕೊಂಡಂಥ ಬಹಳಷ್ಟು ಪ್ರವಾದಿಗಳು ದೇವರು ಹೀಗೆ ಹೇಳುತ್ತಾನೆ ಎಂದು ಸುಳ್ಳು ಹೇಳಿಕೊಂಡು ದೇವರ ಮಕ್ಕಳನ್ನು ಖಂಡನೆಗೆ ತರುತ್ತಾರೆ. ಆದರೆ ದೇವರು ಆ ಮೂವರು ಬೋಧಕರು ಯೋಬನನ್ನು ನ್ಯಾಯ ತೀರ್ಮಾನಕ್ಕೆ ಒಳಪಡಿಸಿ ಹೆದರಿಸಿದಂತೆ ಹೆದರಿಸಲಿಲ್ಲ.

    ದೇವರು ಯೋಬನಿಗೆ ಅವನ ಸೋಲುಗಳ ವಿಷಯವಾಗಿ ಹೇಳಲಿಲ್ಲ ಹಾಗೂ ಒತ್ತಡಗಳ ಸಮಯದಲ್ಲಿ ತನ್ನ ವಿರುದ್ಧವೇ ದೂರುಗಳನ್ನು ಹೇಳಿದ್ದರ ಬಗ್ಗೆ ನೆನಪಿಸಲಿಲ್ಲ. ದೇವರು ಕೇವಲ ತನ್ನ ಕರುಣೆಯನ್ನು ಯೋಬನಿಗೆ ಪ್ರಕಟಿಸಿದನು - ದೇವರ ಕರುಣೆಯನ್ನು ಮನುಷ್ಯನ ಸಂತೋಷಕ್ಕಾಗಿ ಸೃಷ್ಟಿಗೊಂಡ ಈ ಸುಂದರವಾದ ವಿಶ್ವದಲ್ಲಿ ಹಾಗೂ ಅವನ ಅಧೀನವಾಗಿರುವಂತೆ ಸೃಷ್ಟಿಗೊಂಡ ಪ್ರಾಣಿಗಳಲ್ಲಿ ನೋಡಬಹುದಾಗಿದೆ. ಈ ತರಹದ ದೇವರ ಕರುಣೆಯ ಪ್ರಕಟಣೆಯೇ ಯೋಬನನ್ನು ಮಾನಸಾಂತರಕ್ಕೆ ನಡೆಸಿತು. ಬಹಳಷ್ಟು ಜನರು ದೇವರ ಕರುಣೆಯ ಲಾಭ ಪಡೆದು ಅದನ್ನು ಕಡೆಗಣಿಸುತ್ತಾರೆ. ಆದರೆ ಇದು ಯೋಬನನ್ನು ಮಾನಸಾಂತರಕ್ಕೆ ನಡೆಸಿತು. ನಂತರ ದೇವರು ಅವನಿಗೆ ಮೊದಲಿದ್ದದಕ್ಕಿಂತ ಎರಡರಷ್ಟು ಆಶೀರ್ವದಿಸಿದನು.

    ದೇವರು ನಮ್ಮನ್ನು ಮುರಿಯುವುದರಲ್ಲಿನ ಅಂತಿಮ ಉದ್ದೇಶವೆಂದರೆ; ನಾವು ಯಕೋಬ 5:11 ರಲ್ಲಿ ಓದುವಂತೆ ನಮ್ಮನ್ನು ಅಪಾರವಾಗಿ ಆಶೀರ್ವದಿಸುವುದೇ ಆಗಿರುತ್ತದೆ. ಯೋಬನಲ್ಲಿರುವ ಸ್ವನೀತಿ ಹಾಗೂ ಗರ್ವವನ್ನು ನಾಶಮಾಡಿ ಅವನನ್ನು ಮುರಿದಂತಹ ಮನುಷ್ಯನಾಗಿ ಮಾಡಿ ಕರ್ತನು ತನ್ನ ಮುಖವನ್ನು ತೋರಿಸಿ ನಂತರ ಅವನನ್ನು ಅಪಾರವಾಗಿ ಆಶೀರ್ವದಿಸಬೇಕೆಂಬುದೇ ಕರ್ತನ ಮನಸ್ಸಿನಲ್ಲಿದ್ದ ಮೂಲ ಗುರಿಯಾಗಿತ್ತು. ನಾವು ದೇವರಿಂದ ಪಡೆಯುವ ಪ್ರಾಪಂಚಿಕ ಹಾಗೂ ಶಾರೀರಿಕ ಅಶೀರ್ವಾದಗಳು ಅವುಗಳ ಹಿಂದಿರುವ ದೇವರ ಮುಖವನ್ನು ನೋಡದಿದ್ದರೆ ನಮ್ಮನ್ನು ದೇವರಿಂದ ದೂರ ನಡೆಸಿ ನಾಶ ಮಾಡುವ ಸಾಧ್ಯತೆ ಇದೆ.

    ಕರ್ತನ ಒಂದು ನೋಟವು ನಮಗೆ ಪ್ರಪಂಚ ಕೊಡುವ ಎಲ್ಲಾ ರೀತಿಯ ಹಂಬಲದಿಂದ ಬಿಡಿಸಿ ಬಿಡುತ್ತದೆ.

    ನಿಮ್ಮ ಮುಖಾರವಿಂದದ ದೈವೀಕ ಪ್ರೀತಿಯ

    ಒಂದು ಕ್ಷಣಿಕ ಪ್ರಭೆಯನ್ನು ತೋರಿಸಿ

    ಮತ್ತು ನಾನೆಂದಿಗೂ ನಿಮ್ಮನ್ನು ಬಿಟ್ಟು

    ಬೇರೇನನ್ನೂ ಯೋಚಿಸುವುದಿಲ್ಲ ಅಥವಾ ಸ್ವಪ್ನಿಸುವುದಿಲ್ಲ.

    ಎಲ್ಲಾ ಕೆಳಗಿನ ಪ್ರಭೆಗಳು ಅದೃಷ್ಟವಾಗಲಿ

    ಎಲ್ಲಾ ಕೆಳಗಿನ ಮಹಿಮೆಗಳು ಕುಂದಲಿ

    ಈ ಲೋಕದಲ್ಲಿ ಸುಂದರವಾದವುಗಳೆಲ್ಲವೂ

    ಎಂದೆಂದಿಗೂ ಸುಂದರವಾಗಿ ಕಾಣದಿರಲಿ".

    ಪೇತ್ರನು ಕರ್ತನ ಮುಖವನ್ನು ನೋಡಿದಾಗ ಬಹಳವಾಗಿ ಅತ್ತನು. ಈಗ ನಾವು ಕಲ್ಪಿಸಬಹುದು. ಪೇತ್ರನು, ಕಡೆಗೂ ಮುರಿಯಲ್ಪಟ್ಟನೆಂದು. ಆದರೆ ಇಲ್ಲ. ಆತನು ತನ್ನ ಪಿನಿಯೇಲ್ಗೆ ಸಿದ್ದವಾಗಲು ಕರ್ತನು ಮತ್ತೊಂದು ಸೋಲಿನ ಅನುಭವ ಮೂಲಕ ನಡೆಸಬೇಕಾಗಿತ್ತು. ಯೋಹಾನ 21:3 ರಲ್ಲಿ ಪೇತ್ರನು ತನ್ನ ಸಹ ಅಪೋಸ್ತಲರಿಗೆ ನಾನು ಮೀನು ಹಿಡಿಯಲು ಹೋಗುತ್ತೇನೆ ಎಂದು ಹೇಳುವುದನ್ನು ಓದುತ್ತೇವೆ. ಅವನು ಆ ಸಂಜೆಗೆ ಮಾತ್ರ ಮೀನು ಹಿಡಿಯಲು ಹೋಗುತ್ತೇನೆಂದು ಹೇಳಲಿಲ್ಲ. ಅವನು ಹೇಳಿದ್ದರ ಅರ್ಥ ನಾನು ಸೋತವನಾಗಿರುವುದರಿಂದ ಈ ಅಪೋಸ್ತಲನಾಗಿರುವುದನ್ನು ಬಿಟ್ಟು ಶಾಶ್ವತವಾಗಿ ಮೀನು ಹಿಡಿಯಲು ಹೋಗುತ್ತೇನೆಂದು.

    ಹಲವು ವರ್ಷಗಳ ಹಿಂದೆ ಕರ್ತನು ಪೇತ್ರನನ್ನು ಕರೆದಾಗ ಮೀನು ಹಿಡಿಯುವ ಕೆಲಸವನ್ನು ಬಿಟ್ಟು ಬಿಟ್ಟಿದ್ದನು ಹಾಗೂ ಅವನಿಗೆ ತಿಳಿದಂತೆ ಪ್ರಾಮಾಣಿಕವಾಗಿ ತನ್ನೆಲ್ಲವನ್ನು ಬಿಟ್ಟು ಪ್ರಭುವನ್ನು ಹಿಂಬಾಲಿಸಿದ್ದನು. ಆದರೆ ಈಗ ಅವನು ಸೋತವನಾಗಿದ್ದನು. ಅವನು ಅಪೋಸ್ತಲನಾಗಿರುವುದು ತನಗೆ ತಕ್ಕ ಕೆಲಸವಲ್ಲವೆಂದು ಅಂದುಕೊಂಡಿದ್ದನು. ಮೂರುವರೆ ವರ್ಷಗಳು ಎಲ್ಲಾ ಕಾಲದಲ್ಲಿಯೂ ಉತ್ತಮವಾಗಿ ಜೀವಿಸಿದ ಮಹಾಬೋಧಕನಿಂದ ಅತೀ ಶಕ್ತಿಯುತವಾದ ಸಂದೇಶಗಳನ್ನು ಕೇಳಿದ ನಂತರವೂ ಒಂದು ಬಾರಿಯಲ್ಲ ಮೂರು ಬಾರಿ ಪ್ರಭುವನ್ನು ನೇರವಾಗಿ ನಿರಾಕರಿಸಿದ್ದನು. ಅವನು ಅಪೋಸ್ತಲನಾಗಿ ಸಾಕಷ್ಟು ಅನುಭವಿಸಿದ್ದನು. ಆದರೆ ಅವನು ಒಂದನ್ನು ಉತ್ತಮವಾಗಿ ಮಾಡಲು ಶಕ್ತನಾಗಿದ್ದನು. ಅದು ಮೀನು ಹಿಡಿಯುವುದು. ಅವನ ಬಾಲ್ಯದಿಂದ ಇದನ್ನೆ ಮಾಡಿದವನಾಗಿದ್ದನು ಹಾಗೂ ಇದರಲ್ಲಿ ಪ್ರವೀಣನಾಗಿದ್ದನು. ಆದ್ದರಿಂದ ಮತ್ತೊಮ್ಮೆ ಮೀನುಗಾರನಾಗಲು ನಿರ್ಧರಿಸಿದನು. ಇತರ ಅಪೋಸ್ತಲರು ಕೂಡಾ ಹಾಗೆಯೇ ಯೋಚಿಸಿದರು. ಅವರೆಲ್ಲರೂ ಪ್ರಭುವನ್ನು ಆತನ ಅವಶ್ಯಕತೆಯಲ್ಲಿ ಆತನನ್ನಗಲಿ ಓಡಿ ಹೋಗಿದ್ದರು ಹಾಗೂ ಅವರೂ ಮೀನು ಹಿಡಿಯುವುದಕ್ಕೆ ಹೋಗುವುದರಲ್ಲಿದ್ದರು. ಏಕೆಂದರೆ "ಅಪೋಸ್ತಲ"ರಾಗಿ ಅವರೆಲ್ಲರೂ ಸೋತಿದ್ದರು..!!

    ಅವರೆಲ್ಲರೂ ಯಥಾರ್ಥ ಜನರಾಗಿದ್ದರು ಹಾಗೂ ಯೇಸುವಿನ ಸಂದೇಶಗಳನ್ನು ಮೆಚ್ಚಿ ಆತನನ್ನು ಕೇಳುವಾಗ ಅವರ ಹೃದಯಗಳು ಹತ್ತಿ ಉರಿದಿದ್ದವು ಅವರು ಆತನನ್ನು ಪೂರ್ಣ ಹೃದಯದಿಂದ ಅನುಸರಿಸಲು ಬಯಸಿದ್ದರು. ಆದರೆ ಸೋತರು.

    ನಿಮ್ಮ ಅನುಭವವು ಹೀಗೆಯೇ ಆಗಿರಬಹುದು. ನೀವು ಕೂಡಾ ಶಕ್ತಿಯುತವಾದ ಸಂದೇಶಗಳನ್ನು ಕೇಳಿ ಅದರಿಂದ ಉತ್ತೇಜಿತರಾಗಿರಬಹುದು. ದೇವರ ವಾಕ್ಯಗಳನ್ನು ಕೇಳಿದಾಗ ನಿಮ್ಮ ಹೃದಯವೂ ಹತ್ತಿ ಉರಿದಿರಬಹುದು. ನೀವೂ ಕೂಡಾ ಎಲ್ಲವನ್ನು ಬಿಟ್ಟು ನಿಷ್ಕಪಟತೆಯಿಂದ ಪ್ರಭುವನ್ನು ಹಿಂಬಾಲಿಸಲು ಬಯಸಿರಬಹುದು. ಒಂದು ಪಕ್ಷ ಶಕ್ತಿಯುತವಾದ ಸಂದೇಶಗಳನ್ನು ಕೇಳಿದಾಗ ಆಗಾಗ್ಗೆ ನಿರ್ಧಾರಗಳನ್ನು ಮಾಡಿರಬಹುದು. ಸೋಲುಗಳು ಮರುಕಳಿಸಿದಾಗ ಈಗ ನಿಜವಾಗಿ ಅನುಸರಿಸುತ್ತೇನೆ ಎಂದು ಹೇಳಿಕೊಂಡಿರಬಹುದು. ಆದರೆ ಮತ್ತೆ ಮುಂದೆ ಹೋಗಿ ಸೋತಿರಬಹುದು ಹಾಗೂ ಇಂದು ಹಿಂದಿರುಗಿ ನೋಡಿದರೆ ಬಹುಶ: ಸೋಲುಗಳ ರಾಶಿಯೇ ಬಿದ್ದಿರುವುದನ್ನು ಕಾಣಬಹುದು. ಇಂದು ನಿಮ್ಮಲ್ಲಿ ಹಲವರು ಧೈರ್ಯಗೆಟ್ಟು ಹೀಗ ಯೋಚಿಸುತ್ತಿರಬಹುದು. ಇದು ಪ್ರಯೋಜನವಿಲ್ಲದ್ದು. ನಾನು ಅಶಕ್ತನು. ಇದನ್ನು ಬಿಟ್ಟು ಬಿಡುವುದೇ ಉತ್ತಮ. ಈ ಶುಭ ಸಂದೇಶವು ಬೇರೆಯವರಿಗೇ ಸರಿ ಆದರೆ ನನ್ನಲ್ಲಿ ಇದು ಕಾರ್ಯ ನಡೆಸುವಂತೆ ಕಾಣುವುದಿಲ್ಲ. ನಾನು ಬಹಳ ತಪ್ಪಿದ್ದೇನೆ ಹಾಗೂ ಇದನ್ನು ನನ್ನಿಂದ ಸರಿ ಪಡಿಸಲು ಸಾಧ್ಯವಿಲ್ಲ.

