ಒಬ್ಬ ಯುವತಿಯ ಹದಿ ವಯಸ್ಸಿನಿಂದ ಮದುವೆಯ ಮೊದಲು ಕೆಲವು ದಿವಸಗಳವರೆಗಿನ ಅನುಭವಗಳನ್ನೊಳಗೊಂಡ ಕಥೆ ಇದು.
ನಮ್ಮ ಸಮಾಜದಲ್ಲಿ ಅನೇಕ ಯುವತಿರು ಎದುರಿಸುವ ಸಮಸ್ಯೆಗಳನ್ನು ಎದುರಿಸಿದ್ದಲ್ಲದೇ ಅವೆಲ್ಲವುಗಳಲ್ಲಿ ಜಯಶಾಲಿಯಾದ ಒಬ್ಬಳ ಕಥೆ ಇದಾಗಿದೆ.
ಇವಳು ಜೀವಿತದಲ್ಲಿನ ಸವಾಲುಗಳನ್ನು ದೇವರ ಕೃಪೆಯಿಂದ ಬಲಹೊಂದಿ ಎದುರಿಸುವುದರ ಮೂಲಕ ಅಸಹಾಯಕಳಾದ, ಬಲಹೀನಳಾದ ಬಾಲಕಿಯನ್ನು ದೇವರು ತನ್ನ ರಾಜ್ಯದಲ್ಲಿ ಆಭರಣದಂತೆ ಮಾರ್ಪಡಿಸಿ ಪ್ರತಿಯೊಂದು ನಿರ್ಭಂದವನ್ನು ನಿರಾಶೆಯನ್ನು ಜಯಿಸುವಂತೆ ಮಾಡಿದ ನಿದರ್ಶನ.
ಬೆಳೆಯುತ್ತಿರುವ ಯುವತಿಯರು ಓದಲೇ ಬೇಕಾದ ಪುಸ್ತಕ.....
ನನ್ನ ತಂದೆ-ತಾಯಿ ನನಗೆ ಕೊಟ್ಟ ಹೆಸರು ಕೃಪಾ ಎಂಬುದನ್ನು ನಾನು ನಿಜವಾಗಲೂ ಪ್ರೀತಿಸುತ್ತೇನೆ. ಕೃಪಾ ಎಂದರೆ ಕೃಪೆ. ಅದು ಭವಿಷ್ಯ ಸೂಚಕವಾಗಿತ್ತು. ನನ್ನ ಜೀವಿತದ ಕಥೆಯು ದೇವರ ಅದ್ಭುತವಾದ ಕೃಪೆಯು ಕಥೆಯಾಗಿದೆ ನನ್ನ ತಂದೆಯು ಒಂದು ಖಾಸಗಿ ಕಂಪನಿಯ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಮಧ್ಯಮ ವರ್ಗದ ಸಂಬಳವನ್ನು ಪಡೆಯುತ್ತಿದ್ದರು. ಆದರೆ ಅವರ ಬಹು ಪಾಲು ಸಂಬಳವನ್ನು ಕುಡಿಯುವುದರಲ್ಲಿ ನಷ್ಟ ಮಾಡಿದರು. ಪ್ರತಿ ದಿನ ಅವರು ಮನೆಗೆ ಬಹಳ ತಡವಾಗಿ ಬರುತ್ತಿದ್ದರು ಮತ್ತು ಬೇರೆ ಸ್ತ್ರೀಯರನ್ನು ಸಂಪರ್ಕಿಸುವುದು ಮತ್ತು ನನ್ನ ತಾಯಿಗೆ ಅಪನಂಬಿಗಸ್ತರಾಗಿರುವುದನ್ನು ಕುರಿತಾಗಿ ತಾಯಿಯು ದೂರು ಹೇಳುತ್ತಿದ್ದಳು.
ನನ್ನ ತಾಯಿಯು ಒಂದು ಸರ್ಕಾರಿ ಕಛೇರಿಯಲ್ಲಿ ಗುಮಾಸ್ತಳಾಗಿ ಕೆಲಸ ಮಾಡುತ್ತಿದ್ದಳು. ಆಕೆಗೆ ಯೋಗ್ಯವಾದ ಸಂಬಳವಿತ್ತು. ಆದರೆ ಯಾವಾಗಲೂ ಆಕೆ ಹೊಸ ಸೀರೆಗಳನ್ನು ಕೊಳ್ಳುತ್ತಿದ್ದಳು. ಆದ್ದರಿಂದ ನಮಗೆ ಏನೂ ಉಳಿಯುತ್ತಿರಲಿಲ್ಲ. ನನ್ನ ತಾಯಿಯು ಆಗಾಗ ಕಛೇರಿಯಿಂದ ಪೆನ್ನುಗಳನ್ನು, ಕವರುಗಳನ್ನು ಮತ್ತು ಬರೆಯುವ ಕಾಗದದ ಕಟ್ಟುಗಳನ್ನು ಕದ್ದು ತರುತ್ತಿದ್ದಳು.
ನಾವು ಎರಡು ಮಲಗುವ ಕೋಣೆಗಳುಳ್ಳ ಮನೆಯಲ್ಲಿ ವಾಸಿಸುತ್ತಿದ್ದೆವು ಮತ್ತು ನಮ್ಮ ತಂದೆಯವರ ತಂದೆ ತಾಯಿಗಳು ನಮ್ಮ ಜೊತೆಯಲ್ಲಿ ಇದ್ದರು.
ಅನೇಕ ರೀತಿಯಲ್ಲಿ ನಮ್ಮದು ಒಂದು ಸಂತೋಷವಿಲ್ಲದ ಮನೆಯಾಗಿತ್ತು. ಅಲ್ಲಿ ಯಾವಾಗಲೂ ಕೂಗಾಟ ಮತ್ತು ಹೊಡೆದಾಟವಿರುತ್ತಿತ್ತು. ಮಕ್ಕಳಾದ ನಮಗೂ ಸಹ ನಮ್ಮ ಪಾಲು ಸಿಗುತ್ತಿತ್ತು. ಆಗಾಗ ನಮ್ಮ ತಂದೆಯವರ ತಾಯಿಯು ಸಹ ಸಂಸಾರದ ಈ ಜಗಳಗಳಲ್ಲಿ ಸೇರುತ್ತಿದ್ದರು. ಆದರೆ ನಮ್ಮ ತಾಯಿಯೇ ಕಡೆಗೆ ಸೋಲುತ್ತಿದ್ದರು. ಆದರೆ ಈ ಜಗಳಗಳ ಸಂದರ್ಭಗಳಲ್ಲಿ ನನ್ನ ತಾಯಿಯು ಯಾಕೆ ಆ ರೀತಿ ಬಹಳ ಕೂಗಾಡುತ್ತಾರೆಂದು ವಿಸ್ಮಯಗೊಳ್ಳುತ್ತಿದ್ದೆ. ಅವರು ಈ ರೀತಿ ಕೂಗಾಡುವುದರಿಂದ ಅಕ್ಕ ಪಕ್ಕದವರು ಸಹ ಏನು ನಡೆಯುತ್ತಿದೆ ಎಂದು ತಿಳಿಯುತ್ತಿದ್ದರು. ಅದು ನನ್ನನ್ನು ಪೇಚಾಟಕ್ಕೆ ಒಳಪಡಿಸುತ್ತಿತ್ತು.
ನನ್ನ ತಂದೆಯನ್ನು ದಂಡಿಸುವ ಸಲುವಾಗಿ ನನ್ನ ತಾಯಿಯು ಯಾವುದೇ ಒಳ್ಳೆಯ ಅಡುಗೆಯನ್ನು ನನ್ನ ತಂದೆಗೆ ಉಳಿಸುತ್ತಿರಲಿಲ್ಲ. ನಮ್ಮ ಮಲಗುವ ಕೋಣೆಯಲ್ಲಿ ನಾವು ಮತ್ತು ನಮ್ಮ ತಾಯಿಯು ಗುಟ್ಟಾಗಿ ವಿಶೇಷವಾದ ಆಹಾರ ಪದಾರ್ಥಗಳನ್ನು ತಿನ್ನುತ್ತಿದ್ದೆವು.
ತಂದೆಯೊಟ್ಟಿಗೆ ನನ್ನ ತಾಯಿಯ ವರ್ತನೆ ನನಗೆ ಇಷ್ಟವಾಗಿರಲಿಲ್ಲ. ಕೆಲವು ವೇಳೆ ರಾತ್ರಿಯಲ್ಲಿ ಅವರಿಬ್ಬರ ನಡುವೆ ಬಿಸಿಯಾದ ತರ್ಕಗಳು ನಡೆಯುತ್ತಿದ್ದು., ನಾವು ಸರಿಯಾಗಿ ನಿದ್ರಿಸಲು ಸಹ ಆಗುತ್ತಿರಲಿಲ್ಲ. ನಾನು ಸುಮಾರು ಹನ್ನೆರಡು ವರ್ಷದವಳಾಗಿರುವಾಗ ಒಂದು ದಿನ ನನ್ನ ತಾಯಿಯು ನನ್ನನ್ನು ಮತ್ತು ನನ್ನ ತಮ್ಮನನ್ನು ಪಾರ್ಥನಾ ಕೂಟದಲ್ಲಿ ಸಂಧಿಸಿದ್ದ ಒಬ್ಬ ಸ್ತ್ರೀಯನ್ನು ನೋಡಲು ಕರೆದುಕೊಂಡು ಹೋದರು. ಆಕೆಯನ್ನು ಸಂದರ್ಶಿಸಿದಾಗ ನನ್ನ ತಾಯಿಯು ಬಹಳ ಉದ್ವೇಗಗೊಂಡವಳಾಗಿ ಆಕೆ ಅನ್ಯಳಾಗಿದ್ದರೂ ತನ್ನ ಎಲ್ಲಾ ಕಷ್ಟಗಳನ್ನು ಆಕೆಯ ಬಳಿ ಹೇಳಲು ಪ್ರಾರಂಭಿಸಿದ್ದನ್ನು ಕಂಡು ನಾನು ನಿಜವಾಗಲೂ ದಿಗ್ಭ್ರಮೆಗೊಳಗಾದೆ. ಈ ಎಲ್ಲಾ ವಿಷಯಗಳನ್ನು ಕೆಳಿಸಿಕೊಂಡ ಆ ಸ್ತ್ರೀಯು ಬಹಳ ಕರುಣೆ ಮತ್ತು ಸಮಾಧಾನಕರವಾಗಿ ವರ್ತಿಸಿದ್ದನ್ನು ನಾನು ಗಮನಿಸಿದೆ. ಅನಂತರ ಕುಡುಕ ತಂದೆಯಿಂದ ಬರುವಂತ ತೊಂದರೆಗಳನ್ನು ತಪ್ಪಿಸಲು ನಮ್ಮ ತಾಯಿಯು ನಮ್ಮಿಬ್ಬರನ್ನು ಅನಾಥಾಶ್ರಮಕ್ಕೆ ಸೇರಿಸಲು ಆಕೆಯ ಬಳಿಗೆ ಬಂದಿದ್ದಾರೆಂದು ನನಗೆ ತಿಳಿಯಿತು.
ಆಕೆಯು ನನ್ನ ಜೊತೆಯು ಸಹ ಮಾತನಾಡಿದರು. ತಂದೆಗೆ ವಿಧೆಯಳಾಗಿರುವಂತೆ ಮತ್ತು ತಂದೆಯಲ್ಲಿ ಎಷ್ಟೇ ದೋಷಗಳು ಇದ್ದರೂ ಸಹ ಅವರನ್ನು ಗೌರವಿಸಿ ಮರ್ಯಾದೆ ಕೊಡಬೇಕೆಂದು ಆಕೆ ನನಗೆ ಹೇಳಿದಳು. ಯೇಸು ಕ್ರಿಸ್ತನು ದೇವರ ಮಗನು ಈ ಲೋಕಕ್ಕೆ ಬಂದಾಗ ತಾನು ಪಾಪರಹಿತನಾಗಿದ್ದರೂ ಸಹ ತನ್ನ ಪಾಪಮಯ ಲೌಕಿಕ ತಂದೆ-ತಾಯಿಗೆ ಅಧೀನನಾಗಿ ಜೀವಿಸಿದನು ಎಂದು ಆಕೆ ಹೇಳಿದಳು.
ಅನಂತರ ಆಕೆಯು ನಮ್ಮ ಜೊತೆ ಪ್ರಾರ್ಥಿಸಿದಳು ಮತ್ತು ನಾವು ಬಹಳ ಸಮಾಧಾನಕರವಾಗಿ ಅಲ್ಲಿಂದ ಹೊರಟೆವು.
ಬೆಳೆಯುವ ಹುಡುಗಿಯಾಗಿ ನನಗೆ ಬಹಳಷ್ಟು ಪ್ರಶ್ನೆಗಳಿದ್ದವು. ನನ್ನ ತಾಯಿಯು ಯಾವಾಗಲೂ ತನ್ನ ಕಛೇರಿಯ ಕೆಲಸಗಳಲ್ಲಿ ಮತ್ತು ಮನೆ ಕೆಲಸಗಳಲ್ಲಿ ನಿರತಳಾಗಿದ್ದು, ನನ್ನ ಜೊತೆ ಮಾತನಾಡಲು ಆಕೆಗೆ ಯಾವ ಸಮಯವೂ ಇರಲಿಲ್ಲ. ನಾನು ಸಹ ನನ್ನ ಸಮಸ್ಯೆಗಳನ್ನು ಅಮ್ಮನೊಟ್ಟಿಗೆ ಹಂಚಿಕೊಳ್ಳಲು ಸ್ವತಂತ್ರವೆನಿಸಿರಲಿಲ್ಲ. ಆದ್ದರಿಂದ ನಾನು ಅನೇಕ ಉತ್ತರ ಸಿಗದ ಪ್ರಶ್ನೆಗಳಿಂದ ಒಬ್ಬಂಟಿಗಳಾಗಿಯೇ ಬೆಳೆದೆ. ನಾನು ಒಂದು ವೇಳೆ ಮದುವೆಯಾಗಿ ನನಗೆ ಮಕ್ಕಳಾದರೆ ಅವರೊಟ್ಟಿಗೆ ಬಹಳಷ್ಟು ಸಮಯವನ್ನು ಕಳೆಯುತ್ತೇನೆಂಬುದಾಗಿ ಆಗ ನಾನು ತೀರ್ಮಾನಿಸಿದೆ.
ಕಡೆಗೆ ನನ್ನ ತಾಯಿಯು ಕ್ರೈಸ್ತ ಹುಡುಗಿಯರ ಹಾಸ್ಟೆಲನ್ನು, ಮನೆಯಿಂದ ಹಲವು ಕಿ.ಮೀ ದೂರದಲ್ಲಿನ ಗಿರಿ ನಿವಾಸದಲ್ಲಿ ಕಂಡುಕೊಂಡು, ಆಕೆಯು ನನ್ನನ್ನು ಅಲ್ಲಿ ಸೇರಿಸಿದಳು.
ಹಾಸ್ಟೆಲಿನ ಜೀವಿತ ನನಗೆ ನೂತನ ಹೊಂದಿಕೊಳ್ಳುವಿಕೆ ಆಗಿತ್ತು. ಮನೆಯ ಬಗ್ಗೆ ಆಗಾಗ್ಗೆ ಯೋಚಿಸುತ್ತಾ ದುಃಖದಿಂದ ನಿರಾಳಳಾಗಿರುತ್ತಿದ್ದೆ. ಆದರೆ ನನ್ನ ಹಾಗೆಯೇ ದುಃಖಕರ ಕುಟುಂಬಗಳಿಂದ ಬಂದಂತ ಬೇರೆ ಕೆಲವು ಮಕ್ಕಳೊಂದಿಗೆ ಶಾಲೆಗೆ ಹೋಗಬಹುದಲ್ಲಾ ಎಂಬುದಾಗಿ ಸಂತೋಷಿಸುತ್ತಿದ್ದೆ. ನಮ್ಮ ಆಹಾರವು ಸಾಧಾರಣವಾದ ಸಸ್ಯಹಾರಿ ಆಹಾರವಾಗಿತ್ತು. ಆದರೆ ಚೆನ್ನಾಗಿತ್ತು. ಭಾನುವಾರದಲ್ಲಿ ಮಾಂಸ ಸಹ ಇರುತ್ತಿತ್ತು. ಕೆಲವು ಸಾರಿ ನನ್ನ ತಾಯಿಯು ಸಣ್ಣ ಪ್ರಮಾಣದ ಹಣವನ್ನು ಕೊಡುಗೆಯಾಗಿ ಕಳುಹಿಸುತ್ತಿದ್ದರು. ಅದರಲ್ಲಿ ನಾನು ಯಾವುದಾದರೂ ವಿಶಿಷ್ಟವಾದ ವಸ್ತುಗಳನ್ನು ಕೊಳ್ಳುತ್ತಿದ್ದೆ. ಒಂದು ಸಾರಿ ಒಂದು ಎತ್ತರವಾದ ಚಪ್ಪಲಿಯನ್ನು ಕೊಂಡುಕೊಂಡೆ. ಅದನ್ನು ದಿನವು ಶುಚಿಗೊಳಿಸಿ ಬಹಳ ಜೋಪಾನವಾಗಿ ಇಟ್ಟುಕೊಂಡಿದ್ದೆ. ನನ್ನ ಸ್ನೇಹಿತೆಯರು ನನ್ನನ್ನು ರೇಗಿಸಲು ಇದನ್ನು ತಮಾಷೆಗಾಗಿ ಅತ್ತ ಇತ್ತ ಎಲ್ಲಿ ಎಸೆಯುತ್ತಾರೋ ಎಂಬುದಾಗಿ ಗಲಿಬಲಿಯಾಗುತ್ತಿದ್ದೆ.
ಒಂದು ದಿನ ರಾತ್ರಿ ಹಾಸ್ಟೆಲಿನಲ್ಲಿ ಒಂದು ವಿಶೇಷ ಸಮಾರಂಭ ನಡೆಯಿತು. ಯೇಸುವಿನ ಜೀವನ ಚರಿತ್ರೆಯ ಕುರಿತಾಗಿ ಚಲನಚಿತ್ರವನ್ನು ತೋರಿಸಿದರು. ನಮ್ಮ ಮನೆಯಲ್ಲಿ ಸತ್ಯವೇದವಿತ್ತು. ಆದರೆ ಇವು ಯಾವುದನ್ನೂ ನಾನು ಓದಿರುವ ನೆನಪು ನನಗಿರಲಿಲ್ಲ. ಪುಸ್ತಕದ ಕಪಾಟಿನಲ್ಲಿ ಅದರ ಮೇಲೆ ಧೂಳು ಕುಳಿತಿತ್ತು. ಆದರೆ ಈಗ ಹಾಸ್ಟೆಲಿನಲ್ಲಿ ಪ್ರತಿ ದಿನ ನಡೆಯುವ ಪ್ರಾರ್ಥನಾ ಕೂಟದಲ್ಲಿ ಮತ್ತು ಸತ್ಯವೇದ ಅಧ್ಯಯನದಲ್ಲಿ ಯೇಸುವಿನ ಕಥೆಗಳನ್ನು ಕೇಳುತ್ತಿದ್ದೇನೆ. ಹೇಗೂ ಯೇಸು ನನಗಾಗಿ ವೈಯಕ್ತಿಕವಾಗಿ ಏನು ಮಾಡಿದ್ದಾನೆಂಬುದಾಗಿ ನಾನು ಅರ್ಥಮಾಡಿಕೊಂಡಿರಲಿಲ್ಲ. ನಾನು ಯೇಸುವಿನ ಕುರಿತಾಗಿನ ಚಲನಚಿತ್ರವನ್ನು ನೋಡುವಾಗ ನನ್ನಲ್ಲಿ ಮೊದಲ ಬಾರಿಗೆ ಯೇಸು ನನ್ನನ್ನು ಎಷ್ಟು ಪ್ರೀತಿಸಿದ್ದಾನೆಂಬುದಾಗಿ ಬಹಳ ಗಾಢವಾಗಿ ನಾಟಿತು.
ಈ ದುಷ್ಟ ಲೋಕಕ್ಕೆ ಬಂದು ನನ್ನ ಪಾಪಗಳಿಗಾಗಿ ಆತನು ಸತ್ತನು ಮತ್ತು ನನ್ನ ಹಟಮಾರಿತನದಿಂದ ನಾನು ನನ್ನ ತಂದೆ ತಾಯಿಯನ್ನು ಎಷ್ಟು ದುಃಖಪಡಿಸಿದ್ದೇನೆಂದು ನನ್ನ ಸ್ವಂತ ಜೀವಿತದ ಕುರಿತಾಗಿ ಆಗ ಯೋಚಿಸಲು ಆರಂಭಿಸಿದೆ. ನನ್ನ ಸ್ನೇಹಿತರೊಟ್ಟಿಗೆ ನನ್ನ ವಸ್ತುಗಳನ್ನು ಹಂಚಿಕೊಳ್ಳಲು ಇಷ್ಟಪಡದಿದ್ದ ನನ್ನ ಸ್ವಾರ್ಥದ ಕುರಿತಾಗಿ ಸಹ ನಾನು ಜ್ಞಾಪಿಸಿಕೊಂಡೆ. ನಾನು ಸುಳ್ಳು ಹೇಳಿದ್ದು, ಕಳ್ಳತನ ಮಾಡಿದ್ದು, ಕೋಪ ಇನ್ನೂ ಹೆಸರಿಸಲು ಅಸಹ್ಯ ಪಡುವ ಬೇರೆ ಪಾಪಗಳನ್ನು ಕುರಿತು ಯೋಚಿಸಿದೆ. ಇವು ಎಲ್ಲವುಗಳಿಗಾಗಿ ಯೇಸು ಸತ್ತನು ಮತ್ತು ನನ್ನ ಶಿಕ್ಷೆಯನ್ನು ಅನುಭವಿಸಿದನು ಎಂಬುದನ್ನು ನಾನು ಗ್ರಹಿಸಿದೆ.
ಆ ರಾತ್ರಿ ದೀಪಗಳನ್ನು ಆರಿಸಿದ ನಂತರ ನಾನು ಅತ್ತನು ಮತ್ತು ನನ್ನನ್ನು ಕ್ಷಮಿಸಿ ತನ್ನ ಮಗಳನ್ನಾಗಿ ಮಾಡಲು ಯೇಸುವನ್ನು ಕೇಳಿಕೊಂಡೆನು. ಇದ್ದಕಿದ್ದ ಹಾಗೆ ನನ್ನ ಹೃದಯದಲ್ಲಿ ಸಂತೋಷ ಮತ್ತು ಸಮಾಧಾನದ ಹೊಳೆಯು ಹರಿಯಿತು. ಈ ಮುಂಚೆ ಯಾರ ಪ್ರೀತಿಯನ್ನು ತಿಳಿಯದಿದ್ದ ನನಗೆ ತಕ್ಷಣವೇ ನನ್ನ ರಕ್ಷಕನ ಪ್ರೀತಿಯ ಅರಿವುಂಟಾಯಿತು. ನಾನು ಈಗ ಆತನ ವಿಶೇಷ ಮಗು ಎಂಬುದನ್ನು ತಿಳಿದೆ ಮತ್ತು ಆತನು ನನ್ನನ್ನು ಎಂದಿಗೂ ತಳ್ಳುವುದಿಲ್ಲ. ನನ್ನ ತಂದೆ ತಾಯಿಯ ಪ್ರೀತಿಯ ಕುರಿತಾಗಿ ಯಾವಾಗಲೂ ಅನಿಶ್ಚಿತಳಾಗಿದ್ದ ನನಗೆ ಒಂದು ಆಳವಾದ ಭದ್ರತೆ ನನ್ನ ಹೃದಯದಲ್ಲಿ ಬಂದಿತು. ನಾನು ಒಡೆಯನಾದ ಯೇಸುವಿಗೆ ಸೇರಿದವಳು ಮತ್ತು ಆತನು ಎಂದೆಂದಿಗೂ ನನ್ನವನು ಎಂಬುದನ್ನು ನಾನು ಗ್ರಹಿಸಿದೆ.
ಈ ವಿಧವಾದ ಭದ್ರತೆಯು ನನಗೆ ಹೇಗೆ ಬಂದಿತೋ ನನಗೆ ತಿಳಿಯದು. ಇದರ ಕುರಿತಾಗಿ ಯಾರೂ ನನಗೆ ಕಲಿಸಿ ಕೊಡಲಿಲ್ಲ. ಆದರೆ ನಾನು ಹಿಂದಿನವುಗಳನ್ನು ಯೋಚಿಸುವಾಗ ಪವಿತ್ರಾತ್ಮನು ಎಂದೂ ಸತ್ಯವೇದವನ್ನು ಅಭ್ಯಾಸಮಾಡದ ಸರಳ ಮನಸ್ಸಿನವರಿಗೆ ಸಹ ಹೇಗೆ ಕ್ರಿಸ್ತನ ಸಂಗತಿಗಳನ್ನು ನಿಜಗೊಳಿಸಬಲ್ಲನೆಂಬುದನ್ನು ನಾನು ಕಂಡೆನು.
ಅದು ನನ್ನ ಜೀವಿತದ ಒಂದು ನಿರ್ಧಾರದ ಬದಲಾವಣೆಯ ಸಮಯವಾಗಿತ್ತು. ನನ್ನ ಅನುಭವದ ಕುರಿತು ಮನೆಗೆ ಪತ್ರ ಬರೆದೆ ಮತ್ತು ನನ್ನ ತಾಯಿ ಮತ್ತು ಮನೆಯಲ್ಲಿ ಎಲ್ಲರೂ ಈ ಸಂತೋಷದಲ್ಲಿಭಾಗಿಯಾಗಬೇಕೆಂದು ನನ್ನ ಆಶೆಯಾಗಿತ್ತು.
ಬಹು ಬೇಗ ನಾನು ನನ್ನ ಹರೆಯ ವಯಸ್ಸಿಗೆ ಕಾಲಿಟ್ಟೆ. ಈಗ ನಾನು ಈಗ ಹದಿಮೂರು ವಯಸ್ಸಿನವಳು. ಶಾಲೆಯ ಬೇಸಿಗೆ ರಜಕ್ಕೆ ನಾನು ಮನೆಗೆ ಹೋದೆ. ಆದರೆ ಹಾಸ್ಟೆಲಿನ ಜೀವಿತ ಮನೆಯ ಜೀವಿತಕ್ಕಿಂತ ಉತ್ತಮವಾಗಿರುವುದು ನನಗೆ ಕಂಡು ಬಂತು. ಯಾಕಂದರೆ ಹಾಸ್ಟೆಲಿನಲ್ಲಿ ನನಗೆ ಪ್ರಾರ್ಥಿಸಲಿಕ್ಕೆ ಸಾಧ್ಯವಾಗುತ್ತಿತ್ತು. ನನ್ನ ಜೀವಿತವನವನ್ನು ಒಂದು ನಿಯಮದಲ್ಲಿ ಇಡುತ್ತಿದ್ದೆ. ಶಿಸ್ತಿನಿಂದ ಇರುತ್ತಿದ್ದೆ. ನನ್ನ ಸ್ನೇಹಿತರೊಟ್ಟಿಗೆ ಮಾತನಾಡುತ್ತಿದ್ದೆ ಮತ್ತು ಶಾಲೆಗೆ ಹೊಂದಿಕೊಂಡಿದ್ದ ಸಣ್ಣ ಸಭೆಗೆ ಹೋಗುತ್ತಿದ್ದೆ ಮತ್ತು ಹಾಸ್ಟೆಲಿನಿಂದ ಕೆಲವು ಉದ್ಯಾನವನಕ್ಕೆ ಅಥವಾ ಸುಂದರವಾದ ಗುಡ್ಡದ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಇಂತಹ ವನ ಭೋಜನಕ್ಕಾಗಿ ನಾವು ಎದುರು ನೋಡುತ್ತಿದ್ದೆವು. ಇವೆಲ್ಲವುಗಳಿಗೆ ಹೋಲಿಸಿ ನೋಡುವಾಗ ಮನೆಯ ಜೀವಿತ ಬೇಸರಿಕೆ ಮತ್ತು ವಿಶೇಷ ಘಟನೆಗಳಿಲ್ಲದ್ದು ಆಗಿತ್ತು. ಆದರೆ ನನಗೆ ಹಾಸ್ಟೆಲ್ ನಲ್ಲಿ ಮಿಸ್ ಮಾಡಿಕೊಂಡಿದ್ದ ಸಣ್ಣ ತಮ್ಮನೊಂದಿಗೆ ಆಡುವುದನ್ನು ನಾನು ಆನಂದಿಸಿದೆ.
ನಾನು ಮನೆಗೆ ಭೇಟಿ ನೀಡಿದಾಗ, ಒಂದು ಆಶ್ಚರ್ಯ ಸಂಗತಿಯನ್ನು ಕಂಡುಹಿಡಿದೆ. ನಾನು ಅಣ್ಣನೆಂದು ಭಾವಿಸುತ್ತಿದ್ದ ಸುಮಾರು ಹದಿನೇಳು ವರುಷದವನಾದ ನಮ್ಮ ಸಂಬಂಧಿಕನು ಮೊದಲು ನಮ್ಮ ಮನೆಗೆ ಬರುತ್ತಿದಂತೆ ಆಗಲೂ ಬರುತ್ತಿದ್ದನು. ಆದರೆ ಈ ಸಾರಿ ನಾನು ಮನೆಗೆ ಹೋದಾಗ ನಾವು ಒಬ್ಬರಿಗೊಬ್ಬರು ಏಕಾಂಗಿಯಾಗಿರುವಾಗ ಅವನು ನನ್ನ ಜೊತೆ ಬಹಳ ಹತ್ತಿರವಾಗಿ ನನ್ನ ದೇಹವನ್ನು ಅಲ್ಲಿ ಇಲ್ಲಿ ಮುಟ್ಟಿ ಶಾರೀರಿಕ ರೀತಿಯಲ್ಲಿ ಸಮೀಪಿಸಲು ಪ್ರಯತ್ನಿಸುತ್ತಿದ್ದನು. ಹಿಂದೆಂದಿಗೂ ಅವನು ಈ ರೀತಿ ವರ್ತಿಸಿರಲಿಲ್ಲ. ಯಾರೂ ನನಗೆ ಎಂದೂ ಹುಡುಗ ಹುಡುಗಿಯ ಸಂಬಂಧದ ಕುರಿತಾಗಿ ಅಥವಾ ಲೈಂಗಿಕ ವಿಷಯದ ಬಗ್ಗೆ ತಿಳಿಸಿರಲಿಲ್ಲ. ಆದರೆ ಅವನ ನಡವಳಿಕೆಯಲ್ಲಿ ಏನೋ ವ್ಯತ್ಯಾಸವಿದೆ ಎಂದು ತಿಳಿದು ನಾನು ಎಚ್ಚರಿಕೆಯಾಗಿದ್ದೆ. ಅದರಿಂದ ಅವನನ್ನು ಅಂದಿನಿಂದ ದೂರವಿಟ್ಟೆ ಮತ್ತು ಅವನು ಅದಕ್ಕಾಗಿ ಬಹಳ ಕೋಪಗೊಂಡನು.
ನನ್ನ ಕೆಲವು ಹಾಸ್ಟೆಲಿನ ಸಹಪಾಠಿಗಳಿಗಾಗಿ ದುಸ್ಥಿತಿಯಿಂದ ಕರ್ತನೇ ನನ್ನನ್ನು ಕಾಪಾಡಿದ್ದು. ಅವರು ಇನ್ನೂ ಮುಗ್ಧರು ಹಾಗೂ ಅರಿವಿಲ್ಲದವರಾಗಿರುವಾಗ ತಮ್ಮ ಹತ್ತಿರದ ಸಂಬಂಧಿಕರಿಂದ ಲೈಂಗಿಕ ಪಾಪಕ್ಕೆ ಮೋಸ ಹೋದರೆಂಬುದಾಗಿ ಕಂಡುಕೊಂಡೆ. ಹಾಸ್ಟೆಲಿಗೆ ಮತ್ತೆ ಮತ್ತೆ ಮರಳಿ ಹೋಗಲು ಮತ್ತೊಂದು ಕಾರಣ, ನನ್ನ ಸಂಬಂಧಿಕನ ನಡವಳಿಕೆ ಮತ್ತು ಹತ್ತಿರದ ಸಂಬಂಧಿಕರಿಗೂ ಸಹ ಕೆಟ್ಟ ಮನೋಭಾವನೆ ಇರುವುದನ್ನು ನಾನು ಗ್ರಹಿಸಿಕೊಂಡಿದ್ದೆ .