    ಇಂದು ನಿಮಗೂ ಹೀಗನ್ನಿಸುತ್ತಿದೆಯೇ? ನೀವು ಮತ್ತೆ ಪ್ರಯತ್ನಿಸುವುದು ಪ್ರಯೋಜನವಿಲ್ಲವೆಂದು ಪ್ರಯತ್ನಿಸುವುದೇ ಬೇಡವೆಂದು ನಿರ್ಧರಿಸಿದ್ದೀರಾ? ಭವಿಷ್ಯದ ಕೆಲವು ಶೂನ್ಯ ತೃಪ್ತಿಯನ್ನು ಹುಡುಕುವುದಕ್ಕೋಸ್ಕರ ಮತ್ತೆ ಲೋಕಕ್ಕೆ ಹಿಂದಿರುಗಲು ನಿರ್ಧರಿಸಿದ್ದೀರಾ. ಕ್ರೈಸ್ತನೆಂದು ನಟಿಸುತ್ತಾ ಪ್ರಭು ಯೇಸುವಿನ ಶಿಷ್ಯನೆಂದು ಹೇಳಿಕೊಳ್ಳುವುದಕ್ಕಿಂತ ಸಂಪೂರ್ಣವಾಗಿ ಲೌಕಿಕ ಮನುಷ್ಯನಾಗಿರುವುದೇ ಉತ್ತಮವಾಗಿತ್ತೆಂದು ನಿಮಗೆ ಅನಿಸುತ್ತಿದೆಯೇ?

    ಸರಿ ಆ ಅಪೋಸ್ತಲರಿಗೆ ಕೂಡಾ ತಾವು ಮೀನು ಹಿಡಿಯಲು ಹೋಗುವಾಗ ಹೀಗೆಯೇ ಅನಿಸಿತು ಹಾಗೂ ಪ್ರಭುವೂ ಕೂಡಾ ಅವರಿಗೆ ಹೋಗಿ ಇದರಲ್ಲಾದರೂ ಫಲಪ್ರದರಾಗುತ್ತೀರಾ, ನೋಡೋಣ ಎಂದು ಹೇಳುವ ಹಾಗೆ ಅನುಮತಿಸಿದರು ಹಾಗೆ ಪೇತ್ರ ಮತ್ತು ಅವನ ಗೆಳೆಯರು ಪೂರ್ಣ ರಾತ್ರಿ ಮೀನು ಹಿಡಿಯಲು ಪ್ರಯತ್ನಿಸಿ ಶೋಚನೀಯ ರೀತಿಯಲ್ಲಿ ಸೋತರು. ಅವರ ಇಡೀ ಜೀವಿತದಲ್ಲಿ ಅಂತಹ ರಾತ್ರಿಯ ಪರಿಸ್ಥಿತಿಯನ್ನು ಅನುಭವಿಸಿರಲಿಲ್ಲ.

    ಒಂದು ಬಾರಿ ದೇವರು ತನಗಾಗಿ ನಿಮ್ಮನ್ನು ಕರೆದಿದ್ದರೆ ನಿಮ್ಮನ್ನೆಂದಿಗೂ ಬಿಡುವುದಿಲ್ಲ. ನೀವು ಮೀನು ಹಿಡಿಯುವುದರಲ್ಲಿಯೂ ಹಾಗೂ ಎಲ್ಲವನ್ನು ಪ್ರಯತ್ನಿಸಿ, ಎಷ್ಟಾದರೂ ಪ್ರಯತ್ನಿಸಿ ನೀವು ಖಂಡಿತವಾಗಿ ಸೋಲುತ್ತೀರಿ ಹಾಗೂ ನೀವು ಸೋಲುವಂತೆ ದೇವರು ನೋಡಿಕೊಳ್ಳುತ್ತಾನೆ. ದೇವರ ಪ್ರೀತಿಯು ಇಂಥ ಕ್ಷಣಿಕ ಲೌಕಿಕ ವಿಷಯಗಳಲ್ಲಿ ನಮ್ಮ ಸಮಯ ಹಾಳು ಮಾಡಲು ಬಿಡುವುದಿಲ್ಲ. ಆದ್ದರಿಂದ ನೀವು ಅವರಿಂದ ಎಷ್ಟಾದರೂ ಓಡಿ ಹೋಗಲು ಪ್ರಯತ್ನಿಸಿದರೂ ನೀವು ಹಿಂದಿರುಗಿ ಬರುವವರೆಗೆ ಎಲ್ಲಿ ಹೋದರೂ ಏನು ಮಾಡಿದರೂ ಸೋಲುಗಾರರಾಗಿರುವಿರಿ. ಆದರೆ ಇದು ದೇವರು ಕರೆಯದಿರುವವರಿಗೆ ಅನ್ವಯಿಸುವುದಿಲ್ಲ.

    ಹಾಗೆ ಹಲವು ಕುಟಿಲ ಬುದ್ಧಿಯ ವ್ಯಾಪಾರಸ್ಥರು ಹಾಗೂ ರಾಜಕಾರಣಿಗಳು ಎಷ್ಟು ಮೋಸದ ಹಣವನ್ನಿಟ್ಟಿದ್ದರೂ ದೇವರಿಲ್ಲದೇ ಆರೋಗ್ಯವಂತರಾಗಿ ಜೀವಿಸುತ್ತಾರೆ. ಏಕೆ ದೇವರು ಇದನ್ನು ಅನುಮತಿಸುತ್ತಾರೆ? ಏಕೆಂದರೆ ಅವರು ದೇವರ ಮಕ್ಕಳಲ್ಲ. ಆದರೆ ಈಗ ಅಂಥವರ ಬಗ್ಗೆ ಮಾತನಾಡುತ್ತಿಲ್ಲ. ಪ್ರಪಂಚದ ಅಸ್ತಿವಾರಕ್ಕೆ ಮೊದಲೇ ತನ್ನ ಸ್ವಂತದವರನ್ನಾಗಿ ಕರೆದಂಥವರ ಬಗ್ಗೆ ನಾನು ನಿಮ್ಮಲ್ಲಿ ಮಾತನಾಡುತ್ತಿದ್ದೇನೆ. ಖಂಡಿತವಾಗಿ ಅಂದು ಗಲೀಲಾಯ ಸರೋವರದಲ್ಲಿ ಬಹಳಷ್ಟು ಮೀನುಗಳಿದ್ದವು. ಆ ರಾತ್ರಿ ಇತರ ಮೀನುಗಾರರು ಸಾಕಷ್ಟು ಮೀನುಗಳನ್ನು ಹಿಡಿದಿರುತ್ತಾರೆಂದು ನಾನು ದೃಢವಾಗಿ ನಂಬುತ್ತೇನೆ. ಆ ಮೀನುಗಳೆಲ್ಲವೂ ಬೇರೆ ದೋಣಿಗಳ ಬಳಿ ಹೋಗಿದ್ದವು. ಆದರೆ ದೇವರು ಅವುಗಳನ್ನು ಪೇತ್ರನ ದೋಣಿಯಿಂದ ಅವನಿಗೆ ಒಂದೂ ಸಿಕ್ಕದಂತೆ ದೂರವಿಟ್ಟಿದ್ದನು. ಅ ನಂತರ ಮೀನುಗಾರರು ಪೇತ್ರನಲ್ಲಿ ಬಂದು ಅವರೆಷ್ಟು ಮೀನುಗಳನ್ನು ಹಿಡಿದರೆಂದು ಹೇಳಿಕೊಂಡಿರಬಹುದು. ಅದು ಪೇತ್ರ ಮತ್ತು ಅವನ ಸಂಗಡಿಗರಿಗೆ ತಮಗೇಕೆ ಸಿಗಲಿಲ್ಲವೆಂದು ಆಶ್ಚರ್ಯಗೊಳಿಸಿರಬಹುದು.

    ಯಾವಾಗಲಾದರೂ ಹಣದ ಮಾರುಕಟ್ಟೆಯಲ್ಲಿ ನಿಮ್ಮ ಸುತ್ತಲಿನ ಜನರಂತೆ ನೀವೇಕೆ ಹಣಗಳಿಸಲು ಸಾಧ್ಯವಿಲ್ಲವೆಂದು ಆಶ್ಚರ್ಯಚಕಿತರಾಗಿದ್ದೀರಾ? ನಿಮ್ಮ ಸುತ್ತಲಿನ ಜನರೆಲ್ಲರೂ ಐಶ್ವರ್ಯವಂತರಾಗಿರುತ್ತಿದ್ದಾರೆ. ಆದರೆ ಸಮೃದ್ಧಿಯು ನಿಮ್ಮ ಬಳಿಗೆ ಸುಳಿಯುವುದೇ ಇಲ್ಲವೆಂದು ಚಿಂತಿಸುತ್ತಿದ್ದಿರಾ? ಇದು ಏಕೆಂದರೆ ದೇವರ ಕರೆಯು ನಿಮ್ಮ ಮೇಲಿದೆ. ಆತನು ನಿಮಗೆ ಆ ಲೌಕಿಕ ಜನರಿಗಿರುವುದಕ್ಕಿಂತ ಹೆಚ್ಚಿನದನ್ನು ಹಾಗೂ ಉತ್ತಮವಾದದ್ದನ್ನು ಕೊಡಲಿಚ್ಚಿಸುತ್ತಾನೆ.

    ಪೇತ್ರನು ಅವನ ಜೀವನದ ಮೇಲಿದ್ದ ದೇವರ ಕರೆಯನ್ನು ತಪ್ಪಿಸಿ ದೂರ ಹೋಗುತ್ತಿದ್ದನು. ಆದಕಾರಣ ಅವನಿಗೆ ಮತ್ತೆ ಸೋಲನ್ನು ಅನುಮತಿಸಿ ಮತ್ತೊಮ್ಮೆ ಮುರಿಯಲು ಪ್ರಯತ್ನಿಸಿದನು. ಆ ಅಪೋಸ್ತಲರು ಸಂಜೆ ಸುಮಾರು 6 ಗಂಟೆಗೆ ಮೀನು ಹಿಡಿಯಲು ಪ್ರಾರಂಭಿಸಿದರು. ಆದರೆ ಮರುದಿವಸ ಬೆಳಿಗ್ಗೆ 5 ಗಂಟೆಯವರೆಗೆ ಯೇಸುವು ಅವರ ಬಳಿಗೆ ಬರಲಿಲ್ಲ. ಪೇತ್ರನಿಗೆ ಆ ರಾತ್ರಿ ಯಾವ ಮೀನು ಸಿಕ್ಕುವುದಿಲ್ಲವೆಂದು ಕರ್ತನಿಗೆ ತಿಳಿದಿತ್ತು. ಆದರೂ ಏಕೆ ಆ ತಕ್ಷಣ ಅವರ ಬಳಿಗೆ ಬರಲಿಲ್ಲ ಹಾಗೂ ಅವರು ಅಷ್ಟೊಂದು ಸಮಯ ಹಾಳು ಮಾಡುವುದನ್ನು ತಡೆಯಲಿಲ್ಲ. ಕಡೆಯ ಪಕ್ಷ ರಾತ್ರಿ 9 ಗಂಟೆಗಾದರೂ ಬರಲಿಲ್ಲ ಹಾಗೂ ಮರುದಿವಸ ಬೆಳಿಗ್ಗೆ 5 ಗಂಟೆಯವರೆಗೆ ಏಕೆ ಕಾದರು? ಅವರು ಇಡೀ ರಾತ್ರಿ ಸುಸ್ತಾಗಿ ಸುಮಾರು 11 ಗಂಟೆಗಳ ಕಾಲ ಕಷ್ಟಪಟ್ಟು ಸೋಲುವವರೆಗೆ ಏಕೆ ಯೇಸು ಕಾದನು? ಈ ಪ್ರಶ್ನೆಗಳ ಉತ್ತರಗಳಲ್ಲಿ ನಮಗೆ ಸೋಲನ್ನು ಅನುಮತಿಸುವು ದೇವರ ವಿನ್ಯಾಸವನ್ನು ಕಂಡುಕೊಳ್ಳುತ್ತೇವೆ. ಮನುಷ್ಯನ ಸೋಲಿನಲ್ಲಿ ದೇವರ ನಿಜ ಉದ್ದೇಶವನ್ನು ಇಲ್ಲಿ ಕಂಡುಕೊಳ್ಳುತ್ತೇವೆ. ನಾವು ಕಷ್ಟಪಡುವಾಗ ಆಗಾಗ್ಗೆ ದೇವರಲ್ಲಿ ಸಹಾಯಕ್ಕಾಗಿ ಕೂಗಿಕೊಂಡಾಗ ಹಾಗೂ ಏಕೆ ನಮ್ಮ ಕೆಲ ಪ್ರಾರ್ಥನೆಗಳು ಉತ್ತರವಿಲ್ಲದೆ ಇನ್ನೂ ಹಾಗೆ ಇದೆ ಎಂಬುದು ಮತ್ತು ದೇವರು ಸಹಾಯಕ್ಕೆ ಬರಲಿಲ್ಲವೆಂಬುದು ಹೇಗೆ ನಿಮಗೆ ಅರ್ಥವಾಗುತ್ತದೆ.

    ಪೇತ್ರ ಮತ್ತು ಅವನ ಸಂಗಡಿಗರು ಅಂದು ಸಂಜೆ 6 ಗಂಟೆಗೆ ಮೀನು ಹಿಡಿಯಲು ಹೋದಾಗ ಅವರು ಸೋತವರಾಗಿರಲಿಲ್ಲ. ಅವರೆಲ್ಲರೂ ನಿರೀಕ್ಷೆಯಿಂದ ತುಂಬಿದ್ದರು. ರಾತ್ರಿ 9 ಗಂಟೆಗೆ ಅವರಿಗೆ ಮೀನು ಸಿಕ್ಕಿದಾಗ ಸ್ವಲ್ಪ ಮಟ್ಟಿಗೆ ಅಸಮಧಾನವಾಗಿರಬಹುದು. ಆದರೆ ಆಗ ಅವರು ಸಂಪೂರ್ಣ ಸೋತವರೆಂದು ಹೇಳಲಾಗದು. ಮಧ್ಯ ರಾತ್ರಿಯ ಹೊತ್ತಿಗೆ ಬಹಳಷ್ಟು ನಿರಾಶರಾಗಿದ್ದರು. ಬೆಳಗಿನ ಜಾವ 4 ಗಂಟೆಯ ಹೊತ್ತಿಗೆ ತಮ್ಮೆಲ್ಲಾ ನಿರೀಕ್ಷೆಯನ್ನು ಕಳೆದುಕೊಳ್ಳಲು ಪ್ರಾರಂಭಿಸಿದ್ದರು ಆದರೆ ಅವರು ಸಂಪೂರ್ಣ ಸೋತವರಾಗಬೇಕಿತ್ತು. ಹಾಗಾಗಬೇಕಿದ್ದರೆ ಇನ್ನೂ ಸೋಲನ್ನನುಭವಿಸಬೇಕಿತ್ತು. ಅವರ ಸ್ವ-ಭರವಸೆಯ ರೇಖಾನಕ್ಷೆ ಇನ್ನೂ ಕೆಳಕ್ಕೆ ಹೋಗುತ್ತಿತ್ತು. ಆದರೆ ಅದು ಸಂಪೂರ್ಣ ತಳಕ್ಕೆ ಅಂದರೆ ಶೂನ್ಯ ಸ್ಥಾನಕ್ಕೆ ಹೋಗಬೇಕಿತ್ತು. ಅದು ಸಾಧ್ಯವಾದದ್ದು 5 ಗಂಟೆಗೆ ಮಾತ್ರವೇ. ನಂತರ ಅವರು ಬಿಟ್ಟು ಹೋಗಲು ಸಿದ್ಧರಿದ್ದರು. ಆಗ ಇನ್ನು ಪ್ರಯತ್ನಿಸಿ ಪ್ರಯೋಜನವಿಲ್ಲ ಮನೆಗೆ ಹೋಗೋಣ ಎಂದು ಹೇಳಿಕೊಂಡಿರಬಹುದು.

    ಆಗ ಪ್ರಭುವು ಕಾಣಿಸಿಕೊಂಡನು. ಇದೇ ದೇವರ ಮಾರ್ಗವಾಗಿದೆ ಹಾಗೂ ಪ್ರಭುವು ಅವರ ಬಲೆಗಳನ್ನು ತುಳುಕುವಷ್ಟು ತುಂಬಿಸಿದನು. ಅಷ್ಟೊಂದು ಮೀನುಗಳನ್ನು ಅವರು ಹಿಂದೆಂದೂ ಅವರ ಜೀವಮಾನ ಕಾಲದಲ್ಲಿ ಹಿಡಿದಿರಲಿಲ್ಲ. ಈ ಹಿಂದೆ ಹೆಚ್ಚೆಂದರೆ 2೦ ಅಥವಾ 3೦ ಮೀನುಗಳನ್ನು ಹಿಡಿದಿದ್ದಿರಬಹುದು. ಆದರೆ ಅ ದಿವಸ ಸುಮಾರು 153 ದೊಡ್ಡ ಮೀನುಗಳನ್ನು ಹಿಡಿದರು. ಇದೊಂದು ಅದ್ಭುತವಾಗಿತ್ತು. ಆ ಸರೋವರದಲ್ಲಿ ಈ ಹಿಂದೆ ಒಂದೇ ಬಾರಿಗೆ ಅಷ್ಟೊಂದು ಮೀನು ಹಿಡಿದಿರಲಿಲ್ಲ. ಈ ವಿಷಯವು ಗಲಿಲಾಯದ ಚರಿತ್ರೆಯಲ್ಲಿ ದಾಖಲೆಯ ಪುಸ್ತಕದಲ್ಲಿ ಹೋಗುವಂತಾಗಿತ್ತು. ಈ ಘಟನೆಯು ಅವರು ತಮ್ಮೆಲ್ಲಾ ನಿರೀಕ್ಷೆಯನ್ನು ಬಿಟ್ಟಾಗ ಪ್ರಭುವು ಮಾಡಿದ ಅದ್ಭುತವೆಂದು ಎಂದೆಂದಿಗೂ ನೆನಪಿಸುವಂತದ್ದಾಗಿತ್ತು.

    ಇಂದು ನೀವು ಎಲ್ಲಿ ಹೋಗುವರೆಂದು ತಿಳಿಯದೆ, ಏನು ಮಾಡುವುದೆಂದು ತಿಳಿಯದೆ ಎಲ್ಲಿ ಹೋದರೂ ಅಸಮಧಾನ ಮತ್ತು ಸೋಲಿನ ಅನುಭವದಿಂದ ಕಂಗೆಟ್ಟವರಾಗಿ ನಿಮ್ಮ ಕೊನೆಯ ಸ್ಥಿತಿಯುಲ್ಲಿದ್ದೀರಾ? ಹಾಗಿದ್ದರೆ ಬಹುಶ: ಪ್ರಭುವು ನಿಮ್ಮ ಸ್ವ-ಭರವಸೆಯನ್ನು ಶೂನ್ಯ ಸ್ಥಿತಿಗೆ ತಲುಪಲೆಂದು ಕಾಯುತ್ತಿದ್ದಾರೆ. ಇನ್ನೂ ಅವರು ನಿಮ್ಮ ಬಳಿಗೆ ಬಂದಿಲ್ಲವೆಂದರೆ ನಿಮ್ಮ ಸ್ವ-ಭರವಸೆಯ ನಕ್ಷೆಯು ಶೂನ್ಯ ಮಟ್ಟಕ್ಕೆ ತಲುಪಿಲ್ಲವೆಂದು ಅರ್ಥ. ಸ್ವಲ್ಪ ಸ್ವಾರ್ಥ ಶಕ್ತಿಯು ಇನ್ನೂ ಉಳಿದಿರುವುದರಿಂದ ಅದು ಹೋಗಲು ಕಾಯುತ್ತಿದ್ದಾರೆ. ಪ್ರಭುವು ಬರಬೇಕಾದರೆ ಲಾಜರನು ಸತ್ತು ಹೂಣಲ್ಪಡಬೇಕಾಗಿತ್ತು !

    ಅಂದು ಬೆಳಿಗ್ಗೆ ಆ ಸರೋವರದ ದಂಡೆಗೆ ಯೇಸು ಬಂದಾಗ ಅವರಲ್ಲಿ ಏನು ಕೇಳಿದನು? ಅವರಲ್ಲಿ ಮೀನುಗಳಿರಲಿಲ್ಲವೆಂದು ಆತನಿಗೆ ತಿಳಿದಿತ್ತು. ಆದರೂ ಆತನು "ಮಕ್ಕಳೇ, ನಿಮ್ಮಲ್ಲಿ ಮೀನುಗಳಿದೆಯೇ? ಎಂದು ಕೇಳಿದನು. ತಕ್ಷಣ ಅವರಲ್ಲಿ ಯಾರು ಉತ್ತರ ಹೇಳಿರಲಿಕ್ಕಿಲ್ಲ. ಅದ್ದರಿಂದ ಪ್ರಶ್ನೆಯನ್ನು ಎರಡನೇ ಬಾರಿ ಕೇಳಿರಲೂ ಬಹುದು. ನಂತರ ಅವರು "ಇಲ್ಲ"ವೆಂದು ಉತ್ತರಿಸಿದರು. ಅವರು ಸೋತರೆಂದು ಒಪ್ಪಿಕೊಂಡರು. ಅವರು ಯಾಕೋಬ ಮತ್ತು ಯೋಬನಂತೆ ಪ್ರಾಮಾಣಿಕರಾಗಿದ್ದರು. ಇದೇ ಪ್ರಭುವಿಗೆ ಬೇಕಾಗಿತ್ತು. ತಾವು ಸೋತವರೆಂದು ಒಪ್ಪಿಕೊಳ್ಳುವುದೇ ಆತನಿಗೆ ಬೇಕಾಗಿತ್ತು.

    ನನ್ನ ಜೀವನದಲ್ಲಿ ಈ ಅದ್ಭುತ ಸತ್ಯವನ್ನು ಕಂಡುಕೊಂಡಿದ್ದು ಒಂದು ಅಮೋಘ ಉತ್ಸಾಹವಾಗಿತ್ತು. ನಿಮ್ಮ ಜೀವನದ ಯಾವುದೇ ಸ್ಥಳದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ದೇವರು ಬಯಸುವುದು ಪ್ರಾಮಾಣಿಕತೆಯನ್ನು ನಂತರ ಆತನು ನಮಗಾಗಿ ಅದ್ಭುತಗಳನ್ನು ಮಾಡಬಲ್ಲನು. "ನಿನಗೇನಾದರು ಮೀನು ಸಿಕ್ಕಿದೆಯೇ" ಇಲ್ಲಾ, ನಿನ್ನ ಬಲಭಾಗದಲ್ಲಿ ಬಲೆಯನ್ನು ಬೀಸು ನಂತರ ಅದ್ಭುತವನ್ನು ಕಾಣುವಿ.

    ಯಾಕೋಬನು ಬೇತೇಲಿನಲ್ಲಿ ದೇವರ ಮನೆಯೇ ಹೆಚ್ಚೆಂದುಕೊಂಡಿದ್ದನು. ನೀವು ಕೂಡಾ ದೇವರ ಮನೆಯಲ್ಲಿರಬಹುದು. ಆದರೆ ದೇವರ ಮುಖ ನೋಡದೇ ಇರಬಹುದು. ನಂತರ ನಿಮಗೆ ಎರಡನೆಯ ಭೇಟಿಯ ಅವಶ್ಯಕತೆ ಇದೆ. ಅಲ್ಲಿ ಆತನ ಮುಖವನ್ನು ಕಾಣುವಿರಿ. "ನಿನ್ನ ಹೆಸರೇನು" ಮೊಸಗಾರ. "ನಿನ್ನ ಹೆಸರು ಇನ್ನು ಮುಂದೆ ಮೋಸಗಾರನಲ್ಲ ಬದಲಿಗೆ ದೇವರ ಯುವರಾಜ!". ನೋಡಿ ಇನ್ನೊಂದು ಅದ್ಭುತ ಇದೇ ದೇವರ ಮಾರ್ಗವಾಗಿದೆ ನನ್ನ ಸಹೋದರ ಸಹೋದರಿಯರೇ, ದೇವರು ನಮ್ಮಿಂದ ಮುಖ್ಯವಾಗಿ ಬಯಸುವುದೇನೆಂದರೆ ಪ್ರಾಮಾಣಿಕತೆ.

    ಇಂದು ದೇವರೊಂದಿಗೆ ಪ್ರಾಮಾಣಿಕರಾಗಿರುವುದಿಲ್ಲವೇ? ನಮ್ಮ ಸಭೆಯು ಒಂದು ಆಸ್ಪತ್ರೆಯಂತೆ. ನಾವೆಲ್ಲರೂ ರೋಗಿಗಳು ನಾವೆಲ್ಲರೂ ಪ್ರವೀಣರಲ್ಲ ಅಥವಾ ವಿಶೇಷ ತಜ್ಞರಲ್ಲ. ಈ ಆಸ್ಪತ್ರೆಯಲ್ಲಿ ಒಬ್ಬರಿಗಿಂತ ಮತ್ತೊಬ್ಬರು ಹೆಚ್ಚಿನ ಕಾಲ ಇದ್ದವರಿದ್ದಾರೆ. ಆದರೆ ನಾವೆಲ್ಲರೂ ರೋಗಿಗಳೇ. ಇಲ್ಲಿ ಒಬ್ಬರೇ ವೈದ್ಯರು ಇರುವುದು. ಅದು ಯೇಸು ಮಾತ್ರ. ಇಲ್ಲಿ ಮಧ್ಯ ಯಾರೂ ವಿಚಾರಿಸುವಂತಿಲ್ಲ. ಸ್ವನೀತಿಯುಳ್ಳ ಜನರು ಸುಳ್ಳು ಸಭೆಗಳಲ್ಲಿ ಪ್ರವೀಣರಂತೆ ಹಾಗೂ ವಿಶೇಷ ತಜ್ಞರಂತೆ ಕಾಣಿಸುತ್ತಾರೆ. ಆದರೆ ಜೀವವುಳ್ಳ ಸಭೆಗಳಲ್ಲಿ ಹಾಗಿರುವುದಿಲ್ಲ. ನಮ್ಮ ಆಸ್ಪತ್ರೆಗೆ ಎಲ್ಲರಿಗೂ ಸ್ವಾಗತವಿದೆ. ನೀವು ಎಷ್ಟು ಹೆಚ್ಚು ರೋಗ ಪೀಡಿತರೋ ಗುಣ ಹೊಂದಲು ನೀವು ಅಷ್ಟರ ಮಟ್ಟಿಗೆ ನಮ್ಮ ಮಧ್ಯ ಇರುವುದು ಅವಶ್ಯಕ. ನಮ್ಮ ಸಂದೇಶವಿಷ್ಟೆ. ಯೇಸುಕ್ರಿಸ್ತನು ಈ ಲೋಕಕ್ಕೆ ಪಾಪಿಗಳನ್ನು ರಕ್ಷಿಸುವುದಕ್ಕಾಗಿ ಬಂದನು. ಅವರಲ್ಲಿ ನಾವು ಅಗ್ರರು (ಮಹಪಾಪಿಗಳು).