ಹದಿಹರೆ ವಯಸ್ಸಿನವಳಾಗಿ ಮುಂದೆ ಬೆಳೆಯುತ್ತಾ ನಾನು ಸ್ತ್ರೀಯಾಗುತ್ತಿರುವುದನ್ನು ತಿಳಿದೆ. ಎಲ್ಲಾ ವಿಧವಾದ ಮನೋಭಾವನೆಗಳು ನನ್ನ ಮನಸ್ಸಿಗೆ ಬರುತ್ತಿತ್ತು. ಇತರರಿಂದ ಪ್ರೀತಿಸಲ್ಪಡಬೇಕೆಂಬುದಾಗಿ ಆಶಿಸುತ್ತಿದ್ದ ನನಗೆ ಪುರುಷನ ಪ್ರೀತಿಯನ್ನು ನಾನು ಇಷ್ಟಪಡುವುದು ಕಂಡು ಬಂತು. ಹೀಗೆ ಯಾರಾದರೂ ನನ್ನನ್ನು ಪ್ರೀತಿಸುವನೋ ಎಂಬುದಾಗಿ ಹಗಲು ಕನಸು ಕಾಣಲು ಪ್ರಾರಂಭಿಸಿದೆ. ಇಂತಹ ಆಲೋಚನೆಗಳು ಕೆಲವು ಸಮಯದಲ್ಲಿ ಬಹಳ ಉದ್ರೇಕವಾಗುತ್ತಿತ್ತು.
ಈ ಭ್ರಮೆಯ ಲೋಕವು ನನ್ನಲ್ಲಿ ಬಹವಾಗಿ ರಾಕ್ಷಸಿಯಂತೆ ಯೇಸುವಿನೊಂದಿಗೆ ನನ್ನ ಅನ್ಯೋನ್ಯತೆಯನ್ನು ತಡೆಯುತ್ತಿರುವುದನ್ನು ನಾನು ಕಂಡೆ. ನನ್ನ ಒಬ್ಬನೇ ನಿಜ ಸ್ನೇಹಿತನಾದ ಯೇಸುವಿನೊಂದಿಗೆ ಮಾತನಾಡುವ ಬದಲು ನಾನು ಕಲ್ಪನಾಮಯಳಾಗಿರಲು ಆರಿಸಿಕೊಳ್ಳುತ್ತಿರುವುದನ್ನು ನಾನು ಕಂಡೆ. ಈ ಸ್ವಭಾವದಿಂದ ನಾನು ಬಿಡುಗಡೆ ಹೊಂದಲು ನನಗೆ ಸಾಧ್ಯವಾಗಲಿಲ್ಲ.
ನಮ್ಮ ಹಾಸ್ಟೆಲಿನಲ್ಲಿ ಕೆಲವು ಹುಡುಗಿಯರು ಒಬ್ಬರೊಟ್ಟಿಗೆ ಒಬ್ಬರು ಅಸಾಮಾನ್ಯ ಪ್ರೀತಿ ಮತ್ತು ಸ್ವಾಧೀನಾನುಭವ ಉಳ್ಳವರಾಗಿರುವುದನ್ನು ನಾನು ಗಮನಿಸಿದೆ. ಅವರು ಒಬ್ಬರಿಗೊಬ್ಬರು ತೋರಿಸುವಂತ ಮಮತೆಯನ್ನು ನಾನು ನೋಡಿ ಮನಸ್ಸಿನಲ್ಲಿ ಸಂಕೋಚಪಡುತ್ತಿದ್ದೆ. ಅವರು ತಮ್ಮ ಕೋಣೆಗಳಿಗೆ ಹೋಗಿ ಚಿಲಕ ಹಾಕಿಕೊಳ್ಳುತ್ತಿದ್ದರು. ಅಲ್ಲಿ ಅವರು ಏನು ಮಾಡುತ್ತಿದ್ದರೆಂಬುದನ್ನು ಕಂಡು ಕೊಂಡೆ. ದೇವರು ಇದನ್ನು ದ್ವೇಷಿಸುತ್ತಾನೆ ಮತ್ತು ತನ್ನ ವಾಕ್ಯದಲ್ಲಿ ಸ್ಪಷ್ಟವಾಗಿ ಇದನ್ನು ನಿಷೇಧಿಸಿದ್ದಾನೆ(ರೋಮಾ 1:26,27). ಅಂತಹ ಹುಡುಗಿಯರ ಸಹವಾಸವನ್ನು ನಾನು ತಡೆದೆ.
ಹಾಸ್ಟೆಲಿನಲ್ಲಿ ಅನೇಕ ಹುಡುಗಿಯರು ತಮ್ಮ ಜೀವಿತವನ್ನು ಯೇಸುವಿಗೆ ಕೊಟ್ಟಿರಲಿಲ್ಲ. ಅವರು ಒಬ್ಬರೊಂದಿಗೆ ಒಬ್ಬರು ಜಗಳವಾಡುತ್ತಿದ್ದರು ಮತ್ತು ವಾರಗಟ್ಟಲೆ ಮಾತನಾಡದೆ ಕಳೆಯುತ್ತಿದ್ದರು.
ನಮ್ಮ ಹಾಸ್ಟೆಲಿನಲ್ಲಿ ಉಪಾಧ್ಯಾಯರ ಮುಖವು ಹೊಳೆಯುತ್ತಾ ಆಕರ್ಷಿಕವಾಗಿರುವುದನ್ನು ನಾನು ಕಂಡೆನು. ಆಕೆಯು ಯೇಸು ಕರ್ತನನ್ನು ಪ್ರೀತಿಸುವ ಮತ್ತು ಒಪ್ಪಿಸಿಕೊಟ್ಟ ಕ್ರೈಸ್ತಳೆಂಬುದನ್ನು ಕಂಡುಕೊಂಡೆ. ಆಕೆ ಅರ್ಥಮಾಡಿಕೊಳ್ಳುವವಳಾಗಿ ಕಂಡು ಬಂದದ್ದರಿಂದ ನಾನು ನನ್ನ ಕೆಲವು ಸಮಸ್ಯೆಗಳನ್ನು ಆಕೆಯೊಟ್ಟಿಗೆ ಹಂಚಿಕೊಂಡೆ. ಆಕೆ ಯಾವಾಗಲೂ ನನಗೆ ಒಳ್ಳೆಯ ಸಲಹೆಗಳನ್ನು ಕೊಡುತ್ತಿದ್ದಳು.ಯೇಸುವೇ ಆಕೆಗೆ ಜ್ಞಾನ ಮತ್ತು ಬಲಕ್ಕೆ ಮೂಲಕಾರಣನೆಂಬುದನ್ನು ನಾನು ಕಂಡುಕೊಂಡೆ.
ನಾನು ಹಾಸ್ಟೆಲನ್ನು ಬಿಟ್ಟ ನಂತರವೂ ಸಹ ಉಪಾಧ್ಯಾಯರು ನನಗೆ ಒಂದು ಮಾದರಿಯಾಗಿ ಅನೇಕ ವರ್ಷಗಳು ಉಳಿದರು. ಅವರು ನನ್ನ ಜೀವಿತದ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬಿರಿದ್ದಾರೆಂದು ಮತ್ತು ಅವರ ಆತ್ಮದಲ್ಲಿ ನಾನು ಎಷ್ಟು ಲೀನಳಾಗಿದ್ದೇನೆಂಬುದನ್ನು ನಾನು ತುಂಬಾ ತಡವಾಗಿ ತಿಳಿದುಕೊಂಡೆ. ಆಕೆಯ ಉದಾಹರಣೆಗಳು ನನ್ನ ಜೀವಿತದ ಬಹಳಷ್ಟು ಒಳ್ಳೆಯ ಸಂಗತಿಗಳಿಗೆ ಅಸ್ತಿವಾರವಾಗಿತ್ತು. ಬಹಳ ಸರಳವಾಗಿ ಸಂಗತಿಗಳ ಬಗ್ಗೆ ಆಕೆ ನಮ್ಮೊಟ್ಟಿಗೆ ಮಾತನಾಡಿದಳು. ವಿಜ್ಞಾನದ ಪಾಠದಲ್ಲಿ ಹೂಗಳ ಬಗ್ಗೆ ಕಲಿಸುವಾಗ ಉದಾಹರಣೆಗೆ - ನೈದಿಲೆಯ ಹೂ ಶುದ್ಧತ್ವಕ್ಕೆ ಗುರುತಾಗಿತ್ತು ಎಂಬುದಾಗಿ ಆಕೆ ಹೇಳಿದಳು ಮತ್ತು ಆಕೆಯು ನೈದಿಲಿಯಂತೆ ನಮ್ಮ ಜೀವಿತ ಈ ಭೂಮಿಯ ಮೇಲೆ ಜೀವವುಳ್ಳದಾಗಿ, ಪ್ರಕಾಶಮಾನವಾಗಿದ್ದು ಒಂದು ದಿನ ಇದ್ದು ಮತ್ತೊಂದು ದಿನ ಕಳೆದು ಹೋಗುತ್ತದೆ. ಗುಲಾಬಿ ಹೂ ಸಾಮಾನ್ಯವಾಗಿ ತನ್ನಲ್ಲಿರುವಸುವಾಸನೆಯನ್ನು ರಾತ್ರಿಯ ಸಮಯದಲ್ಲಿ ಬೀರುತ್ತದೆ. ನಾವು ಕತ್ತಲೆಯಂತಹ ಶೋಧನೆಗಳ ಮಧ್ಯೆ ಹೋಗುತ್ತಿದ್ದರೂ ಕರುಣೆ ಮತ್ತು ಶೋಭೆಯುಳ್ಳವರಾಗಿರಬೇಕೆಂಬುದೆ ಇದು ಪ್ರತಿರೂಪವಾಗಿದೆ. ನೀಲ ರೋಹಿತ ಹೂ ಸಾಧಾರಣವಾಗಿ ನೆರಳಿನಲ್ಲಿ ಅರಳುತ್ತದೆ. ಇದು ದೀನತೆಗೆ ಮತ್ತು ವಿನಯತೆಗೆ ಸಂಕೇತವಾಗಿದೆ ಎಂದು ಹೇಳಿದರು. ಅನೇಕ ಹೂಗಳು ಯಾರೂ ನೋಡದ ಸ್ಥಳಗಳಲ್ಲಿ ಅರಳುತ್ತದೆ. ಆದ್ದರಿಂದ ನಾವು ಸಹ ಮನುಷ್ಯರನ್ನು ಪ್ರಭಾವಿಸಲು ಜೀವಿಸದೇ ದೇವರೊಬ್ಬರನ್ನೇ ಮೆಚ್ಚಿಸಲು ಜೀವಿಸಬೇಕು. ಅನೇಕ ಹೂಗಳು ಕಾಲಿನಿಂದ ತುಳಿಯಲ್ಪಡುತ್ತವೆ. ಆದರೆ ಅವು ಯಾವೂ ಸೇಡು ತೀರಿಸಿಕೊಳ್ಳುವುದಿಲ್ಲ. ಆದ್ದರಿಂದ ನಾವು ಸಹ ಇತರರಿಂದ ಅವಮಾನಿಸಲ್ಪಟ್ಟಾಗ ಸೇಡು ಇಟ್ಟುಕೊಳ್ಳದೆ ತಕ್ಷಣವೇ ಇತರರನ್ನು ಕ್ಷಮಿಸಲು ಸಿದ್ಧರಿರಬೇಕು ಎಂಬುದನ್ನು ಈ ಹೂಗಳಿಂದ ಕಲಿಯಬೇಕು. ಎಂಬುದಾಗಿ ಅವರು ಹೇಳಿದರು. ಇಂತಹ ಪಾಠಗಳು ನನ್ನ ಎಳೆಯ ಮನಸ್ಸಿನ ಮೇಲೆ ಆಳವಾಗಿ ಪ್ರಭಾವ ಬೀರಿತು ಮತ್ತು ನನ್ನ ಗುಣಲಕ್ಷಣಗಳನ್ನು ರೂಪಿಸಿತು.
ಈ ಉಪಾಧ್ಯಾಯರು ನಮ್ಮ ಹಾಸ್ಟೆಲಿನ ನಿಯಮ ಪಾಲಕರಾಗಿದ್ದರು. ನಾವು ವಯಸ್ಸಿಗೆ ಬಂದವರಾದಾಗ ಯಾವ ರೀತಿ ಎಚ್ಚರಿಕೆ ವಹಿಸಬೇಕೆಂಬುದನ್ನು ಅವರು ಕಲಿಸಿಕೊಟ್ಟರು ಎಲ್ಲಾ ಸಮಯದಲ್ಲೂ ನಾವು ಹೇಗೆ ಆರೋಗ್ಯ ಸೂತ್ರಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರಲು, ಕ್ರಮವಾಗಿ ಸ್ನಾನಮಾಡಲು ಮುಖ್ಯವಾಗಿ ನಮ್ಮ ದೇಹದಲ್ಲಿ ಹೊಲಸಾಗುವಂತ ಭಾಗಗಳನ್ನು ಮತ್ತು ಯಾವಾಗಲೂ ಬೆವರು ಸುರಿಸುವಂತ ಭಾಗಗಳನ್ನು ತೊಳೆದುಕೊಳ್ಳಲು ಅವರು ಕಲಿಸಿಕೊಟ್ಟರು. ನಮ್ಮ ಮಾಸಿಕ ಋತು ಸ್ರಾವವನ್ನು ಕಾಯಿಲೆಯಾಗಿ ಕಾಣದೆ ಸೃಷ್ಟಿಕರ್ತನು ನಮ್ಮ ದೇಹಗಳನ್ನು ಅದ್ಭುತವಾದ ರೀತಿಯಲ್ಲಿ ಉಂಟುಮಾಡಿದ ಸಾಧಾರಣವಾದ ಒಂದು ಭಾಗವೆಂಬುದಾಗಿ ನಾವು ಭಾವಿಸಬೇಕು. ಚುರುಕಾಗಿ ಓಡಾಡುತ್ತಾ ಎಲ್ಲವನ್ನು ಸಾಧಾರಣವಾಗಿ ತೆಗೆದುಕೊಳ್ಳುವುದರ ಮೂಲಕ, ಆಟವಾಡಿ, ವ್ಯಾಯಾಮಮಾಡಿ ನಮ್ಮ ದೇಹಗಳನ್ನು ಆರೋಗ್ಯ ಸ್ಥಿತಿಯಲ್ಲಿರುವಂತೆ ಅವರು ಕಲಿಸಿಕೊಟ್ಟರು. ನಾವು ದಪ್ಪಗೆ ಮತ್ತು ಸೋಮಾರಿಗಳಾಗಿರದೆ ತೆಳ್ಳಗೆ ಮತ್ತು ಚುರಿಕಾಗಿ ಇರಬೇಕೆಂದು ಅವರು ಹೇಳಿದರು.
ನಮ್ಮ ಆಟಗಳಲ್ಲಿ ಅವರು ಸಹ ಸೇರಿಕೊಳ್ಳುತ್ತಿದ್ದರು. ನಮ್ಮ ಕೂದಲನ್ನು ಶುಚಿಯಾಗಿ ಮತ್ತು ಹಾಸ್ಟೆಲ್ ಗಳಲ್ಲಿ ಸರ್ವ ಸಾಮಾನ್ಯವಾಗಿರುವ ಹೇನಿನಿಂದ ದೂರವಿಬೇಕಂಬುದನ್ನು ಅವರು ಕಲಿಸಿಕೊಟ್ಟರು. ನಮ್ಮ ವಸ್ತುಗಳನ್ನು ಅಚ್ಚುಕಟ್ಟಾಗಿ ಮತ್ತು ನಮ್ಮ ಸುತ್ತ ಮುತ್ತ ಶುಚಿಯಾಗಿಟ್ಟುಕೊಳ್ಳಬೇಕೆಂದು ಅವರು ಹೇಳಿದರು. ನಮ್ಮ ಬಟ್ಟೆಗಳನ್ನು ಕ್ರಮವಾಗಿ ಒಗೆದು ಅವಶ್ಯಕತೆ ಇರುವಾಗ ಅದನ್ನು ಹೊಲಿದುಕೊಳ್ಳಬೇಕೆಂದು ಅವರು ಹೇಳಿದರು.
ಸತ್ಯವೇದದಲ್ಲಿ ಜ್ಞಾನೋಕ್ತಿಯಿಂದ ಕೆಲವು ಜ್ಞಾನವುಳ್ಳ ವಾಕ್ಯಗಳನ್ನು ಬಾಯಿಪಾಠ ಮಾಡುವಂತೆ ಉತ್ತೇಜಿಸುತ್ತಿದ್ದರು.
ನಾವು ಕೆಲವು ಸ್ತೋತ್ರದ ಹಾಡುಗಳನ್ನು ಕಲಿತೆವು ಮತ್ತು ಹಾಡುವ ತರಗತಿಗಳನ್ನು ಆಶಿಸಿದೆವು. ನಾನು ಕುಂದಿಹೋಗಿರುವಾಗ ಈ ಹಾಡುಗಳು ನನ್ನನ್ನು ಉತ್ತೇಜಿಸುತ್ತಿತ್ತು. ಎಲ್ಲಾ ಸಮಯಗಳಲ್ಲಿ ದೇವರನ್ನು ಸ್ತುತಿಸುವುದರಲ್ಲಿ ಬಹಳವಾಗಿ ಬಲವಿದೆ ಎಂಬುದನ್ನು ನಾನು ಆ ದಿನಗಳಲ್ಲಿ ಕಲಿತೆ. ನಮ್ಮ ಪಾಠಗಳನ್ನು ಉಳಿಕೊಳ್ಳದೆ ಪರೀಕ್ಷೆಗೆ ಕುರಿತಾಗಿ ಭಯಪಡದೇ ಸ್ಥಿರವಾಗಿ ಓದಿ ಎಂದಿಗೂ ಮೋಸಮಾಡದೆ ಉಳಿದಿದ್ದನ್ನು ದೇವರಿಗೆ ಬಿಡಬೇಕು ಎಂದು ಆಕೆ ನಮಗೆ ಹೇಳಿದಳು ಸತ್ಯವೇದದ ಕೀರ್ತನೆ 26:9 ರಲ್ಲಿ ನಮ್ಮ ಮನಸ್ಸು ದೇವರ ಮೇಲೆ ಕೇಂದ್ರಿಕರಿಸಲ್ಪಟ್ಟಿದ್ದರೆ ನಮ್ಮನ್ನು ಆತನುಪರಿಪೂರ್ಣವಾದ ಶಾಂತಿಯಲ್ಲಿ ನೆಲೆಗೊಳಿಸುತ್ತಾನೆಂಬ ವಾಕ್ಯವನ್ನು ಆಕೆ ಕಲಿಸಿಕೊಟ್ಟಳು. ಅನೇಕರು ಪರೀಕ್ಷೆಯ ಸಮಯದಲ್ಲಿ ಅನಾವಶ್ಯಕವಾಗಿ ಒತ್ತಡವನ್ನು ತೆಗೆದುಕೊಳ್ಳುತ್ತಾರೆ. ಆದರೆ ನಮ್ಮ ಮೇಲ್ವಿಚಾರಕರು ನಾವು ವಿಶ್ರಾಂತಿಯಿಂದಿರುವ ಹಾಗೆ ಸಹಾಯಿಸಿದರು.
ಇಂಗ್ಲೆಂಡಿನಲ್ಲಿ ಕೇವಲ ಚರ್ಮದ ಕೆಲಸವನ್ನು ಮಾಡುತ್ತಿದ್ದ ವಿಲಿಯಂ ಕೇರಿಯವರು ಭಾರತಕ್ಕೆ ಬಂದು ನಮ್ಮ ಜನಕೆಗೆ ಸುವಾರ್ತೆಯನ್ನು ಮುಟ್ಟಿಸಲು ಬಹಳಷ್ಟು ತ್ಯಾಗ ಮಾಡಿದರ ಬಗ್ಗೆ ಸಹ ಆಕೆ ನಮಗೆ ಹೇಳಿದಳು. ನಮ್ಮ ದೇಶದಲ್ಲಿ ಬಹಳಷ್ಟು ಕಷ್ಟಗಳನ್ನು ಅವರು ಹಾದು ಹೋದರು. ಆದರೆ ಅಂತ್ಯದಲ್ಲಿ ಭಾರತದ ಅನೇಕ ಬಾಷೆಗಳಲ್ಲಿ ಸತ್ಯವೇದವನ್ನು ಬಾಷಾಂತರ ಮಾಡುವಂತ ಅದ್ಭುತವಾದ ಕೆಲಸವನ್ನು ಅವರು ಮಾಡಿದರು. ಈ ಒಬ್ಬ ಮನುಷ್ಯನಿಂದ ಅನೇಕ ಭಾರತಿಯರು ತಮ್ಮ ತಾಯಭಾಷೆಯಲ್ಲಿ ದೇವರ ವಾಕ್ಯವನ್ನು ಪಡೆದರು. ಐಯರಲ್ಯಾಂಡಿನಿಂದ ಬಂದಂತ ಏಮಿ ಕಾರಮೈಕೆಲ್ ಎಂಬವರು ತೆಮಿಳು ನಾಡಿನಲ್ಲಿರುವ ಡೋನಾವರನಲ್ಲಿ ಅನಾಥರಿಗಾಗಿ ಗೃಹಗಳನ್ನು ಪ್ರಾರಂಭಿಸಿದರು. ತಮ್ಮ ಪೋಷಕರಿಂದ ಬಿಸಾಡಲ್ಪಟ್ಟ ಹೆಣ್ಣು ಕೂಸುಗಳನ್ನು ಈಕೆ ಸಂರಕ್ಷಿಸಿದರು. ಮತ್ತು ಅಂಥ ಹುಡುಗಿಯರನ್ನು ದೇವರ ಭಯಭಕ್ತಿಯ ಸ್ತ್ರೀಯರನ್ನಾಗಿ ಮಾಡಲು ತಮ್ಮ ಜೀವಿತವನ್ನು ಕಳೆದರು.
ಜಾನ್ ಹೈಡ್ ಅಥವಾ ಪ್ರಾರ್ಥನೆಯ ಹೈಡ್ ಎಂಬದಾಗಿ ಕರೆಯಲ್ಪಡುವವರು ಪಂಜಾಬಿನ ಮಿಷನರಿಯಾಗಿ ಅನೇಕ ಆತ್ಮಗಳನ್ನು ಕ್ರಿಸ್ತನಿಗಾಗಿ ತಂದವರ ಬಗ್ಗೆ ಸಹ ಆಕೆ ನಮಗೆ ಹೇಳಿದಳು.
ಸಮಾಜದಲ್ಲಿ ಅಶೋಕ ಮತ್ತು ಶಹಜಹಾನರ ಬಗ್ಗೆ ಇರುವಂತ ಕಥೆಗಳಿಗಿಂತ ಈ ಕಥೆಗಳು ನನ್ನನ್ನು ಬಹಳ ಸೆಳೆಯಿತು.
ಒಂದು ದಿನ ನಮ್ಮ ಮೇಲ್ವಿಚಾರಕರು ಅವರೇ ಒಬ್ಬ ಅನಾಥೆಯಾಗಿದ್ದು ಆ್ಯಮೀ ಕಾರ್ ಮೈಕಲ್ ರವರಿಂದ ಡೋನಾವರನಲ್ಲಿ ಬೆಳೆಸಲ್ಪಟ್ಟವರು ಎಂಬುದಾಗಿ ಹೇಳಿದರು. ಆಕೆ ಉಪಾಧ್ಯಾಯರ ತರಬೇತಿಯನ್ನು ಆಗ ಪಡೆದು ಈ ಕೆಲಸವನ್ನು ಹಾಸ್ಟೆಲಿನಲ್ಲಿ ಮಾಡುತ್ತಿರುವುದಾಗಿ ಹೇಳಿದರು.
ನಿಜವಾಗಲೂ ಆಕೆ ಒಬ್ಬ ಪಕ್ಷಪಾತವಿಲ್ಲದ ಮತ್ತು ನಮ್ಮೆಲ್ಲರನ್ನು ಬಹಳವಾಗಿ ಪ್ರೀತಿಸುವ ಸ್ತ್ರೀಯಾಗಿದ್ದರು. ನನ್ನ ಜೀವಿತದಲ್ಲಿ ಶಿಸ್ತನ್ನು ಬೆಳೆಸಿಕೊಳ್ಳುವಂತೆ ಆಕೆ ವೈಯಕ್ತಿಕವಾಗಿ ನನ್ನನ್ನು ಆಗಾಗ ಉತ್ತೇಜನ ಪಡಿಸುತ್ತಿದ್ದರು. ಪ್ರತಿ ದಿನ ಕ್ರಮವಾದ ಸತ್ಯವೇದದ ಅಧ್ಯಾಯನ ಮತ್ತು ಪ್ರಾರ್ಥನೆ ಕರ್ತನೊಟ್ಟಿಗೆ ಕಳೆಯುವಂತೆ ಮೌನ ಸಮಯ ಬಹಳ ದೊಡ್ಡ ಪ್ರಯೋಜನಕರವಾಗಿರುವುದನ್ನು ಆಕೆ ಕಂಡುಕೊಂಡರೆಂದು ನನಗೆ ಹೇಳಿದರು. ಆಲೋಚನೆಗಳನ್ನು ಎದುರಿಸುವಂತ ನನ್ನ ಊಹಾ ಲೋಕದ ಶೋಧನೆಗಳಲ್ಲಿ ಜಯಶಾಲಿಯಾಗುವಂತೆ ಮತ್ತು ಕೆಲವು ಹಾಸ್ಟೆಲಿನ ಸಹಪಾಠಿಗಳೊಂದಿಗೆ ನನಗಿದ್ದ ಸೇಡಿನಿಂದ ಬಿಡುಗಡೆ ಹೊಂದಲು ಕರ್ತನನ್ನು ಕೇಳಿಕೊಳ್ಳುವಂತೆ ಆಕೆ ನನಗೆ ಉತ್ತೇಜನಪಡಿಸಿದರು.
ನನ್ನ ತಂದೆಯವರನ್ನು ನಾನು ಬಹಳ ಕಾಲದ ಹಿಂದೆಯೇ ಕ್ಷಮಿಸಿದ್ದೆ. ಆದರೆ ಈಗ ಕ್ರಮೇಣವಾಗಿ ನಾನು ಕಹಿಭಾವನೆಯುಳ್ಳವಳಾಗುತ್ತಿರುವ ಇನ್ನೂ ಬೇರೆಯವರಿದ್ದಾರೆ. ಯಾವುದೇ ಸಂದರ್ಭದಲ್ಲಿ ಜನರು ನಮಗೆ ಕೆಟ್ಟದ್ದನ್ನು ಮಾಡಬಹುದು. ಅದರಿಂದ ಈ ಕಹಿಭಾವನೆಯ ವಿರುದ್ಧವಾಗಿ ನಮ್ಮ ಜೀವನವಿಡೀ ಹೋರಾಡಬೇಕಾದ ಒಂದು ಕ್ಷೇತ್ರ ಎಂಬುದನ್ನು ನಾನು ಗ್ರಹಿಸಿದೆ. ಆದರೆ ಅಂಥವರನ್ನು ನಾವು ಕ್ಷಮಿಸಲು ಮತ್ತು ಪ್ರೀತಿಸಲು ದೇವರು ನಮಗೆ ಕೃಪೆಕೊಡುತ್ತಾರೆ. ಇದೇ ಕ್ರಿಸ್ತನ ಸುವಾರ್ತೆಯಲ್ಲಿರುವ ಅದ್ಭುತವಾದ ಶಕ್ತಿ.
ನನ್ನ ಜೀವಿತ ಬದಲಾಗಬೇಕಿದ್ದರೆ, ನಾನು ಓದುವುದು ಮೊದಲು ಬದಲಾಗಬೇಕೆಂಬುದನ್ನು ನಾನು ಗ್ರಹಿಸಿದೆ. ನಾನು ಕಲ್ಪನಾಕಥೆಗಳನ್ನು ಓದುವ ರೂಡಿಯಲ್ಲಿದ್ದೆ. ಯಾಕಂದರೆ ಅವು ನನ್ನ ಕಲ್ಪನಾಶಕ್ತಿಯನ್ನು ಉದ್ರೇಕಿಸುತ್ತಿತ್ತು. ಆದರೆ ಅವು ನನ್ನ ಹೃದಯಲ್ಲಿರುವ ಬೆಂಕಿಗೆ ಸೌದೆಯನ್ನು ಕೂಡಿಸಿದಂತಿತ್ತು. ಮತ್ತು ನನ್ನ ಕಲ್ಪನಾ ಚಿತ್ರಗಳಿಗಾಗಿ ಹಂಬಲವನ್ನು ಹೆಚ್ಚಿಸಿತು. ಆರೋಗ್ಯಕರ ಪುಸ್ತಕಗಳ ಕಡೆಗೆ ರುಚಿ ಬರುವ ಹಾಗೆ ನನ್ನ ಸ್ನೇಹಿತರಾದ ನಮ್ಮ ಮೇಲ್ವಿಚಾರಕರು ತಮ್ಮ ಸ್ವಂತ (ಲೈಬ್ರರಿ) ಪುಸ್ತಕ ಭಂಡಾರದಲ್ಲಿ ಇದ್ದ ಕೆಲವು ಪುಸ್ತಕಗಳನ್ನು ನನಗೆ ಕೊಟ್ಟರು ಈ ಪುಸ್ತಕಗಳು ನನ್ನನ್ನು ಕರ್ತನ ಕಡೆಗೆ ನಡೆಸಿತು.
ಆಗ ಕರ್ತನನ್ನು ತಪ್ಪಾದ ಮಾದರಿಯ ಪುಸ್ತಕಗಳ ಕಡೆಗೆ ನನಗಿರುವ ಆಶೆಯನ್ನು ತೆಗೆಯಬೇಕೆಂದು ಕೇಳಿಕೊಂಡೆ. ನಿಧಾನವಾಗಿ ಮುಂದಿನ ಪರಿಸ್ಥಿತಿಯಲ್ಲಿ ಬದಲಾವಣೆಯನ್ನು ಕಂಡೆ. ಕ್ರಿಸ್ತಿಯ ನಂಬಿಕೆಯ ನಾಯಕರುಗಳ ಬಗ್ಗೆ ಮತ್ತು ಭಾರತಕ್ಕೆ ಬಂದ ಮಿಷನರಿಗಳ ಬಗ್ಗೆ ಕೆಲವು ಒಳ್ಳೆ ಪುಸ್ತಕಗಳನ್ನು ನಮ್ಮ ಹಾಸ್ಟೆಲಿನ ಪುಸ್ತಕ ಭಂಡಾರದಲ್ಲಿ ಕಂಡೆ.ನಿಧಾನವಾಗಿ ಮತ್ತು ಖಂಡಿತವಾಗಿ ಅತ್ತಿತ್ತ ಅಲೆಯುತ್ತಿದ್ದ ನನ್ನ ಆಲೋಚನೆಗಳನ್ನು ಕ್ರಿಸ್ತನ ಹತೋಟಿಯಲ್ಲಿ ತರಲು ಸಾಧ್ಯವಾಯಿತು. ಮತ್ತು ನನ್ನ ಕಲ್ಪನಾ ಲೋಕವು ಮೋಡದೋಪಾದಿಯಲ್ಲಿ ಹೋರಟು ಹೋಯಿತು. ಬಹಳ ಕಾಲದಿಂದಲೂ ನನ್ನನ್ನು ಬಂಧನದಲ್ಲಿಟ್ಟಿದ್ದ ಆ ದುಷ್ಟ ರಾಕ್ಷಿಸಿನಿಂದ ಕಡೆಗೆ ನನಗೆ ಬಿಡುಗಡೆಯಾಯಿತು.
ಹಾಸ್ಟೆಲಿನಲ್ಲಿ ಟಿ. ವಿ. ಇತ್ತು. ಆಗಾಗ ಹುಡುಗಿಯರು ಅದರಲ್ಲಿ ಬರುವ ಚಲನ ಚಿತ್ರಗಳನ್ನು ನೋಡುತ್ತಿದ್ದರು. ನಾನು ಸಹ ಆ ಕೆಲವು ಚಿತ್ರಗಳನ್ನು ನೋಡಿದೆ. ಆದರೆ ಅವು ನನ್ನ ಕಲ್ಪನಾ ಲೋಕವನ್ನು ಮತ್ತೆ ಹಿಂದಕ್ಕೆ ತಂದವು. ಆದ್ದರಿಂದ ಈ ಒಂದು ಚಟದಿಂದ ನನ್ನನ್ನು ಸಂಪೂರ್ಣವಾಗಿ ಬಿಡಿಸುವಂತೆ ಕರ್ತನನ್ನು ನಾನು ಕೇಳಿಕೊಂಡೆನು.
ನನ್ನ ಆಲೋಚನೆಯನ್ನು ಬೇರೆ ಬೇರೆ ಕಡೆಗೆ ತಿರುಗಿಸಿ ಈ ಶೋಧನೆಯಿಂದ ಬಿಡುಗಡೆ ಹೊಂದಲು ಕೆಲವು ಮಾರ್ಗಗಳನ್ನು ಹುಡುಕುತ್ತಿದ್ದೆ. ನನ್ನ ಸ್ನೇಹಿತರಾದ ಮೇಲ್ವಿಚಾರಕರಿಗಾಗಿ ಕಸೂತಿಯ ಕೆಲಸವನ್ನು ಮಾಡಲು ಕಟ್ಟದ ಮಧ್ಯದ ಒಂದು ಕೊನೆಯ ಸೂಕ್ತ ಸ್ಥಳ ಸಿಕ್ಕಿತು. ನಮ್ಮ ಹಾಸ್ಟೆಲಿನಲ್ಲಿ ಒಂದು ಮಾರಾಟ ನಡೆಯಲಿಕ್ಕೆ ಇತ್ತು. ಅದಕ್ಕಾಗಿ ನಾನು ಪ್ಲಾಸ್ಟಿಕ ಬಾಸ್ಕೆಟುಗಳನ್ನು ಮತ್ತು ಅದೇ ತರದ ಬೇರೆ ಬೇರೆ ವಸ್ತುಗಳನ್ನು ನಾನು ಮಾಡಲು ಸಾಧ್ಯವಾಯಿತು. ನಾನು ಹೊಲಿಗೆ ಮಾಡುವುದರಲ್ಲಿ ಮತ್ತು ಹೆಣಿಗೆ ಕೆಲಸ ಮಾಡುವುದರಲ್ಲಿ ನನ್ನ ಆಸಕ್ತಿಯನ್ನು ಬೆಳೆಸಿಕೊಂಡೆ. ನನ್ನ ಜೀವಿತಕ್ಕೆ ಬೆಲೆ ಇದೆ ಎಂದು ತಿಳಿದ ನಂತರ ಅಲ್ಲಿಂದಿಚೇಗೆ ನಾನು ಗಂಭೀರವಾಗಿ ವಸ್ತ್ರ ಧರಿಸಲು ಕಲಿತೆ.
ನನ್ನ ಅಲೆದಾಡುವ ಆಲೋಚನೆಗಳು ನಿಧಾನವಾಗಿ ಕರ್ತನ ಸೆರೆ ಹಿಡಿಯಲ್ಪಟ್ಟವು. ಆದರೆ ಅದು ಒಂದು ಸತತವಾದ ಯುದ್ಧ. ಕೆಲವು ಸಾರಿ ಹುಡುಗಿಯರು ಟಿ. ವಿ. ಯಲ್ಲಿ ತುಂಬಾ ಆಸಕ್ತಿಯುಳ್ಳ ಕಾರ್ಯಕ್ರಮದ ಬಗ್ಗೆ ನನಗೆ ಹೇಳುವಾಗ ನಾನು ಸಹ ಅದನ್ನು ನೋಡುತ್ತಿದ್ದೆ. ಎಲ್ಲಾ ದೂರದರ್ಶಕಗಳಿಗೆ ತಮ್ಮ ಕಣ್ಣನ್ನು ಮುಚ್ಚಿಕೊಳ್ಳುವ ಪರಿಶುದ್ಧ ವ್ಯಕ್ತಿಯಂತೆ ಕಾಣಿಸಿಕೊಳ್ಳುವುದು ನನಗೆ ಇಷ್ಟವಿರಲಿಲ್ಲ. ಆದರೆ ಟಿ. ವಿ. ಯಲ್ಲಿ ಬರುವ ಎಲ್ಲಾ ಕಾರ್ಯಕ್ರಮಗಳು ಒಟ್ಟಿನಲ್ಲಿ ನನ್ನ ಮನಸ್ಸನ್ನು ಮಲೀನ ಮಾಡಿತು.
ನಾನು ದೇವರನ್ನು ಹುಡುಕಲು ಪ್ರಾರಂಭಿಸಿದಂದಿನಿಂದ ಬೇರೆಯವರ ಆತ್ಮೀಕ ಅವಶ್ಯಕತೆಗಳ ಬಗ್ಗೆ ಬಹಳಸೂಕ್ಷ್ಮತೆ ಉಳ್ಳವಳಾಗಿದ್ದೆ. ಒಂದು ದಿನ ಒಬ್ಬ ಸೌಮ್ಯ ಗುಣವುಳ್ಳ ಹುಡುಗಿಯು ನನ್ನ ಬಳಿಗೆ ಬಂದು ತನ್ನ ಸಮಸ್ಯೆಗಳ ಬಗ್ಗೆ ಹಂಚಿಕೊಳ್ಳಲು ಪ್ರಾರಂಭಿಸಿದಳು. ತನ್ನ ತಾಯಿಯು ಸತ್ತಿದ್ದು.ಆಕೆಯ ತಂದೆಯು ಪುನಃ ಮದುವೆಯಾಗಲು ಆಕೆಯನ್ನು ಪಡೆಯಲು ಹಾಸ್ಟೆಲಿಗೆ ಸೇರಿಸಿದ್ದರು. ತನ್ನ ಜೊತೆ ಮಗಳು ಹೊರೆಯಾಗಿದ್ದರೆ ತಾನು ಮದುವೆಯಾಗಲು ಬೇರೆ ಹೆಂಡತಿಯನ್ನು ಪಡೆಯಲು ಆಗುವುದಿಲ್ಲವೆಂದು ಅವರು ತಿಳಿದಿದ್ದರು. ತನ್ನ ತಂದೆಯಿಂದ ಆಗಿದ್ದ ಸುಟ್ಟ ಗಾಯಗಳ ಕಲೆಗಳ ಮತ್ತು ಅನೇಕ ಪೆಟ್ಟುಗಳ ಕಲೆಗಳನ್ನು ಆಕೆ ನನಗೆ ತೋರಿಸಿದಳು ಆಕೆಗೆ ತನ್ನ ಮನೆಗೆ ಎಂದೂ ಹೋಗಲು ಇಷ್ಟವಿರಲಿಲ್ಲ. ಕೆಲವು ಸಾರಿ ಆಕೆಯ ಅಜ್ಜಿಯು ನೋಡಲು ಬರುವಾಗ ಸಿಹಿತಿಂಡಿಗಳನ್ನು ತರುತ್ತಿದ್ದಳು. ಆಕೆಗಿದ್ದ ಕಹಿಭಾವನೆ ಮತ್ತು ದ್ವೇಷದಿಂದ ಅಜ್ಜಿಯೊಟ್ಟಿಗೆ ಮಾತನಾಡುತ್ತಿರಲಿಲ್ಲ. ಆಕೆಯ ದೇಹಕ್ಕಿಂತ ಆಕೆಯ ಹೃದಯವು ಬಹಳವಾಗಿ ಗಾಯಗೊಂಡಿದೆ ಎಂದು ನಾನು ತಿಳಿದುಕೊಂಡೆ. ನಾನು ಮತ್ತು ಆಕೆ ಬಹಳಷ್ಟು ಆಲೋಚನೆಗಳನ್ನು ಒಬ್ಬರಿಗೊಬ್ಬರು ಹಂಚಿಕೊಂಡೆವು ಮತ್ತು ನಾವು ಒಟ್ಟಿಗೆ ಪ್ರಾರ್ಥಿಸಲು ಪ್ರಾರಂಭಿಸಿದೆವು. ಬಹಳ ಬೇಗ ಆಕೆ ಸಹ ಕರ್ತನಾದ ಯೇಸುವನ್ನು ರಕ್ಷಕನನ್ನಾಗಿ ಅಂಗೀಕರಿಸಿದಳು. ನಾನು ರಕ್ಷಕನಿಗೆ ಒಂದು ಆತ್ಮವನ್ನು ತಂದೆನೆಂಬುದಾಗಿ ಬಹಳಷ್ಟು ರೋಮಾಂಚನಗೊಂಡೆನು. ನಮ್ಮ ಕುಟುಂಬಗಳಿಗಾಗಿ ಮತ್ತು ನಮ್ಮ ಹಾಗೆ ಹೃದಯದಲ್ಲಿ ನೊಂದಿರುವ ಇನ್ನೂ ಬೇರೆ ಕೆಲವು ಹುಡುಗಿಯರಿಗಾಗಿ ಸಹ ನಾವು ಪ್ರಾರ್ಥಿಸಲು ಪ್ರಾರಂಭಿಸಿದೆವು.
ನಮ್ಮ ಹಾಸ್ಟೆಲಿನಲ್ಲಿ ನ್ಯೂನ್ಯತೆಯುಳ್ಳ ಕೆಲವು ಮಕ್ಕಳಿದ್ದರು. ಅವರ ತಾಯಂದಿರು ಗರ್ಭಿಣಿಯರಾಗಿದ್ದಾಗ ಗರ್ಭಸ್ರಾವವಾಗುವಂತೆ ಔಷದಿಗಳನ್ನು ತೆಗೆದುಕೊಂಡು ಅದು ವಿಫಲವಾಗಿತ್ತು. ಆ ರೀತಿಯ ಒಂದು ಹುಡುಗಿಗೆ ಹಲ್ಲುಗಳಿರಲಿಲ್ಲ. ಮತ್ತೊಬ್ಬಳು ಬಹಳವಾಗಿ ನ್ಯೂನ್ಯತೆಯುಳ್ಳವಳಾಗಿದ್ದರಿಂದ ವಿಧ್ಯಾಭ್ಯಾಸದ ಕಡೆಗೆ ಮನಸ್ಸನ್ನು ಕೇಂದ್ರಿಕರಿಸಲು ಆಗುತ್ತಿರಲಿಲ್ಲ. ಆದ್ದರಿಂದ ಆಕೆಯನ್ನು ಯಾವಾಗಲೂ ಅಡುಗೆಯ ಕೆಲಸಕ್ಕೆ ಹಾಕುತ್ತಿದ್ದರು. ಈ ನ್ಯೂನ್ಯತೆಯುಳ್ಳ ಹುಡುಗಿಯರು ಇತರರಿಂದ ಗೇಲಿಗೆ ಹಾಗೂ ಪರಿಹಾಸ್ಯಕ್ಕೆ ಒಳಗಾಗಿದ್ದರು. ತಮ್ಮ ತಾಯಂದಿರ ಪಾಪದಿಂದಾಗಿ ಈ ಮಕ್ಕಳು ತಮ್ಮ ಇಡೀ ಜೀವಿತದಲ್ಲಿ ತೊಂದರೆಯನ್ನು ಅನುಭವಿಸಬೇಕಲ್ಲಾ ಎಂಬುದಾಗಿ ನಾನು ಯೋಚಿಸಿದೆ. ಈ ಮರ್ಮಕ್ಕೆ ನಾನು ಉತ್ತರವನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಆದರೆ ಅವರ ಕತ್ತಲೆಯಾದ ಜೀವಿತದಲ್ಲಿ ಸಂತೋಷವನ್ನು ತರಲು ನಾನು ಅವರ ಜೊತೆ ಸ್ನೇಹದಿಂದರಬಹುದು ಎಂಬುದಾಗಿ ನನಗೆ ಅನ್ನಿಸಿತು. ಈ ಒಂದೇ ಕಾರಣಕ್ಕಾಗಿ ದೇವರು ನನ್ನನ್ನು ಈ ಹಾಸ್ಟೆಲಿನಲ್ಲಿ ಇಟ್ಟಿದ್ದಾರೆಂಬುದಾಗಿ ನನಗೆ ಅನ್ನಿಸಿತು.
ತಮ್ಮ ತಾಯಂದಿರನ್ನು ಕಳೆದುಕೊಂಡು ತಮ್ಮ ಮಲತಾಯಂದಿರಿಂದ ಕೀಳಾಗಿ ನಡಿಸಲ್ಪಟ್ಟ ಹುಡುಗಿಯರು ಸಹ ನಮ್ಮ ಹಾಸ್ಟೆಲಿನಲ್ಲಿ ಇದ್ದರು. ಇದರ ಪರಿಣಾಮವಾಗಿ ಅವರು ಎಲ್ಲಾ ಸ್ತ್ರೀಯರನ್ನು ಹಗೆ ಮಾಡುತ್ತಿದ್ದರು ಇನ್ನೂ ಕೆಲವರು ತಮ್ಮ ಮನಶಾಸ್ತ್ರಕ್ಕೆ ಸಂಭಂದಿಸಿದ ವಿಷಯದಿಂದ ಎಲ್ಲರನ್ನು ಬಹಳ ವರಟಾಗಿ ಮಾತನಾಡುತ್ತಿದ್ದರು.
ಆಗಾಗ ಹುಡುಗಿಯರಾದ ನಾವು ನಮ್ಮ ಚಿಂತಾಕುಲದ ಸ್ಥಿತಿಗೆ ಒಳಗಾಗುತ್ತಿದ್ದೆವು. ಆದರೆ ನಮ್ಮ ಮೇಲ್ವಿಚಾರಕರು ನಮ್ಮೊಂದಿಗೆ ಬಹಳ ತಾಳ್ಮೆಯಿಂದಿರುತ್ತಿದ್ದರು. ಅವರು ನಮ್ಮೊಂದಿಗೆ ಸಮಯವನ್ನು ಕಳೆದು ನಮ್ಮ ಜೊತೆ ಮಾತನಾಡಿ ಉತ್ತೇಜನಪಡಿಸುತ್ತಿದ್ದರು. ಕರ್ತನಾದ ಯೇಸುಕ್ರಿಸ್ತನ ಕಡೆಗೆ ತಿರುಗಲು ನಮ್ಮಲ್ಲಿ ಅನೇಕರಿಗೆ ಅವರು ಸಹಾಯಿಸುತ್ತಿದ್ದರು. ಮತ್ತು ನಮ್ಮ ಕೋಪ ಸಿಡುಕು ಮತ್ತು ಕೆಟ್ಟ ಮನೋಭಾವನೆಯನ್ನುಎದುರಿಸಲು ಕೃಪೆಯನ್ನು ಕಂಡುಕೊಂಡೆವು.
ಪರಮಗೀತೆ (8,9) ಹುಡುಗಿಯರು ಗೋಡೆಗಳ ಹಾಗೆ ಇರಬೇಕು. ಆದರೆ ಬಾಗಿಲುಗಳ ಹಾಗೆ ಅಲ್ಲ ಎಂಬುದಾಗಿ ನಾನು ಒಂದು ದಿವಸ ಓದಿದೆ. ಆಕೆ ಮರ್ಯಾದಸ್ತಳು ಮತ್ತು ಪುರುಷರ ಸಂಭಂದಕ್ಕೆ ಸಲಿಗೆ ಕೊಜದೆ ಗೋಡೆಯಂತೆ ಇರಬೇಕು ಮತ್ತು ಅವರಿಗಾಗಿ ಅಗಲವಾದ ತೆರೆದಿರುವ ಬಾಗಿಲಿನ ಹಾಗೆ ಅಲ್ಲ. ನಮ್ಮದು ಹುಡುಗಿಯರ ಹಾಸ್ಟೆಲಾದುದ್ದರಿಂದ ಪುರುಷರೊಟ್ಟಿಗೆ ಸಂಬಂಧವೇ ಇರಲಿಲ್ಲ. ಕೆಲವು ಹುಡುಗಿಯರಿಗೆ ಪುರುಷರ ಬಗ್ಗೆ ಒರಟಾಗಿ ಮತ್ತು ಅಸಾಮಾನ್ಯವಾದ ಭಾವನೆ ಇತ್ತು. ಸಭೆಯಲ್ಲಿ ಅಥವಾ ಪಟ್ಟಣದಲ್ಲಿ ಪುರುಷರನ್ನು ನೋಡುವಾಗ ಅವರು ದುರ್ಬಲರಾಗುತ್ತಿದ್ದರು. ಮತ್ತು ಕಿಲಕಿಲನೇ ನಗುತ್ತಾ ಅವಿವೇಕಿಗಳ ಹಾಗೆ ನಡಕೊಳ್ಳುತ್ತಿದ್ದರು.
ಪುರುಷರೊಟ್ಟಿಗೆ ಹೇಗೆ ವರ್ತಿಸಬೇಕೆಂಬುದನ್ನು ನಾವು ಅರ್ಥಮಾಡಿಕೊಳ್ಳಲು ನಮ್ಮ ಮೇಲ್ವಿಚಾರಕರು ಸಹಾಯಿಸಿದರು. ಅವರೊಟ್ಟಿಗೆ ನಾವು ಸಾಧಾರಣವಾಗಿ ಮಾತನಾಡುವಂತೆ ಕಲಿಸಿದರು. ಒಬ್ಬ ವ್ಯಕ್ತಿಯ ಮೇಲೆ ನಾವು ನಮ್ಮ ಗಮನವನ್ನು ಕೇಂದ್ರಿಕರಿಸುವುದು ಅಪಾಯಕಾರಿ ಎಂಬುದನ್ನು ಆಕೆ ಹೇಳಿದಳು. ನಾವು ಮದುವೆ ಬಗ್ಗೆ ಯೋಚಿಸುವವರೆಗೂ ನಾವು ಕಾಯಬೇಕು ಎಂದು ಅವರು ಹೇಳಿದರು. ಪುರುಷರೊಟ್ಟಿಗೆ ಪ್ರತ್ಯೇಕವಾದ ಮತ್ತು ವೈಯಕ್ತಿಕ ವಿಷಯಗಳನ್ನು ಮಾತನಾಡುವುದು ವಿವೇಕವುಳ್ಳದೆಂಬುದಾಗಿ ಆಕೆ ನಮಗೆ ಹೇಳಿದಳು. ಗೋಡೆಯೋಪಾದಿಯಲ್ಲಿ ಇರುವುದೆಂದರೆ ಪುರುಷರೊಟ್ಟಿಗೆ ಸಾಧಾರಣವಾಗಿ ಬೆರೆಯದ ಇರುವುದೆಂದು ಅರ್ಥವಲ್ಲ. ನಾವು ಮಿತವಾಗಿ ಮತ್ತು ಗಂಭೀರವುಳ್ಳವರಾಗಿರಬೇಕೆಂಬುದೇ ಇದರ ಅರ್ಥ. ನಾವು ಪುರುಷರನ್ನು ಕಂಡಾಗ ಓಡಿ ಹೋಗದೆ ಅವರೊಟ್ಟಿಗೆ ಸಾಧಾರಣವಾಗಿ ವ್ಯವಹರಿಸುವಂತೆ ಆಕೆಯಸಲಹೆಗಳು ನಮಗೆ ಸಹಾಯಿಸಿತು.
ಆದರೆ ಕೆಲವು ಹುಡುಗಿಯರು ಹಾಸ್ಟಲ್ ನಲ್ಲಿ ತಾವು ಪಂಜರದಲ್ಲಿರುವ ಪಕ್ಷಿಗಳ ಹಾಗೆ ಎಂಬುದಾಗಿ ತಿಳುಕೊಂಡಿದ್ದರು. ನಮ್ಮ ಒಳ್ಳೆಯದಕ್ಕಾಗಿ ನಮಗೆ ಹಾಕಿರುವ ನಿಭಂದನೆಗಳನ್ನು ವಿಶ್ರಾಂತಿ ಇಲ್ಲದ ಪಕ್ಷಿಯ ಹಾಗೆ ಹಗೆಮಾಡುತ್ತಿದ್ದರು. ಅವರು ಸ್ವತಂತ್ರಕ್ಕಾಗಿ ಹಾರೈಸುತ್ತಿದ್ದರು. ಆದರೆ ಸ್ವತಂತ್ರವಾಗಿರುವುದೆಂದರೆ ಯೇಸುಕ್ರಿಸ್ತನ ಮೂಲಕ ಎಲ್ಲಾ ವಿಧವಾದ ಬಂಧನಗಳಿಂದ ಬಿಡುಗಡೆ ಹೊಂದಿ ದೇವರ ಮಗುವಾಗಿರುವುದೇ ಎಂಬುದನ್ನು ನಾನು ಕಂಡುಕೊಂಡೆ. ಹಾಸ್ಟೆಲಿನಲ್ಲಿ ಯೂ ಎಲ್ಲಾ ನಿಯಮಗಳು ನಾವು ತಿಳಿಯದ ಅಪಾಯಗಳಿಂದ ನಮ್ಮನ್ನು ಕಾಪಾಡಲು ಇಟ್ಟಿದ್ದಾರೆ.
ಸತ್ಯವೇದಲ್ಲಿರುವ ದೀನಾ ಎಂಬ ಒಬ್ಬ ಹುಡಿಗಿಯು ಮನೆಯಿಂದ ದೂರ ಹೋಗಿ ತನ್ನ ಜೀವಿತವನ್ನುಅವ್ಯವಸ್ಥೆ ಮಾಡಿಕೊಂಡು ತನ್ನ ಕುಟುಂಬದವರಿಗೆ ಆಳವಾದ ತೊಂದರೆಯನ್ನು ತಂದುದರ ಕುರಿತಾಗಿ ನಮ್ಮ ಮೇಲ್ವಿಚಾರಕರು ಒಂದು ಕಥೆಯನ್ನು ನಮಗೆ ಹೇಳಿದರು. ಆ ಕಥೆಯನ್ನು ನಾನು ಹಿಂದೆಂದೂ ಗಮನಿಸಿರಲಿಲ್ಲ. ಆದರೆ ಆಕೆ ನಮಗೆ ಅದರ ಕುರಿತಾಗಿ ಹೇಳಿದಳು. ನಾನು ಆದಿಕಾಂಡ ಅಧ್ಯಾಯ 34ರಲ್ಲಿ ಪೂರ್ಣ ಕಥೆಯನ್ನು ಓದಿದೆ. ನಂತರ ಇದು ದೇವರು ತಾನೇ ಎಲ್ಲಾ ಯೌವನಸ್ಥ ಹುಡುಗಿಯರು ಎಲ್ಲೂ ಈ ರೀತಿ ಜವಾಬ್ದಾರಿಕೆಯಿಲ್ಲದೆ ಅಲೆಯಬಾರದೆಂದು ಕೊಟ್ಟ ಬಲವಾದ ಎಚ್ಚರಿಕೆಯಾಗಿದೆ ಎಂದು ನಾನು ತಿಳಿದೆ. ದೀನಳ ನಡುವಳಿಕೆ ಅನೇಕರು ಸಾಯುವ ಹಾಗೆ ಯುದ್ಧಗಳನ್ನು ಸಹ ಪ್ರಾರಂಬಿಸಿತು. ತಂದೆ ತಾಯಿಗಳಿಗೆ ಅವಿಧೇಯರಾಗಿ ಸ್ವತಂತ್ರಕ್ಕಾಗಿ ಹಿಡುಕಿಕೊಂಡು ಹೋಗುವ ಎಲ್ಲಾ ಹುಡುಗಿಯರಿಗೆ ನಿಶ್ಚಯವಗಿ ಈಕೆ ಒಂದು ಎಚ್ಚರಿಕೆಯಾಗಿದ್ದಾಳೆ. ಹಾಸ್ಟೆಲಿನಲ್ಲಿ ಅನೇಕರು ಸಾಧಾರಣವಾದ ಉಡುಪನ್ನೆ ತೊಡುತ್ತೇವೆ. ಆದರೆ ನಮ್ಮ ಹೃದಯದಲ್ಲಿ ನಾವು ಸರಳ ಸ್ವಭಾವದವರೆಂಬುದಾಗಿ ಅರ್ಥವಲ್ಲ. ಅನೇಕರು ತಾವು ಟಿ. ವಿ. ಯಲ್ಲಿ ನೋಡಿದ ಕಲಾವಿದರಂತೆ ಬಿಗಿಯಾದ ಉಡುಪು ಮೇಕಪ್ ಮತ್ತು ತುಟಿಗಳಿಗೆ ಬಣ್ಣಗಳನ್ನು ಹಚ್ಚುವುದರ ಮೂಲಕ ಅವರನ್ನು ಅನುಸರಿಸುತ್ತಾರೆ.
ಅವರ ಮಧ್ಯದಲ್ಲಿ ನಾನು ವಿಲಕ್ಷಣತೆಯುಳ್ಳವಳಾಗಿ ಕಂಡು ಬರಲು ಇಷ್ಟವಿಲ್ಲ. ಆದರೆ ಅದೇ ಸಂಧರ್ಬದಲ್ಲಿ ಅವರಂತೆ ನಾನು ಅಲಂಕರಿಸಿಕೊಳ್ಳಲು ಇಷ್ಟವಿಲ್ಲ. ಮತ್ತು ಯೇಸುವಿನ ಶಿಷ್ಯರು ಕ್ರೈಸ್ತರ ಮಧ್ಯದಲ್ಲಿ ಸಹ ಈ ಲೋಕದಲ್ಲಿ ಹೊಂದಿಕೆಯಿಲ್ಲದವರಾಗಿರುವುದನ್ನು ನಾನು ಸ್ಪಷ್ಟವಾಗಿ ಕಂಡೆ. ಯಾವ ತರದ ಉಡುಪನ್ನು ನಾನು ಆರಿಸಿಕೊಳ್ಳಬೇಕೆಂಬುದನ್ನು ತೀರ್ಮಾನಿಸಲು ನನಗೆ ಅಷ್ಟು ಸುಲಭವಾಗಿರಲಿಲ್ಲ. ಆದರೆ ನಾನು ಉಡುವಂತ ಉಡುಪು ಪುರುಷರು ನನ್ನನ್ನೆ ದೃಷ್ಟಿಸಿ ನೋಡುವ ಉಡುಪಾಗಿರಬಾರದೆಂಬುದಾಗಿ ನನಗಾಗಿಯೇ ನಾನು ಒಂದು ನಿಯಮವನ್ನು ಮಾಡಿಕೊಂಡೆ. ನಾವು ಗುಂಪಾಗಿ ಹೊರಗಡೆ ಹೋದಾಗ ಅನೇಕ ಹುಡುಗರು ನಮ್ಮನ್ನೆ ಕಾಮಾಸಕ್ತಿಯಿಂದ ನೋಡುವುದನ್ನು ನಾನು ಕಂಡೆ. ನಾನು ಅವರ ಮಧ್ಯ ವಿಲಕ್ಷಣತೆಯುಳ್ಳವಳಾಗಿ ಕಂಡು ಬಾರದೆ ಉಡುಪು ಧರಿಸುವಿಕೆಯಲ್ಲಿಯೂ ಕರ್ತನಿಗಾಗಿ ಸಾಕ್ಷಿಯಾಗಿರಲು ಆಶೆಯುಂಟು.
ಅಧಿಕಾರಿಗಳಿಗೆ ಅಧೀನರಾಗಿರುವಂತದ್ದು ನಮ್ಮ ಹಾಸ್ಟೆಲಿನಲ್ಲಿ ಯಾರಗೂ ಸಂತೋಷಕರವಾಗಿರಲಿಲ್ಲ. ಕೆಲವು ಹುಡುಗಿಯರು ತಿರುಗಿ ಬಿದ್ದು ಅನೇಕ ಗುಟ್ಟಾದ ಸಂಗತಿಗಳನ್ನು ಮಾಡುವ ಮಟ್ಟಿಗೂಹೋದರು. ಅವರಲ್ಲಿ ಕೆಲವರು ಸಿಕ್ಕಿಕೊಂಡು ಅನೇಕ ಕಷ್ಟಗಳಿಗೆ ಒಳಗಾದರು.
ಒಬ್ಬ ಹುಡುಗಿಯು ತನ್ನ ಪ್ರೇಮಿಯ (ನಲ್ಲನ) ಬಗ್ಗೆ ಯಾವಾಗಲೂ ಕೊಚ್ಚಿಕೊಳ್ಳುತ್ತಾ ತಾನು ಧರಿಸುತ್ತಿದ್ದ ಉಡುಪುಗಳಲ್ಲಿ ನವೀಮತೆಯಿಂದ ಅಲಂಕರಿಸಿಕೊಳ್ಳುತ್ತಿದ್ದಳು. ಒಂದು ದಿನ ಆಕೆ ಅಸ್ವಸ್ಥಳಾಗಿ ಕಾಣುವುದನ್ನು ನಮ್ಮ ಮೇಲ್ವಿಚಾರಕರು ಗಮನಿಸಿ ಅವಳನ್ನು ವೈದ್ಯರ ಬಳಿಗೆ ಕಳುಹಿಸಿದರು. ಆಗ ಆಕೆ ಗರ್ಭೀಣಿಯಾಗಿರುವುದು ತಿಳಿದು ಬಂದಿತು. ತಕ್ಷಣವೇ ಆಕೆ ಹಾಸ್ಟೆಲನ್ನು ಬಿಡುವಂತೆ ಹೇಳಿದರು ಮತ್ತು ಆಕೆ ಮನೆಗೆ ಅವಮಾನದಿಂದ ಹೋಗಬೇಕಾಯಿತು. ಮುಖ್ಯವಾಗಿ ಆಕೆ ಯಾವಾಗಲೂ ಪುರುಷರ ಮುಂದೆ ತನ್ನನ್ನೆ ಪ್ರಧಾನವಾಗಿ ಮಾಡಿಕೊಳ್ಳುವುದನ್ನು ನೋಡುವಾಗ ಯಾವುದೋ ರೀತಿಯ ಕೇಡು ಸಂಭವಿಸಬಹುದಾದ ಅನ್ನಿಸುತ್ತಿತ್ತು.
ಸುರಕ್ಷಿತವಾದ ನಾನು ಕಂಡು ಕೊಂಡ ಮಾರ್ಗವೆಂದರೆ,ಯಾವುದೇ ಪುರುಷರೊಟ್ಟಿಗೆ ಪ್ರತ್ಯೇಕವಾಗಿಇರುವುದನ್ನು ತಪ್ಪಿಸಿಕೊಳ್ಳುವುದು ತಪ್ಪಿಸಿಕೊಳ್ಳುವುದು. ಅವರು ನನ್ನ ಸ್ವಂತ ನೆಂಟರಾಗಿದ್ದರೂ ಸಹ ದುರಾಚಾರಕ್ಕೆ ಹಾದಿಯು ಆಕಸ್ಮಿಕ ಮತ್ತು ಮತ್ತು ಕಡಿದಾದದ್ದು. ಅದನ್ನು ನಿಲ್ಲಿಸಲು ಒಬ್ಬನು ಯೋಚಿಸುವುದಕ್ಕೆ ಮುಂಚೆಯೇ ಅದರಲ್ಲಿ ಬೀಳಲು ಸಾಧ್ಯ.
ತಮ್ಮ ಸೌಂದರ್ಯ ಬಗ್ಗೆ ಮತ್ತು ತಮ್ಮ ತೆಳ್ಳನೆಯ ಮೈಕಟ್ಟಿನ ಬಗ್ಗೆ ಗರ್ವಪಟ್ಟು ತಾವು ಟಿ.ವಿ. ಯಲ್ಲಿ ಕಂಡ ಚಲನ ಚಿತ್ರದ ನಟಿಯ ಹಾಗೆ ನಡೆದಾಡುತ್ತಿದ್ದ ಹುಡುಗಿಯರೇ ಹೆಚ್ಚು ತೊಂದರೆಗಳಿಗೆ ಒಳಪಟ್ಟಂತವರು. ನಾವು ಬಸ್ಸಿನಲ್ಲಿ ನಗರಕ್ಕೆ ಹೋಗುವಾಗ ಈ ಹುಡುಗಿಯರಿಗೆ ಹುಡುಗರು ಅಲ್ಲಿ ಇಲ್ಲಿ ಚಿವುಟುತ್ತಿದ್ದರು. ತಾವು ಧರಿಸುವ ಉಡುಪು ಮತ್ತು ತಮ್ಮ ನಡತೆಗಳಿಂದ ತೊಂದರೆಗಳನ್ನು ತಾವೇ ಆಹ್ವಾನಿಸಿಕೊಂಡಿದ್ದಾರೆಂದು ನನಗೆ ಅನ್ನಿಸುತ್ತಿತ್ತು.
ನಾನು ರಸ್ತೆಯಲ್ಲಿ ಗುಂಪಿನ ಮಧ್ಯೆ ಅಥವಾ ಬಸ್ಸಿನಲ್ಲಿರುವಾಗ ಇಂತಹ ಪುರುಷರಿಂದ ತಪ್ಪಿಸಿಕೊಳ್ಳಲು ನಾನು ಯಾವಾಗಲೂ ನನ್ನ ಶರೀರದ ಮುಂಭಾಗವನ್ನು ನನ್ನ ವ್ಯಾನಿಟಿ ಬ್ಯಾಗಿನಿಂದ ಮರೆಮಾಡಿಕೊಳ್ಳುವ ಮಾರ್ಗವನ್ನು ಕಂಡುಕೊಂಡಿದ್ದೆ.ಇಂತಹ ಚೇಷ್ಟೆಯ ಯೌವನಸ್ಥರ ಮಧ್ಯದಲ್ಲಿ ಯಾವಾಗಲೂ ದೂರವಿರಲು ನನ್ನ ಕೈಯಲ್ಲಿ ಆದಷ್ಟು ಮಟ್ಟಿಗೆ ಪ್ರಯತ್ನಿಸುತ್ತಿದ್ದೆ.