    ಏನನ್ನು ಹೊಂದಲು ಅಯೋಗ್ಯರಾದವರನ್ನೆ ದೇವರು ಸಂಧಿಸುತ್ತಾನೆ. ಆ ಸುಂಕದವನು-"ಸ್ವಾಮಿ ನಾನು ಪಾಪಿ ನನ್ನನ್ನು ಕರುಣಿಸು" (ಲೂಕ 18:13) ಎಂದನು. ಅವನು "ನಾನೇ ಪಾಪಿ" ಎಂದು ತನ್ನನ್ನೆ ಕರೆದುಕೊಂಡನು. ತನಗೆ ಹೋಲಿಸಿದರೆ ಇತರರೆಲ್ಲರೂ ಸಂತರೆಂದು ಭಾವಿಸಿದ ಹಾಗೆ ಅದರ ಅರ್ಥವಾಗಿತ್ತು. ಅವನ ದೃಷ್ಟಿಯಲ್ಲಿ ಇಡೀ ಭೂಮಿಯ ಮೇಲೆ ಅವನೊಬ್ಬನೇ ಪಾಪಿಯಾಗಿದ್ದನು. ನಂತರ ಅವನು ನೀತಿವಂತನೆಂದು ನಿರ್ಣಯಿಸಲ್ಪಟ್ಟವನಾಗಿ ಮನೆಗೆ ಹೋದನೆಂದು ಯೇಸು ಹೇಳಿದನು.

    ಇಂಥಹ ಜನರನ್ನು ಮಾತ್ರ ದೇವರು ನೀತಿಕರಿಸುತ್ತಾನೆ. ಈ ನೀತಿಕರಿಸುವುದು ಎಂಬ ಪದದ ನಿಜ ಅರ್ಥದ ಬಗ್ಗೆ ನಿವ್ರ್ಮೆಂದಿಗೆ ಸ್ವಲ್ಪ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಇದು ಸುಂದರವಾದ ಹಾಗೂ ಸ್ವಾತಂತ್ರ್ಯ ತರುವ ಪದವಾಗಿರುತ್ತದೆ (ಲೂಕ 18:14).

    ಈ ಪುಸ್ತಕದ ಹಾಳೆಯನ್ನು ನೋಡಿರಿ. ಬಲಭಾಗದ ಅಂಚನ್ನು ನೋಡಿ ಅದು ಹೇಗೆ ಎಡಭಾಗದ ಅಂಚಿನಲ್ಲಿ ನೇರವಾಗಿ ಒಂದೇ ಸಮವಿದೆ. ಇದನ್ನು ಕಂಪ್ಯೂಟರ್ ಭಾಷೆಯಲ್ಲಿ ನೀತಿಕರಿಸುವುದೆಂದು (justification) ಹೇಳುತ್ತಾರೆ. ಪ್ರತಿ ಸಾಲಿನಲ್ಲಿ ಅಕ್ಷರಗಳ ಸಂಖ್ಯೆಯು ವ್ಯತ್ಯಾಸವಿದ್ದರೂ ಕಂಪ್ಯೂಟರ್ ಸಾಲುಗಳ ಬಲ ಅಂಚನ್ನು ಎಡ ಅಂಚಿನಲ್ಲಿ ನೇರಗೊಳಿಸುತ್ತದೆ. ನೀವು ಕಂಪ್ಯೂಟರ್‌ನಲ್ಲಿ ನೀತಿಕರಿಸದೆ ಏನಾದರೂ ಬರೆಯಲು ಪ್ರಾರಂಭಿಸಿದರೆ ಬಲ ಬದಿಯು ನೇರವಿಲ್ಲದ ಹಿಂದು ಮುಂದಾಗಿ ಕೊನೆಗೊಳ್ಳುವುದನ್ನು ಕಾಣುವಿರಿ. ಮೊದಲು ಟೈಪ್ ರೈಟರ್ (ಬೆರಳಚ್ಚು ಯಂತ್ರಗಳಲ್ಲಿ) ಏನಾದರೂ ಬರೆದರೆ ಹೀಗೆಯೇ ಬಲ ಅಂಚಿನಲ್ಲಿ ಕೊನೆಗೊಳ್ಳುವುದನ್ನು ಕಾಣುತ್ತಿದ್ದೇವೆ. ಪ್ರತಿ ಸಾಲು ಒಂದೇ ಇರುವಂತೆ ಕೇವಲ ಒಂದು ಪುಟವನ್ನು ಬರೆಯುವುದೂ ಸಹ ಬಹಳ ಕಷ್ಟ. ಈಗ ನಾವು ನೀತಿಕರಿಸುವುದರ ಆಶ್ಚರ್ಯವನ್ನು ನೋಡಬಹುದು. ಅದನ್ನು ಯಾವ ಶಬ್ದ ಸಂಯೋಜನೆಯ ಗೆರೆಯನ್ನು ಬಳಸಿಲ್ಲ. ಈ ಪುಸ್ತಕದಲ್ಲಿ ನೋಡುವುದಾದರೆ, ಯಾವ ಪುಟದಲ್ಲಿಯೂ ಶಬ್ದ ಸಂಯೋಜನೆಯ ಗೆರೆಯನ್ನು ಬಳಸಿಲ್ಲ. ಅದನ್ನು ಉಪಯೋಗಿಸಿದರೆ ಕೂಡಾ ಅಷ್ಟೊಂದು ಚೆನ್ನಾಗಿ ಕಾಣುವುದಿಲ್ಲ. ಕಂಪ್ಯೂಟರ್ ನೀತಿಕರಿಸುವಾಗ ಪ್ರತಿ ಸಾಲಿನ ಪದಗಳ ನಡುವಿನ ಅಂತರವನ್ನೂ ಸಹ ಸರಿಪಡಿಸುತ್ತದೆ.

    ನೀವು ಸುಮಾರು 3೦ ಸಾಲುಗಳನ್ನು ಹಿಂದು ಮುಂದಾಗಿ ಬರೆದಿರುವಿರೆಂದು ಎಣಿಸಿ ನಂತರ ಅದನ್ನು ನೀತಿಕರಿಸುವುದಾಗಿ ಕಂಪ್ಯೂಟರ್ ಆದೇಶ ಕೊಡುತ್ತೀರಿ. ನೀವು ಒಂದು ಗುಂಡಿಯನ್ನು ಒತ್ತಿ ನೋಡುವುದರೊಳಗೆ ಎಲ್ಲಾ ಸಾಲುಗಳು ನೀತಿಕರಿಸಲ್ಪಟ್ಟಿರುತ್ತವೆ. ನಮ್ಮನ್ನು ನೀತಿಕರಿಸುವಾಗಲೂ ಸಹ ದೇವರು ನಮ್ಮೊಂದಿಗೆ ಹೀಗೆಯೇ ಮಾಡುತ್ತಾನೆ.

    ಬಹುಶ: ನಿಮ್ಮ ಹಿಂದಿನ ಜೀವಿತದಲ್ಲಿ ಬಹಳಷ್ಟು ತಪ್ಪುಗಳನ್ನು ಮಾಡಿರಬಹುದು. ಪ್ರತಿ ದಿನದ ಜೀವಿತವನ್ನು ಹಿಂದು ಮುಂದಾದ ರೀತಿಯಲ್ಲಿ ಮುಗಿಸಿರಬಹುದು. ಆದರೆ ನೀವು ಕ್ರಿಸ್ತನ ಬಳಿ ಬಂದರೆ ನಿಮ್ಮನ್ನು ಕ್ಷಣಮಾತ್ರದಲ್ಲಿ ನೀತಿಕರಿಸಿಬಿಡುತ್ತಾನೆ. ನಿಮ್ಮ ಜೀವಿತದ ಪ್ರತಿಯೊಂದು ಸಾಲನ್ನು ಸರಿಪಡಿಸಿಬಿಡುತ್ತಾನೆ. ನಿಮ್ಮ ಜೀವನದಲ್ಲಿ ಹಿಂದೆಂದೂ ಪಾಪವೇ ಮಾಡಿರದ ರೀತಿಯಲ್ಲಿ ಮಾಡುತ್ತಾನೆ. ಅಂಕು ಡೊಂಕು ಕೊನೆಗಳಿಲ್ಲ. ಎಲ್ಲವೂ ನೇರವಾಗಿರುತ್ತದೆ.

    ಇದು ಬಹಳ ಅದ್ಭುತವಲ್ಲವೇ? ಕಂಪ್ಯೂಟರ್ ಹಾಳೆಗಳ ಮೇಲೆ ಬರೆದ ವಿಷಯಗಳಿಗೆ ಏನು ಮಾಡುತ್ತದೋ ಅದನ್ನು ದೇವರು ನಮ್ಮ ಜೀವನದಲ್ಲಿ ಮಾಡುತ್ತಾನೆ. ಇಲ್ಲಿ ನೀತಿಕರಣಕ್ಕೆ 2೦ನೇ ಶತಮಾನದ ದೃಷ್ಟಾಂತವನ್ನು ನೋಡುತ್ತೇವೆ.

    ಇನ್ನೂ ಸ್ವಲ್ಪ ಹೇಳಲು ಬಯಸುತ್ತೇನೆ. ಅದೇನೆಂದರೆ ಒಂದು ಬಾರಿ ನೀವು ಕಂಪ್ಯೂಟರ್ ನಲ್ಲಿ ನೀತಿಕರಣದ ಅಪ್ಪಣೆಯನ್ನು ಕೊಟ್ಟು ಬಿಟ್ಟರೆ ನೀವು ಮುಂದೆ ಬರೆಯುವ ಪ್ರತಿಯೊಂದು ಸಾಲುಗಳು ಸಹ ಹಿಂದಿನ ಸಾಲುಗಳಂತೆ ನೇರವಾಗುತ್ತದೆ. ನೀತಿಕರಣವು ನಮ್ಮ ಹಿಂದಿನ ಜೀವಿತಕ್ಕೆ ಅನ್ವಯಿಸಿದಂತೆ ಮುಂದಿನ ಜೀವಿತಕ್ಕೂ ಅನ್ವಯಿಸುತ್ತದೆ. ಇದೊಂದು ಆಶ್ಚರ್ಯಕರ ಶುಭಸಂದೇಶವೇ ಸರಿ. ದೇವರು ನಮ್ಮನ್ನೀಗ ಕ್ರಿಸ್ತನಲ್ಲಿ ನೋಡುತ್ತಾನೆ. ಇನ್ನು ನಮ್ಮಲ್ಲಿ ನಮ್ಮದೇ ಆದ ಯೂವುದೇ ನೀತಿ ಇಲ್ಲ. ಕ್ರಿಸ್ತನೇ ನಮ್ಮ ನೀತಿಯಾಗಿದ್ದಾನೆ.

    ದೇವರು ನಮ್ಮನ್ನು ನೀತಿಕರಿಸಿದಾಗ ನಮ್ಮ ಇಡೀ ಜೀವನದಲ್ಲಿ ನಾವು ಯಾವುದೇ ತಪ್ಪು ಅಥವಾ ಯಾವುದೇ ಪಾಪವನ್ನು ಮಾಡಿರದಂತೆ ಮಾಡುತ್ತಾನೆ. ಹಾಗೂ ಮುಂದೆ ಸಹ ಯಾವಾಗಲೂ ಕ್ರಿಸ್ತನ ರಕ್ತದಿಂದ ನೀತಿಕರಿಸುತ್ತಾ ಮುಂದುವರೆಯುತ್ತೇವೆ. ಏಕೆಂದರೆ ವಾಕ್ಯವು ಹೇಳುತ್ತದೆ. ನಾವು ಬೆಳಕಿನಲ್ಲಿ ನಡೆದಂತೆ ನಾವು ತಿಳಿದು ಹಾಗೂ ತಿಳಿಯದೇ ಮಾಡಿದ ಎಲ್ಲಾ ಪಾಪಗಳನ್ನು ಕ್ರಿಸ್ತನ ರಕ್ತವು ಶುದ್ಧಪಡಿಸುತ್ತಾ ಮುನ್ನಡೆಸುತ್ತದೆ.

    ದೇವರ ವಾಕ್ಯವನ್ನು ಓದಬೇಕಾದರೆ ನಾವು ಮಾಡುವ ಒಂದು ದೊಡ್ಡ ತಪ್ಪೆಂದರೆ ಗಣಿತದ ಲೆಕ್ಕದಲ್ಲಿ ಉಪಯೋಗಿಸುವ ತರ್ಕ ಬುದ್ಧಿಯನ್ನೆ ಇಲ್ಲಿಯೂ ಉಪಯೋಗಿಸುವುದು ಈ ರೀತಿಯಲ್ಲಿ ನಾವು ದೇವರ ಮನಸ್ಸನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ದೇವರು ಗಣಿತದ ತರ್ಕ ರೀತಿಯಲ್ಲಿ ಕೆಲಸ ಮಾಡುವುದಿಲ್ಲ. ನಮ್ಮ ಹಿಂದಿನ ಜೀವಿತದಲ್ಲಿ ಅಷ್ಟೊಂದು ಪಾಪ ಮಾಡಿದ ನಂತರವೂ ನಾವು ದೇವರು ನಮಗಾಗಿ ರಚಿಸಿರುವ ಪೂರ್ಣ ಯೋಜನೆಯನ್ನು ಪೂರೈಸುತ್ತೇವೆಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವಾಗ ನಮ್ಮ ಲೌಕಿಕ ಬುದ್ಧಿಶಕ್ತಿಯನ್ನು ಉಪಯೋಗಿಸಲು ಸಾಧ್ಯವಿಲ್ಲ. ಅಂಕಗಣಿತ ಲೆಕ್ಕದಂತೆ ನೋಡಿದರೆ ಇದು ಸಾಧ್ಯವಿಲ್ಲ. ಏಕೆಂದರೆ ಅಲ್ಲಿ ಲೆಕ್ಕ ಮಾಡುವಾಗ ಒಂದು ಹಚಿತದಲ್ಲಿ ತಪ್ಪಾದರೆ ನಾವು ಪಡೆಯುವ ಉತ್ತರವೂ ಸಹ ತಪ್ಪಾಗಿರುತ್ತದೆ.