ನಗರದಿಂದ ಒಬ್ಬ ಹುಡುಗನು ಒಬ್ಬ ಹುಡುಗಿಯನ್ನು ಯಾವಾಗಲೂ ಹಿಂಬಾಲಿಸುವ ಸಂದರ್ಭಗಳು ಸಹ ಇತ್ತು. ಮತ್ತು ಆಕೆಯನ್ನು ಪ್ರೀತಿಸುತ್ತೇನೆಂಬುದಾಗಿ ಹೇಳುವಷ್ಟು ಧೈರ್ಯಯುಳ್ಳವನಾಗಿದ್ದನು. ಇಂತಹ ಸಂದರ್ಭದಲ್ಲಿ ನಾವು ಏನು ಮಾಡಬೇಕೆಂಬುದಾಗಿ ನಮ್ಮ ಮೇಲ್ವಿಚಾರಕರನ್ನು ಕೇಳಿದೆವು. ಇಂತಹ ವಿಚಿತ್ರ ಹಗಲುಗನಸಿನವರನ್ನು ನಮ್ಮ ಕಠಿಣ ಪದಗಳಿಂದ ಕೋಪೋದ್ರೆಕಗೊಳಿಸಬಾರದು. ಯಾಕೆಂದರೆ ನಾವು ಒರಟಾದ ರೀತಿಯಲ್ಲಿ ವರ್ತಿಸಿದರೆ ಅವರಲ್ಲಿ ಕೆಲವರು ನಮ್ಮನ್ನು ತೊಂದರೆ ಪಡಿಸಬಹುದು. ಪ್ರಣಯವನ್ನು ನಿರಾಕರಿಸಿದ್ದರಿಂದ ಒಬ್ಬ ಹುಡುಗಿಯ ಮುಖಕ್ಕೆ ಆ ಯೌವನಸ್ಥನು ಉಗ್ರವಾದ ಆಮ್ಲವನ್ನು (acid) ಚೆಲ್ಲಿದನು. ಅದೇ ಸಂದರ್ಭದಲ್ಲಿ ಆಕೆಯು ಯಾವ ಪುರುಷರನ್ನು ಸಹ ಉತ್ತೇಜನಪಡಿಸಬಾರದೆಂದು ನಮಗೆ ಹೇಳಿದರು. ಇಂತಹ ಯೌವನಸ್ಥರೊಟ್ಟಿಗೆ ವ್ಯವಹರಿಸುವಾಗ ನಾವು ಜ್ಞಾನವುಳ್ಳವರಾಗಿರುವುದು ಅವಶ್ಯ. ಅವರು ಹೇಳುವ ಪ್ರತಿಮಾತಿಗೂ ಉತ್ತರಿಸದೆ ಅವರನ್ನು ಅಲಕ್ಷ ಮಾಡುವುದೇ ಉತ್ತಮವಾದದ್ದು.
ನಮ್ಮಲ್ಲಿ ಅನೇಕರು ಸೈತಾನನು ಹಾಕಿರುವ ಮರೆಯಾದ ಬಲೆಗೆ ಅರಿಯದೆ ಬೀಳುವ ಪಕ್ಷಿಗಳ ಹಾಗೆ ಇದ್ದೇವೆ ಎಂದು ಆಕೆ ಹೇಳಿದರು. ನಾವು ನಮ್ಮ ಹರೆಯ ಇಪ್ಪತ್ತು ವಯಸ್ಸುಗಳಲ್ಲಿ ಬಹಳ ದುರ್ಬಲ ಸ್ಥಾನದಲ್ಲಿರುತ್ತೇವೆ. ಒಂದು ವೇಳೆ ಒಬ್ಬ ಹುಡುಗ ನಮ್ಮನ್ನು ತನ್ನ ಪ್ರೀತಿ ಮತ್ತು ಮಮತೆಯ ಪದಗಳಿಂದ ಎದುರುಗೊಂಡರೆ ಅಥವಾ ಪದಗಳನ್ನು ಗಂಭೀರವಾಗಿ ತೆಗೆದುಕೊಳ್ಳದೆ ಅಥವಾ ನಕ್ಷತ್ರ ಮಯಿಗಳಾಗಿರದೆ ಅಥವಾ ಆ ವ್ಯಕ್ತಿಯ ಬಗ್ಗೆ ಹಗಲು ಕನಸು ಕಾಣುತ್ತಾ ಆಕಾಶದಲ್ಲಿ ಗೂಡನ್ನು ಕಟ್ಟಬಾರದೆಂದು ಆಕೆ ಹೇಳಿದರು.
ತನ್ನನ್ನು ಮದುವೆಯಾಗದಿದ್ದರೆ ತಾನು ಸಾಯುವುದಾಗಿ ಹೆದರಿಸುವ ಯುವಕನ ವಿಷಯದಲ್ಲಿ ಎಚ್ಚರಿಕೆಯಾಗಿರಬೇಕೆಂದು ಆಕೆ ನಮ್ಮನ್ನು ಎಚ್ಚರಿಸಿದರು. ಈ ಮಾತುಗಳನ್ನು ಹೇಳಿದ್ದು. ವೇಗವಾಗಿ ಮದುವೆಯಾಗಲು ಇದ್ದ ಇಪ್ಪತ್ತರ ವಯಸ್ಸಿನ ಹುಡುಗಿಯನ್ನು ಪ್ರಭಾವಿಸುವುದಕ್ಕಾಗಿ ಆಕೆ ಮಾಡಿದ ಕುತಂತ್ರವಾಗಿತ್ತು. ಒಬ್ಬ ಬುದ್ದಿವಂತ ಹುಡುಗಿ ಅಂತಹ ಹೆದರಿಕೆಗಳಿಗೆ ಮನಕರಗಲು ತಿರಸ್ಕರಿಸುತ್ತಾಳೆ.
ಅಂತಹ ಹೆದರಿಕೆಗಳಿಗೆ ಒಳಗಾಗುವವರು ಆ ಹುಡುಗನಿಗೆ ಸಾಧು ಗುಲಾಮರಾಗಿ ಕೊನೆಗೊಳ್ಳುತ್ತಾರೆ, ಹೊರತು ಹೆಂಡತಿಯಾಗಲ್ಲ. ಇಂತಹ ಮದುವೆಗಳು ಆ ಹುಡುಗನು ಇನ್ನೊಂದು ಹುಡುಗಿಯನ್ನು ಕಂಡುಕೊಂಡ ನಂತರ ವಿವಾಹ ವಿಚ್ಛೇದನದಿಂದ ಕೊನೆಗೊಳ್ಳುತ್ತದೆ. ಇಂತಹ ಹೆದರಿಕೆಗಳು ಸಾಮಾನ್ಯವಾಗಿ ಅವಿದ್ಯಾವಂತರಿಂದ ಕೆಲಸವಿಲ್ಲದವರಿಂದ ಮತ್ತು ತಮ್ಮ ಕುಟುಂಬಗಳಿಗೆ ಬೆಂಬಲಿಸುವ ಆಗದ ಇರುವಂತ ಹುಡುಗರಿಂದ ಆಗುತ್ತದೆ.
ಇಂತಹ ಬಲೆಗಳಿಗೆ ಬೀಳದಂತೆ ನಮ್ಮನ್ನು ಕಾಪಾಡು ಎಂದು ದೇವರನ್ನು ಕೇಳಿಕೊಳ್ಳುವುದೇ ಉತ್ತಮ ಮಾರ್ಗವೆಂದು ಆಕೆ ಹೇಳಿದಳು. ದೇವರು ನಮ್ಮನ್ನು ಬೇಟೆಗಾರನ ಬಲೆಯಿಂದ ತಪ್ಪಿಸುವನೆಂದು
ನಾವು ದೇವರನ್ನು ಗೌರವಿಸಿದರೆ ಆತನು ಯಾವಾಗಲೂ ನಮ್ಮನ್ನು ದೃಷ್ಟಿಸುವವನಾಗಿ ನಮಗೆ ಉತ್ತಮವಾದ ಜೀವನ ಸಂಗಾತಿಯನ್ನು ತಕ್ಕ ಸಮಯದಲ್ಲಿ ಅನುಗ್ಗಹಿಸಲು ವಾಗ್ದಾನಕೊಟ್ಟಿದ್ದಾನೆ. ಹುಡುಗರ ಬಗ್ಗೆ ನಾವು ಗೌರವ ಮತ್ತು ಹತೋಟಿಯಲ್ಲಿರುವ ಮನೋಭಾವನೆಯನ್ನು ಹೊಂದಿದ್ದರೆ, ಅವರು ನಮ್ಮನ್ನು ಗೌರವಿಸುತ್ತಾರೆ ಎಂದು ಆಕೆ ನಮಗೆ ಹೇಳಿದಳು. ಆದರೂ ಸಹ ಇಂತಹ ಸಂಗತಿಗಳಲ್ಲಿ ನಾವು ಎಚ್ಚರಿಕೆಯಾಗಿದ್ದು ಅವರ ಜೊತೆ ಬಹಳ ಹತ್ತಿರವಾಗಿರದೆ ಸ್ವಲ್ಪ ದೂರವೆ ಇಡಬೇಕು. ಇಲ್ಲವಾದರೆ ನಾವು ಪಾಪದಲ್ಲಿ ಬೀಳಬಹುದು. ಅಥವಾ ನಮ್ಮ ಬಲಹೀನತೆಯ ಸಂದರ್ಭದಲ್ಲಿ ಅವರನ್ನು ಮದುವೆಯಾಗುವೆ ಎಂಬ ಒಪ್ಪಂದಕ್ಕೆ ಒಳಗಾಗುತ್ತೇವೆ. ನಮಗೆ ಇಪ್ಪತ್ತು ವರ್ಷ ವಯಸ್ಸು ಆಗುವವರೆಗೂ ಯಾವದೇ ಹುಡುಗನನ್ನು ಮುಂದೆ ಒಂದು ದಿನ ಮದುವೆಯಾಗುವವನೆಂಬುದಾಗಿ ನೆನೆಸಬಾರದು. ಇಪ್ಪತ್ತು ವರ್ಷ ವಯಸ್ಸು ಆದರೆ ಆಗ ನಾವು ಆತ್ಮೀಕವಾಗಿಯೂ ಮತ್ತು ಉದ್ರೇಕಪರ ವಿಷಯಗಳನ್ನು ಸ್ವಲ್ಪ ಬೆಳೆದವರಾಗಿರುತ್ತೇವೆ. ಜ್ಞಾನವಂತರಾಗಿ ಮತ್ತು ಶಾಂತ ರೀತಿಯಲ್ಲಿ ವಿಷಯಗಳನ್ನು ಯೋಚಿಸುತ್ತೇವೆ ಎಂದು ಆಕೆಹೇಳಿದಳು
.ನನ್ನ ಯೌವನದ ದಿವಸಗಳಲ್ಲಿ ನಾನು ಯಾವುದೆ ಮುರ್ಖ ಸಂಗತಿಗಳನ್ನು ಮಾಡದಂತೆ ಈ ಒಳ್ಳೆ ಸಲಹೆಗಳು ನನ್ನನ್ನು ಕಾಪಾಡಿತು. ಆದರಿಂದ ನಾನು ತುಂಬಾ ಕೃತಜ್ಞಳಾಗಿದ್ದೇನೆ
.ನಮ್ಮೆಲ್ಲರಿಗೂ ಹಾಸ್ಟೆಲಿನಲ್ಲಿ ಅನೇಕ ಕೆಲಸಗಳು ಇದ್ದವು. ಅವುಗಳನ್ನು ನಾವು ಸರದಿಯ ಪ್ರಕಾರಮಾಡಬೇಕಾಗಿತ್ತು. ತೋಟಗಾರಿಕೆ, ಅಡುಗೆಯ ಮನೆಯಲ್ಲಿ ಸಹಾಯಿಸುವುದು ಬಟ್ಟೆ ಒಗೆಯುವುದು ಮತ್ತು ನಮ್ಮ ಪರಿಸರವನ್ನು ಶುದ್ಧವಾಗಿಡುವುದು.
ನನಗೆ ಸಿಗುತ್ತಿದ್ದ ಆಹಾರದ ಕುರಿತು ನಾನು ಗೊಣಗುತ್ತಿದ್ದೆ. ಯಾವುದೇ ವಿಷಯದ ಕುರಿತು ಗೊಣಗುವುದು ಒಬ್ಬ ಕ್ರೈಸ್ತಳಿಗೆ ತಪ್ಪು ಎಂಬುದು ಒಂದು ದಿನ ನನಗೆ ಪ್ರಕಟನೆಯಾಗಿ ಮೂಡಿ ಬಂದಿತು. ನಾನು ನರಕಕ್ಕೆ ಪಾತ್ರಳೆಂಬುದಾಗಿ ಗ್ರಹಿಸಿದೆ. ನಾನು ಹೊಂದಿರುವ ಪ್ರತಿಯೊಂದು ಸಹ ನರಕಕ್ಕಿಂತ ಉತ್ತಮವಾದದ್ದು. ಅದು ದೇವರ ಕೃಪೆಯ ಪಲಿತಾಂಶವಾಗಿದೆ. ನನ್ನ ಮುಂದೆ ಇಟ್ಟಿರುವ ಯಾವುದನ್ನಾಗಲಿ ತಿನ್ನಲು ಸಿದ್ಧಳಿರಬೇಕೆಂಬುದನ್ನು ನಾನು ಗ್ರಹಿಸಿದೆ. ಆಹಾರವಂತಹ ವಿಷಯಗಳಲ್ಲೂ ಸಹ ದೇವರು ನನ್ನನ್ನು ಪರೀಕ್ಷಿಸುತ್ತಿದ್ದರು. ಯೇಸು ಕ್ರಿಸ್ತನು 40 ದಿವಸಗಳು ಯಾವ ರೀತಿ ಉಪವಾಸವಾಗಿದ್ದು ಆನಂತರ ಸೈತಾನನನ್ನು ಸೋಲಿಸಿದನು ಎಂಬದಾಗಿ ಸುವಾರ್ತೆಗಳಲ್ಲಿ ನಾನು ಓದಿದೆ.
ಕದಿಯುವುದು ನಮ್ಮ ಹಾಸ್ಟೆಲಿನಲ್ಲಿ ಬಹು ಸಾಮಾನ್ಯವಾದ ಅಭ್ಯಾಸವಾಗಿತ್ತು. ನನ್ನ ತಾಯಿಯು ಆಫೀಸಿನಿಂದ ಸಣ್ಣ ಸಣ್ಣ ವಸ್ತುಗಳನ್ನು ಕದ್ದು ತರುತ್ತಿದ್ದದ್ದು ನಾನು ಯೋಚಿಸಿದೆ. ಅದೇನು ಗಂಭೀರವಾದದ್ದಲ್ಲ. ಯಾಕಂದರೆ ಆಕೆ ಯಾವ ವೈಯಕ್ತಿಕ ವ್ಯಕ್ತಿಯಿಂದ ಕದಿಯದೇ ಸರ್ಕಾರಿ ಕಛೇರಿಯಿಂದ ತರುತ್ತಿದ್ದಾಳೆಂದು ನೆನಸಿದೆ. ಎಲ್ಲಾ ಕದಿಯುವಿಕೆಯು ತಪ್ಪು ಎಂಬುದಾಗಿ ಈಗ ನನಗೆ ಗೊತ್ತಾಯಿತು. ಕದಿಯುವುದು ದೇವರ ದೃಷ್ಟಿಯಲ್ಲಿ ಮೆಚ್ಚಿಕೆಯಿಲ್ಲದ್ದು ಎಂಬುದಾಗಿ ಹೇಳಲು ನನ್ನ ತಾಯಿಯು ಆ ಅಭ್ಯಾಸವನ್ನು ಬಿಟ್ಟು ಕೊಡುವರೋ ಗೊತ್ತಿಲ್ಲ. ಯಾಕಂದರೆ ಒಂದು ಸಾರಿ ಆ ಕೆಟ್ಟ ಅಭ್ಯಾಸವು ಅವರನ್ನು ಹಿಡಿದಿರುವಾಗ ವಯಸ್ಸಾದ ಮೇಲೆ ಅದರಿಂದ ಬಿಡುಗಡೆ ಹೊಂದುವುದು ಬಹಳ ಕಷ್ಟ ಎಂಬುದನ್ನು ನಾನು ಕಂಡಿದ್ದೇನೆ.
ಇವೆಲ್ಲವೂ ನನ್ನಲ್ಲಿ ಒಂದು ಆರೋಗ್ಯಕರ ಭಯವನ್ನು ತಂದಿತು. ಆದ್ದರಿಂದ ಅವರ ಹಾಗೆ ಅಂತ್ಯಗೊಳ್ಳುವ ಬದಲು ಯೌವನದಲ್ಲಿ ನನ್ನ ಕೆಟ್ಟ ಅಭ್ಯಾಸಗಳಿಂದ ದೂರವಿರಲು ತೀರ್ಮಾನಿಸಿದೆ.
ಕೆಲವು ಹುಡುಗಿಯರು ಆಹಾರ ವಿಷಯದಲ್ಲೂ ಮತ್ತು ಇತರರೊಂದಿಗೆ ಹಂಚಿಕೊಳ್ಳಬೇಕಾದ ವಸ್ತುಗಳಲ್ಲಿ ಬಹಳ ಸ್ವಾರ್ಥರು ಮತ್ತು ದುರಾಶೆಯುಳ್ಳವರಾಗಿದ್ದರು. ಇದು ನಮ್ಮೆಲ್ಲರಿಗೂ ಸಮಸ್ಯೆಯನ್ನುಉಂಟುಮಾಡಿತು.
ಕೆಲವು ಹುಡುಗಿಯರು ಮಂಕು ಕವಿದವರ ಹಾಗೆ ತಮ್ಮ ವಿಷಯದಲ್ಲಷ್ಟೆ ಮಗ್ನರಾಗಿರುತ್ತಾರೆ. ಅವರು ಸ್ವಾನುಕಂಪದಿಂದ ತುಂಬಿದವರು ಮತ್ತು ದುಃಖಕರ ಕಥೆಗಳನ್ನು ಹೇಳುವುದು ಎಂದಿಗೂ ನಿಲ್ಲಿಸುವುದಿಲ್ಲ. ಅವರಲ್ಲಿ ಅನೇಕರು ತಮ್ಮ ಮನೆಗಳಲ್ಲಿ ಹೀನೈಸಲ್ಪಟ್ಟಿರುವುದು ಸತ್ಯ ಸಂಗತಿ. ಆದರೆ ತಮ್ಮ ಹಿಂದಿನ ಸಂಗತಿಗಳನ್ನೆ ಸತತವಾಗಿ ಯೋಚಿಸುತ್ತಾ ಜೀವಿಸುವುದು ಅವಶ್ಯವಲ್ಲವೆಂದು ನಾನು ಅವರಿಗೆ ಹೇಳಿದೆ. ಅವರಿಗೆ ಹಿಂದಿನ ಸಂಗತಿಗಳನ್ನು ಜಾಡಿಸಬಿಡಬೇಕೆಂದರೆ ದೇವರ ಸಹಾಯದಿಂದ ಜಾಡಿಸಬಹುದು ಮತ್ತು ಹಿಂದಿನ ಸಂಗತಿಗಳನ್ನು ಮರೆತು ತಮಗೆ ತಪ್ಪು ಮಾಡಿದವರನ್ನು ಕ್ಷಮಿಸಿ ಉನ್ನತವಾದ ಆತ್ಮೀಕತೆಯನ್ನು ಮುಟ್ಟಲು ಯೇಸುವು ಸಹಾಯಿಸುವನೆಂಬುದಾಗಿ ಹೇಳಿದೆ. ಇತರರಿಗೆ ಸಹಾಯಿಸುವುದರ ಮೂಲಕ ತಮ್ಮಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವಂತೆ ಅವರನ್ನು ಉತ್ತೇಜಿಸಿದೆ. ತಮ್ಮ ಬಗ್ಗೆಯೇ ಯಾವಾಗಲೂ ಮಗ್ನರಾಗಿರುವುದರಿಂದ ಇದು ಬಿಡುಗಡೆ ಕೊಡುತ್ತದೆ.
ಮನೆಯಿಂದ ಪತ್ರವನ್ನು ಎದುರು ನೋಡುವಾಗ ಪತ್ರ ಬರದಿದ್ದರೆ ನಾನು ಎದೆಗುಂದುತ್ತಿದ್ದೆ. ಕೆಲವು ಸಾರಿಮನೆಯಿಂದ ಬಂದ ಪತ್ರ ಇನ್ನೂ ಹೆಚ್ಚಾಗಿ ಮನಗುಂದಿಸುತ್ತಿತ್ತು. ಯಾಕಂದರೆ ಮನೆಯಿಂದ ಬಂದ ವಿಷಯಗಳು ಅಹಿತವಾಗಿರುತ್ತಿತ್ತು.
ಇನ್ನು ಮನಗುಂದುತ್ತಿದ್ದ ಬೇರೆ ಸಂಗತಿ ಎಂದರೆ ನಾನು ಸಣ್ಣ ವಸ್ತುವನ್ನು ಕಳೆದುಕೊಂಡರೂ ಸಹಅಧೈರ್ಯಗೊಳ್ಳುತ್ತಿದ್ದೆ. ಇದರಿಂದ ಯಾವ ರೀತಿ ಬಿಡುಗಡೆ ಹೊಂದುವುದು ನನಗೆ ತಿಳಿದಿರಲಿಲ್ಲ. ವಸ್ತುಗಳಿಗೆ ಅಂಟಿಕೊಂಡಿರುವುದರಿಂದ ನನ್ನನ್ನು ಬಿಡಿಸು ಎಂಬುದಾಗಿ ಕರ್ತನನ್ನು ನಾನು ಕೇಳಿಕೊಂಡೆ.
ಇನ್ನೊಂದು ಕಡೆ ಕೆಲವು ಹುಡುಗಿಯರು ತುಂಬಾ ಸೌಕರ್ಯವುಳ್ಳವರು ತಮ್ಮ ವಸ್ತುಗಳಿಗಾಗಲಿ ಅಥವಾ ಇತರರ ಅನಿಸಿಕೆಗಳಿಗಾಗಲಿ ಚಿಂತಿಸುತ್ತಿರಲಿಲ್ಲ.
ಹಾಸ್ಟೆಲಿನಲ್ಲಿ ಏರ್ಪಡಿಸಿದ ಯಾವುದೆ ಆಟಗಳಿಗಾಗಲಿ ನಾನು ಭಾಗವಹಿಸುತ್ತಿದ್ದೆ. ಇದು ನನಗೆ ಒಳ್ಳೆದೆಂಬುದಾಗಿ ನಾನು ತಿಳಿದೆ. ಕೆಲವು ಹುಡುಗಿಯರು ಯಾವುದೇ ದೈಹೀಕ ಚಟುವಟಿಕೆಗಳನ್ನು ಇಷ್ಟಪಡುತ್ತಿರಲಿಲ್ಲ ಮತ್ತು ಸಂಜೆ ವಿಹಾರಕ್ಕಾಗಿ ಸಹ ಹೋಗದೆ ದುಂಡು ದುಂಡಾಗಿ ಬೆಳೆದು ಆಗಾಗ ಕಾಯಿಲೆ ಬೀಳುತ್ತಿದ್ದರು. ನಮ್ಮ ದೇಹವು ಪವುತ್ರಾತ್ಮನ ಗರ್ಭ ಗುಡಿಯಾಗಿರುವುದರಿಂದ ಆತನ ಉಪಯೋಗಕ್ಕಾಗಿ ಎಲ್ಲಾ ಸಮಯಗಳಲ್ಲಿ ನಾವು ಪ್ರಯೋಜನಕಾರಿಯಾಗಿರುವಂತೆ ನೋಡಿಕೊಳ್ಳಬೇಕೆಂಬುದನ್ನು ನಾನು ಗ್ರಹಿಸಿದೆ. ನನ್ನ ಕೆಲವು ಸ್ನೇಹಿತರಿಗಿದ್ದ ಕೆಲವು ತಿನ್ನುವ ಅಭ್ಯಾಸಗಳು ದೇಹಕ್ಕೆ ಹಾನಿಕರವೆಂಬುದನ್ನು ನಾನು ಕಂಡೆ. ಹೆಚ್ಚಾಗಿ ತಿನ್ನುವುದರ ಮೂಲಕ ಕೆಲವು ಹುಡುಗಿಯರನ್ನು ದಪ್ಪ, ಸೋಮಾರಿ ಮತ್ತು ಕೂರೂಪಿಯನ್ನಾಗಿ ಮಾಡಿತು.
ಜನಪ್ರಿಯವಾದ ಹುಡುಗಿಯರ ಸಹವಾಸವನ್ನು ಬಯಸಿ ಅವರನ್ನು ನನ್ನ ಉತ್ತಮ ಸ್ನೇಹಿತರನ್ನಾಗಿ ಮಾಡಿಕೊಳ್ಳಲು ನನಗೆ ಆಸೆ ಇರುವುದನ್ನು ನಾನು ಕಂಡೆ. ಆದರೆ ಯೇಸುವೇ ಇಂತಹ ಸಂದರ್ಭದಲ್ಲಿ ಏನು ಮಾಡಿರಬಹುದು ಎಂಬುದನ್ನು ಯೋಚಿಸುವಾಗ, ನಾನು ದುಃಖದಲ್ಲಿರುವ ಒಂಟಿಗರನ್ನು ಬುದ್ದಿವಂತರಲ್ಲದ ಮತ್ತು ಸಾಮರ್ಥ ಇಲ್ಲದವರ ಸಹವಾಸವನ್ನು ಮಾಡಬೇಕೆಂಬುದನ್ನು ನಾನು ಕಂಡೆ. ಕಷ್ಟಪಟ್ಟು ಹೊರೆಹೊತ್ತವರನ್ನು ತನ್ನ ಕಡೆಗೆ ಕರೆದು ಅವರ ಆತ್ಮಗಳಿಗೆ ವಿಶ್ರಾಂತಿಯನ್ನು ಕೊಡುವ ಕರ್ತನ ಬಗ್ಗೆ ತಿಳಿಸಲು ನಾನು ಕಾತುರಪಟ್ಟೆ.
ನಾನು ಸುಂದರವಾಗಿ ಅಥವಾ ಬೆಳ್ಳಗಿಲ್ಲದಿದ್ದರೂ ಬಹು ಬೇಗ ದೇವರು ನನ್ನನ್ನು ಸೃಷ್ಟಿಸಿದಂತೆ ಸ್ವೀಕರಿಸಿಕೊಳ್ಳಲು ಕಲಿತೆ. ನನ್ನ ತಾಯಿಯು ಗರ್ಭದಲ್ಲಿ ನನ್ನನ್ನು ಸೃಷ್ಟಿಸುವುದರಲ್ಲಿ ದೇವರು ತಪ್ಪು ಮಾಡಿಲ್ಲವೆಂಬುದನ್ನು ನಾನು ತಿಳಿದಿದ್ದೆ. ನಾನು ಹುಟ್ಟಿದ ಕುಟುಂಬದಲ್ಲಿ ಹುಟ್ಟುವಂತೆ ಮಾಡುವುದರಲ್ಲಿ ಆತನು ತಪ್ಪು ಮಾಡಿಲ್ಲವೆಂಬುದರಲ್ಲಿ ನನಗೆ ಖಚಿತವಿದೆ. ನನಗೋಸ್ಕರ ಸಾಯುವುದು ವ್ಯರ್ಥವಲ್ಲವೆಬುದಾಗಿ ನೆನಸಿ ಯೇಸುವು ನನ್ನನ್ನು ಪ್ರೀತಿಸಿ ಪ್ರಾಣ ಕೊಟ್ಟ ವಿಷಯವನ್ನು ಯೋಚಿಸುವಾಗ ನನ್ನ ಮನ ಮೋಹಕಗೊಳ್ಳುತ್ತದೆ. ಈ ಸತ್ಯದಿಂದ ನಾನು ಎಂದಿಗೂ ದೂರ ಹೋಗಲಾರೆ.
ಹಾಸ್ಟೆಲಿನಲ್ಲಿರುವ ನನಗಿಂತ ಅನದೃಷ್ಟರಾದ ಹುಡುಗಿಯರ ಬಗ್ಗೆ ನಾನು ನೆನಸಿದೆ. ಅಫಘಾತದಲ್ಲಿ ಒಂದು ಕಣ್ಣು ಕಳಕೊಂಡ ಒಬ್ಬ ಹುಡುಗಿಯು ಇದ್ದಳು. ಇನ್ನೊಬ್ಬಳಿಗೆ ತನ್ನ ಮುಖದ ಮೇಲೆ ದೊಡ್ಡ ಮಚ್ಚೆಕೂದಲಿನಿಂದ ತುಂಬಿತ್ತು. ಇನ್ನೂ ಕೆಲವರಿಗೆ ತಮ್ಮ ಮುಖಗಳ ಮೇಲೆ ಕಲೆಗಳು ಮತ್ತು ಇನ್ನೂ ಅನೇಕರು ತಮ್ಮ ಸಣ್ಣ ವಯಸ್ಸಿನಲ್ಲಿ ಅಯುಕ್ತವಾದ ಆಹಾರವನ್ನು ಸೇವಿಸಿದ್ದರಿಂದ ಅನೇಕ ರೀತಿಯಲ್ಲಿಅನಾರೋಗ್ಯರಾಗಿದ್ದರು.
ಇನ್ನೂ ಕೆಲವರು ತಮ್ಮ ದೈಹಿಕ ಮತ್ತು ಲೈಂಗಿಕ ದೂಷಣೆಯಿಂದಾಗಿ ಸಣ್ಣ ವಯಸ್ಸಿನಲ್ಲೇ ತಮ್ಮ ಮನಸ್ಸಿನಲ್ಲಿ ಭಯಹಿಡಿದವರಾಗಿದ್ದರು. ಅವರಿಗಾಗಿ ನಿಜವಾಗಲೂ ನಾನು ವ್ಯಥೆಗೊಂಡೆ. ಇಂತಹ ಹುಡುಗಿಗೆ ಮದುವೆಯಾಗಲು ಪ್ರಸ್ತಾಪಿಸುವಾಗ ಆ ವ್ಯಕ್ತಿಗೆ ತನ್ನ ಈ ಅಸಹ್ಯ ರಹಸ್ಯದ ಕುರಿತು ಹೇಗೆ ತಾನೇ ಹೇಳಲು ಸಾಧ್ಯ. ನನಗೆ ಆಶ್ಚರ್ಯವಾಗಿ ತೋರಿತು. ಈ ವಿಷಯವನ್ನು ಕೇಳಿದ ನಂತರ ಒಂದು ವೇಳೆ ಆಕೆಯನ್ನು ಮದುವೆಯಾಗುವುದಕ್ಕೆ ಆ ವ್ಯಕ್ತಿಯು ತಿರಸ್ಕರಿಸುತ್ತಾನೋ ಅಥವಾ ಮದುವೆ ನಂತರ ಆಕೆಯನ್ನು ಬಿಟ್ಟು ಬಿಡುತ್ತಾನೋ?ನನಗೆ ಇವುಗಳ ಬಗ್ಗೆ ಉತ್ತರ ಸಿಗಲಿಲ್ಲ. ಇಂತಹ ಹುಡುಗಿಯರಿಗೆ ನಾನು ಹೇಳುವಂತದ್ದು ಇದೇ - ಯೇಸು ಕ್ರಿಸ್ತನು ನಮ್ಮ ದುಃಖವನ್ನೆಲ್ಲಾ ತಿಳಿದಿದ್ದಾನೆ ಮತ್ತು ಇತರರು ನಮಗೆ ಮಾಡಿರುವ ಕೆಟ್ಟತನದ ಫಲವನ್ನು ಜಯಿಸಲು ಶಕ್ತರಾಗುವಂತೆ ಆತನು ಸಹಾಯಿಸುತ್ತಾನೆ. ನಮ್ಮ ಜೀವಿತಗಳಲ್ಲಿ ಸೈತಾನನು ಹಾಕಿರುವ ಪ್ರತಿ ಗಂಟನ್ನು ಬಿಚ್ಚಲು ಆತನು ಬಂದನು ಎಂಬುದನ್ನು ನಾನು ಬಲ್ಲೆ(ಯೋಹಾನ 3:8). ಹಾಸ್ಟೆಲಿನಲ್ಲಿ ಕೆಲವು ಅನಾಥ ಮಕ್ಕಳು ಇದ್ದರು. ಇವರು ಇತರರಿಂದ ಎಂದಿಗೂ ಪ್ರೀತಿಯನ್ನು ಅನುಭವಿಸಿರಲಿಲ್ಲ ಮತ್ತು ಅವರು ಎಂದಿಗೂ ಇತರರಿಗೆ ಹತ್ತಿರವಾಗುತ್ತಿರಲಿಲ್ಲ. ನಮ್ಮನ್ನು ಎಂದಿಗೂ ತಳ್ಳದೆ ನಾನು ತಿಳಿದಿರುವ ಒಬ್ಬ ಸ್ನೇಹಿತನ ಬಗ್ಗೆ ಅವರಿಗೆ ಹೇಳಿದೆ. ನಮ್ಮ ಹಿಂದಿನ ಪಾಪದ ಭಾರಗಳನ್ನು ಸಹ ಕರ್ತನ ಹಸ್ತಗಳಲ್ಲಿಟ್ಟು ಆತನ ಬಳಿಯಲ್ಲಿ ಬಿಡಲು ನಾವು ಕಲಿಯಬೇಕೆಂಬುದಾಗಿ ಅವರಿಗೆ ಹೇಳಿದೆ. ನಮ್ಮ ಹಿಂದಿನ ಸಂಗತಿಗಳ ಜ್ಞಾಪಕವನ್ನು ಸಂಪೂರ್ತಿಯಾಗಿ ಅಳಿಸಲು ಮತ್ತು ನಮ್ಮ ಬಿರುಕುಬಿಟ್ಟ ಗಾಯವನ್ನು ವಾಸಿಮಾಡಲು ಮತ್ತು ನಮ್ಮ ಕಣ್ಣೀರನ್ನೆಲ್ಲಾ ಸಂಪೂರ್ಣವಾಗಿ ಒರೆಸಲು ಆತನೊಬ್ಬನೇ ಶಕ್ತನು. ಇನ್ನೂ ಕೆಲವು ಹುಡುಗಿಯರು ಸೈತಾನನ ಶಕ್ತಿಗಳ ಜೊತೆ ಸಂಪರ್ಕವನ್ನು ಇಟ್ಟುಕೊಳ್ಳಲು ಪ್ರಯತ್ನಿಸುತ್ತಿರುವ ಇನ್ನೊಂದು ಭಯಂಕರ ಅಭ್ಯಾಸವನ್ನು ನಾನು ಕಂಡೆ. ಇನ್ನೂ ಕೆಲವರು ಕೈಗಳ ಶಾಸ್ತ್ರ ನೋಡುವುದು ತಮ್ಮ ಜಾತಕಗಳನ್ನು ಓದುವುದು,ಭವಿಷ್ಯಗಳ ಬಗ್ಗೆ ಕಣಿ ಹೇಳುವವರ ಬಳಿಗೆ ಹೋಗುವುದು, ವಾರ್ತಾ ಪತ್ರಿಕೆಗಳಲ್ಲಿ ನಕ್ಷತ್ರ ಹೇಳುವಂಮತದ್ದು ಏನು?ಎಂಬುದಾಗಿ ಬರುವ ಭಾಗಗಳ ಕೆಳಗೆ ಕೊಟ್ಟಿರುವಂತವುಗಳನ್ನು ನಂಬುವಂತದ್ದೆಲ್ಲವನ್ನು ನಾನು ಕಂಡೆ. ಒಬ್ಬರು ಅಥವಾ ಇಬ್ಬರ ಬಳಿ ಔಇಜಾ ಬೋರ್ಡ ಸಹ ಇತ್ತು. ಇವು ತಪ್ಪು ಎಂಬುದಾಗಿ ನನಗೆ ಗೊತ್ತಿತ್ತು. ನಮಗೆ ತಿಳಿಯದೇ ಸೈತಾನನೊಟ್ಟಿಗೆ ಸಂಬಂಧ ಬೆಳಿಸಿಕೊಂಡು ತಮ್ಮನ್ನೆತಾವು ನಾಶಮಾಡಿಕೊಳ್ಳದಂತೆ ನಾನು ಅವರನ್ನು ಎಚ್ಚರಿಸಿದೆ. ತಮ್ಮ ಸಮಸ್ಯೆಗಳನ್ನು ಮಂತ್ರ ತಂತ್ರಗಳಿಂದ ಪರಿಹರಿಸಿಕೊಳ್ಳಲು ಪ್ರಯತ್ನಿಸುವುದಾದರೆ ಅವರಿಗೆ ಮತ್ತಷ್ಟು ಹೆಚ್ಚಾದ ಸಮಸ್ಯೆಗಳು ಬರುವುದೆಂಬುದಾಗಿ ಎಚ್ಚರಿಸಿದೆ.
ನಮ್ಮ ಮೇಲ್ವಿಚಾರಕರು ನಮಗೆ ತಾಯಿ ಇದ್ದಹಾಗೆ, ಒಮ್ಮೆ ಲೈಂಗಿಕ ವಿಷಯದ ಬಗ್ಗೆ ನಮ್ಮೊಂದಿಗೆ ಮಾತನಾಡಲು ಮದುವೆಯಾದ ಒಬ್ಬ ಸ್ತ್ರೀಯನ್ನು ಕರೆಸಿದರು. ಆ ಸ್ತ್ರೀಯು ಚಾರ್ಟಗಳ ಸಹಾಯದಿಂದ ಹುಡುಗರಿಗೂ ಮತ್ತು ಹುಡುಗಿಯರಿಗೂ ಇರುವ ವ್ಯತ್ಯಾಸ ಮತ್ತು ನಮ್ಮ ದೇಹ ಹೇಗೆ ಕಾರ್ಯವಹಿಸುತ್ತದೆ ಎಂಬುದಾಗಿ ಕಾರ್ಯವಹಿಸುತ್ತದೆ ಎಂಬುದಾಗಿ ಕಲಿಸಿಕೊಟ್ಟರು. ಈ ವಿಷಯಗಳು ನಮಗೆ ಬಹಳ ಪ್ರಯೋಜನಕಾರಿಯಾಗಿತ್ತು. ಯಾಕಂದರೆ ಲೈಂಗಿಕ ವಿಷಯಗಳ ಬಗ್ಗೆ ನಮಗೆ ಕುತುಹಲವಿದ್ದರೂ ನಾವುಯಾರನ್ನು ಕೇಳಿರಲಿಲ್ಲ. ಅನುಭವವುಳ್ಳ ವ್ಯಕ್ತಿಯಿಂದ ಹೇಗೆ ಪುರುಷ ಮತ್ತು ಸ್ತ್ರೀ ಜೀವಕಣವು ಕೂಡಿ ಒಂದು ಅದ್ಭುತವಾದ ಹೊಸ ಕೂಸು ಉಂಟಾಗುವುದೆಂದು ತಿಳಿಯುವುದು ಪ್ರಯೋಜನಕಾರಿಯಾಗಿತ್ತು.
ನಾನು ಬಹಳ ಸಣ್ಣವಳಾಗಿದ್ದರೂ ಹಾಸ್ಟಲಿನ ಜೀವಿತ ಆತ್ಮೀಕ ರೀತಿಯಲ್ಲಿ ಬೆಳೆಯುವಂತೆ ಮಾಡಿತು. ಮತ್ತು ಬಹಳ ಬೇಗ. ಯಾಕೆಂದರೆ ಅನೇಕ ವ್ಯತ್ಯಾಸವುಳ್ಳ ಹುಡುಗಿಯರಿಗೆ ಸಹಾಯಿಸಲು ಒಂದು ಸಂದರ್ಭ ನನಗೆ ಸಿಕ್ಕಿತು.
ಅನೇಕ ವರ್ಷಗಳ ನಂತರ ಇತರರಿಗೆ ನೀರು ಹಾಯಿಸುವವನಿಗೆ ನೀರು ಸಿಕ್ಕುವುದು(ಜ್ಞಾನೋ 11:25)ಎಂಬದಾಗಿ ದೇವರು ಹೇಳುವಂತ ವಾಕ್ಯವನ್ನು ನಾನು ಕಂಡೆ.
ಆ ದಿನಗಳಲ್ಲಿ ದೇವರು ಖಂಡಿತವಾಗಿ ಅನೇಕ ವಿಧಗಳಲ್ಲಿ ಅದ್ಭುತವಾಗಿ ನನದೆ ನೀರು ಹಾಯಿಸಿದರು<./p>.
ನನ್ನ ತಂದೆ ತಾಯಿ ಸಹ ಕರ್ತನನ್ನು ತಿಳಿಯಬೇಕೆಂಬುದು ನನ್ನ ಆಶೆಯಾಗಿತ್ತು. ನನ್ನ ತಂದೆಯು ಸಂಸಾರದ ಕೆಲಸ ಕಾರ್ಯಗಳನ್ನು ಹೆಚ್ಚಾದ ಜವಾಬ್ದಾರಿಕೆಯಿಂದ ಹೊರುವುದು ನನಗೆ ಇಷ್ಟವಾಗಿತ್ತು. ನನ್ನ ತಂದೆ ತಾಯಿ ಒಟ್ಟಿಗೆ ಸಂತೋಷವಾಗಿರಬೇಕೆಂಬ ಆಸೆ ನನಗಿತ್ತು. ನನ್ನ ತಮ್ಮನು ಸಹ ಕರ್ತನನ್ನು ಕಂಡುಕೊಳ್ಳಬೇಕೆಂಬ ಆಸೆ ನನಗಿತ್ತು. ಇವೆಲ್ಲವುಗಳಿಗಾಗಿ ನಾನು ಏನು ಮಾಡಬೇಕೆಂಬುದು ನನಗೆ ಗೊತ್ತಿರಲಿಲ್ಲ. ಆದರೆ ಆವಿಷಯಗಳನ್ನು ನನ್ನ ಕರ್ತನಿಗೆ ದಿನವೂ ಒಪ್ಪಿಸಿಕೊಡುತ್ತಿದ್ದೆ ಮತ್ತು ನನ್ನ ಚಿಂತೆಗಳನ್ನೆಲ್ಲಾ ಆತನ ಬಳಿ ಒಪ್ಪಿಸಿದೆ.
ಹಾಸ್ಟೆಲಿನಲ್ಲಿ ನಾವು ಹಾಡುತ್ತಿದ್ದ ಒಂದು ಹಾಡು ಹೀಗಿತ್ತು.
”ಸ್ವಲ್ಪ ಸ್ವಲ್ಪವಾಗಿ ದಿನೇ ದಿನೇ ಸ್ವಲ್ಪ ಸ್ವಲ್ಪ ಎಲ್ಲದರಲ್ಲಿಯೂ ನನ್ನ ಯೇಸುವು ನನ್ನನ್ನು ಮಾರ್ಪಡಿಸುತ್ತಿದ್ದಾನೆ”.......
ನನ್ನ ಜೀವಿತದಲ್ಲಿ ಇದು ನಿಜವಾಗಲೂ ನಡೆಯುತ್ತಿತ್ತು. ಸ್ವಲ್ಪ ಸ್ವಲ್ಪವಾಗಿ ನನ್ನ ಕರ್ತನು ನನ್ನ ಕೋಪವನ್ನು ನನ್ನ ಮಂಕು ಕವಿದ ಸ್ವಭಾವವನ್ನು ಹತೋಟಿಗೆ ತಕ್ಕೊಂಡನು ಮತ್ತು ನಾನು ಬದಲಾಗಲು ಸಹಾಯಿಸಿದನು. ನಾನು ಯೇಸುವಿನ ಸಾರೂಪ್ಯಕ್ಕೆ ಮಾರ್ಪಾಟು ಹೊಂದುವುದು ಮತ್ತು ಆತನ ಶಿಷ್ಯಳಾಗಿ ಜೀವಿಸುವುದರ ಬಗ್ಗೆ ಪುಸ್ತಕಗಳನ್ನು ಓದಿದೆ. ಕ್ರಮೇಣವಾಗಿ ಇದೇ ನನ್ನ ಹಂಬಲವಾಯಿತು ಮತ್ತು ಯೇಸುವಿನಂತೆ ಆಗುವುದೇ ದೊಡ್ಡ ಆಶೆಯಾಯಿತು.
ನನ್ನಲ್ಲಿ ಕ್ರಿಸ್ತನಿಗೆ ಹೊರತಾದ ಸ್ವಭಾವವನ್ನು ಬರೆದು ಒಂದು ದೊಡ್ಡ ಪಟ್ಟಿಯೇ ಮಾಡಿದೆ ಮತ್ತು ಕ್ರಮವಾಗಿ ಅದಕ್ಕಾಗಿ ಪ್ರಾರ್ಥಿಸಿದೆ. ನನ್ನನ್ನು ಬದಲಾಯಿಸಿ ಹಳೆಯ ವಂಚನೆಯ ಸ್ವಭಾವವನ್ನು ತನ್ನ ಸ್ವಭಾವದಿಂದ ತುಂಬುವಂತೆ ಕರ್ತನನ್ನು ಕೇಳಿಕೊಂಡೆ. ಸಮಯ ಕಳೆದಂತೆ ನನ್ ಬಲಹೀನತೆಯು ಮತ್ತು ಪಾಪದ ಪಟ್ಟಿಯು ಉದ್ದ ಉದ್ದವಾಗಿ ಬೆಳೆಯಿತು. ಆದರೆ ನಾನು ಸಂತೋಷವಾಗಿದ್ದೆ. ನನ್ನನ್ನು ಬದಲಾಯಿಸುವುದಕ್ಕಾಗಿ ನಾನು ಎಲ್ಲವನ್ನೂ ಒಪ್ಪಿಸುವುದರ ಮೂಲಕ ನನ್ನ ಪಾತ್ರವನ್ನು ಮಾಡಿದಂತೆ, ಕರ್ತನು ತನ್ನ ಪಾತ್ರವನ್ನು ಮಾಡುಲು ಕರ್ತನಲ್ಲಿ ಭರವಸವಿಟ್ಟೆ. ನಾನು ಇತರರಿಗಾಗಿ ಪ್ರಾರ್ಥಿಸಲು ಸಹ ಪ್ರಾರಂಭಿಸಿದೆ.
ಕೀರ್ತನೆ119:9,11.ರಲ್ಲಿ ಒಬ್ಬ ಯೌವನಸ್ಥ ಹುಡುಗಿಯು ತನ್ನ ಮಾರ್ಗವನ್ನು ಮತ್ತು ತನ್ನ ಹೃದಯವನ್ನು ಶುದ್ಧವಾಗಿಡುವುದು ದೇವರ ವಾಕ್ಯವನ್ನು ಬಹುಜಾಗರೂಕತೆಯಿಂದ ಗಮನಿಸಿ ನಡೆಯುವುದರಿಂದ ಎಂಬುದಾಗಿ ಒಂದು ದಿನ ಓದಿದೆ. ಸತ್ಯವೇದದಲ್ಲಿ ಇರುವಂತ ವಾಗ್ದಾನಗಳನ್ನು ಕಂಡುಕೊಂಡಾಗ ನನಗೆ ತುಂಬಾ ಉತ್ತೇಜನವಾಯಿತು.
ನಮ್ಮ ಮೇಲ್ವಿಚಾರಕರು ನಮ್ಮೆಲ್ಲರಿಗೂ ಸತ್ಯವೇದ ಅಧ್ಯಾಯನದ ಒಂದು ಕ್ರಮವನ್ನು ಕೊಟ್ಟಿದ್ದರು. ಒಂದು ವೇಳೆ ನಾವು ಅದನ್ನು ಕ್ರಮವಾಗಿ ಅನುಸರಿಸಿದರೆ ಒಂದು ವರ್ಷದಲ್ಲಿ ಸತ್ಯವೇದವನ್ನು ಓದಿ ಮುಗಿಸಲು ಸಹಾಯಿಸುತ್ತಿತ್ತು. ಈ ಒಂದು ಕ್ರಮವನ್ನು ಪ್ರಾರಂಭಿಸಿ ಸತ್ಯವೇದವನ್ನು ಓದುವುದು ನನ್ನ ಗುರಿಯನ್ನಾಗಿ ಮಾಡಿಕೊಂಡೆ ಆದರೆ ನಾನು ಒಂದು ವರ್ಷದಲ್ಲಿ ಅದನ್ನು ಮುಗಿಸಲು ಸಾಧ್ಯವಾಗಲಿಲ್ಲ. ಅದು ನನಗೆ ಬಹಳ ಕಾಲ ಹಿಡಿಸಿತು. ಆದರೆ ಅಂತ್ಯದಲ್ಲಿ ನಾನು ಅದನ್ನು ಮುಗಿಸಿದೆ.
ನನ್ನ ಶಾಲೆಯ ವಿಧ್ಯಾಭ್ಯಾಸಕ್ಕೆ ಸಹ ನಾನು ಇದನ್ನು ಅಳವಡಿಸಿದೆ. ಯಾಕಂದರೆ ಯಾರಗೂ ಭರವಾಗಿರದೆ ನನ್ನ ಜೀವನಕ್ಕೆ ಬೇಕಾದದ್ದನ್ನು ನಾನು ಕಡೆಯಲ್ಲಿ ಸಂಪಾದಿಸಬೇಕಾಗಿತ್ತು.
ನನ್ನ ಹಾಸ್ಟೆಲಿನಲ್ಲಿ ದಿನಚರಿಯು ನನ್ನ ಸಮಯವನ್ನು ಯೋಜಿಸುವಂತೆ ಮತ್ತು ಅನೇಕ ವಿಷಯಗಳಲ್ಲಿ ಕ್ರಮವಾಗಿರಲು ಸಹಾಯಿಸಿತು.
ಇತರರಿರಗೆ ಅನೇಕ ರೀತಿಯಲ್ಲಿ ಸಹಾಯಿಸಲು ಬೇಕಾದಷ್ಟು ಸಂದರ್ಭಗಳು ಸಿಗುತ್ತಿತ್ತು. ಒಂದು ಸಾರಿ ನಾನು ನನ್ನ ಪ್ರೌಢ ಶಿಕ್ಷಣವನ್ನು (ಪದವಿ ಪೂರ್ವ ಶಿಕ್ಷಣ) 12ನೇ ತರಗತಿ ದೇವರ ಕೃಪೆಯಿಂದ ಮುಗಿಸಿದ ಮೇಲೆ ಹಾಸ್ಟೆಲನ್ನು ಬಿಡಬೇಕಾಗಿತ್ತು.
ನನಗೆ ಅದು ದುಃಖಕರ ದಿನವಾಗಿತ್ತು. ಯಾಕೆಂದರೆ ನಾನು ನನ್ನ ಹಾಸ್ಟೆಲನ್ನು ಪ್ರೀತಿಸಿದ್ದೆ. ಮುಖ್ಯವಾಗಿ ನಾಲ್ಕು ವರ್ಷಗಳು ನನ್ನ ಮಾರ್ಗದರ್ಶಕರಾಗಿದ್ದ ನನ್ನ ಮೇಲ್ವಿಚಾರಕರನ್ನು ಪ್ರೀತಿಸಿದ್ದೆ.
ನನ್ನ ಪ್ರೌಢ ಶಿಕ್ಷಣದ (ಪದವಿ ಪೂರ್ವ) ಅಂಕಗಳು ಕೇವಲ ಸಾಧಾರಣವಾಗಿತ್ತು. ನಾನು ನನ್ನ ಮೇಲ್ವಿಚಾರಕರೊಂದಿಗೆ ನನ್ನ ಮುಂದಿನ ಭವಿಷ್ಯದ ಕುರಿತಾಗಿ ಮಾತನಾಡಿದೆ. ಮತ್ತು ಆಕೆ ನಾನು ದಾದಿಯಾಗಲು ವಿಧ್ಯಾಭ್ಯಾಸ ಮಾಡಬೇಕೆಂದು ಸಲಹೆ ಕೊಟ್ಟರು. ಅವರ ಸಲಹೆಯನ್ನು ಅನುಸರಿಸಿ ಅನೇಕ ದಾದಿಯರ ಶಾಲೆಗಳಿಗೆ ಅರ್ಜಿಯನ್ನು ಹಾಕಿದೆ. ದಕ್ಷಿಣ ಭಾರತದ ದಾದಿಯರ ಶಾಲೆಗಳಿಂದ ನನಗೆ ತೀರಸ್ಕೃತ ಪತ್ರಗಳು ಒಂದರ ನಂತರ ಮತ್ತೊಂದು ಬಂತು. ನಾನು ಮನಗುಂದಿದವಳಾದೆ. ಆದರೆ ಕರ್ತನು ನನ್ನನ್ನು ಪ್ರೀತಿಸುತ್ತಾನೆ ಘನವಾದ ಶಾಲೆ ಅಲ್ಲದಿದ್ದರು ಉತ್ತಮವಾದ ಬಾಗಿಲನ್ನೆ ನನಗಾಗಿ ತೆರೆಯುತ್ತಾನೆ ಎಂಬುದನ್ನು ನಾನು ತಿಳಿದಿದ್ದೆ.
ಒಂದು ದಿನ ದಕ್ಷಿಣ ಭಾರತದಲ್ಲಿ ದಾದಿಯರ ಶಾಲೆಯಲ್ಲಿ ಬಿಎಸ್ಸಿ ನರ್ಸಿಂಗಾಗಿ ಸ್ಥಳವನ್ನು ನನಗೆ ಕೊಟ್ಟಿರುವುದಾಗಿ ನನಗೆ ಪತ್ರ ಬಂದಿತ್ತು. ಅದು ನನ್ನ ಮನೆಯಿಂದ ತುಂಬಾ ದೂರದಲ್ಲಿತ್ತು. ಅದನ್ನು ಸ್ವೀಕರಿಸುವುದು ಅಥವಾ ಬಿಡುವುದೋ ಎಂಬುದಾಗಿ ನಾನು ಬಹಳವಾಗಿ ಯೋಚಿಸಬೇಕಾಗಿತ್ತು. ಆ ಶಾಲೆಯು ಒಂದು ವಿಚಿತ್ರ ಸ್ಥಳದಲ್ಲಿ ಇತ್ತು. ಅಲ್ಲಿ ಯಾರೂ ನನಗೆ ಪರಿಚಯವಿರಲಿಲ್ಲ. ನನ್ನ ಬಾಷೆಗಿಂತ ವ್ಯತ್ಯಾಸವಾಗಿತ್ತು. ಮತ್ತು ನನಗೆ ಹಿಂದಿ ಅಷ್ಟು ಸರಿಯಾಗಿ ತಿಳಿದಿರಲಿಲ್ಲ.
ನನ್ನ ಮುಂದಿನ ಭವಿಷ್ಯದ ಬಗ್ಗೆ ಎಲ್ಲಾ ಆಲೋಚನೆಗಳು ನನ್ನಲ್ಲಿ ಅನೇಕ ಭಯಗಳನ್ನು ಮತ್ತು ಹೆದರಿಕೆಗಳನ್ನು ನನ್ನ ಮನಸ್ಸಿನಲ್ಲಿ ತಂದಿತ್ತು.
ಆಗ ನನ್ನ ಒಂದಾನೊಂದು ಇಷ್ಟವುಳ್ಳ ಹಾಡಿನ ಬಗ್ಗೆ ಯೋಚಿಸಿದೆ.
'ನನ್ನ ರಕ್ಷಕನು ನನ್ನನ್ನು ಈ ಹಾದಿಯಲ್ಲಿ ನಡೆಸುವನು. ಇದಕ್ಕಿಂತ ಇನ್ನೇನನ್ನು ನಾನು ಕೇಳಲಿ? ನನ್ನ ಜೀವನವಿಡೀ ನನ್ನ ಮಾರ್ಗದರ್ಶಕನಾದ ಆತನ ಮೃದುವಾದ ಕೃಪೆಯನ್ನು ನಾ ಅನುಮಾನಿಸಲೆ?'
ನನ್ನ ಮೇಲ್ವಿಚಾರಕರ ಸಲಹೆಯನ್ನು ಮತ್ತೊಮ್ಮೆ ನಾನು ಕೇಳಿದೆ. ದೇವರು ಬೇರೆ ಎಲ್ಲಾ ಬಾಗಿಲುಗಳನ್ನು ಮುಚ್ಚಿ ಈ ಬಾಗಿಲನ್ನು ತೆರೆದಿದ್ದಾನೆಂದು ಆಕೆ ಹೇಳಿದಳು. ಆತನು ಉತ್ತರ ಭಾರತದಲ್ಲಿ ಒಂದು ವೇಳೆ ಒಳ್ಳೆಯದನ್ನು ನನಗೋಸ್ಕರ ಕಾದಿರಿಸಿರಬಹುದು. ಆ ಮಾತುಗಳು ಎಷ್ಟು ಭವಿಷ್ಯವಾದಿಯಾಗಿತ್ತೆಂಬುದನ್ನು ನಾನು ಸ್ವಲ್ಪವೇ ತಿಳಿದಿದ್ದೆ. ನಾನು ದಾದಿಯರ ಶಾಲೆಗೆ ಪತ್ರ ಬರೆದು ಅವರ ಕೊಡುಗೆಯನ್ನು ಸ್ವೀಕರಿಸಿದೆ.
ಕಡೆಗೆ ನನ್ನ ಜೀವನೋಪಾಯದ ಬಗ್ಗೆ ಇದ್ದ ಕನಸುಗಳು ವಾಸ್ತವವಾಗುವುದು(ಸಿದ್ದಿಸುವುದು)
ನನ್ನ ಶಾಲಾ ದಿನಗಳಿಗಿಂತ ದಾದಿಯರ ಶಾಲೆಯ ದಿನಗಳು ಬಹಳ ಕಷ್ಟಕರವಾಗಿತ್ತು. ಈಗ ನನ್ನ ಮುಂದೆ ಒಂದು ಜೀವನೋಪಾಯವಿತ್ತು. ಅನೇಕ ವಿಧದ ಮನುಷ್ಯರನ್ನು ಬೇಟಿಯಾದೆ. ದಾದಿಯರ ಕ್ರೈಸ್ತ ಸಂಘದಲ್ಲಿ ಕೆಲವು ವಿಶ್ವಾಸಿಗಳು ಇರುವುದರಿಂದ ನಾನು ಸಂತೋಷಿಸಿದೆ. ಆ ಕೂಟಗಳಿಗೆ ನಾನು ಹೋದೆ ಮತ್ತು ನಾನು ಹಾಡುವುದರಲ್ಲಿ, ಪ್ರಾರ್ಥಿಸುವುದಲ್ಲಿ ಮತ್ತು ಸಂದೇಶ ಕೇಳುವುದರಲ್ಲಿ ಒಳ್ಳೆಯ ಸಮಯವನ್ನು ಕಳೆದೆವು. ಈ ದಾದಿಯರ ವಿಧ್ಯಾರ್ಥಿಗಳಾಗಿ ಕೆಲವು ಹುಡುಗಿಯರು ಶ್ರೀಮಂತ ಕುಟುಂಬದಿಂದ ಬಂದಿದ್ದರು ಮತ್ತು ಅವರು ಬಹಳ ಲೌಕೀಕರಾಗಿದ್ದರು. ಅವರು ಕೊಳ್ಳುವ ಅನೇಕ ವಸ್ತುಗಳನ್ನು ನಾನು ಕೊಳ್ಳಲು ಆಗುತ್ತಿರಲಿಲ್ಲ. ಹೀಗೆ ನಾನು ಲೌಕಿಕತನದಿಂದ ರಕ್ಷಿಸಲ್ಪಟ್ಟೆ. ಈ ಲೋಕದ ಅವಶ್ಯಕತೆಗಳನ್ನು ನಮಗೆ ಅಗತ್ಯವಾದಷ್ಟೆ ಹೊಂದಿಕೊಳ್ಳುವ ಸಾಧಾರಣ ಮಧ್ಯಮ ವರ್ಗದ ಕುಟುಂಬಗಳ ಹಿನ್ನೆಲೆಯಿಂದ ಬರುವುದು ಎಷ್ಟೋಆಶೀರ್ವಾದಕರ.
ನನ್ನ ವಿಧ್ಯಾಭ್ಯಾಸದಲ್ಲಿ ನಾನು ಆನಂದಿಸಿದೆ. ನಾನು ಹಿಂದಿ ಕಲಿಯಬೇಕಾಗಿತ್ತು. ಅದು ನನಗೆ ಒಂದು ಸಾಧನೆಯಾಗಿತ್ತು. ನಾನು ಪದವಿ ಪಡೆದು ನನ್ನ ವಿಧ್ಯಾಭ್ಯಾಸವನ್ನು ಮುಂದುವರಿಸಿ ಮುಂದೆ ಅಧ್ಯಾಪಕಳಾಗಬೇಕೆಂಬುದಾಗಿ ಯೋಚಿಸಿದೆ.
ನನ್ನ ಅಂಗರಚನಾ ಶಾಸ್ತ್ರದ ಪಾಠಗಳಲ್ಲಿ ದೇವರು ಅದ್ಭುತವಾಗಿ ನಮ್ಮ ದೇಹಗಳನ್ನು ರಚಿಸಿರುವ ರೀತಿಯನ್ನು ಸ್ವಲ್ಪಮಟ್ಟಿಗೆ ಗ್ರಹಿಸಿದೆ.
ನಮ್ಮ ದೇಹಗಳನ್ನು ಅನೇಕ ರೀತಿಯಲ್ಲಿ ನಾವು ದುರುಪಯೋಗ ಮಾಡುವೆವು ಮತ್ತು ದೂಶಿಸುವುದನ್ನು ನಾನು ಕಂಡುಕೊಂಡೆ. ಈ ವೈಧ್ಯಕೀಯ ವೃತ್ತಿಯೇ ಹೇಗೆ ಅನೇಕ ವೈದ್ಯರಿಂದ ಆಸ್ಪತ್ರೆಗಳಲ್ಲಿ ಬಡವರ ನೋವುಗಳನ್ನು ಕಡಿಮೆ ಮಾಡುವ ಬದಲು ಹಣ ಮಾಡಲು ದುರುಪಯೋಗಿಸುತ್ತಿದ್ದಾರೆ ಎಂಬುದನ್ನು ನಾನು ಕಂಡುಕೊಂಡೆ. ನಾನು ತಪ್ಪು ತಿಳುವಳಿಕೆಯುಳ್ಳವಳಾಗಿದ್ದೆ. ಯಾಕಂದರೆ ವೈಧ್ಯಕೀಯ ವೃತ್ತಿಯು ಶ್ರೇಷ್ಠವಾದದೆಂಬದಾಗಿ ನಾನು ತಿಳಿದಿದ್ದೆ.
ಔಷದಿಗಳನ್ನು ತಮ್ಮಷ್ಟಕ್ಕೆ ತಾವೇ ದುರುಪಯೋಗಿಸಿಕೊಂಡಿರುವ ರೋಗಿಗಳನ್ನು ಸಹ ನಾನು ಸಂದಿಸಿದೆ. ಮತ್ತು ತಮ್ಮ ಗೌರವವನ್ನು ಪುನಃ ಸ್ಥಾಪಿಸಲು ಅವರು ಬಂದಿದ್ದರು. ಇನ್ನೂ ಕೆಲವು ದೂರದ ಸ್ಥಳಗಳಲ್ಲಿ ಸಹ ಸೈತಾನನು ಅನೇಕರ ಜೀವಿತಗಳಲ್ಲಿ ಕುಡುಕುತನದಿಂದ ಮತ್ತು ಅಫೀಮಿನಂತಹ ವಸ್ತುಗಳಿಂದನಾಶಮಾಡಿದ್ದಾನೆ.
ಹುಟ್ಟದೆ ಇರುವಂತಹ ಮಗುವನ್ನು ಕೊಲ್ಲುವುದು ಅಥವಾ ಗರ್ಭಪಾತ ಮಾಡಿಸುವುದು ತಪ್ಪೆಂಬುದು ನನಗೆತಿಳಿದಿತ್ತು. ಕೆಲವು ವೈದ್ಯರು ಯುತಾನೀಸಿಯಾ (ಸುಖಮರಣ ) ವನ್ನು ಅಭ್ಯಾಸಿಸುತ್ತಿದ್ದರು. ಈ ಪದವು ನನಗೆ ಹೊಸದಾಗಿತ್ತು ವ್ಯಕ್ತಿಯ ರೋಗದಲ್ಲಿರುವಾಗ ಅವರಿಗೆ ಸರಿಯಾದ ಔಷದಿಗಲನ್ನು ಕೊಡದೆ ಇರುವುದರ ಮೂಲಕ ಅವರನ್ನು ಕೊಲ್ಲುವುದಾಗಿ ನಾನು ತಿಳಿದೆ. ಇದನ್ನು ಸಾಧಾರಣವಾಗಿ ಕಾಯಿಲೆಯಿಂದಿರುವ ಮತ್ತು ವಯಸ್ಸಾದ ವೃದ್ಧರು ಕುಟುಂಬಕ್ಕೆ ಭಾರವಾಗಿರುವವರಿಗೆ ಮಾಡುತ್ತಾರೆ.