    ಇದೇ ತರ್ಕವನ್ನು ಉಪಯೋಗಿಸುವುದಾದರೆ ಹಿಂದೆ ಎಚಿದಾದರೂ (ನಿಮ್ಮ 2 ವರ್ಷದಲ್ಲಿ ಇಲ್ಲವೆ 52 ವರ್ಷದಲ್ಲಿ) ದೇವರ ಉದ್ದೇಶವನ್ನು ತಪ್ಪಿದವರಾಗಿದ್ದರೆ, ಈಗ ದೇವರ ಸಂಪೂರ್ಣ ಯೋಜನೆಯನ್ನು ಪೂರೈಸಲು ಸಾಧ್ಯವಿಲ್ಲ. ಎಷ್ಟು ಕಷ್ಟಪಟ್ಟು ಪ್ರಯತ್ನಿಸಿದರೂ ಎಷ್ಟು ಪ್ರಾರ್ಥಿಸಿದ್ದರೂ ಸಾಧ್ಯವಿಲ್ಲ. ಏಕೆಂದರೆ ನೀವು ಅಂಕಗಣಿತ ಲೆಕ್ಕದಲ್ಲಿ (ಯಾವುದೇ ಹಚಿತದಲ್ಲಿ) ತಪ್ಪು ಮಾಡಿದರೂ (2 ಅಥವಾ 52ನೆ ಹಚಿತದಲ್ಲಿ) ನಿಮ್ಮ ಅಂತಿಮ ಉತ್ತರವು ತಪ್ಪೇ ಆಗಿರುತ್ತದೆ.

    ಆದರೆ ದೇವರು ಹೇಳುತ್ತಾನೆ. ನನ್ನ ಹಾದಿಯು ನಿಮ್ಮ ಹಾದಿಯಲ್ಲ (ಯೆಶಾಯ 55:8,9). ದೇವರು ಈ ಗಣಿತ ಲೆಕ್ಕದಂತೆ ಕಾರ್ಯ ನಡೆಸುವವರಲ್ಲವಾದ್ದರಿಂದ ಆತನಿಗೆ ಸ್ತೋತ್ರ ಸಲ್ಲಿಸೋಣ. ಹಾಗಿದ್ದರೆ ಒಬ್ಬನೇ ಒಬ್ಬ ಮನುಷ್ಯನು (ಅಪೋಸ್ತಲ ಪೌಲನೂ ಕೂಡಾ) ದೇವರ ಪೂರ್ಣ ಯೋಜನೆಯನ್ನು ಪೂರೈಸಲು ಸಾಧ್ಯವಿರುತ್ತಿರಲಿಲ್ಲ. ಎಲ್ಲರೂ ಯಾವುದಾದರೊಂದು ಸ್ಥಳದಲ್ಲಿ ಸೋತು ಬಿಡುತ್ತಿದ್ದರು. ನಾವು ವಿಶ್ವಾಸಿಗಳಾದ ನಂತರ ಕೂಡಾ ಅನೇಕ ಬಾರಿ ಸೋತಿದ್ದೇವೆ. ವಿಶ್ವಾಸಿಗಳಾದ ನಂತರ ಕೂಡಾ ಕೆಲವು ಬಾರಿ ಬೇಕೆಂತಲೇ ಪಾಪಮಾರ್ಗವನ್ನು ಅನುಸರಿಸಿದ್ದೇವೆ. ಎಲ್ಲಾ ಪ್ರಾಮಾಣಿಕರೂ ಇದನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಆಶ್ಚರ್ಯಕರ ಸತ್ಯವೆಂದರೆ ನಮಗೆಲ್ಲರಿಗೂ ಇನ್ನೂ ನಿರೀಕ್ಷೆ ಇದೆ.

    ಒಂದು ಚಿಕ್ಕ ತಪ್ಪು ಮಾಡಿದವರನ್ನು ಬಿಡದೆ ಗಣಿತವು ಎಲ್ಲರನ್ನೂ ಖಚಿಡಿಸುತ್ತದೆ. ಒಂದು ಸಣ್ಣ ತಪ್ಪನ್ನು ಕೂಡಾ ಬಿಡುವುದಿಲ್ಲ. 2+2 ಯಾವತ್ತಿಗೂ 3.9999999999ಕ್ಕೆ ಸಮನಾಗುವುದಿಲ್ಲ. ಅದು ಸರಿಯಾಗಿ 4 ಅಗಿರಬೇಕು. ಸ್ವಲ್ಪ ಕೂಡಾ ಹೆಚ್ಚು ಅಥವಾ ಕಡಿಮೆ ಆಗಿರಬಾರದು.

    ಆದರೆ ದೇವರ ಯೋಜನೆಯು ಗಣಿತದಂತೆ ಕೆಲಸ ಮಾಡುವುದಿಲ್ಲ. ದೇವರ ಯೋಜನೆಯಲ್ಲಿ ಸೋಲು ಅವಶ್ಯಕ. ಸೋಲನ್ನು ಬಿಟ್ಟು ನಮ್ಮನ್ನು ಮುರಿಯಲು ಬೇರೆ ದಾರಿಯೇ ಇಲ್ಲ ಹಾಗೂ ನಮ್ಮ ಆತ್ಮೀಕ ಶಿಕ್ಷಣದಲ್ಲಿನ ಪಾಠ ವಿಷಯ ಪಟ್ಟಿಯಲ್ಲಿ ಸೋಲು ಒಂದು ಮುಖ್ಯ ಭಾಗವಾಗಿರುತ್ತದೆ.

    ಯೇಸು ಮಾತ್ರ ಎಂದೂ ಸೋಲದೇ ಜೀವಿಸಿದನು. ಆದರೆ ನಾವೆಲ್ಲರೂ (ಅತೀ ಉತ್ತಮರೂ ಕೂಡಾ) ಈ ಸೋಲುಗಳ ಮುಖಾಂತರ ದೇವರಿಂದ ಮುರಿಯಲ್ಪಡುವುದು ಬಹಳ ಅವಶ್ಯಕ. ಪೇತ್ರ ಪೌಲರು ಕೂಡಾ ತಮ್ಮ ಸೋಲುಗಳ ಮುಖಾಂತರ ಮುರಿಯಲ್ಪಟ್ಟರು.

    ದೇವರ ದಯೆ ಮಾತ್ರವೇ ನಮ್ಮನ್ನು ಮಾನಸಾಂತರಕ್ಕೆ ನಡಸುವ ಈ ಶುಭ ಸಂದೇಶದಲ್ಲಿ ಆನಂದಪಡಿರಿ. ಇದು ನಿಮ್ಮನ್ನು ಪೂರ್ಣ ಉಲ್ಲಾಸಕ್ಕೂ ಹಾಗೂ ದೇವರಲ್ಲಿ ಪೂರ್ಣ ಶಾಂತಿಗೂ ನಡೆಸಲು - ಈ ಶಾಂತಿಯು ದೇವರು ನಮ್ಮನ್ನು ತನ್ನ ಪ್ರಿಯ ಮಗನಲ್ಲಿ (ಶಾಶ್ವತವಾಗಿ) ಸ್ವೀಕರಿಸಿದ್ದಾನೆಂದು ತಿಳಿಯುವದರಿಂದ ಬರುತ್ತದೆ. (ಎಫೆಸ 1:6)

    ಪ್ರತಿದಿನ ಬಹಳಷ್ಟು ತಪ್ಪುಗಳನ್ನು ಮಾಡುತ್ತೇವೆ. ಕೆಲವು ಬಾರಿ ನಮಗೆ ಅರಿಯದೇ ಆಕಸ್ಮತ್ತಾಗಿ ಜಾರಿ ಪಾಪದಲ್ಲಿ ಬೀಳುತ್ತೇವೆ. ಇಂತಹ ಸಂದರ್ಭಗಳಲ್ಲಿ ನಮ್ಮ ಮೇಲಿನ ಒತ್ತಡವು ಹೆಚ್ಚಿ ಧೈರ್ಯಗೆಟ್ಟು, ನಿರಾಶರಾಗಿ ಇನ್ನೂ ಹೆಚ್ಚು ಪಾಪ ಮಾಡುವಂತೆ ಶೋಧಿಸಲ್ಪಡುತ್ತೇವೆ. ದೇವರು ನಮ್ಮ ಒ

    ಅಧ್ಯಾಯ 2
    ಬಿದ್ದು ಹೋದವರಿಗಾಗಿ ದೇವರ ಪರಿಪೂರ್ಣಚಿತ್ತ

    ಅನೇಕ ಸಹೋದರ ಸಹೋದರಿಯರು ತಮ್ಮ ಹಿಂದಿನ ಜೀವಿತದಲ್ಲಿ ಯಾವುದೋ ಒಂದು ಸಮಯ ತಾವು ಪಾಪ ಮಾಡಿ ಸೋತು ದೇವರನ್ನು ನಿರಾಶೆಗೊಳಿಸಿರುವ ಕಾರಣದಿಂದ ದೇವರ ಪರಿಪೂರ್ಣ ಯೋಜನೆಯನ್ನು ತಮ್ಮ ಜೀವತಕ್ಕೆ ನೆರವೇರಿಸಲು ಆಗುವುದಿಲ್ಲ ಎಂದು ಭಾವಿಸುತ್ತಾರೆ.

    ಈ ವಿಷಯವಾಗಿ ಸತ್ಯವೇದ ನಮಗೆ ಹೇಳಬೇಕಾದದ್ದೇನು ಎಂಬುದನ್ನು ನೋಡೋಣ ಮತ್ತು ನಮ್ಮ ಸ್ವಬುದ್ಧಿಯನ್ನು ಅಥವಾ ನಮ್ಮ ತರ್ಕಶಾಸ್ತ್ರ (ವಾದ ಸಾಮಾರ್ಥ್ಯ) ದ ಬುದ್ಧಿಯನ್ನು ಆಧಾರ ಮಾಡಿಕೊಳ್ಳದಿರೋಣ.

    ಮೊಟ್ಟ ಮೊದಲನೆಯದಾಗಿ ಸತ್ಯವೇದ ಹೇಗೆ ಪ್ರಾರಂಭವಾಗುತ್ತದೆ ಎಂದು ಗಮನಿಸಿರಿ.

    "ಆದಿಯಲ್ಲಿ ದೇವರು ಆಕಾಶವನ್ನು ಭೂಮಿಯನ್ನು ಉಂಟು ಮಾಡಿದನು." (ಆದಿಕಾಂಡ 1:1) ಮತ್ತು ದೇವರು ಆಕಾಶವನ್ನು ಭೂಮಿಯನ್ನು ಉಂಟು ಮಾಡಿದಾಗ ಅವು ಪರಿಪೂರ್ಣವಾಗಿರಬೇಕಿತ್ತು. ಯಾಕಂದರೆ ಅಪರಿಪೂರ್ಣವಾದದ್ದು ಅಥವಾ ಸಂಪೂರ್ಣಗೊಳಿಸದೇ ಇರುವುದು ಯಾವುದೂ ಆತನ ಕೈಯಿಂದ ಬರಲು ಆಗುವುದಿಲ್ಲ. ಆದರೆ ಆತನು ಉಂಟು ಮಾಡಿದ ದೇವದೂತರು ಬಿದ್ದು ಹೋದರು ಮತ್ತು ಇದು ನಮಗಾಗಿ ಯೆಶಾಯ 14:11-15 ಮತ್ತು ಯೆಹೆಜ್ಕೇಲ 28:13-18 ರಲ್ಲಿ ವರ್ಣಿಸಲಾಗಿದೆ. ಆಗ ಭೂಮಿಯು ಆಕಾರವಿಲ್ಲದೇ (ಕ್ರಮವಿಲ್ಲದೆಯೂ) ಬರಿದಾಗಿಯೂ ಮತ್ತು ಕತ್ತಲಿನ ಸ್ಥಿತಿಯಲ್ಲಿ ಇತ್ತು ಎಂಬುದಾಗಿ ಆದಿಕಾಂಡ 1:2 ರಲ್ಲಿ ವರ್ಣಿಸಲಾಗಿದೆ.

    ದೇವರು ಆಕಾರವಿಲ್ಲದ ಬರಿದಾಗಿದ್ದ ಕತ್ತಲಿನ ಸಮೂಹದ ಮೇಲೆ ಕೆಲಸ ಮಾಡಿ ಅದರಿಂದ ಬಹಳ ಸುಂದರವಾದದ್ದನ್ನು ಹೇಗೆ ಉಂಟು ಮಾಡಿದನೆಂದೂ ಆತನು ತಾನೇ ಅದನ್ನು ಬಹು ಒಳ್ಳೇದು ಎಂದು ಘೋಷಿಸುವುದನೂ ಆದಿಕಾಂಡದ ಉಳಿದ ಒಂದನೇ ಅಧ್ಯಾಯವು ವರ್ಣಿಸುತ್ತದೆ. (ಆದಿಕಾಂಡ1:31) ದೇವರಾತ್ಮನು ಜಲ ಸಮೂಹದ ಮೇಲೆ ಚಲಿಸಿದನು ಮತ್ತು ದೇವರು ತನ್ನ ಮಾತನ್ನು (ನುಡಿಯನ್ನು) ಹೇಳಿದನು ಮತ್ತು ವತ್ಯಾಸವನ್ನುಂಟು ಮಾಡಿದ್ದು ಇದೇ ಎಂದು ಆದಿಕಾಂಡ 1:2,3 ರಲ್ಲಿ ನಾವು ಓದುತ್ತೇವೆ.