ಇಂತಹ ಸಂಗತಿಗಳು ಆಸ್ಪತ್ರೆಯಲ್ಲಿ ನಡೆಯುವುದನ್ನು ಕಂಡು ನಾನು ಹೆದರಿದೆ. ವೈದ್ಯಕೀಯ ಪ್ರಪಂಚದಲ್ಲಿ ನಡೆಯುವ ದುಷ್ಟಸಂಗತಿಗಳನ್ನು ಆಸ್ಪತ್ರೆಯಲ್ಲಿ ನೋಡುವಾಗ ಈ ವಿಷಯದ ಬಗ್ಗೆ ನನ್ನ ಕಣ್ಣು ತೆರೆಯಿತು. ದಾದಿಯರಿಗೆ ಹೋಲಿಸಿಕೊಳ್ಳುವಾಗ ಅನೇಕ ಡಾಕ್ಟರಗಳು ಇವರಿಗಿಂತ ಉತ್ತಮವಾದ ಜಾತಿಗೆ ಅವರು ಸೇರಿದವರೆಂಬದಾಗಿ ಪರಗಣಿಸುತ್ತಿದ್ದರು. ಆದರೆ ವೈದ್ಯರು ಮಾಡುವ ತಪ್ಪಾದ ಸಂಗತಿಗಳನ್ನು ನಾನು ನೋಡುವಾಗ ನಾನು ಆಜ್ಞೆಗಳಿಗೆ ವಿಧೇಯಳಾಗಬೇಕಾಗಿರುವ ದಾದಿ, ಆದರೆ ಆಜ್ಞೆಗಳನ್ನು ವೈದ್ಯಳಲ್ಲ ಎಂಬದಕ್ಕೆ ಸಂತೋಷಿಸಿದೆ.
ಆದರೆ ಕೆಲವು ದಾದಿಯರು ಬಡ ರೋಗಿಗಳ ಮೇಲೆ ಕೂಗಾಡುವುದನ್ನು ನಾನು ದ್ವೇಶಿಸಿದೆ ಮತ್ತು ತಮ್ಮ ಕಿರಿಯ ದಾದಿಯರಿಗೆ ಆಜ್ಞೆಗಳನ್ನು ಬೋಗಳುತ್ತಿದ್ದರು. ಆ ದಾದಿಯರು ವೈಧ್ಯಕೀಯ ವರ್ಗಕ್ಕೆ ಸಂಭಂದಿಸದ ಎಲ್ಲಾ ಮನುಷ್ಯರನ್ನು ಮುರ್ಖರನ್ನಾಗಿಯೂ ಮತ್ತು ತಿಳುವಳಿಕೆ ಇಲ್ಲದವರನ್ನಾಗಿಯೂ ಕಂಡು ತಾವು ಬಹಳ ಗರ್ವ ಪಡುತ್ತಿದ್ದರು. ಆದರೆ ಸ್ವಲ್ಪಕಾಲದ ನಂತರ ನಾನೂ ಸಹ ಅವರಂತೆಯೇ ವರ್ತಿಸುವುದನ್ನು ಹೇಳಲು ವುಶಾದಿಸುತ್ತೇನೆ. ನಾನು ಪಶ್ಚಾತ್ತಾಪಪಟ್ಟು ರೋಗಿಗಳೊಂದಿಗೆ ಉತ್ತಮವಾದ ರೀತಿಯಲ್ಲಿ ವರ್ತಿಸಲು ಕರ್ತನೇ ಸಹಾಯಿಸು ಎಂಬುದಾಗಿ ಹೇಳಬೇಕಾಗಿತ್ತು ಆದರೆ ಬಾಷೆಯ ಅರಿವಿಲ್ಲದಿರುವುದನ್ನು ಆ ರೀತಿ ಕೇಳಲು ನನ್ನನ್ನು ಅಡ್ಡಿಪಡಿಸಿತು ಮತ್ತು ನನ್ನ ಒರಟು ನಡವಳಿಕೆಗೆ ಅದು ಒಂದು ನೆಪವಾಗಿತ್ತು. ನಮ್ಮ ಮಾನವೀಯ ಸ್ವಭಾವವು ಎಷ್ಟು ವಂಚಕ, ದೋಷವನ್ನು ನಮ್ಮ ಮೇಲೆ ಹಾಕಿಕೊಳ್ಳುವ ಬದಲು ಬೇರೆ ಯಾವುದನ್ನೂ ದೂಷಿಸುತ್ತೇವೆ.
ನನ್ನ ತಪ್ಪನ್ನು ನಾನು ಗ್ರಹಿಸಿದೆ. ಒಬ್ಬ ಕ್ರೈಸ್ತಿಯ ಹುಡುಗಿಯಾಗಿ ನಾನು ರೋಗಿಗಳಿಗೆ, ಬಲಹೀನರಿಗೆ ಮತ್ತು ಹಿರಿಯರಿಗೆ ಗೌರವದಿಂದ ಮಾತನಾಡಿಸಬೇಕೆಂಬುದನ್ನು ತಿಳಿದೆ. ಕಿರಿಚಾಡುವ ಕೂಸುಗಳೊಂದಿಗೆ ತಾಳ್ಮೆಯಿಂದಿರಲು ಮತ್ತು ಅಗಲಿಕೆಯ ನಷ್ಟಹೊಂದಿದ ತಾಯಂದಿರನ್ನು ಸಂತೈಸಲು ದೇವರಿಂದ ನಾನು ಕೃಪೆಯನ್ನು ಕೇಳಿಕೊಳ್ಳಬೇಕು. ಪ್ರತಿ ದಿನವು ಆಸ್ಪತ್ರೆಯಲ್ಲಿ ಮರಣವನ್ನು ನೋಡುತ್ತಿರುವವರಿಗೆ ಇತರ ನೋವುಗಳಿಗೆ ನಿರ್ಧಯೆ ಮತ್ತು ಕಠಿಣವಾಗಲು ತುಂಬಾ ಸುಲಭ. ದೇವರು ನನಗೆ ಕರುಣೆಯ ಹೃದಯವನ್ನು ಕೊಡಲೆಂದು ಪ್ರಾರ್ಥಿಸಿದೆ. ಇತರರಿಗೆ ಒಳ್ಳೆದನ್ನು ಮಾಡಲು ಮತ್ತು ಕರ್ತನ ಬಗ್ಗೆ ಆಗಾಗ ಮಾತನಾಡಲು ನನಗೆ ಬೇಕಾದಷ್ಟು ಅವಕಾಶಗಳು ಸಿಕ್ಕಿದವು.
ನನ್ನ ಆತ್ಮೀಕ ಜೀವತದಲ್ಲಿ ಸಹ ನಾನು ಸೋತಿದ್ದೆ. ನನ್ನ ಜೀವಿತವನ್ನು ಕಾಯಲು ನಂಬಿಗಸ್ಥ ಮೇಲ್ವಿಚಾರಕರು ಇಲ್ಲಿ ಇರಲಿಲ್ಲ. ನನ್ ಪ್ರಾರ್ಥನೆಯ ಜೀವಿತದಲ್ಲಿ ಅಶಿಸ್ತಿಗೊಳಗಾಗಲು ಇಲ್ಲಿ ಸುಲಭವಾಗಿತ್ತು. ನನ್ನ ಸತ್ಯವೇದವನ್ನು ಓದುವುದರಲ್ಲಿ ನಾನು ಉದಾಸೀನಳಾದೆ. ನಾನು ಮೊದಲು ಇದ್ದ ಕ್ರೈಸ್ತಿಯ ಹಾಸ್ಟಲಿಗಿಂತ ಇಲ್ಲಿ ನನಗೆ ನಿಜವಾದ ಕ್ರೈಸ್ತಳಾಗಿರುವುದು ಒಂದು ದೊಡ್ಡ ಯುದ್ಧವೇ ಆಗಿತ್ತು. ಆದರೆ ಆ ಯುದ್ಧಗಳ ಮೂಲಕ ನಾನು ಕರ್ತನನ್ನು ವೈಯಕ್ತಿಕವಾಗಿ ತಿಳಿಯಲು ಪ್ರಾರಂಭಿಸಿದೆ.
ಒಂದಾನೊಂದು ಕೋಣೆಯಲ್ಲಿ ಒಂದು ಸಾರಿ ಒಬ್ಬ ಶ್ರೀಮಂತ ಯೌವನಸ್ಥ ರೋಗಿಯಾಗಿ ದಾಖಲೆಯಾದ.ನಾನು ಅವನನ್ನು ಇಷ್ಟಪಡಲು ಪ್ರಾರಂಭಿಸಿದೆ. ಒಂದು ದಿನ ನನ್ನನ್ನು ಮದುವೆಯಾಗಲು ಕೇಳುವನೋ ಎಂಬುದಾಗಿ ತಿಳಿಯಲು ಆತುರವುಳ್ಳವಳಾಗಿದ್ದೆ. ನಾನು ತುಂಬಾ ಕಾಲ್ಪನೀಯಳಾಗಿದ್ದೆ. ಆದರೆ ಅವನು ಬಹಳ ಬೇಗ ಆಸ್ಪತ್ರೆಯಿಂದ ಹೊರಟು ಹೋದ ಮತ್ತು ಆತನನ್ನು ನಾನು ಮತ್ತೆ ಕಾಣಲೇ ಇಲ್ಲ. ಕೆಲವು ಸಂದರ್ಭಗಳಲ್ಲಿ ಸುಂದರವಾದ ವೈದ್ಯರೊಟ್ಟಿಗೆ ಸಹಾಯಿಸುವಾಗ ಮುಂದೆ ನನ್ನ ಭವಿಷ್ಯದ ಪತಿ ಇವರಾಗಿರುವರೋ ಎಂಬುದಾಗಿ ನಾನು ಊಹಿಸುತ್ತಿದ್ದೆ. ಇವೆಲ್ಲ ಹಗಲು ಕನಸುಗಳು ನನಗೆ ಇದ್ದವು. ಎಂಥಾ ಮುರ್ಖಳು ನಾನು, ನನ್ನ ಭವಿಷ್ಯವು ಯೇಸುವಿನಲ್ಲಿ ಬದ್ರವಾಗಿತ್ತು. ಅದನ್ನು ನಾನು ಆಗಾಗ ಮರೆತು ಹೋಗಿತ್ತಿದ್ದೆನು. ಆ ಶ್ರೀಮಂತ ರೋಗಿಯನ್ನು ಅಥವಾ ಆ ಸುಂದರ ವೈದ್ಯರನ್ನು ಒಂದು ವೇಳೆ ನಾನು ಮದುವೆಯಾಗಿದ್ದರೆ ನಾನು ಎಷ್ಟು ಅಸಂತೋಷವಾಗಿರಬೇಕಾಗಿತ್ತು. ನಾನು ಪ್ರೀತಿಸಿದ ಇಬ್ಬರೂ ಸಹ ಕರ್ತನನ್ನು ಪ್ರೀತಿಸುವವರಾಗಿರಲಿಲ್ಲ.
ಲೌಕಿಕ ಗಂಡನನ್ನು ಕೊಡುವುದು ದೇವರ ಚಿತ್ತವಾಗಿದ್ದರೆ, ಅದನ್ನು ಕೊಡುವ ತನಕ ಯೇಸುವೇ ನನ್ನ ಗಂಡನು ಮತ್ತು ನನ್ನನ್ನು ರೂಪಿಸುವಾತನು ಆತನ ಹೊರತಾದ ಜೀವಿತ ಏನು ಸಾರ್ಥಕ?ಒಂದು ವೇಳೆ ನಾನು ಆತನ ಆಜ್ಞೆಗಳನ್ನು ಅಲಕ್ಷಮಾಡಿದ್ದರೆ, ನಾನು ಸಂಧಿಸಿದ ಕೆಲವು ಸ್ತ್ರೀಯರಂತೆ ಯಾರದೋ ಎರಡನೆಯ ಹೆಂಡತಿಯಾಗಿ ಕೊನೆಗೊಳ್ಳುತ್ತಿದ್ದೆ.
ಕರ್ತನು ನನ್ನ ಭವಿಷ್ಯದ ಜೀವಿತವನ್ನು ತನ್ನ ಹತೋಟಿಗೆ ತೆಗೆದುಕೊಳ್ಳಲಿ ಎಂಬದಾಗಿ ತೀರ್ಮಾನಿಸಿದೆ. ಇಲ್ಲಿಯವರೆಗೂ ಆತನು ನಡೆಸಿದ್ದಾನೆ ಮತ್ತು ನನ್ನ ಮುಂದಿನ ಭವಿಷ್ಯದಲ್ಲೂ ಆತನು ನಡೆಸುವನೆಂಬದಾಗಿ ನಾನು ಭರವಸ ಇಟ್ಟಿದ್ದೇನೆ. ನನ್ನ ಹೃದಯದ ಆಶೆಯನ್ನು ಆತನು ತಿಳಿದಿದ್ದಾನೆ. ಆ ಆಶೆಗಳನ್ನು ಆತನೇ ನನ್ನಲ್ಲಿ ಹುಟ್ಟಿಸಿದನು ಮತ್ತು ಆತನೇ ತನ್ನ ಸ್ವಂತ ರೀತಿಯಲ್ಲಿ ಮತ್ತು ತನ್ನ ಸಮಯದಲ್ಲಿ ಅದನ್ನು ಆತನೇ ತೃಪ್ತಿಗೊಳಿಸುವನು. ನಾನು ಕಾಯಬೇಕು ನನ್ನ ಜೀವಿತದ ಈ ಕ್ಷೇತ್ರದಲ್ಲಿ ನಾನು ಒಳಗಿನ (ಆಂತರ್ಯದ) ವಿಶ್ರಾಂತಿಗೆ ಬರಬೇಕು.
ನಾನು ಕಂಡ ಹಾಗೆ ಅನೇಕ ದಾದಿಯರು ಹಾಸ್ಟೆಲಿನಲ್ಲಿ ವೈದ್ಯರುಗಳಿಂದ ಮತ್ತು ಅನೇಕ ವೈದ್ಯಕೀಯ ಬೇರೆ ದರ್ಜೆಯವರ ಹುರುಳಿಲ್ಲದ ವಾಗ್ದಾನಗಳಿಗೆ ವಂಚಿಸಲ್ಪಟ್ಟು ಹಾಳಾಗಿ ಹೋಗಿದ್ದಾರೆ. ಇದರಲ್ಲಿ ಅನೇಕರು ದಾದಿಯರ ಶಾಲೆಗೆ ಬರುವಾಗ ಮುಗ್ಧರಾಗಿ ಬಂದು ಸೇರಿದರು. ಮತ್ತು ಇಲ್ಲಿ ಅವರ ಕನ್ಯಾ ಜೀ೯ತವನ್ನು ಕಳೆದುಕೊಂಡರು. ನಾನು ಇಲ್ಲಿಗೆ ಬರುವುದಕ್ಕೆ ಮುಂಚೆಯೇ ಕರ್ತನ ಬಗ್ಗೆ ಕಲಿತಿದ್ದ ಎಲ್ಲಾ ವಿಷಯಗಳಿಗಾಗಿ ಕೃತಜ್ಞಳಾಗಿದ್ದೇನೆ ಮತ್ತು ಅದು ನನ್ನನ್ನು ಕಾಪಾಡಿತು.
ನಾನು ಆತನಿಗಾಗಿ ಸತ್ಯವಾಗಿ ಜೀವಿಸಲು ಕೊಟ್ಟ ಮಾತುಗಳನ್ನು ಆತನು ಆಗಾಗ ನನಗೆ ನೆನಪಿಸುತ್ತಿದ್ದನು. ನಾನು ಮೊದಲು ಇದ್ದ ಹಾಸ್ಟಲಿಗಿಂತ ಇಲ್ಲಿ ನನಗೆ ಸ್ವಾತಂತ್ರವಿದ್ದರೂ ನನ್ನ ಮನಸಾಕ್ಷಿಯು ಕರ್ತನ ಮಾರ್ಗದಲ್ಲೆ ಇರಲು ಬಂದಿಸಿತು.
ಪ್ರತಿ ತಿಂಗಳು ಅನೇಕ ಬಟ್ಟೆಗಳನ್ನು ಕೊಳ್ಳುವುದರಲ್ಲಿ ಮತ್ತು ಇಷ್ಟಬಂದ ಉಡುಪುಗಳನ್ನು ಕೊಳ್ಳುವುದರಲ್ಲಿ ಹಣ ಹಾಳುಮಾಡದೆ ಮೀತ ವೆಚ್ಚದಲ್ಲಿ ಜೀವಿಸಲು ಕಲಿತೆ. ನಾನು ಪ್ರತಿ ತಿಂಗಳು ಪಡೆಯುತ್ತಿದ್ದ ವೇತನದಲ್ಲಿ ಸ್ವಲ್ಪ ಹಣವನ್ನು ಕೊಡಿಸಲು ಸಾಧ್ಯವಾಗುತ್ತಿತ್ತು.
ಕೆಲವೊಂದು ವೇಳೆ ದಾದಿಯರಲ್ಲಿ ಕೆಲವರು ನನ್ನಿಂದ ಹಣ ಪಡೆದು ಮತ್ತೆ ಅದನ್ನು ಹಿಂದಿರಿಗಿಸುತ್ತಿರಲಿಲ್ಲ. ಆಕೆಯು ಹಣವನ್ನು ಹಿಂದಿರುಗಿಸುವಳೆಂಬದಾಗಿ ತಿಂಗಳು ತಿಂಗಳು ನೀರಿಕ್ಷಿಸುತ್ತಿದ್ದೆ. ಆದರೆ ಆಕೆಯನ್ನುಕ್ಷಮಿಸುವಂತೆ ಮತ್ತು ಹಣವು ಕರ್ತನದಾಗಿದ್ದರಿಂದ ಮುಂದೆ ಹಣದ ವಿಷಯದಲ್ಲಿ ಎಚ್ಚರಿಕೆ ಇರುವಂತೆ ಆತನು ಕಲಿಸಿಕೊಟ್ಟನು ಜವಾಬ್ದಾರಿಕೆ ಇಲ್ಲದವರಿಗೆ ಇಲ್ಲವೆಂದು ಹೇಳಲು ನಾನು ಕಲಿಯಬೇಕಾಗಿತ್ತು. ಕೆಲವರು ನನ್ನ ಸೀರೆಯನ್ನು ತೆಗೆದುಕೊಳ್ಳುತ್ತಿದ್ದರು ಆದರೆ ಅವರು ಹಿಂದಿರಿಗಿಸುವಾಗ ಅದು ಹರಿದು ಹೋಗಿರುತ್ತಿತ್ತು. ಇದು ನನ್ನನ್ನು ಅವಿಶ್ರಾಂತಿಗೆ ಒಳಪಡಿಸುತ್ತಿತ್ತು. ನಾನು ವಸ್ತುಗಳನ್ನು ಎಷ್ಟಾಗಿ ಪ್ರೀತಿಸುತ್ತೇನೆಂಬದನ್ನು ಕಂಡುಕೊಂಡೆ. ಇಂತಹ ವಿಷಯಗಳಲ್ಲಿ ನನ್ನನ್ನೆ ನಾನು ತೀರ್ಪುಮಾಡಿಕೊಳ್ಳಲು ಕರ್ತನು ಕಲಿಸಿಕೊಟ್ಟನು.
ನಾನು ನನ್ನ ಒಂಟಿತನಕ್ಕೆ ವಿರುದ್ಧವಾಗಿ ಹೋರಾಡಲು ಮತ್ತು ನನ್ನ ಒಳಗಿನ ಆಂತರ್ಯದ ಸ್ಥಿತಿಯನ್ನು ನೋಡಿ ನಿರುತ್ಸಾಹಗೊಳ್ಳದೆ ಇರಲು ಕಲಿತೆ. ನಾನು ಕೆಲವು ವಯಸ್ಸಾದ ಹೆಂಗಸರನ್ನು ಸಂಧಿಸಿದೆ. ಅವರು ದೂರು ಹೇಳುವವರು ಮತ್ತು ಪೀಡಿಸುವವರಾಗಿ ಅವರ ಬುದ್ದಿಮಾತುಗಳು ಬೇಡವಾಗಿದ್ದರೂ ಇತರರಿಗೆ ಬುದ್ದಿ ಹೇಳುತ್ತಾ ಸುತ್ತುತ್ತಿದ್ದರು. ಅವರು ತುಂಬಾ ಬೇಜಾರು ಹುಟ್ಟಿಸುವವರಾಗಿದ್ದರಿಂದ ಜನರು ಅವರನ್ನು ತೀರಸ್ಕರಿಸುತ್ತಿದ್ದರು. ಅವರ ಹಾಗೆ ನಾನು ಕೊನೆಗೊಳ್ಳುವುದು ನನಗೆ ಇಷ್ಟವಿರಲಿಲ್ಲ.
ನಾನು ಕರ್ತನಲ್ಲಿ ಸಂತೋಷಿಸಿಲು ತೀರ್ಮಾನಿಸಿದೆ ಮತ್ತು ನನ್ನ ಆತ್ಮೀಕ ಜೀವಿತದಲ್ಲಿ ಚೈತನ್ಯವಾಗಿರಲು ಪ್ರಯತ್ನಿಸಿದೆ. ನಾನು ಯಾವಾಗಲೂ ನನ್ನ ಕಣ್ಣ ಮುಂದೆ ನನ್ನ ಹಳೆಯ ಸ್ನೇಹಿತೆ ವಾರ್ಡನ್ ನನ್ನು ಒಂದು ಉದಾಹರಣೆಯಾಗಿ ಮತ್ತು ಮಾರ್ಗದರ್ಶನವಾಗಿ ಇಟ್ಟುಕೊಂಡಿದ್ದೆ. ದೇವರು ಕೊಟ್ಟ ಕೆಲಸದಲ್ಲಿ ಆಕೆಯು ತೃಪ್ತಳಾಗಿದ್ದಳು. ನನ್ನ ಸಣ್ಣ ವಯಸ್ಸಿನಲ್ಲೆ ಇಂತಹ ಉದಾಹರಣೆಯನ್ನು ಪಡೆಯಲು ನಾನು ಎಷ್ಟು ಅದೃಷ್ಟಶಾಲಿಯಾಗಿದ್ದೇನೆ. ನಾನು ಆಕೆಯೊಂದಿಗೆ ಸಂಪರ್ಕವನ್ನು ಇಟ್ಟುಕೊಂಡಿದ್ದೆ ಮತ್ತು ಆಕೆಯ ಬುದ್ದಿಮಾತುಗಳನ್ನು ಆಗಾಗ ಬಯಸುತ್ತೇನೆ ಮತ್ತು ನನಗಾಗಿ ಸಕಾಲದ ಮಾತು ಯಾವಾಗಲೂ ಆಕೆಯ ಹತ್ತಿರ ಇರುತ್ತಿತ್ತು.
ಆಸ್ಪತ್ರೆಯ ಹತ್ತಿರದಲ್ಲಿ ಹಿಂದಿ ಮಾತನಾಡುವ ಒಂದು ಸಭೆಯನ್ನು ಕಂಡೆನು. ಅದು ಸ್ಥಳೀಯ ಮತ್ತು ಯಥಾರ್ಥ ಕ್ರೈಸ್ತರ ಸಣ್ಣ ಗುಂಪಾಗಿತ್ತು. ಅಲ್ಲಿ ಕ್ರಮವಾಗಿ ಕೂಟಗಳಲ್ಲಿ ಭಾಗವಹಿಸಲು ನನ್ನನ್ನೆ ನಾನು ಶಿಸ್ತಿನಲ್ಲಿಡಲ್ಪಟ್ಟೆನು. ಅಷ್ಟರಲ್ಲಿ ನಾನು ಸಂದೇಶದ ಸ್ವಲ್ಪ ಭಾಗವನ್ನು ಅರ್ಥಮಾಡಿಕೊಳ್ಳುವಷ್ಟರ ಮಟ್ಟಿಗೆ ಹಿಂದಿಯನ್ನು ಕಲಿತೆ ಮತ್ತು ಕೆಲವು ಹಾಡುಗಳನ್ನು ಸಹ ಹಾಡಲು ಕಲಿತೆ.
ನಾನು ಹಿಂದಿಯಲ್ಲಿ ಸರಾಗವಾಗಿ ಮಾತನಾಡಲು ಆಗದಿದ್ದರೂ ನನ್ನ ನ್ಯೂನ್ಯತೆಯುಳ್ಳ ಬಾಷೆಯನ್ನು ಸಹಿಸಿಕೊಳ್ಳುವ ಒಂದೆರಡು ಒಳ್ಳೆಯ ಕುಟುಂಬಗಳು ನನಗೆ ಸಿಕ್ಕಿದವು. ವಿಶೇಷ ಸಂದರ್ಭಗಳಲ್ಲಿ ಅವರ ಮನೆಗೆ ನನ್ನನ್ನು ಆಹ್ವಾನಿಸುತ್ತಿದ್ದರು. ನಾನು ಸಭೆಗೆ ಕ್ರಮವಾಗಿ ಹೋಗುವ ಸದಸ್ಯಳಾದೆ ಮತ್ತು ನಾನು ಬಹಳಷ್ಟು ಮಟ್ಟಿಗೆ ಅದರಲ್ಲಿ ಹೊಂದಿಕೊಂಡಿದ್ದೆ. ಬಹು ಬೇಗ ನಾನು ನೀರಿನ ದೀಕ್ಷಾಸ್ನಾನದಲ್ಲಿ ಕರ್ತನಿಗೆ ವಿಧೆಯಳಾಗಬೇಕೆಂದು ಅನಿಸಿತು.
ನನ್ನ ವಿಶ್ವಾಸದ ಕುರಿತಾಗಿ ನಾನು ಮನೆಗೆ ಪತ್ರ ಬರೆದೆ. ನನ್ನ ತಾಯಿಯು ಸಹ ನನ್ನನ್ನು ಅಪಹಾಸ್ಯ ಮಾಡಿದರು. ನನ್ನ ತಾಯಿಗೆ ಹೀನೈಸಿದ ಹಲ್ಲೆಲ್ಲೂಯಾಗಳಲ್ಲಿ ನಾನೂ ಸಹ ಒಬ್ಬಳಾಗಬಾರದೆಂದು ಆಕೆ ನನಗೆ ಪತ್ರ ಬರೆದಳು. ನನ್ನ ಸ್ವಂತ ಪಟ್ಟಣದಲ್ಲಿ ಅನೇಕರಿಗೆ ಭೋಧಕರಿಂದ ಮತ್ತು ಸತ್ಯವೇದ ಸ್ತ್ರೀಯರಿಂದ ಕೆಟ್ಟ ಅನುಭವ ಆಗಿವೆ.ಅವರು ಮನೆಗಳನ್ನು ಸಂದರ್ಶಿಸಿ ಉದ್ದ ಪ್ರಾಥನೆ ಮಾಡುವದರ ಮೂಲಕ ಧಾರ್ಮೀಕ ವಿಷಯಗಳಲ್ಲಿ ಹಿಂದೆ ಇರುವವರ ಕುತ್ತಿಗೆಯನ್ನು ಒತ್ತುವುದರ ಮೂಲಕ ದೇವರ ಕಾರ್ಯಕ್ಕೆ ಹಣ ಕೊಡಿ ಎಂಬುದಾಗಿ ಜನರನ್ನು ಒತ್ತಾಯಿಸುತ್ತಿದ್ದರು. ನಾನು ಅವರಿಗಿಂತ ವ್ಯತ್ಯಾಸವಾಗಿದ್ದೆನೆಂಬುದನ್ನು ನನ್ನ ತಾಯಿಯು ಕಾಣಬೇಕೆಂಬುದನ್ನು ನಾನು ಆಶಿಸಿದೆ. ನನ್ನ ಪತ್ರಗಳಿಗಿಂತ ನನ್ನ ಜೀವಿತ ಮಾತ್ರ ಆಕೆಯೊಂದಿಗೆ ಮಾತನಾಡಬಲ್ಲದೆಂಬುದನ್ನು ನಾನು ತಿಳಿದೆ.
ನನ್ನ ದೀಕ್ಷಾಸ್ನಾನವು ನನಗೆ ದೊಡ್ಡ ಘಟನೆಯಾಗಿತ್ತು. ಆ ದಿನವು ಕೆಲವು ವರ್ಷಗಳ ಹಿಂದೆ ಕರ್ತನು ನನ್ನನ್ನು ತನ್ನ ಹಿಂಡಿಗೆ ಕರೆತಂದ ಉದ್ವೇಗದ ದಿನದಂತೆ ಇತ್ತು. ಆದರೆ ನನಗೆ ಬಹು ಹಿಂಸೆಗೆ ಮತ್ತು ವಿರೋದತ್ವಕ್ಕೆ ಇದು ಒಂದು ಆರಂಭದ ಗುರುತಾಗಿತ್ತು. ಯಾರಾರು ಕರ್ತನನ್ನು ಹಿಂಬಾಲಿಸಿ ಭಕ್ತಿಯ ಜೀವಿತ ಜೀವಿಸಲು ಮನಸ್ಸು ಮಾಡುತ್ತಾರೋ ಅವರು ಹಿಂಸೆಯನ್ನು ಅನುಭವಿಸಬೇಕೆಂಬುದನ್ನು ನಾನು ಕಂಡುಕೊಂಡೆ. ದೇವರ ಮಗುವಾಗಿ ಹೇಗೆ ಮರ್ಯಾದೆಯಿಂದ ಮತ್ತು ಘನತೆಯಿಂದ ನನ್ನನ್ನು ನಾನುನಡೆಸಿಕೊಳ್ಳಬೇಕೆಂಬುದನ್ನು ಕಲಿಯಲು ಆಶಿಸಿದೆ. ನನ್ನ ಜೊತೆ ಕೆಲಸಮಾಡುವವರು ನಾನು ಯೇಸುಕ್ರಿಸ್ತನಿಗೆ ಸೇರಿದವಳೆಂಬುದನ್ನು ತಿಳಿಯಬೇಕಂಬುದನ್ನು ಆಶಿಸಿದೆ. ನನ್ನ ದೀಕ್ಷಾಸ್ನಾನದ ನಂತರ ನನ್ನಲ್ಲಿ ಈ ಲೋಕದ ಮತ್ತು ಅದರ ಆಕರ್ಷಣೆಗಳಿಗೆ ಆಸಕ್ತಿ ಬಹಳ ಕಡಿಮೆ ಇತ್ತು.
ಸಭೆಯಲ್ಲಿ ಅನೇಕ ಒಳ್ಳೆಯ ಮನುಷ್ಯರನ್ನು ನಾನು ಸಂಧಿಸಿದೆ. ಆಸ್ಪತ್ರೆಯಲ್ಲಿ ಮತ್ತು ಸಭೆಯಲ್ಲಿ ಪುರುಷರೊಂದಿಗೆ, ಮದುವೆಯಾದ ಪುರುಷರೊಂದಿಗೆ ಸಹ ಮಾತನಾಡಬೇಕೆಂಬ ಆಶೆಯನ್ನು ನನ್ನಲ್ಲಿ ಕಂಡೆ. ಸ್ತ್ರೀಯರಿಗಿಂತ ಬಹಳವಾಗಿ ಪುರುಷರೊಂದಿಗೆ ಮಾತನಾಡಲು ನಾನು ಆರಿಸಿಕೊಳ್ಳುವುದನ್ನು ನಾನು ಕಂಡೆ. ಅದು ತಪ್ಪು ಎಂಬುದನ್ನು ನಾನು ಬೇಗ ತಿಳುಕೊಂಡೆ ಮತ್ತು ಕರ್ತನು ನನ್ನನ್ನು ಜಾಗರೂಕಳಾಗಿರಲು ಎಚ್ಚರಿಸಿದನು. ದೇವರು ಕೂಡಿಸಿರುವಂತ ಗಂಡ ಮತ್ತು ಹೆಂಡತಿಯ ಮಧ್ಯೆ ಬರುವಂತಹದು ನನ್ನ ತಪ್ಪುಎಂಬುದಾಗಿ ಕಂಡುಕೊಂಡೆ. ಮದುವೆಯಾದ ಯಾವುದೇ ಪುರುಷರೊಂದಿಗೆ ಸ್ವತಂತ್ರಳಾಗಿ ಮಾತನಾಡುವುದಿಲ್ಲ ಎಂಬುದಾಗಿ ತೀರ್ಮಾನಿಸಿದೆ. ಈ ತಿರ್ಮಾನ ನನ್ನನ್ನು ಅನೇಕ ಅಪಾಯಗಳಿಂದ ಕಾಪಾಡಿತು. ಇದು ಅನೇಕ ಕುಟುಂಬಗಳಲ್ಲಿ ಅಪಾರ್ಥ ಉಂಟು ಮಾಡುವುದರಿಂದ ನನ್ನನ್ನು ರಕ್ಷಿಸಿತೆಂದು ನನಗೆ ಅನ್ನಿಸುತ್ತದೆ. ಪವಿತ್ರಾತ್ಮನು ತೊಂದರೆಯನ್ನು ಮಾಡುವಂತೆ ಸಂದರ್ಭಗಳಲ್ಲಿ ನನ್ನನ್ನು ಎಚ್ಚರಿಸಿ ನಂಬಿಗಸ್ತಿಕೆಯಿಂದ ನಡೆಸಿದ ರೀತಿಗಾಗಿ ನಾನು ತುಂಬಾ ಕೃತಜ್ಞಳಾಗಿದ್ದೇನೆ.
ಜನರು ನಮ್ಮನ್ನು ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುವಾಗ ಬಹಳಷ್ಟು ವಿವೇಕವುಳ್ಳವರಾಗಿರಬೇಕು.ಕೆಲವು ರೋಗಿಗಳು ದಯೆಯುಳ್ಳ ದಾದಿಯರನ್ನು ತಮ್ಮ ಕೆಲಸಕ್ಕಾಗಿಯೇ ಸುತ್ತಾಡುವ ಹಾಗೆಯೇ ಮಾಡುತ್ತಿದ್ದರು. ಅನೇಕ ದಾದಿಯರು ಎಲ್ಲರಿಗೂ ಸಲಹೆಗಳನ್ನು ಕೊಡಡುವಂತ ಧೋರಣೆಯಲ್ಲಿರುವುದನ್ನು ನಾನು ಕಂಡೆ. ತಮಗೆ ಬಹಳಷ್ಟು ತಿಳಿದ ಹಾಗೆ ಮತ್ತು ಮುಖ್ಯ ಪರಿಚಾರಿಕೆಯರ ಹಾಗೆ ನಟಿಸುತ್ತಿದ್ದರು. ಕಡೆಗೆ ಜನರು ಅವರ ಬಗ್ಗೆ ಬೇಸರಗೊಂಡು ಅವರನ್ನು ದೂರವಿಡುತ್ತಿದ್ದರು. ಇದನ್ನು ನೋಡುವಾಗ ನಾನು ಇನ್ನೂ ಸಣ್ಣವಳು ಮತ್ತು ಅನುಭವವಿಲ್ಲದವಳೆಂಬುದನ್ನು ತಿಳಿದು ಸಲಹೆಗಳನ್ನು ಕೊಡುವುದರಿಂದ ದೂರವಿದ್ದೆ. ಅನೇಕ ಜನರಿಗೆ ಬೇಕಾದದ್ದು ಅವರಿಂದ ಕೇಳುವಂತ ಕಿವಿಗಳೇ ಹೊರತು, ಯಾರೋ ಒಬ್ಬರು ಕೊಡುವಂತ ಸಲಹೆಗಳಲ್ಲ ಎಂಬುದನ್ನು ಕಂಡುಕೊಂಡೆ.ಆದುದ್ದರಿಂದ ನಾನು ಜನರ ಸಮಸ್ಯೆಗಳ ಬಗ್ಗೆ ಕಿವಿಗೊಡುವುದನ್ನು ಅಭ್ಯಾಸಿಸಿದೆ. ಹೀಗೆ ಆಸ್ಪತ್ರೆಯ ಪ್ರತಿ ವಾರ್ಡುಗಳಲ್ಲೂ ಅನೇಕ ಸ್ನೇಹಿತರನ್ನು ಮಾಡಿಕೊಂಡೆ.
ನಾನು ಎದುರಿಸಿದ ಇನ್ನೊಂದು ಸಮಸ್ಯೆ ಎಂದರೆ ಹಾಸ್ಟೆಲಿನಲ್ಲಿದ್ದ ನನ್ನ ಜೊತೆ ದಾದಿಯರಿಂದ ಅದರಲ್ಲಿ ಅನೇಕರು ಆಸ್ಪತ್ರೆಯ ಅಧಿಕಾರಿಗಳ ವಿರುದ್ಧ ಗುಣಗುಟ್ಟುತ್ತಿದ್ದರು ಮತ್ತು ಕೆಟ್ಟದಾಗಿ ಮಾತನಾಡುತ್ತಿದ್ದರು. ಇಂತಹ ಪ್ರಯೋಜನವಿಲ್ಲದ ಮಾತುಗಳಿಂದ ತಮ್ಮ ಸಮಯವನ್ನು ವ್ಯರ್ಥಮಾಡುತ್ತಿದ್ದರು. ಅವರಿಂದ ಪಾರಾಗಲು ನನಗೆ ತುಂಬಾ ಕಷ್ಟವಾಗುತ್ತಿತ್ತು. ನಾನು ಏನಾದರೂ ನೆವ ಹೇಳಿ ಅಲ್ಲಿಂದ ತಪ್ಪಿಸಿಕೊಳ್ಳುತ್ತಿದ್ದೆ. ನನ್ನ ಎಲ್ಲಾ ಮಾತುಗಳಿಗೆ ಮತ್ತು ನಾನು ಕಿವಿಗೊಡುವ ಎಲ್ಲಾ ಚಾಡಿಯ ಮಾತುಗಳಿಗೂ ಕರ್ತನ ಬಳಿ ಒಂದು ದಿನ ಲೆಕ್ಕ ಒಪ್ಪಿಸಬೇಕೆಂಬುದನ್ನು ನಾನು ತಿಳಿದಿದ್ದೆ.
ಕೆಲವು ದಾದಿಯರು ಅಕಾರಣ ವ್ಯಾಧಿ ಭ್ರಾಂತಿ ಇರುವವರಾಗಿದ್ದರು. ಅವರು ಯಾವಾಗಲೂ ಕಾಯಿಲೆಯಿಂದಿರುವ ಹಾಗೆ ಊಹಿಸಿಕೊಳ್ಳುತ್ತಿದ್ದರು ಮತ್ತು ಸತತವಾಗಿ ಇತರರು ಅವರ ಬಗ್ಗೆ ಸಹಾನುಭೂತಿತೋರಿಸಬೇಕೆಂಬುದಾಗಿ ಆಶಿಸುತ್ತಿದ್ದರು. ಇಂತಹವರು ತಾವು ಒಬ್ಬಂಟಿಗರಾಗಿರುವಾಗ ತಮ್ಮ ಬಗ್ಗೆಯೇ ಯಾವಾಗಲೂ ತಲ್ಲಿನರಾಗಿರುವುದಾದರೆ ಮುಂದೆ ಮದುವೆಯಾಗಿ ತಮ್ಮ ಗಂಡನನ್ನು ತಮ್ಮ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಕೆಯನ್ನು ಹೇಗೆ ಹೊತ್ತುಕೊಳ್ಳುವುದಾಗಿ ಯೋಚಿಸುತ್ತಿದ್ದೆ.
ಒಬ್ಬ ದಾದಿಗೆ ರೋಗಿಯಿಂದ ಕ್ಷಯ ರೋಗ ಬಂದಿತು. ಹೇಗೆ ಆ ರೋಗವು ಆಕೆಗೆ ಅಂಟಿಕೊಂಡಿತೆಂದು ತಿಳಿದ ನಂತರ ಆಕೆಗೆ ತುಂಬಾ ಸಿಟ್ಟಾಯಿತು. ಆಕೆಯು ಅವಿಶ್ವಾಸಿಯಾಗಿದ್ದಳು. ಹಗಲೂ ಮತ್ತು ರಾತ್ರಿ ಆ ರೋಗಿಯನ್ನು ಶಪಿಸುತ್ತಿದ್ದಳು.
ದೇವರ ಮಕ್ಕಳಾದ ನಮಗೆ ಇದು ಎಷ್ಟು ವ್ಯತ್ಯಾಸವಾಗಿದೆ.ದೇವರ ತಿಳುವಳಿಕೆ ಇಲ್ಲದೆ ನಮಗೆ ಯಾವುದೂ ಸಂಭವಿಸುವುದಿಲ್ಲ. ನಾವು ಕಾಯಿಲೆಗೆ ಒಳಪಡುವಾಗ ಆತನಿಗೆ ಉಪಕಾರ ಹೇಳಬೇಕು ಯಾಕೆಂದರೆ ಆತನು ನಮ್ಮನ್ನು ಗುಣಪಡಿಸಿಲು ಸಹ ಸಾಧ್ಯ. ಯೇಸು ನಮ್ಮನ್ನು ಸ್ವಸ್ಥಮಾಡುವವ ಮತ್ತು ನಮ್ಮ ಭಾರಗಳನ್ನು ಹೊರುವವವನು. ಆತನು ನಮ್ಮನ್ನು ಅದ್ಭುತವಾಗಿ ವಾಸಿಮಾಡಬಲ್ಲ ಮತ್ತು ನಮ್ಮ ಕಾಯಿಲೆಗೆ ಸರಿಯಾದಔಷದೋಪಚಾರವನ್ನು ಪಡೆಯಲು ಸರಿಯಾದ ಸ್ಥಳಕ್ಕೆ ನಡೆಸುತ್ತಾನೆ.
ನನ್ನ ಕೆಲವು ಸಹದ್ಯೋಗಿಗಳು ಚಲನ ಚಿತ್ರದ ಆಸಕ್ತಿಯುಳ್ಳವರು ಮತ್ತು ಯಾವಾಗಲೂ ಅವರ ಇಷ್ಟವುಳ್ಳ ಸಿನಿಮಾ ನಟರ ಬಗ್ಗೆಯೇ ಮಾತನಾಡುತ್ತಿದ್ದರು ಮತ್ತು ಸಿನಿಮಾ ಹಾಡುಗಳನ್ನು ಹಾಸ್ಟೆಲಿನಲ್ಲಿ ಹಾಡುತ್ತಿದ್ದರು. ಇಂತಹ ಯಾವುದೇ ಸಂಗತಿಗಳು ನನಗೆ ತಿಳಿದಿರಲಿಲ್ಲ. ಇದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ ಮತ್ತು ಈ ರೀತಿ ಹೇಳುವ ಹಾಡಿನ ಬಗ್ಗೆ ನಾನು ಯೋಚಿಸುತ್ತಿದ್ದೆ.
ನನ್ನ ಸ್ವರವ ತೆಗೆದುಕೋ ಮತ್ತು ಯಾವಾಗಲೂ ನನ್ನ ರಾಜನಿಗೆ ಮಾತ್ರ ನಾನು ಹಾಡುವೆ........
ಕೆಲವು ದಾದಿಯರು ಮಧ್ಯಪೂರ್ವ ದೇಶಗಳಿಗೆ ಹೋಗಿ ಬಹಳಷ್ಟು ಹಣ ಮಾಡಿ ಬಂಗಾರದ ಒಡವೆಗಳನ್ನು ಸಾಕಷ್ಟು ಕೊಂಡರೆಂಬದಾಗಿ ಕೇಳಿಸಿಕೊಂಡು ಇನ್ನೂ ಕೆಲವು ದಾದಿಯರಿಗೆ ಮಧ್ಯಪೂರ್ವ ದೇಶಗಳಿಗೆ ಅವರು ಸಹ ಹೋಗಬೇಕೆಂಬ ಹೆಬ್ಬಯಕೆ ಆಯಿತು.
ನಾನು ಏನು ಮಾಡಬೇಕಂಬುದಾಗಿ ಕರ್ತನು ಆಶೀಸುತ್ತಾನೆ?
ನಾನು ಆರ್ಥಿಕವಾಗಿ ನನ್ನ ಕುಟುಂಬಕ್ಕೆ ಸಹಾಯಿಸಬೇಕೆಂದು ಇಷ್ಟವಿದೆ. ಅದೇ ಸಂದರ್ಭದಲ್ಲಿ ಕರ್ತನ ಚಿತ್ತವನ್ನು ಸಹ ನಾನು ಮಾಡಬೇಕು ನನಗಿರುವುದನ್ನು ಕರ್ತನು ಆಶೀರ್ವದಿಸಿದರೆ ಅದು ಐದುರೊಟ್ಟಿಗಳನ್ನು ಮತ್ತು ಎರಡು ಮೀನುಗಳನ್ನು ಆತನು ಭೂಲೋಕದಲ್ಲಿರುವಾಗ ಆಶೀರ್ವದಿಸಿ ಐದು ಸಾವಿರ ಜನರಿಗೆ ಉಣಿಸಿದಂತೆ ಇರುತ್ತದೆ ಎಂಬುದಾಗಿ ಯೋಚಿಸಿದೆ.
ಅನೇಕ ವಿಶ್ವಾಸಿಗಳು ಹೊರ ದೇಶಗಳಿಗೆ ಹಣ ಮಾಡಲು ಹೋಗುತ್ತಾರೆಂಬುದನ್ನು ನಾನು ಕೇಳಿಸಿಕೊಂಡಿದ್ದೆನೆ. ಆ ಹಣವು ಒಂದು ದೊಡ್ಡ ಉರುಲಿನಂತಿರುವುದನ್ನು ನಾನು ಕಂಡೆ. ಯಾವುದೇ ಹಣವನ್ನು ತಪ್ಪಾದ ರೀತಿಯಲ್ಲಿ ಸಂಗ್ರಹಿಸಿದರೆ ಅದು ನನಗೂ ಮತ್ತು ನನ್ನ ಕುಟುಂಬಕ್ಕೂ ಶಾಪವಾಗಿರುತ್ತದೆ.
ನನ್ನ ತಂದೆಯು ತನ್ನ ಹಣವನ್ನೆಲ್ಲಾ ಮನೆಯಲ್ಲಿ ಕುಡಿಯುವುದರಲ್ಲಿ ಹೇಗೆ ಹಾಳುಮಾಡಿದರು ಎಂಬುದಾಗಿ ಸಹ ಆಲೋಚಿಸಿದೆ.
ಒಂದು ವೇಳೆ ಆ ಹಣವು ಆತನ ಕುಡಿತದ ಅಭ್ಯಾಸಕ್ಕಾಗಿ ಉಪಯೋಗಿಸದಿದ್ದರೆ, ನಾವು ಒಂದು ಶ್ರೀಮಂತ ಕುಟುಂಬವಾಗಿರುತ್ತಿದ್ದೆವು. ಹಣವು ದೇವರಿಂದ ನಮಗೆ ಕೊಟ್ಟಿರುವ ಶುದ್ಧವಾದ ನಿಕ್ಷೆಪ ಮತ್ತು ಅದನ್ನು ನಾವು ಜ್ಞಾನದಿಂದ ಮತ್ತು ಮಿತವಾಗಿ ಖರ್ಚುಮಾಡಬೇಕು.
ನಾನು ಯಾವಾಗಲೂ ತುಂಬಾ ಕಾರ್ಯನಿರತಳು ಮತ್ತು ನನಗೆ ಸ್ವಲ್ಪವೇ ಬಿಡುವಿನ ಸಮಯವಿತ್ತು ಮತ್ತು ಇದು ತುಂಬಾ ಒಳ್ಳೇಯದಾಗಿತ್ತು. ವ್ಯರ್ಥವಾಗಿ ಕಾಲಾಹರಣ ಮಾಡುವವರ ಮನಸ್ಸು ಸೈತಾನನ ಕಾರ್ಖಾನೆಯಾಗಿರುತ್ತದೆ.ನನಗಿರುವಂತ ಸ್ವಲ್ಪ ಸಮಯದಲ್ಲಿ ನಾನು ಹೊಲಿಯಲು ಕಲಿತೆ ಮತ್ತು ನನ್ನ ಹಳೆಯ ಬಟ್ಟೆಗಳನ್ನು ನಾನೇ ಸರಿಪಡಿಸುತ್ತಿದ್ದೆ. ಹೀಗೆ ನಾನು ಸಮಯವನ್ನು ವ್ಯರ್ಥ ಮಾಡುತ್ತಿರಲಿಲ್ಲ.
ನಾನು ಓದುವುದನ್ನು ಪ್ರೀತಿಸಿದೆ ಮತ್ತು ಸಾಧಾರಣವಾಗಿ ಹೇಳಬೇಕಾದರೆ ಜೀವಿತವು ಸಂತೋಷವಾಗಿತ್ತು. ನನ್ನ ಜೀವಿತದಲ್ಲಿ ಒಂದು ಉದ್ದೇಶ ಮತ್ತು ಈಡೇರಿಸುವಿಕೆಯ ಪ್ರಜ್ಞೆ ಇತ್ತು. ಬಾಲ್ಯದ ಎಲ್ಲಾ ತಡೆಗಳನ್ನು ಜಯಿಸಿ ಅವುಗಳನ್ನು ಎಂದೆಂದಗೂ ನನ್ನ ಹಿಂದೆ ಹಾಕಬೇಕೆಂಬುದೆ ನನ್ನ ಆಶೆ.
ಸಭೆಯ ಗ್ರಂಥಾಲಯದಲ್ಲಿ ಕೆಲವು ಒಳ್ಳೆ ಪುಸ್ತಕಗಳನ್ನು ನಾನು ಕಂಡೆ. ಮೇಡಮ್ ಗಯಾನರವರ ಜೀವನದ ಕುರಿತಾಗಿ ಇರುವ ಹಳೆಯ ಪ್ರತಿಯನ್ನು ನಾನು ಕಂಡೆ ಆಕೆಯ ಕುರಿತಾಗಿ ನಾನು ಹಿಂದೆಂದೂ ಕೇಳಿರಲಿಲ್ಲ. ನನಗೆ ಓದುವುದಕ್ಕೆ ಬಹಳ ಸಮಯವಿರುವದರಿಂದ ಆ ದೊಡ್ಡ ಪುಸ್ತಕ ಮುಗಿಸಲು ಅನೇಕ ತಿಂಗಳುಹಿಡಿಸಿತು. ಆದರೆ ನಾನೆಂದೂ ಓದದ ಉತ್ತಮ ಪುಸ್ತಕ ಅದಾಗಿತ್ತು. ಕರ್ತನನ್ನು ಹೃದಯಪೂರ್ವಕವಾಗಿ ಪ್ರೀತಿಸುವಂತೆ ಅದು ನನ್ನನ್ನು ಉತ್ತೇಜಿಸಿತು. ನನ್ನ ಆತ್ಮಕ ಜೀವಿತದಲ್ಲಿ ಅನೇಕ ರೀತಿಯಲ್ಲಿ ಅದು ಸಹಾಯವಾಯಿತು ಮುಖ್ಯವಾಗಿ ಶಿಲುಬೆಯ ಮಾರ್ಗ ಮತ್ತು ನಮ್ಮ ಸಂಕಟಪಡುವಿಕೆಯ ಉದ್ದೇಶವನ್ನು ಅರ್ಥಮಾಡಿಕೊಳ್ಳಲು ಸಹಾಯಿಸಿತು.
ಕರ್ತನನ್ನು ಸೇವಿಸಲು ಯಾವುದೇ ಗಮನ ಭಂಗ ಇಲ್ಲದಿರುವುದು
ಈಗ ನನ್ನ ಗುರಿಮಾಡಿಕೊಂಡೆ ಮತ್ತು ಈ ಗುರಿಯ ದೈವಪ್ರೇರಣೆ ನಾನು ಕರ್ತನನ್ನು ಹಿಂಬಾಸಿಲುವಂತೆ ಮಾಡಿತು.
ನನ್ನ ದಾದಿಯ (ನರ್ಸಿಂಗ್)ವ್ಯಾಸಂಗ ಮುಗಿಸಿದ ನಂತರ ಉತ್ತರ ಭಾರತದ ಅದೇ ಪ್ರದೇಶದಲ್ಲಿ ಇದ್ದುಕೊಂಡು ಕೆಲಸಮಾಡಲು ಪ್ರಾರಂಭಿಸಿದೆ, ಯಾಕಂದರೆ ಅಲ್ಲಿ ಕ್ರೈಸ್ತ ದಾದಿಯರ ಅವಶ್ಯಕತೆ ಇರುವುದನ್ನುಕಂಡುಕೊಂಡೆ.
ಪ್ರಥಮ ಆರೋಗ್ಯ ಕೇಂದ್ರದಲ್ಲಿ ನನಗೆ ಕಲಸ ಸಿಕ್ಕಿತು. ನಾವು ಹಳ್ಳಿಗಳಿಗೆ ಕ್ರಮವಾಗಿ ಹೋಗುತ್ತಿದ್ದೆವು. ಈ ಸಂದರ್ಭಗಳು ಆಯಾಸಕರವಾಗಿದ್ದರೂ ಸುಕಾನುಭವವಾಗಿತ್ತು. ಪ್ರತಿ ದಿನ ನಾನು ಕಾರ್ಯಮಗ್ನಳಾಗಿರುತ್ತಿದ್ದೆ. ನಾನು ಜನರನ್ನು ಪ್ರೀತಿಸುತ್ತಿದ್ದೆ ಮತ್ತು ಅವರಿಗೆ ಕರ್ತನ ಬಗ್ಗೆ ಹೇಳಲು ಆಶೆ ಇತ್ತು.
ಪ್ರತಿ ತಿಂಗಳು ನನ್ನ ತಂದೆ ತಾಯಿಗೆ ಕೃತಜ್ಞತೆಯ ಸಲುವಾಗಿ ಸ್ವಲ್ಪ ಹಣವನ್ನು ಮನೆಗೆ ಕಳುಹಿಸುತ್ತಿದ್ದೆ. ಉತ್ತರ ಭಾರತದಲ್ಲಿ ಕರ್ತನ ಸೇವೆಗೆಂದು ಸ್ವಲ್ಪ ಹಣವನ್ನು ಕೊಡಲು ಸಾಧ್ಯವಾಯಿತು. ಮತ್ತು ಮಳೆಗಾಲಕ್ಕಾಗಿಅಥವಾ ನನ್ನಮದುವೆಗಾಗಿ ಉಳಿಸಲು ಸಾಧ್ಯವಾಯಿತು.
ಅಡುಗೆ ಮಾಡುವುದು ಬಟ್ಟೆಗಳನ್ನು ಒಗೆಯುವುದು ಹೀಗೆ ನನ್ನ ವೈಯಕ್ತಿಕ ಕೆಲಸಗಳನ್ನು ನಾನೇ ಮಾಡುವುದರ ಮೂಲಕ ಖರ್ಚುಗಳನ್ನು ಎಷ್ಟೋ ಉಳಿಸಿದೆ. ಬಹಳಷ್ಟು ಸಮಯ ನಾನು ಧರಿಸುವ ನಮ್ಮ ದಾದಿಯರ ಸಮವಸ್ತ್ರ ಬೇರೆ ಯಾವುದೋ ನವೀನ ಉಡುಪುಗಳ ಬಗ್ಗೆ ಚಿಂತಿಸದಂತೆ ಸಹಾಯಿಸಿತು.
ಸುಮಾರು ವರ್ಷಗಳವರೆಗೂ ಎಂದಿಗೂ ನನ್ನ ಬಗ್ಗೆ ಚಿಂತಿಸದಿದ್ದ ನನ್ನ ತಂದೆ ಮತ್ತೆ ನನ್ನ ಜೀವಿತದಲ್ಲಿ ಪ್ರವೇಶಿಸಿದರು. ಈಗ ನಾನು ವ್ಯಾಸಂಗ ಮುಗಿಸಿ ಸಂಪಾದಿಸುತ್ತಿದ್ದೇನೆ. ನನ್ನ ತಂದೆಗೆ ನಾನು ಹೊರದೇಶಕ್ಕೆ ಹೋಗಬೇಕು ನನ್ನ ಮದುವೆಯಾಗಬೇಕೆಂಬ ಆಶೆಯಿಂದ ಬೇರೆ ಬೇರೆ ಕುಟುಂಬಗಳಲ್ಲಿ ವಿಚಾರಿಸುತ್ತಿದ್ದರು. ತಾನು ಕುಡಿಯುವುದನ್ನು ನಿಲ್ಲಿಸಿರುವುದಾಗಿ ನನಗೆ ಪತ್ರ ಬರೆದರು. ಮತ್ತು ನನ್ನ ತಾಯಿ ಅದನ್ನು ಖಚಿತಪಡಸಿದರು. ಇದು ನನ್ನ ಪ್ರಾರ್ಥನೆಗೆ ಉತ್ತರವಾಗಿತ್ತು.
ನಾನು ನಿಜವಾಗಲೂ ನನ್ನ ತಂದೆಯನ್ನು ಪ್ರೀತಿಸುತ್ತಿದ್ದೆ. ಆದ್ದರಿಂದ ಎಂದಿಗೂ ಅವರನ್ನು ನೋಯಿಸಲು ಇಷ್ಟಪಡಲಿಲ್ಲ. ಆದರೆ ನನ್ನ ಕೈಯನ್ನು ನೇಗಿಲಿನ ಮೇಲೆ ಹಾಕಿ ಮತ್ತೆ ಹಿಂದುರುಗಿ ನೋಡಿದರೆ, ಕರ್ತನಿಗೆ ನಾನು ಯೋಗ್ಯಳಲ್ಲವೆಂಬುದನ್ನು ನಾನು ಅರಿತಿದ್ದಿ (ಲೂಕ 9:62).ಯೇಸುವಿಗಿಂತ ಯಾವ ಸಂಬಂಧಿಕರು ಸಹ ನನಗೆ ಪ್ರಾಮುಖ್ಯರಲ್ಲರಂದು ನಾನು ನಿರ್ಧರಿಸಿದ್ದೆ.
ನನ್ನ ಭವಿಷ್ಯದ ಬಗ್ಗೆ ನಾನು ಪ್ರಾರ್ಥಿಸಲು ಪ್ರಾರಂಭಿಸಿದೆ. ನನ್ನ ಮದುವೆಯ ವಿಷಯದಲ್ಲಿ ಕರ್ತನ ನಡೆಸುವಿಕೆ ನನಗೆ ಬೇಕಾಗಿತ್ತು. ಇಬ್ಬರೂ ಒಪ್ಪಂದ ಮಾಡಿಕೊಳ್ಳದೇ ಹೇಗೆ ಒಟ್ಟಾಗಿ ನಡೆಯಲು ಸಾಧ್ಯ? ಕತ್ತಲೆಗೂ ಬೆಳಕಿಗೂ ಐಕ್ಯವೇನು?....ಕ್ರಿಸ್ತ ನಂಬಿಕೆಯಿಲ್ಲದವರೊಂದಿಗೆ ಸೇರಿ ಇಷ್ಟೋಡಾಗಬೇಡಿರಿ ಹೀಗೆ ಮುಂತಾದ ವಾಕ್ಯಗಳನ್ನು ಸತ್ಯವೇದದಲ್ಲಿ ಓದಿರುವುದು ನನ್ನ ನೆನಪಿಗೆ ಬಂದಿತು.
ಈ ವಾಕ್ಯಗಳ ಅರ್ಥ ಸತ್ಯವೇದದಲ್ಲಿ ಬಹಳ ಅರ್ಥಪೂರ್ಣವಾಗಿ ಕೊಡಲ್ಪಟ್ಟಿದೆ. ಒಬ್ಬ ವಿಶ್ವಾಸಿಯು ಅವಿಶ್ವಾಸಿಯನ್ನು ಎಂದಿಗೂ ಮದುವೆಯಾಗಬಾರದು.
ನನ್ನ ತಾಯಿಗೆ ಆದ ಹಾಗೆ ನನ್ನ ಮನೆಯಲ್ಲಿ ಜಗಳಗಳಿಂದ ತುಂಬಿರಬಾರದೆಂದು ನಿರ್ಧರಿಸಿದ್ದೆ. ಕರ್ತನು ನನಗೆ ಸಹಾಯಮಾಡುತ್ತಾನೆ. ನನ್ನ ಗಂಡನಿಗೆ ನಾನು ಅಧೀನಳಾಗಬೇಕೆಂದು ಸತ್ಯವೇದವು ಕಲಿಸಿರುವುದು ನನಗೆ ಗೊತ್ತು. ಆದರೆ ನನ್ನ ಮಕ್ಕಳು ನನ್ನ ಹಾಗೆ ಎಂದಿಗೂ ತೊಂದರೆಗೆ ಒಳಗಾಗಬಾದೆಂದು ನಾನುತೀರ್ಮಾನಿಸಿದೆ.
ಆದರೆ ಈ ಮುಖ್ಯವಾದ ಸತ್ಯಗಳನ್ನು ನನ್ನ ತಂದೆ ತಾಯಿಗಳು ಗ್ರಹಿಸುವಂತೆ ಹೇಗೆ ಮಾಡಲಿ?ನನ್ನ ಕರ್ತನನ್ನು ಒಂದೊಂದು ಹೆಜ್ಜೆಯಲ್ಲಿಯೂ ಕ್ರಯ ಕಟ್ಟಿ ಹಿಂಬಾಲಿಸಲು ತೀರ್ಮಾನಿಸಿದ್ದೆ.
ಒಬ್ಬ ಅವಿಶ್ವಾಸಿಯನ್ನು ಮದುವೆಯಾಗುವುದಕ್ಕಿಂತಲೂ ನನ್ನ ಜೀವನವೀಡಿ ಒಬ್ಬಂಟಿಗಳಾಗಿ ಇರಲು ತೀರ್ಮಾನಿಸಿದೆ. ದೇವರು ನನಗಾಗಿ ಆರಿಸಿಲ್ಲದ ವ್ಯಕ್ತಿಯೊಟ್ಟಿಗೆ ಕೂಡಿರಲು ನನಗೆ ಇಷ್ಟವಿಲ್ಲ. ಈ ವಿಷಯದಲ್ಲಿ ನನ್ನ ತಂದೆ ತಾಯಿಗೆ ವಿನಯ ಶೀಲಳಾಗಿ ಆದರೆ ದೃಢವಾಗಿ ಎದುರಾಗಿರಲು ಸಹ ಸಿದ್ಧಳಾಗಿದ್ದೆ. ಸಾರಳು, ರೂತಳು ಮತ್ತು ಪ್ರಿಸ್ಕಿಲಳು(ಸತ್ಯವೇದದಲ್ಲಿ) ಮತ್ತು ಈಗಿನ ಕಾಲದ ಸುಸನ್ನ ವೆಸ್ಲಿ, ಬೆಟ್ಟಿ ಸ್ಪ್ಯಾಮ್ ಮತ್ತು ಎಲಿಜಬೇತ್ ಎಲಿಯಾಟ್ ಎಂಬ ಸ್ತ್ರೀಯರ ಬಗ್ಗೆ ನಾನು ಸತ್ಯವೇದದಲ್ಲಿ ಜೀವನ ಚರಿತ್ರೆಗಳಲ್ಲಿ ಓದಿದ್ದೆ. ನನ್ನ ಜೀವಿತದ ಮಾದರಿ ಲೈಕೀಕ ಸ್ತ್ರೀಯರಲ್ಲ. ಆದರೆ ಈ ಆತ್ಮೀಕ ಸ್ತ್ರೀಯರೇ ಆಗಿದ್ದರು. ಒಂದು ಸಾರಿ ನಾನು ದಾದಿಯರ ಪ್ರಾರ್ಥನಾ ಕೂಟದಲ್ಲಿ ಸತ್ಯವೇದದಲ್ಲಿರುವ ಸ್ತ್ರೀಯರ ಬಗ್ಗೆ ಅಧ್ಯಾಯನವನ್ನು ತೆಗೆದುಕೊಂಡೆ ಮತ್ತು ಅವರೊಟ್ಟಿಗೆ ಈ ಆತ್ಮೀಕ ಸ್ತೀಯರ ಜೀವನ ಚರಿತ್ರೆಯ ಬಗ್ಗೆ ಹಂಚಿಕೊಂಡಿದ್ದೆ. ಆದುದರಿಂದ ಈ ಸ್ತ್ರೀಯರ ಜೀವನ ಉದಾಹರಣಗಳು ನನ್ನ ಮನಸ್ಸಿನಲ್ಲಿ ಹೊಸದಾಗಿತ್ತು. ಇಸ್ರಾಯೇಲ್ಯರನ್ನು ಶತ್ರುಗಳಿಂದ ಬಿಡಿಸಲು ದೇವರು ಮೋಶೆಯನ್ನು ಉಪಯೋಗಿಸಿಕೊಂಡ ಹಾಗೆ ಧೈರ್ಯಶಾಲಿಯಾದ ದೇಬೋರಳನ್ನು ಆತನು ಉಪಯೋಗಿಸಿಕೊಂಡನು. ಎಸ್ತೇರಳು ದೇವರಿಗೊಸ್ಕರ ಸ್ಥಿರವಾಗಿ ನಿಂತ ಕಾರಣ ಆಕೆಯ ಸಂತತಿಯಲ್ಲಿ ದೇವ ಜನರಿಗೆ ಒಂದು ಆಶೀರ್ವಾದವಾಗಿದ್ದಳು. ಯೇಸುವಿನ ತಾಯಿಯಾದ ಮರಿಯಳು ಪರಿಹಾಸ್ಯ ಮತ್ತು ಅಪಾರ್ಥಕ್ಕೆ ಒಳಗಾದಾಗಲೂ ದೇವರಿಗೆ ಅಧೀನಳಾದ ಒಂದು ಪ್ರಮುಖ ಉದಾಹರಣೆಯಾಗಿದ್ದಾಳೆ. ಮಾರ್ಥ ಮತ್ತು ಮರಿಯಳು ತಮ್ಮ ಮನೆಯನ್ನು ಮತ್ತು ಹೃದಯವನ್ನು ಕರ್ತನಿಗಾಗಿ ತೆರೆದ ಕಾರಣ ತಮ್ಮ ಮನೆಯಲ್ಲಿ ಬಲವಾದ ಅದ್ಭುತವನ್ನು ಅನುಭವಿಸಿದರು.