    ಈ ದಿನ ನಮಗೆ ಅದರಲ್ಲಿರುವ ಸಂದೇಶವೇನು? ನಾವು ಎಷ್ಟೋ ಸೋತಿರಬಹುದು ಅಥವಾ ಜೀವನದ ವಿಷಯಗಳನ್ನು ಅವ್ಯವಸ್ಥೆ(ಕೊಳಕು) ಮಾಡಿಕೊಂಡಿರಬಹುದು ಪರವಾಗಿಲ್ಲ. ಆದರೂ ದೇವರು ನಮ್ಮ ಜೀವಿತವನ್ನು ಮಹಿಮೆಯುಳ್ಳದ್ದಾಗಿ ಮಾಡಬಲ್ಲನು ಎಂಬುದೇ ಸರಿಯಾದ ಸಂದೇಶ. ದೇವರು ಆಕಾಶ ಭೂಮಿಯನ್ನು ಉಂಟು ಮಾಡಿದಾಗ ಅವುಗಳಿಗಾಗಿ ಪರಿಪೂರ್ಣ ಉದ್ದೇಶ (ಯೋಜನೆಗಳನ್ನು) ಇಟ್ಟುಕೊಂಡಿದ್ದನು. ಆದರೆ ಈ ಯೋಜನೆಯು ಲೂಸಿಫರನ ಸೋಲುವಿಕೆಯಿಂದ ಬೇರೆಯಾಗಿ ಇಡಲ್ಪಡಬೇಕಾಯಿತು. ಆದರೆ ದೇವರು ಆಕಾಶ ಮತ್ತು ಭೂಮಿಯನ್ನು ಪುನ: ರಚಿಸಿ ಅದರಿಂದ ಇನ್ನೂ ಬಹಳ ಒಳ್ಳೇಯದನ್ನು ಉತ್ಪತ್ತಿಮಾಡಿದನು.

    ನಂತರ ಏನಾಯಿತು. ಯೋಚಿಸಿರಿ.

    ದೇವರು ಆದಾಮ ಮತ್ತು ಹವ್ವರನ್ನು ಉಂಟು ಮಾಡಿ ಎಲ್ಲವನ್ನು ಮತ್ತೆ ಆರಂಭಿಸಿದನು. ದೇವರು ಅವರಿಗಾಗಿ ಸಹ ಪರಿಪೂರ್ಣ ಯೋಜನೆಯನ್ನು ಇಟ್ಟುಕೊಂಡಿರಬಹುದು. ಅವರು ಒಳ್ಳೇದರ ಕೆಟ್ಟದರ ಅರುಹನ್ನು ಹುಟ್ಟಿಸುವ ಮರದಿಂದ ತಿನ್ನುವುದನ್ನು ಅದು ಒಳಗೊಂಡಿರಲಿಲ್ಲವೆನ್ನುವುದು ಸ್ಪಟ್ಟವಾಗಿದೆ. ಆದರೆ ನಿಷೇಧಿಸಲ್ಪಟ್ಟ ಮರದಿಂದ ತಿಂದು ದೇವರು ಅವರಿಗಾಗಿ ಮೊದಲಿನಿಂದಲೂ ಇಟ್ಟಿದ್ದ ಯೋಜನೆಯನ್ನು ನಿಷ್ಪಲಗೊಳಿಸಿದರು. ಆ ಯೋಜನೆ ಏನಾದರೂ ಆಗಿರಬಹುದು.

    ಎಂದಿಗೂ ಅವರು ದೇವರ ಪರಿಪೂರ್ಣ ಯೋಜನೆಯನ್ನು ನೆರವೇರಿಸಲು ಆಗಲಿಲ್ಲವೆಂದು ತರ್ಕಶಾಸ್ತ್ರವು ನಮಗೆ ಈಗ ಹೇಳುತ್ತದೆ. ಆದಾಗ್ಯೂ ದೇವರು ತೋಟದಲ್ಲಿ ಅವರನ್ನು ಸಂಧಿಸಲು ಬಂದಾಗ ತಮ್ಮ ಉಳಿದ ಜೀವಿತಕ್ಕಾಗಿ ಆತನ ಎರಡನೇ ಉತ್ತಮವಾದದ್ದರ ಮೇಲೆ ಅವರು ಈಗ ಜೀವಿಸಬೇಕು ಎಂದು ಆತನು ಅವರಿಗೆ ಹೇಳುವುದಿಲ್ಲ ಎಂಬುದಾಗಿ ನಾವು ನೋಡುತ್ತೇವೆ. ಇಲ್ಲಿ ಆದಿಕಾಂಡ 3:15 ರಲ್ಲಿ ಸ್ತ್ರೀಯ ಸಂತಾನವು ಸರ್ಪದ ತಲೆಯನ್ನು ಜಜ್ಜುವುದು ಎಂದು ಆತನು ಅವರಿಗೆ ವಾಗ್ದಾನ ಮಾಡುತ್ತಾನೆ. ಕ್ರಿಸ್ತನು ಲೋಕದ (ಜನರ) ಪಾಪಕ್ಕಾಗಿ ಸಾಯುವುದು ಮತ್ತು ಕಲ್ವಾರಿಯ ಮೇಲೆ ಸೈತಾನನ್ನು ಜಯಿಸುವುದು ಆತನ ವಾಗ್ದಾನವಾಗಿತ್ತು.

    ಈಗ ಈ ವಿಷಯವನ್ನು ಯೋಚಿಸಿರಿ. ಇದನ್ನು ನೀವು ತರ್ಕಿಸ ಬಲ್ಲಿರಾ ನೋಡಿರಿ.

    ಎಲ್ಲಾ ನಿತ್ಯತ್ವದಿಂದ ಕ್ರಿಸ್ತನ ಮರಣವು ದೇವರ ಪರಿಪೂರ್ಣ ಯೋಜನೆಯ ಭಾಗವಾಗಿತ್ತು ಎಂದು ನಾವು ತಿಳಿದಿದ್ದೇವೆ. ”ಜಗದುತ್ಪತ್ತಿಗೆ ಮೊದಲೇ ಕುರಿಮರಿಯು ಕೊಯ್ಯಲ್ಪಟ್ಟಿತ್ತು.” (ಪ್ರಕಟಣೆ 13:8) ಆದಾಗ್ಯೂ ಆದಾಮ ಮತ್ತು ಹವ್ವರು ಪಾಪ ಮಾಡಿ ದೇವರನ್ನು ನಿರಾಶೆಗೊಳಿಸಿದ್ದರಿಂದ ಮಾತ್ರ ಕ್ರಿಸ್ತನು ಸತ್ತನು ಎಂಬುದು ಸಹ ನಮಗೆ ಗೊತ್ತು. ಆದ್ದರಿಂದ ತರ್ಕಶಾಸ್ತ್ರವಾಗಿ ಲೋಕದ ಪಾಪಕ್ಕಾಗಿ ಕ್ರಿಸ್ತನು ಕಳುಹಿಸಿದ ದೇವರ ಪರಿಪೂರ್ಣ ಚಿತ್ತವು ನೆರವೇರಿತು. ಆದಾಮನ ಸೋಲುವಿಕೆಯ ಕಾರಣದಿಂದ ಅದು ಪರಿಪೂರ್ಣ ಚಿತ್ತವಾಗಿತ್ತು ಎಂದು ನಾವು ಹೇಳಬಹುದು. ಆದಾಮನ ಪಾಪಕ್ಕಾಗಿಲ್ಲದಿದ್ದರೆ ಕಲ್ವಾರಿ ಶಿಲುಬೆಯ ಮೇಲೆ ದೇವರ ಪ್ರೀತಿ ತೋರಿಸಲ್ಪಟ್ಟದ್ದನ್ನು ನಾವು ತಿಳುಕೊಳ್ಳುತ್ತಿರಲಿಲ್ಲ.

    ಅದು ತರ್ಕಶಾಸ್ತ್ರವನ್ನು ವ್ಯರ್ಥಗೊಳಿಸಿತು. ಇದಕ್ಕಾಗಿಯೇ ”ನಾವು ನಮ್ಮ ಸ್ವಬುದ್ದಿಯನ್ನು ಆಧಾರ ಮಾಡಿಕೊಳ್ಳಬಾರದು”. ಎಂದು ಸತ್ಯವೇದವು ಹೇಳುತ್ತದೆ. (ಜ್ಞಾನೋಕ್ತಿ 3:5)

    ದೇವರು ಗಣಿತ ಶಾಸ್ತ್ರದ ಪ್ರಕಾರ ಕಾರ್ಯನಿರ್ವಹಿಸಿದ್ದರೆ ಕ್ರಿಸ್ತನು ಭೂಲೋಕಕ್ಕೆ ಬರುವುದು ದೇವರ ಎರಡನೆಯ ಉತ್ತಮವಾದದ್ದು ಎಂದು ನಾವು ಹೇಳಬೇಕಾಗುತ್ತಿತ್ತು. ಆದರೆ ಹಾಗೆ ಹೇಳುವುದು ದೇವದೂಷಣೆಯಾಗಿರುತ್ತಿತ್ತು. ಇದು ಮನುಷ್ಯನಿಗಾಗಿ ದೇವರ ಪರಿಪೂರ್ಣ ಯೊಜನೆಯ ಭಾಗವಾಗಿತ್ತು. ದೇವರು ತಪ್ಪುಗಳನ್ನು ಮಾಡುವುದಿಲ್ಲ. ಆದರೆ ದೇವರು ಸರ್ವಶಕ್ತನೂ ಜೊತೆಗೆ ಸಾರ್ವಭೌಮನು ಆಗಿರುವುದರಿಂದ ಮತ್ತು ಆದಿಯಿಂದ ಅಂತ್ಯವನ್ನು ಸಹ ಆತನು ತಿಳಿದಿರುವ ಕಾರಣ ಮತ್ತು ಆತನು ಯಾವಾಗಲೂ ಪ್ರೀತಿಯಲ್ಲಿ ನಮಗೋಸ್ಕರ ಮೌನವಾಗಿ ಯೋಜನೆ ಮಾಡುತ್ತಿರುವುದರಿಂದ ನಮ್ಮೊಂದಿಗೆ ಆತನು ವ್ಯವಹರಿಸುವುದನ್ನು ನಾವು ವಿವರಿಸಲು ಪ್ರಯತ್ನಿಸಿದಾಗ ಮಾನವ ಬುದ್ದಿ (ತರ್ಕ) ಸೋತುಹೋಗುತ್ತದೆ.

    ದೇವರ ಮಾರ್ಗಗಳು ನಮ್ಮ ಮಾರ್ಗಗಳಲ್ಲ ಮತ್ತು ಆತನ ಯೋಚನೆಗಳು ನಮ್ಮ ಯೋಚನೆಗಳಲ್ಲ. ಅವೆರಡರ ನಡುವೆ ಇರುವ ವ್ಯತ್ಯಾಸವು ಭೂಮಿಗೂ ಅಕಾಶಕ್ಕೂ ಇರುವ ಅಂತರದಷ್ಟು ಉನ್ನತವಾಗಿದೆ (ಯೆಶಾಯ 55:8,9). ಆದ್ದರಿಂದ ದೇವರ ಮಾರ್ಗಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವಾಗ ನಮ್ಮ ಜಾಣ ಬುದ್ಧಿಯನ್ನು ಮತ್ತು ತರ್ಕಶಾಸ್ತ್ರವನ್ನು ಬದಿಗಿಡುವುದು ಒಳ್ಳೇಯದು.

    ಹಾಗಾದರೆ ಸತ್ಯವೇದದ ಪ್ರಾರಂಭದ ಪುಟಗಳಿಂದ ನೇರವಾಗಿ ದೇವರು ನಮಗೆ ಕೊಡಲು ಪ್ರಯತ್ನಿಸುವ ಸಂದೇಶ ಯಾವುದು? ಆತನು ಸೋತುಹೋದ ಮನುಷ್ಯನನ್ನು ತೆಗೆದುಕೊಂಡು ಅವನಿಂದ ಮಹಿಮೆಯುಳ್ಳದ್ದನ್ನು ಮಾಡಿ ಮತ್ತು ಇನ್ನೂ ಅವನ ಜೀವಿತಕ್ಕೆ ದೇವರ ಪರಿಪೂರ್ಣ ಚಿತ್ತವನ್ನು ಅವನು ನೆರವೇರಿಸುವಂತೆ ಮಾಡುವುದು ಮಾತ್ರವೇ ಆಗಿದೆ.

    ಸತ್ಯವೇದದಲ್ಲಿ ಅದು ಮನುಷ್ಯನಿಗೆ ದೇವರ ಮೊದಲ ಸಂದೇಶವಾಗಿದೆ ಮತ್ತು ನಾವು ಅದನ್ನು ಎಂದಿಗೂ ಮರೆಯಬಾರದು.

    ದೇವರು ಪುನ: ಪುನ: ಸೋತ ಮನುಷ್ಯನನ್ನು ತೆಗೆದುಕೊಂಡು ಅವನು ತನ್ನ ಪರಿಪೂರ್ಣ ಚಿತ್ತವನ್ನು ನೆರವೇರುವಂತೆ - ದೇವರ ಎರಡನೇ ಉತ್ತಮವಾದದ್ದನ್ನು ನೆರವೇರಿಸುವಂತೆಯಲ್ಲ ಆದರೆ ದೇವರ ಅತ್ಯುತ್ತಮ ಯೋಜನೆಯನ್ನು ನೆರವೇರಿಸುವಂತೆ ಮಾಡುವನು.

    ಇದು ಯಾಕಂದರೆ ಅವನಿಗೆ ಮರೆಯಲಾಗದ ಕೆಲವು ಪಾಠಗಳನ್ನು ಕಲಿಸಲು. ಸೋಲುವಿಕೆಯು ಸಹ ದೇವರ ಪರಿಪೂರ್ಣ ಯೋಜನೆಯ ಭಾಗವಾಗಿದೆ. ಇದು ಮಾನವ ತರ್ಕ ಶಾಸ್ತ್ರ (ವಾದ ಸಾಮರ್ಥ್ಯ) ಕ್ಕೆ ಗ್ರಹಿಸಲು ಅಸಾಧ್ಯವಾಗಿದೆ. ಯಾಕಂದರೆ ನಾವು ದೇವರನ್ನು ಬಹಳ ಸ್ವಲ್ಪವಾಗಿ ತಿಳಿದಿದ್ದೇವೆ.

    ಮುರಿಯಲ್ಪಟ್ಟ ಸ್ತ್ರೀ ಪುರುಷರನ್ನು ಮಾತ್ರ ದೇವರು ಉಪಯೋಗಿಸಬಲ್ಲನು ಮತ್ತು ಪುನ: ಪುನ: ಸೋಲುವಿಕೆಯ ಮೂಲಕವಾಗಿ ಆತನು ನಮ್ಮನ್ನು ಮುರಿಯುವುದು ಒಂದು ವಿಧಾನವಾಗಿದೆ.

    ಸೋಲುವಿಕೆಯು ಅಪೋಸ್ತಲನಾದ ಪೇತ್ರನ ನಾಯಕತ್ವಕ್ಕಾಗಿ ತರಬೇತಿಯ ಭಾಗವಾಗಿತ್ತು. ಕರ್ತನು ಪೇತ್ರನನ್ನು ಮುರಿಯಲು ಅವನ ಸೋಲುವಿಕೆಯನ್ನು ಉಪಯೋಗಿಸಿದನು.

    ಆಶೀರ್ವಾದವು ನಮ್ಮನ್ನು ಗರ್ವದಲ್ಲಿ ಉಬ್ಬಿಸದಂತ ರೀತಿಯಲ್ಲಿ ದೇವರು ನಮ್ಮನ್ನು ಆಶೀರ್ವದಿಸಬೇಕೆಂಬುದೇ ದೇವರಿಗೆ ನಮ್ಮೊಂದಿಗೆ ಇರುವ ಒಂದು ದೊಡ್ಡ ಸಮಸ್ಯೆಯಾಗಿದೆ. ಕೋಪದ ಮೇಲೆ ಜಯ ಹೊಂದಿ ನಂತರ ಅದರ ಬಗ್ಗೆ ಗರ್ವದಿಂದಿರುವುದು ನಾವು ಮೊದಲು ಇದ್ದದ್ದಕ್ಕಿಂತ ಬಹಳ ಆಳವಾದ ಹಳ್ಳದಲ್ಲಿ ಬೀಳುವುದಕ್ಕೆ ಹೊಲಿಕೆಯಾಗಿದೆ. ಆದ್ದರಿಂದ ದೇವರು ಜಯದಲ್ಲಿ ನಮ್ಮನ್ನು ದೀನರನ್ನಾಗಿ ಇಡಬೇಕಾಗಿದೆ.

    ಪಾಪದ ಮೇಲೆ ನಿಜವಾದ ಜಯವು ಯಾವಾಗಲೂ ಆಳವಾದ ದೀನತೆಯ ಮೇಲೆ ಅವಲಂಬಿಸಿರುತ್ತದೆ. ಇಲ್ಲಿಯೇ ಮತ್ತೇ ಮತ್ತೇ ಸೋಲುವಿಕೆಯು ನಮ್ಮ ಸ್ವಂತ ಭರವಸೆಯನ್ನು ನಾಶ ಮಾಡುವುದು. ಇದರಿಂದ ಪಾಪದ ಮೇಲೆ ಜಯವು ದೇವರ ಬಲಪಡಿಸುವ ಕೃಪೆಯಿಂದ ಹೊರತು ಸಾಧ್ಯವಿಲ್ಲ ಎಂದು ನಮಗೆ ಅರಿವಾಗುವುದು. ಆ ಮೇಲೆ ನಾವು ಜಯಹೊಂದಿದಾಗ ಎಂದಿಗೂ ಅದರ ಬಗ್ಗೆ ಹೊಗಳಿಕೊಳ್ಳಲಾಗುವುದಿಲ್ಲ.

    ಮುಂದೆ, ನಾವು ಮತ್ತೆ ಮತ್ತೆ ಸೋತಾಗ ಎಂದಿಗೂ ಸೋಲುವ ಇತರರನ್ನು ನಾವು ಕಡೆಗಣಿಸಲಾಗುವುದಿಲ್ಲ. ಬೀಳುವವರೊಂದಿಗೆ ನಾವು ಅನುತಾಪವುಳ್ಳವರಾಗಿರಬಹುದು. ಯಾಕಂದರೆ ನಮ್ಮ ಸ್ವಂತ ಅಸಂಖ್ಯಾತ ಬೀಳುವಿಕೆಯ ಮೂಲಕ ನಮ್ಮ ಮಾಂಸದ ಬಲಹೀನತೆಯನ್ನು ನಾವು ತಿಳುಕೊಳ್ಳುತ್ತೇವೆ. ”ನಾವು ಬಲಹೀನರಾಗಿರುವುದರಿಂದ ಜ್ಞಾನವಿಲ್ಲದವರನ್ನು ಮಾರ್ಗತಪ್ಪಿ ನಡೆಯುವವರನ್ನು ತಾಳ್ಮೆಯಿಂದ ಸಹಿಸಿಕೊಳ್ಳುವುದಕ್ಕೆ ಶಕ್ತರಾಗುವೆವು. (ಇಬ್ರಿಯ 5:3) ಇಂಥ ಸಂದೇಶಗಳನ್ನು ತರ್ಕವಾದ ಸಾಮರ್ಥ್ಯವುಳ್ಳ ವ್ಯಕ್ತಿ ಕೇಳಿ, ಹಾಗಾದರೆ ಯಾವಾಗಲೂ ಹೆಚ್ಚು ಪಾಪ ಮಾಡುವುದೇ ಒಳ್ಳೇಯದು ಎಂದು ಹೇಳಬಹುದು.

    ರೋಮಾ 3:7,8 (ಸಜೀವ ವಾಕ್ಯ) ಅಂಥ ಮನುಷ್ಯರಿಗೆ ಉತ್ತರವನ್ನು ಸುಳ್ಳಿನಿಂದ ದೇವರ ಸತ್ಯವು ಪ್ರಸಿದ್ದಿಗೆ ಬಂದು ಆತನ ಮಹಿಮೆ ಹೆಚ್ಚಾದರೆ ಇನ್ನು ನನಗೆ ಪಾಪಿ ಎಂದು ತೀರ್ಪಾಗುವುದು ಯಾಕೆ? ಮೇಲು ಬರುವಂತೆ ಕೇಡು ಮಾಡೋಣ ಎಂದು ಭಾವಿಸುತ್ತಾರೆ ಅಂಥವರಿಗೆ ದಂಡನೆಯ ತೀರ್ಪಾಗುವುದು ನ್ಯಾಯ.

    ಇಲ್ಲ, ನಾವು ಒಳ್ಳೇದು ಬರಲಿ ಎಂದು ನಾವು ಪಾಪ ಮಾಡಬೇಕು ಎಂಬುದಾಗಿ ನಾವು ಬೋಧಿಸುವುದಿಲ್ಲ. ದೇವರ ಕೃಪೆಯನ್ನು ದುರುಪಯೋಗಪಡಿಸಬೇಕೆಂದು ಉದ್ದೇಶ ಪೂರ್ವಕವಾಗಿ ದೇವರಿಗೆ ಅವಿಧೇಯರಾಗಬಹುದು ಮತ್ತು ನಾವು ಬಿತ್ತಿದ್ದನ್ನು ಕೊಯ್ಯದೇ ಇರೋಣ ಎಂದಾಗಲಿ ನಾವು ಹೇಳುತ್ತೇವೋ? ಇಲ್ಲ. ಆದರೆ ಮಾನವ ತರ್ಕ ಶಾಸ್ತ್ರವು ಬಿದ್ದ ಮನುಷ್ಯನಿಗೆ ದೇವರ ಕೃಪೆಯನ್ನು ಗ್ರಹಿಸುವಂತೆ ಮಾಡಲು ಆಗುವುದಿಲ್ಲ ಎಂದು ನಾವು ಹೇಳುತ್ತೇವೆ. ನಾವು ತುಚ್ಚವಾಗಿ ಪುನ: ಪುನ: ಸೋತ ಮೇಲೆ ನಮ್ಮನ್ನು ದೇವರ ಪರಿಪೂರ್ಣ ಚಿತ್ತಕ್ಕೆ ತರುವುದು ಸಹ ಆತನಿಗೆ ಆಸಾಧ್ಯವಿಲ್ಲ. ನಮ್ಮ ಅಪನಂಬಿಕೆ ಮಾತ್ರ ಆತನನ್ನು ತಡೆಯುತ್ತದೆ.

    ”ಆದರೆ ನಾನು ಅನೇಕ ಸಾರಿ ನನ್ನ ಜೀವಿತವನ್ನು ಅವ್ಯವಸ್ಥೆಗೊಳಿಸಿದ್ದೇನೆ. ನನ್ನನ್ನು ಈಗ ದೇವರ ಪರಿಪೂರ್ಣ ಯೋಜನೆಯಲ್ಲಿ ತರುವುದು ಆತನಿಗೆ ಅಸಾಧ್ಯ” ಎಂದು ನೀನು ಹೇಲಿದರೆ ಆಗ ದೇವರಿಗೆ ಆಸಾಧ್ಯವಾಗಿಯೇ ಇರುತ್ತದೆ. ಯಾಕಂದರೆ ಆತನು ನಿನಗೋಸ್ಕರ ಮಾಡುವುದನ್ನು ನೀನು ನಂಬುವುದಿಲ್ಲ. ಆದರೆ ನಾವು ನಂಬಿದರೆ ಮಾತ್ರ ದೇವರಿಗೆ ನಮಗೋಸ್ಕರ ಮಾಡಲು ಯಾವುದೂ ಅಸಾಧ್ಯವಲ್ಲ ಎಂದು ಯೇಸು ಹೇಳಿದನು.

    ”ನೀವು ನಂಬಿದಂತೆ ನಿಮಗೆ ಆಗಲಿ” ಎಂಬುದು ಎಲ್ಲಾ ವಿಷಯಗಳಲ್ಲಿ ದೇವರ ನಿಯಮಾಗಿದೆ (ಮತ್ತಾಯ 9:29). ನಾವು ಯಾವುದಕ್ಕಾಗಿ ನಂಬಿಕೆ ಇಟ್ಟಿದ್ದೇವೋ ಅದನ್ನು ನಾವು ಪಡೆಯುತ್ತೇವೆ. ನಮಗಾಗಿ ದೇವರು ಯಾವುದನ್ನೂ ಮಾಡುವುದಕ್ಕೆ ದೇವರಿಗೆ ಆಸಾಧ್ಯ ಎಂದು ನಾವು ನಂಬಿದರೆ ಆಗ ನಮ್ಮ ಜೀವಿತದಲ್ಲಿ ಅದು ಎಂದಿಗೂ ನೆರವೇರದೆ ಇರುತ್ತದೆ.

    ಬೇರೊಬ್ಬ ವಿಶ್ವಾಸಿಯು ನಿನಗಿಂತ ತನ್ನ ಜೀವಿತವನ್ನು ಬಹಳ ಅವ್ಯವಸ್ಥೆಗೊಳಿಸಿದನು ಆದಾಗ್ಯೂ ದೇವರು ಒಡೆದು ಹೋದ ಅವನ ಜೀವನದ ತುಂಡುಗಳನ್ನು ಆರಿಸಿ, ಅದರಿಂದ ಯಾವುದೋ ”ಬಹಳ ಒಳ್ಳೇಯದನ್ನು” ಮಾಡಬಲ್ಲನು ಎಂದು ಅವನು ನಂಬಿದ್ದರಿಂದ ಮಾತ್ರ ತನ್ನ ಜೀವಿತಕ್ಕೆ ಅವನು ದೇವರ ಪರಿಪೂರ್ಣ ಯೋಜನೆಯನ್ನು ನೆರವೇರಿಸಿದನು ಎಂಬುದನ್ನು ನೀನು ಕ್ರಿಸ್ತನ ನ್ಯಾಯಾಸನದ ಮುಂದೆ ಕಂಡುಕೊಳ್ಳಲು ಸಾಧ್ಯ.

    ನಿಮ್ಮ ಜೀವಿತಕ್ಕೆ ದೇವರ ಪರಿಪೂರ್ಣ ಯೋಜನೆಯನ್ನು ನಿಮ್ಮ ಸೋಲುವಿಕೆಯು (ಅವು ಎಷ್ಟೇ ಆಗಿರಬಹುದು) ಅಡ್ಡಿಪಡಿಸಲಿಲ್ಲ. ಆದರೆ ನಿಮ್ಮ ಅಪನಂಬಿಕೆಯು ಅಡ್ಡಿ ಪಡಿಸಿತು ಎಂಬುದನ್ನು ಅಲ್ಲಿ ನೀನು ಕಂಡುಕೊಳ್ಳುವಾಗ ಆ ದಿನದಲ್ಲಿ ನಿಮ್ಮ ಜೀವಿತದಲ್ಲಿ ಎಷ್ಟು ದು:ಖವಾಗುತ್ತದೆ.

    ಬಹಳ ವರ್ಷ ತನ್ನ ಜೀವನವನ್ನು ವ್ಯರ್ಥ ಮಾಡಿದ ತಪ್ಪಿ ಹೋದ ಮಗನ ಕಥೆಯು ಬಿದ್ದುಹೋದವರಿಗೂ ಸಹ ದೇವರು ತನ್ನ ಅತೀ ಉತ್ತಮವಾದದ್ದನ್ನು ಕೊಡತ್ತಾನೆಂದು ತೋರಿಸುತ್ತದೆ. ತಂದೆಯು ತನ್ನನ್ನು ಬಹಳ ನಿರಾಶೆಪಡಿಸಿದ ಮಗನಿಗಾಗಿ ”ತಟ್ಟನೆ ಉತ್ತಮವಾದ ನಿಲುವಂಗಿ ತನ್ನಿರಿ” ಎಂದು ಹೇಳಿದನು. ಪಾಪ ವಿಮೋಚನೆ ಮತ್ತು ಹೊಸ ಆರಂಭ ಒಂದು ಸಾರಿ ಮಾತ್ರವೇ ಅಲ್ಲ - ಆದರೆ ಮತ್ತೆ ಮತ್ತೆ ಇರುವಂಥದ್ಧಾಗಿದೆ. ಕಾರಣ ದೇವರು ಯಾರನ್ನೂ ಎಂದಿಗೂ ಬಿಟ್ಟು ಕೊಡುವುದಿಲ್ಲ. ಇದೇ ಸುವಾರ್ತೆಯ ಸಂದೇಶವಾಗಿದೆ.

    -29-

    ಕೂಲಿಯಾಳುಗಳನ್ನು ಬಾಡಿಗೆಗೆ ತೆಗೆದುಕೊಳ್ಳಲು ಹೋದ ಮನೆ ಯಜಮಾನನ ಸಾಮ್ಯವು (ಮತ್ತಾಯ 20:1-16) ಸಹ ಅದೇ ವಿಷಯವನ್ನು ಕಲಿಸುತ್ತದೆ. ಹನ್ನೊಂದನೆ ತಾಸಿಗೆ ಕೂಲಿ ಮಾಡಿದ ಜನರು ಮೊದಲು ಪ್ರತಿಫಲ ಹೊಂದಬೇಕಾದವರಾಗಿದ್ದಾರೆ. ಇನ್ನೊಂದು ಮಾತಿನಲ್ಲಿ ನಿತ್ಯತ್ವಕ್ಕೆ ಕ್ರಯವಿರುವ ಯಾವುದನ್ನೂ ಮಾಡದ ತಮ್ಮ ಜೀವತದ ಶೇಕಡಾ 90 ರಷ್ಟು (11/12) ವ್ಯರ್ಥ ಮಾಡಿದವರು ತಮ್ಮ ಉಳಿದ ಜೀವತದ ಶೇಕಡಾ 10 ರಷ್ಟು ದೇವರಿಗಾಗಿ ಮಹಿಮೆಯುಳ್ಳ ಯಾವುದನ್ನಾದರೂ ಇನ್ನೂ ಮಾಡಬಲ್ಲರು. ಸೋತವರೆಲ್ಲರಿಗೆ ಇದು ಅತಿಶಯವಾದ ಉತ್ತೇಜನವಾಗಿದೆ. ”ಸೈತಾನನು ಮಾಡಿದ ಕೆಲಸಗಳನ್ನು ಇಲ್ಲದಂತೆ ಮಾಡುವುದಕ್ಕೋಸ್ಕರ ದೇವಕುಮಾರನು ಪ್ರತ್ಯಕ್ಷನಾದನು”. (1 ಯೋಹಾನ 3:8)

    ನಮ್ಮ ಜೀವನದಲ್ಲಿರುವಂಥ ಎಲ್ಲಾ ಗಂಟುಗಳನ್ನು ಬಿಚ್ಚಲು ಯೇಸು ಸ್ವಾಮಿ ಬಂದನು ಎಂದು ಇದರ ಅರ್ಥ. ನಾವೆಲ್ಲರೂ ಬಾಲ್ಯವನ್ನು ಒಳ್ಳೇ ದಾರದ ಉಂಡೆಯಿಂದ ಪ್ರಾರಂಭಿಸಿದನೆಂದು ಚಿತ್ರಿಸಿಕೊಳ್ಳಿರಿ. ಆದರೆ ಈಗ ಆ ದಾರದ ಉಂಡೆ ಹತ್ತು ಸಾವಿರ ಗಂಟುಗಳಿಂದ ತುಂಬಿದೆ ಮತ್ತು ಆ ಗಂಟುಗಳನ್ನು ಎಂದಾದರೂ ಬಿಚ್ಚಬಲ್ಲವೆಂಬುದಕ್ಕೆ ನಮಗೆ ಯಾವ ನಿರೀಕ್ಷೆಯಿಲ್ಲ. ನಾವು ನಮ್ಮ ಜೀವಿತವನ್ನು ನೋಡಿದಂತೆಲ್ಲ ನಾವು ಧೈರ್ಯಗೆಟ್ಟವರೂ ಮತ್ತು ಕಳೆಗುಂದಿದವರೂ ಆಗಿದ್ದೇವೆ. ಸುವಾರ್ತೆಯ ಒಳ್ಳೇ ಸುದ್ದಿಯೇನದಂರೆ ಯೇಸು ಆ ಪ್ರತಿಯೊಂದು ಗಂಟನ್ನು ಬಿಚ್ಚಲು ಬಂದನು.

    ”ಅದು ಅಸಾಧ್ಯ” ಎಂದು ನೀನು ಹೇಳಿದರೆ, ಸರಿ ನೀನು ನಂಬಿದಂತೆ ನಿನಗಾಗುವುದು. ನಿನ್ನ ವಿಷಯದಲ್ಲಿ ಅದು ಅಸಾಧ್ಯವಾಗಿರುತ್ತದೆ.

    ಆದರೆ ನಿನಗಿಂತ ಕೀಳಾದ ಜೀವಿತವಿರುವ ಬೇರೊಬ್ಬನು, ”ಹೌದು ದೇವರು ಅದನ್ನು ನನ್ನಲ್ಲಿ ಮಾಡುತ್ತಾನೆಂದು ನಾನು ನಂಬುತ್ತೇನೆ” ಎಂದು ಹೇಳುತ್ತಾನೆ. ಅವನಿಗೆ ಸಹ ತಾನು ನಂಬಿದಂತೆ ಆಗುವುದು. ಅವನ ಜೀವಿತದಲ್ಲಿ ದೇವರು ಪರಿಪೂರ್ಣ ಯೋಜನೆಯು ನೆರವೇರುತ್ತದೆ.

    ಯೆರೆಮೀಯ (18:1-6) ರಲ್ಲಿ ದೇವರು ಯೆರೆಮೀಯನಿಗೆ ಪ್ರಾಯೋಗಿಕ ಉದಾಹರಣೆಯ ಮೂಲಕ ತನ್ನ ವಾಕ್ಯವನ್ನು ಮಾತಾಡಿದನು. ಯೆರೆಮೀಯನು ಕುಂಬಾರನ ಮನೆಗೆ ಹೋಗಬೇಕೆಂದು ಕೇಳಲ್ಪಟ್ಟನು. ಅಲ್ಲಿ ಕುಂಬಾರನು ಪಾತ್ರೆಯನ್ನು ಮಾಡುತ್ತಿರುವುದನ್ನು ಅವನು ನೋಡಿದನು. ಆದರೆ ”ಪಾತ್ರೆಯು ಕುಂಬಾರನ ಕೈಯಲ್ಲಿ ಕೆಟ್ಟುಹೋಯಿತು”. ಆಗ ಕುಂಬಾರನು ಏನು ಮಾಡಿದನು? ಅವನು ತನಗೆ ಸರಿತೋಚಿದ ಹಾಗೆ ಇನ್ನೊಂದು ಪಾತ್ರೆಯನ್ನಾಗಿ ಮಾಡಿದನು.

    ನಂತರ ಅನ್ವಯ ಬಂದು. . ....... ” ಈ ಕುಂಬಾರನು ಮಾಡಿದಂತೆ ನಾನು ನಿನ್ನನ್ನು ಮಾಡಕೊಡದೋ?” ಎಂಬುದು ಕರ್ತನ ಪ್ರಶ್ನೆಯಾಗಿತ್ತು (6ನೇ ವಚನವು ಆ ಚುಕ್ಕೆಗಳಿರುವ ಸ್ಥಳದಲ್ಲಿ ನಿನ್ನ ಹೆಸರನ್ನು ತುಂಬು ಮತ್ತು ಅದು ನಿನಗೆ ದೇವರ ಪ್ರಶ್ನೆಯಾಗಿರುತ್ತದೆ). ನಿನ್ನ ಎಲ್ಲಾ ಸೋಲುವಿಕೆಗಾಗಿ ನಿನ್ನ ಜೀವಿತದಲ್ಲಿ ದೇವರ ಚಿತ್ತಾನುಸಾರವಾಗಿರುವ ದು:ಖವಿರುವುದಾದರೆ, ಆಗ ಹಳೇ ಒಡಂಬಡಿಕೆಯ ಕೆಳಗೆ ವಾಗ್ದಾನ ಮಾಡಲ್ಪಟ್ಟಂತೆ ನಿನ್ನ ಪಾಪಗಳು ಕಡುಕೆಂಪಾಗಿದ್ದರೂ ಸಹ ಅವು ಹಿಮದಂತೆ ಬಿಳುಪಾಗುವುದು (ಯೆಶಾಯ 1:18). ಮಾತ್ರವಲ್ಲ ”ನಿನ್ನ ಪಾಪಗಳು ಇನ್ನು ಎಂದಿಗೂ ನೆನಪಿಗೆ ತರುವುದಿಲ್ಲ” ಎಂದು ದೇವರು ಹೊಸ ಒಡಂಬಡಿಕೆಯ ಕೆಳಗೆ ವಾಗ್ದಾನ ಮಾಡುತ್ತಾನೆ (ಇಬ್ರಿಯ 8:12).

    ನಿಮ್ಮ ಅಲಕ್ಷದಿಂದ ಮಾಡಿದ ತಪ್ಪು (ತಿಳಿಗೇಡಿತನ) ಅಥವಾ ಸೋಲುವಿಕೆ ಏನಾದರೂ ಆಗಿರಲಿ ದೇವರೊಂದಿಗೆ ನೀವು ಹೊಸ ಪ್ರಾರಂಭವನ್ನು ಮಾಡಬಹುದು. ಹಿಂದೆ ನೀವು ಸಾವಿರ ಹೊಸ ಪ್ರಾರಂಭವನ್ನು ಮಾಡಿ ಸೋತು ಹೋಗಿದ್ದರೂ ಸಹ ಈ ದಿನ 1001ನೇ ಹೊಸ ಪ್ರಾರಂಭವನ್ನು ಇನ್ನೂ ಮಾಡಬಹುದು. ನಿಮ್ಮ ಜೀವಿತದಲ್ಲಿ ದೇವರು ಮಹಿಮೆಯುಳ್ಳ ಕಾರ್ಯವನ್ನು ಇನ್ನೂ ಮಾಡಶಕ್ತನು. ಜೀವವಿರುವವರೆಗೆ ನಿರೀಕ್ಷೆಯಿದೆ.

    ಆದ್ದರಿಂದ ದೇವರಲ್ಲಿ ಭರವಸೆಯಿಡಲು ಮರೆಯಬೇಡಿರಿ. ಹಿಂದೆ ಗತಿಸಿದ ಕಾಲದಲ್ಲಿ ಆತನನ್ನು ನಿರಾಶೆಪಡಿಸಿದ್ದರಿಂದಲ್ಲ. ಈಗ ಆತನಲ್ಲಿ ಭರವಸೆಯಿಸುವುದಿಲ್ಲವಾದ್ದರಿಂದ ಆತನು ತನ್ನ ಅನೇಕ ಮಹತ್ತಾದ ಕಾರ್ಯಗಳನ್ನು ಮಾಡಲಾಗುವುದಿಲ್ಲ. ಹಾಗಾದರೆ ಇಲ್ಲಿಯವರೆಗೂ ನಾವು ಆಸಾಧ್ಯವೆಂದು ಎಣಿಸಿದ ವಿಷಯಗಳಿಗಾಗಿ ಮುಂದಿನ ದಿನಗಳಲ್ಲಿ ಆತನನ್ನು ನಂಬುತ್ತಾ ”ನಂಬಿಕೆಯಲ್ಲಿ ಧೃಡವಾಗಿದ್ದು ದೇವರನ್ನು ಘನಪಡಿಸೋಣ”(ರೋಮ4:20).

    ಎಲ್ಲಾ ಜನರು - ಯೌವನಸ್ಥರು ಮತ್ತು ವಯಸ್ಸಾದವರು ಗತಿಸಿದ ಕಾಲದಲ್ಲಿ ತಾವು ಎಷ್ಟೇ ಸೋತಿದ್ದರೂ ಪರವಾಗಿಲ್ಲ ಅವರು ತಮ್ಮ ಸೋಲುವಿಕೆಯನ್ನು ಒಪ್ಪಿಕೊಂಡು ದೀನರಾಗಿ ದೇವರನ್ನು ನಂಬಿದರೆ ಮಾತ್ರ ಅವರು ನಿರೀಕ್ಷೆಯನ್ನು ಪಡೆಯಬಲ್ಲರು.

    ಹೀಗೆ ನಾವೆಲ್ಲರೂ ನಮ್ಮ ಸೋಲುವಿಕೆಯಿಂದ ಕಲಿತುಕೊಂಡು ನಮ್ಮ ಜೀವತಕ್ಕೋಸ್ಕರ ದೇವರ ಪರಿಪೂರ್ಣ ಚಿತ್ತವನ್ನು ನೆರವೇರಿಸುತ್ತಾ ಮುಂದಕ್ಕೆ ಸಾಗುವೆವು.

    ಬರುವ ವರ್ಷಗಳಲ್ಲಿ ಸಂಪೂರ್ಣ ಸೋತವರ ಜೀವಿತಗಳಲ್ಲಿ ಆತನು ಮಾಡಬಲ್ಲದ್ದನ್ನು ಇತರರಿಗೆ ಮಾದರಿಯಾಗಿ ನಮ್ಮನ್ನು ತೋರಿಸಬಲ್ಲನು.

    ಆ ದಿನಗಳಲ್ಲಿ ಆತನು ನಮ್ಮಲ್ಲಿ ಮಾಡುವಂಥದ್ದನ್ನು ತಾನು ಕ್ರಿಸ್ತ ಯೇಸುವಿನಲ್ಲಿ ನಮಗೆ ಮಾಡುವ ಉಪಕಾರದ ಮೂಲಕ ತನ್ನ ಅಪಾರವಾದ ಕೃಪಾತಿಶಯವನ್ನು ಮುಂದಕ್ಕೆ ತೋರಿಸುವನು (ಎಫೆಸ 2:7).

    ಕೇಳವುದಕ್ಕೆ ಕಿವಿಯುಳ್ಳವನು ಕೇಳಲಿ.

    ಆಮೆನ್, ಆಮೆನ್..