ಲಿಡಿಯಾ, ದೋರ್ಖಳು, ತೀಮೋಥಿಯನ ತಾಯಿಯಾದ ಯುನಿಕೆ ಮತ್ತು ಆತನ ಅಜ್ಜಿಯಾದ ಲೂಯಿಸ್ ಇವರನ್ನು ನನ್ನ ಕಣ್ಣು ಮುಂದೆ ಇಟ್ಟುಕೊಂಡಿರುವ ಇನ್ನೂ ಕೆಲವು ಉದಾಹರಣೆಗಳಿಂದ ಎಚ್ಚರಿಕೆಗಳನ್ನು ತೆಗೆದುಕೊಂಡಿದ್ದೇನೆ.
ಕೆಲವು ವರ್ಷಗಳು ಕಳೆದವು ಆದರೆ ಸರಿಯಾದ ಮದುವೆಯ ಪ್ರಸ್ತಾಪ ಬರಲಿಲ್ಲ. ನಾನು ನನ್ನ ಜೀವವೀಡಿ ಒಂಬಂಟಿಗಳಾಗಿರಲು ಆರಿಸಿಕೊಂಡೆ.
ಎಲ್ಲಾ ಸ್ತ್ರೀಯರಲ್ಲಿ ಬದ್ರತೆಯ ಬಗ್ಗೆ ಆಶೆಯು ಇರುವಂತೆ ನನ್ನಲ್ಲಿ ಸಹ ಬಲವಾಗಿ ಇತ್ತು. ಆದರೆ ನನ್ನ ಕರ್ತನಲ್ಲಿ ಸಂತೋಷಪಡುವುದು ಮತ್ತು ಎಲ್ಲಾದಕ್ಕಿಂತ ಆತನನ್ನು ಮೆಚ್ಚಿಸುವುದು ನನಗೆ ಪ್ರಥಮವಾಗಿತ್ತು. ಈ ಮದುವೆ ಎಂಬ ಮುಖ್ಯವಾದ ವಿಷಯದಲ್ಲಿ ಆತನಿಗೆ ಅವಿಧೆಯಳಾಗದೇ ಆತನ ಬರುವಿಕೆಗೆಸಿದ್ಧಳಾಗುವುದೇ ನನ್ನ ಆಸೆ ಆಗಿತ್ತು. ನಾನು ಯಾವಾಗಲೂ ದಾದಿಯಾಗಿ ಕೆಲಸ ಮಾಡಿ ದೇವರ ಕೆಲಸಕ್ಕೆ ಬೇರ ಬೇರೆ ಕಡೆ ಬೆಂಬಲಿಸಬಲ್ಲೆ. ಈಗ ನನ್ನ ಜೀವಿತದ ಬಗ್ಗೆ ಘನತೆ ಮತ್ತು ಯೋಗ್ಯತೆಯ ತಿಳುವಳಿಕೆ ಇದೆ. ನನಗೆ ಈಗ ಹಗಲು ಕನಸುಗಳಿಲ್ಲ. ಏನೇ ಬಂದರೂ ಕರ್ತನನ್ನು ಮೆಚ್ಚಿಸಬೇಕೆಂಬುದೇ ನನ್ನ ಆಶೆ.
ನನ್ನ ಅಧಿಕಾರಿಯು ಇಡೀ ಆಸ್ಪತ್ರೆಗೆ ವೈದ್ಯಕೀಯ ಮೇಲ್ವಿಚಾಕರರಾಗಿದ್ದರೂ ಅವರ ಬಗ್ಗೆ ನನಗೆ ಗೌರವದ ಮನೋಭಾವನೆ ಇತ್ತು ಮತ್ತು ನಮ್ಮ ಸಂಭಂಧ ಉತ್ತಮವಾಗಿತ್ತು.
ನಾನು ಮೊದಲೇ ತಿಳಿಸಿದ ಹಾಗೆ ಅನೇಕ ದಾದಿಯರು ಮದುವೆಯಾದ ವೈದ್ಯರೊಟ್ಟಿಗೆ ಸಹ ಬಹಳ ಹತ್ತಿರವಾಗಿ ವರ್ತಿಸುತ್ತಿದ್ದರು. ಈ ದಾದಿಯರು ತಮ್ಮ ಮುರ್ಖ ಮತ್ತು ಸರಸ ಸಲ್ಲಾಪದ ನಡವಳಿಕೆ ಅನೇಕ ಕುಟುಂಬಗಳನ್ನು ಮುರಿದು ಹಾಕುತ್ತದೆಂಬುದನ್ನು ಲಕ್ಷಿಸುತ್ತಿರಲಿಲ್ಲ. ಇಂತಹ ಪಾಪದ ಬಗ್ಗೆ ನಾನು ಎಂದಿಗೂ ಅಪರಾದ ಮನಸ್ಸಾಕ್ಷಿವುಳ್ಳವಳಾಗುವುದು ಬೇಡ.
ನಮ್ಮ ದಾದಿಯರ ಹಾಸ್ಟಲಿನಲ್ಲಿ ಟಿ. ವಿ. ಇತ್ತು ಆ ಟಿ.ವಿ.ಯಲ್ಲಿ ಬರುವ ಕಾರ್ಯಕ್ರಮಗಳಲ್ಲಿ ಇರುವ ಶೂನ್ಯತೆಯನ್ನು ಕಂಡು ಇದನ್ನು ವೀಕ್ಷಿಸುವುದು ಸಮಯವನ್ನು ವ್ಯರ್ಥವಾಗಿ ಕಳೆಯುವುದಾಗಿದೆ ಎಂದು ತಿಳುದುಕೊಂಡೆ. ಆದರೆ ಯಾವಾಗಲೂ ನಾನು ಟಿ. ವಿ. ನೋಡುವುದರಿಂದ, ಎಲ್ಲಿ ಚಟಕ್ಕೆ ಒಳಗಾಗಿ, ಆತ್ಮೀಕತ್ವವನ್ನು ಕಳದು ಕೊಳ್ಳುತ್ತೇನೋ ಎಂಬ ಭಯದಲ್ಲಿ ಜೀವಿಸಿದೆ. ಆನಂತರ ನನ್ನಲ್ಲಿ ತುಂಬಿದ್ದಈ ಭಯವು ನನ್ನ ಒಳ್ಳೆಯ ಸ್ನೇಹಿತರಾದ ಪಾಲಕರ(ವಾರ್ಡನ್) ಮೂಲಕ ಈ ಚಟಕ್ಕೆ ಒಳಗಾಗದ ಹಾಗೆ ನನ್ನನ್ನು ಕಾಪಾಡಿತೆಂಬುದನ್ನು ನಾನು ತಿಳಿದುಕೊಂಡೆ.
ನಮ್ಮ ಸಭೆಯ ಜನರನ್ನು ಪರಿಚಯಿಸಿಕೊಳ್ಳುವುದರಲ್ಲಿ ನನಗೆ ಅತಿಯಾದ ಸಂತೋಷ ಉಂಟಾಗುತ್ತಿತ್ತು ಮತ್ತು ಅವರಲ್ಲಿ ನಮ್ಮ ಕ್ಲಿನಿಕ್ ಗೆ ಬರುತ್ತಿದ್ದ ಕೆಲವರಿಗೆ ನಾನು ಸಹಾಯಿಸುತ್ತಿದ್ದೆ. ಈ ಸಾಧಾರಣ ಜನರನ್ನು ನಾನು ಪ್ರೀತಿಸಿದೆ ಮತ್ತು ಅವರು ನನ್ನನ್ನು ಸಹ ಪ್ರೀತಿಸುತ್ತಾರೆಂಬದನ್ನು ನಾನು ಗ್ರಹಿಸಿದೆ. ಹೀಗೆ ದಿನಗಳು ತಿಂಗಳುಗಳಾಗಿ ಮತ್ತು ತಿಂಗಳುಗಳು ವರ್ಷಗಳಾಗಿ ಬೆಳೆದವು.
ಒಂದು ಸಾರಿ ನಮ್ಮ ಸಭೆಯಲ್ಲಿ ಜಾನ್ ಬನಿಯನ್ ಬರೆದ ಯಾತ್ರಿಕನ ಪ್ರಯಾಣದ ಬಗ್ಗೆ ಅಧ್ಯಾಯನ ಇತ್ತು. ನಮ್ಮಲ್ಲಿ ಅನೇಕರು ಅದು ಪುನರ್ಜಾಗೃತಿಯನ್ನು ತಂದಿತು. ಆ ನಂತರ ನಾವು ನಮ್ಮ ಕ್ರೈಸ್ತೀಯ ಜೀವಿತವನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಲು ಪ್ರಾರಂಭಿಸಿದೆವು. ಕಥೆಯಲ್ಲಿ ಕೇಳಿಸಿಕೊಂಡ ಕ್ರೈಸ್ತನ ಹಾಗೆ ನನ್ನ ಜೀವಿತದ ಅಂತ್ಯದವರೆಗೂ ಯೇಸುವನ್ನೇ ನಂಬಿಗಸ್ತಳಾಗಿ ಹಿಂಬಾಲಿಸಿಬೇಕೆಂಬ ಆಶೆಯಾಯಿತು. ಕೆಲವು ಸಂದರ್ಭಗಳಲ್ಲಿ ನಮ್ಮ ಸಭೆಯಲ್ಲಿ ವಿಶೇಷ ಕೂಟಗಳನ್ನು ಏರ್ಪಡಿಸುತ್ತಿದ್ದೆವು. ಇಂತಹ ಎಲ್ಲಾ ಕೂಟಗಳಲ್ಲಿ ನಾನು ಭಾಗವಹಿಸಿದೆ. ಯಾಕಂದರೆ ನನ್ನ ಜೀವಿತದಲ್ಲಿ ಸತತವಾದ ಪುನರ್ಜಾಗೃತಿ ಬೇಕಾಗಿತ್ತು. ಇಂತಹ ಒಂದು ಸಂಧರ್ಭದಲ್ಲಿ ನನ್ನಲ್ಲಿ ಇರುವ ಒಣಗುವಿಕೆಯ ಬಗ್ಗೆ ನನಗೆ ಅರಿವಾಯಿತು. ಇದರ ಜೊತೆಗೆ ಉತ್ತರ ಭಾರತದಲ್ಲಿರುವ ಬಹು ಉದ್ದನೆಯ ಬಿಸಿಯಾದ ಬೇಸಿಗೆಯು ನನ್ನನ್ನು ಬಹಳವಾಗಿ ಕುಂದಿಸಿತು. ಈಗ ನಾನು ಕರ್ತನನ್ನು ಬಹಳ ಹೊಸದಾಗಿ ಕಂಡುಕೊಳ್ಳಲು ತಿಳಿದೆ.
ಒಂದು ದಿನ ನನ್ನ ಕೋಣೆಯಲ್ಲಿ ನಾನು ಒಬ್ಬಳೇ ಪ್ರಾರ್ಥಿಸುತ್ತಿದ್ದೆ. ಕರ್ತನು ನನ್ನನ್ನು ಸಂಧಿಸಿ, ಬಹಳ ಅನಿರಿಕ್ಷಿತವಾಗಿ ಆಶೀರ್ವದಿಸಿದ. ಒಂದು ವಿಧವಾದ ಸಂತೋಷ ನನ್ನಲ್ಲಿ ತುಂಬಿತು. ಮತ್ತು ನಾನು ಹೊಸದಾದ ಬಾಷೆಯನ್ನು ಆಡಲು ಪ್ರಾರಂಭಿಸಿದೆ. ಆಗ ಯೇಸುವು ನನ್ನನ್ನು ಆತ್ಮನಿಂದ ಅಭಿಷೇಕಿಸಿದ್ದಾನೆಂದು ಗ್ರಹಿಸಿದೆ ಮತ್ತು ನಾನು ತಿಳಿಯಲಾರದ ಭಾಷೆಯಲ್ಲಿ ಪ್ರಾರ್ಥಿಸುತ್ತಿದ್ದೆ. ಅದು ಅನ್ಯಭಾಷಯ ವರವಾಗಿತ್ತು. ಜನರು ಇದರ ಬಗ್ಗೆ ಮಾತನಾಡುವುದನ್ನು ನಾನು ಕೇಳಿದ್ದೆ. ಆದರೆ ಅದರ ಬಗ್ಗೆ ಅಷ್ಟೆನು ತಿಳಿದಿರಲಿಲ್ಲ.
ನಾನು ಸಂತೋಷಪಟ್ಟೆ ಮತ್ತು ರೋಮಾಂಚನಗೊಂಡೆನು. ನನ್ನಂತ ದುಷ್ಟಳಿಗೆ ದೇವರು ಇಂತಹ ಆಶೀರ್ವಾದವನ್ನು ಇಟ್ಟಿದ್ದಾನೆಂಬುದನ್ನು ನಾನು ಎಂದೂ ಗ್ರಹಿಸಿರಲಿಲ್ಲ. ಪವಿತ್ರಾತ್ಮನ ಅಭಿಷೇಕ ನನ್ನಲ್ಲಿ ದೊಡ್ಡದಾದ ಬಿಡುಗಡೆಯನ್ನು ಮತ್ತು ಕರ್ತನಿಗಾಗಿ ಆಳವಾದ ಆಶೆಯನ್ನು ತಂದಿತು. ನನ್ನ ಜೀವಿತ ಪರಲೋಕಕ್ಕೆ ಮಾರ್ಪಾಟು ಹೊಂದಿದ ಹಾಗೆ ಅನ್ನಿಸಿತು. ಅನಂತರ ನಾನು ಆ ಬೆಳಕಿನ ಮಹಿಮೆಯಲ್ಲಿ ಕೆಲವು ದಿನಗಳವರೆಗೆ ಜೀವಿಸಿದೆ.
ಆ ಎಲ್ಲಾ ದಿವಸಗಳು ದೇವರು ನನಗೆ ಕೊಟ್ಟ ಈ ಅನ್ಯಭಾಷೆಯಲ್ಲಿ ನನ್ನ ಹೃದಯದ ಮಾತಿಲ್ಲದ ಆಶೆಗಳನ್ನು ವ್ಯಕ್ತಪಡಿಸಿದೆನು. ನಾನು ಏನೂ ಮಾತನಾಡುತ್ತಿದ್ದೇನೆಂದು ಅರ್ಥವಾಗದಿದ್ದರೂ ನನ್ನ ಮತ್ತು ಕರ್ತನ ನಡುವೆ ಒಂದು ಪ್ರೀತಿಯ ಭಾಷೆಯಹಾಗೆ ಇತ್ತು. ಕರ್ತನು ಪ್ರತಿಯೊಂದು ಮಾತುಗಳನ್ನು
ಅರ್ಥಮಾಡಿಕೊಂಡಿರುವೆನೆಂದು ಖಚಿತವಾಯಿತು. ಯಾಕಂದರೆ ಅದು ನೇರವಾಗಿ ನನ್ನ ಹೃದಯದಿಂದ ಬಂದಿತ್ತು. ಇದು ನನ್ನ ಅಂತರಾಳದಲ್ಲಿ ಆಳವಾಗಿ ಸ್ವಸ್ಥಗೊಳಿಸುವ ಒಂದು ಮುಲಾಮಾಗಿ ಆತ್ಮಕ ಸ್ವಸ್ಥತೆಯನ್ನು ತಂದಿತು. ಪವಿತ್ರಾತ್ಮನು ನನ್ನ ಜೀವಿತದಲ್ಲಿ ಸಹ ಬುಗ್ಗೆಯ ನೀರಿನ ಹಾಗೆ ಹೊಸತನವನ್ನು ಸತತವಾಗಿ ಚಿಮ್ಮುತ್ತಾ ಬಂದನು. ಈ ಬುಗ್ಗೆಯು ಎಂದಿಗೂ ಈ ಪ್ರಪಂಚದ ಸಂತೋಷದ ಹಾಗೆ ಒಣಗಬಾರದು. ಆದರೆ ನನ್ನ ಜೀವಿತದ ಅಂತ್ಯದ ವರೆಗೂ ಹೆಚ್ಚು ಹೆಚ್ಚಾದ ಅಳತೆಯಲ್ಲಿ ಹರಿಯುತ್ತಲೇ ಇರಬೇಕೆಂಬುದಾಗಿ ನನಗೆ ಅನ್ನಿಸಿತು. ಇದಕ್ಕಾಗಿ ನಾನು ದೇವರನ್ನು ನಂಬುತ್ತೇನೆ.
ನನಗಾದ ಅನುಭವವು ಆ ಪಂಚಾಶತ್ತಮಾನ ದಿನದಲ್ಲಿ ಪ್ರಥಮ ಶಿಷ್ಯರು ಹೊಂದಿಕೊಂಡ ಅನುಭವಕ್ಕೆಸಮಾನವಾದ ಅನುಭವವಾಗಿದೆ ಎಂದು ತಿಳಿದೆನು. ಅದು ಭಯಗ್ರಸ್ಥ ಹೇಡಿಗಳಾಗಿದ್ದವರನ್ನು ಕರ್ತನಿಗಾಗಿ ಧೈರ್ಯವುಳ್ಳ ಸಾಕ್ಷಿಗಳಾನ್ನಾಗಿ ಪರಿವರ್ತಿಸಿತು. ನನಗಾದ ಈ ಅನುಭವವನ್ನು ಗರ್ವದಿಂದ ಹೊಗಳಿಕೊಳ್ಳುವುದಿಲ್ಲ. ಆದರೆ ತಾಳ್ಮೆಯಿಂದ ದೀನತೆಯಿಂದ ಕರ್ತನ ಮಹಿಮೆಗಾಗಿ ಉಪಯೋಗಿಸತಕ್ಕದೆಂದು ನಾನು ತಿಳಿದೆ.
ನಾನು ಸತ್ಯವೇದವನ್ನು ಆಳವಾಗಿ ಅಧ್ಯಾಯನ ಮಾಡಿಲ್ಲ. ಆದುದರಿಂದ ನನ್ನ ಈ ಅನುಭವಕ್ಕೆ ವಾಕ್ಯೋಪಧಾರದಿಂದ ವಿವರಿಸಿಲು ಸಾಧ್ಯವಾಗುತ್ತಿಲ್ಲ. ಯೋಹಾನ 7:37-39)ರಲ್ಲಿ ಯೇಸುವು ವಾಗ್ದಾನಮಾಡಿರುವ ಹಾಗೆ ನಾನು ದೇವರಿಗಾಗಿ ದಾಹಗೊಂಡೆ ಮತ್ತು ಇದಕ್ಕಾಗಿ ಹಸಿದೆ. ಆತನು ನನ್ನನ್ನು ಸಂಧಿಸಿ ಜೀವಕರ ಹೊಳೆಗಳು ನನ್ನ ಹೊಟ್ಟೆ ಒಳಗಿನಿಂದ ಹರಿಯುವ ಹಾಗೆ ಮಾಡಿದನು.
ಪವಿತ್ರಾತ್ಮನ ಅಭಿಷೇಕವು ಹೊಸದಾದ ವ್ಯಾಯಾಮವನ್ನು ನನ್ನ ಕ್ರೈಸ್ತೀಯ ಜೀವಿತದಲ್ಲಿ ತಂದಿತು ಮತ್ತು ದೇವರಿಗಾಗಿ ಮತ್ತು ಆತನ ವಾಕ್ಯಕ್ಕಾಗಿ ಹೆಚ್ಚಾದ ದಾಹವನ್ನು ಉಂಟುಮಾಡಿತು.
ಈ ಅನುಭವದ ನಂತರ ನನ್ನ ಸುತ್ತಲಿರುವವರ ಸಂಗಡ ನನ್ನ ನಂಬಿಕೆಯ ಕುರಿತಾಗಿ ಹಂಚಿಕೊಳ್ಳಲು ಕಷ್ಟವಾಗಲಿಲ್ಲ. ನನ್ನ ಹೇಡಿತನ ಹೊರಟು ಹೋಯಿತು.
ನಾನು ಪಡೆದುಕೊಂಡ ಹೊಸ ಭಾಷೆ ಈ ದಿನದವರೆಗೂ ನನ್ನ ಸಂಗಡವಿದ್ದು ನನ್ನ ಪ್ರಾರ್ಥನಾ ಜೀವಿತದಲ್ಲಿ ಹೊಸತನವನ್ನು ತಂದಿದೆ. ನಾನು ಕುಂದಿಹೋಗಲು ಬರುವ ಶೋಧನೆಗಳ ಮಧ್ಯೆದಲ್ಲಿ ಮತ್ತು ಒತ್ತಡಗಳ ನಡುವೆ ಬಹಳ ಸಹಾಯವಾಗಿರುವುದನ್ನು ಕಂಡುಕೊಂಡೆನು.
ನಾನು ಮದುವೆಯಾಗುವ ಮೊದಲು ದೇವರು ನನ್ನನ್ನು ಸಂಧರ್ಶಿಸಿದಕ್ಕಾಗಿ ನಾನು ಆತನಿಗೆ ಕೃತಜ್ಞಳಾಗಿದ್ದೇನೆ
.ಒಂದು ದಿನ ನಮ್ಮ ಸಭೆಯ ಪಾಲಕರು ತಮ್ಮ ಹೆಂಡತಿಯ ಜೊತೆಗೆ ನನ್ನನ್ನು ನೋಡಲು ಬಂದರು ಮತ್ತು ಮದುವೆಯಾಗಲು ಯೋಚಿಸುತ್ತಿದ್ದೀಯಾ? ಹೌದಾಗಿದ್ದರೆ ಸಭೆಯ ಒಬ್ಬ ಯೌವನಸ್ಥನನ್ನು ಜೀವಿತದ ಸಂಗಾತಿಯಾಗಲು ಸಾಧ್ಯತೆಯಿರುವವನ ಬಗ್ಗೆ ಯೋಚಿಸುವಿಯಾ?ಎಂದು ಕೇಳಿದರು. ಆತನ ಹೆಸರು ಪ್ರಕಾಶ ಮತ್ತು ಆತನು ಎಲೆಕ್ಟ್ರಾನಿಕ್ ಕಂಪನಿಯಲ್ಲಿ ತಾಂತ್ರಿಕ ವಿಭಾಗದಲ್ಲಿ ಕೆಲಸಮಾಡುತ್ತಾನೆ. ಒಬ್ಬ ಒಳ್ಳೆ ಕ್ರಿಸ್ತನು ತನ್ನ ಉತ್ತಮ ವಿಧ್ಯಾಭ್ಯಾಸಕ್ಕಾಗಿ ಅನೇಕ ತೊಡಕುಗಳನ್ನು ಎದುರಿಸಬೇಕಾಗಿತ್ತು.
ಈ ಮದುವೆಯ ಪ್ರಸ್ತಾಪದಲ್ಲಿ ಅನೇಕ ನಕಾರಾತ್ಮಕ ಮತ್ತು ಸಕಾರಾತ್ಮಕ ಸಂಗತಿಗಳನ್ನು ಯೋಚಿಸಬೇಕಾಗಿತ್ತು. ನಾನು ಮತ್ತು ಪ್ರಕಾಶನು ಬೇರೆ ಬೇರೆ ಸಾಮಾಜಿಕ ಜೀವನದಿಂದ ಬಂದವರು ಮತ್ತು ನಮ್ಮ ಮಾತೃ ಭಾಷೆ ಬೇರೆಯಾಗಿತ್ತು. ನಾನು ಬಹಳ ಸರಳವಾಗಿ, ಸಾಧಾರಣ ಭಾಷೆಯಲ್ಲಿ ಸಂಭಾಷಿಸಬಲ್ಲ ವ್ಯಕ್ತಿಯೊಟ್ಟಿಗೆ ಮದುವೆಯಾಗಬೇಕೆಂದಿದ್ದೆ. ಸಂಪರ್ಕವು ನನ್ನ ಮದುವೆಯ ಜೀವಿತದ ಬಹಳ ಪ್ರಾಮುಖ್ಯ ಭಾಗವಾಗಿತ್ತು. ಆದರಿಂದ ಆತನು ಇಂಗ್ಲಿಷನ್ನು ಚೆನ್ನಾಗಿ ಮಾತನಾಡಬಲ್ಲವನೆಂಬುದನ್ನು ತಿಳಿದು ಸಂತೋಷಿಸಿದೆ. ಪ್ರಕಾಶನಿಗೆ ಸಭೆಯಲ್ಲಿ ಒಳ್ಳೆ ಸಾಕ್ಷಿ ಇತ್ತು ಮತ್ತು ನನ್ನ ಸಣ್ಣ ವಯಸ್ಸಿನಿಂದ ನಾನು ಆತನನ್ನು ಸಭೆಯ ಕೂಟಗಳಲ್ಲಿ ಸಂಗೀತವನ್ನು ನಿಯಂತ್ರಿಸುತ್ತಿದ್ದನ್ನು ನೋಡಿದ್ದೆ. ನಾನು ಆತನನ್ನು ಆತ್ಮೀಕ ರೀತಿಯಲ್ಲಿ ಕಾಣಬೇಕೆಂದು ಅನ್ನಿಸುತ್ತದೆ. ಇದು ನನಗೆ ಬಹಳ ಪ್ರಾಮುಖ್ಯವಾದ ಸಂಗತಿ ಅನೇಕ ಸ್ತ್ರೀಯರು ತಮ್ಮ ಗಂಡಂದಿರನ್ನು ಆತ್ಮೀಕ ರೀತಿಯಲ್ಲಿ ಕಾಣದಿದ್ದ ಕಾರಣ ತಮ್ಮ ಜೀವಿತದಲ್ಲಿ ದೊಡ್ಡ ನಷ್ಟಗಳನ್ನು ಎದುರಿಸಬೇಕಾದದ್ದನ್ನು ನಾನು ಕಂಡಿದ್ದೇನೆ. ಕರ್ತನಿಗಾಗಿ ಇರುವಂತ ಪ್ರೀತಿಯನ್ನು ನನ್ನ ಮತ್ತು ಪ್ರಕಾಶನ ನಡುವೆ ಒಂದು ಸಾಮಾನ್ಯವಾದ ಸಂಗತಿಯಾಗಿರುವುದನ್ನು ನಾನು ಗ್ರಹಿಸಿದೆ.
ಆದರೆ ಬಹಳ ಬೇಗ ನಾನು ತೀರ್ಮಾನವನ್ನು ತೆಗೆದುಕೊಳ್ಳುವುದು ನನಗೆ ಇಷ್ಟವಿರಲಿಲ್ಲ. ನಾನು ಇವರ ಬಗ್ಗೆ ಪ್ರಾರ್ಥಿಸುವೆನೆಂದು ನನ್ನ ಸಭೆಯ ಪಾಲಕರಿಗೆ ಹೇಳಿದೆ. ನಾನು ಉದ್ರೇಕಗೊಂಡೆ ಆದರೆ ನನ್ನ ಉದ್ರೇಕವು ನನ್ನೊಂದಿಗೆ ಓಡುವುದು ನನಗೆ ಇಷ್ಟವಿರಲಿಲ್ಲ. ನಾನು ಒಂದು ದಿನ ಉಪವಾಸ ತೆಗೆದುಕೊಂಡು ಕರ್ತನು ನನಗೆ ತನ್ನ ಚಿತ್ತವನ್ನು ಸ್ಪಷ್ಟವಾಗಿ ತಿಳಿಸುವಂತೆ ಕೇಳಿಕೊಂಡೆ ಮತ್ತು ಈ ವಿಷಯದ ಬಗ್ಗೆ ನಾನು ಬಿಡದೆ ಪ್ರತಿ ದಿನ ಪ್ರಾರ್ಥಿಸಲು ಪ್ರಾರಂಭಿಸಿದೆ.
ಪ್ರಕಾಶನು ತನ್ನ ತಂದೆ ತಾಯಿಗೆ ಒಬ್ಬನೇ ಮಗನಾಗಿದುದರಿಂದ ಅವರೊಂದಿಗೆ ನೆಲೆಸಿದ್ದನು. ನಾನು ಮದುವೆಯಾದರೆ ಅವರೊಂದಿಗೆ ಇರಬೇಕಾಗುತ್ತದೆಂಬುದು ನನಗೆ ಗೊತ್ತಿತ್ತು. ನಾನು ಯಾವುದಕ್ಕೂ ಸಿದ್ಧಳಿದ್ದೆ. ನಾನು ಮುಖ್ಯವಾಗಿ ತಿಳಿಯಬಯಸಿದ್ದು ನನ್ನ ಪರಲೋಕದ ತಂದೆಯ ಚಿತ್ತ. ನಾನು ಬಹಳ ಅನುಕೂಲವಾಗಿ ಮತ್ತು ಸುಖಭೋಗಗಳಿಂದ ಜೀವಸಲು ಯೋಚಿಸಿದ್ದ ಎಲ್ಲಾ ಆಲೋಚನೆಗಳನ್ನು ದೂರ ಹಾಕಿದೆ. ನಾನು ಆತನನ್ನು ಮದುವೆಯಾದರೆ ನನ್ನ ತಂದೆ ತಾಯಿಯನ್ನು ಯಾವ ರೀತಿ ಗೌರವಿಸುತ್ತಿದ್ದನೋ ಅದೇ ರೀತಿ ಅವರ ತಂದೆ ತಾಯಿಯನ್ನು ಗೌರವಿಸಲು ತೀರ್ಮಾನಿಸಿದೆ.
ನಾನು ಒಂದು ಕುಟುಂಬ ಮತ್ತು ಮನೆಗಾಗಿ ಆಶಿಸಿದೆ ಮತ್ತು ಅಂತಹ ಆಲೋಚನೆ ನನ್ನನ್ನು ಸಂತೋಷಗೊಳಿಸಿತು. ಆದರೆ ನನ್ನ ಮುಂದೆ ಸುಖಕರ ಜೀವಿತವಿರುವಂತದ್ದು ಅಸ್ಪಷ್ಟವಾಗಿತ್ತು. ಒಂದು ಹೊಸಸಂಸ್ಕೃತಿ, ಬೇರೆ ಸಾಮಾಜಿಕ ಜೀವನದಿಂದ ಬಂದ ವ್ಯಕ್ತಿ ಮತ್ತು ನನ್ನ ಅತ್ತೆ ಮಾವಂದಿರ ಜೊತೆ ನನ್ನ ಜೀವಿತ ನನ್ನ ಮುಂದಿತ್ತು. ಆದರೆ ಆ ಜೀವಿತ ಸಂತೋಷಕರವಾಗಿರುತ್ತದೆ ಯಾಕೆಂದರೆ ಪ್ರಕಾಶನು ಮತ್ತು ನಾನು ಕರ್ತನನ್ನು ಪ್ರೀತಿಸುತ್ತಿದ್ದೆವು. ಈ ವಿಷಯ ಹೆಚ್ಚಾಗಿ ನನ್ನನ್ನು ಸಂತೈಸುತ್ತಿತ್ತು.
ನಾನು ಸತ್ಯವೇದದಲ್ಲಿರುವ ರೂತಳೆಂಬ ಹುಡುಗಿಯ ಬಗ್ಗೆ ಯೋಚಿಸುತ್ತಿದ್ದೆ. ಆಕೆ ತನ್ನ ಜನರನ್ನು ಬಿಟ್ಟು ಬೇರೆ ಸಂಸ್ಕೃತಿ ಮತ್ತು ಗೋತ್ರದವರನ್ನು ಮದುವೆಯಾದಳು. ಆಕೆ ತನ್ನ ಗಂಡನಿಗೆ ಮತ್ತು ಆತನ ಜನರಿಗೆ ಸತ್ಯವಂತಳಾಗಿದ್ದಳು. ತಾನು ಒಬ್ಬ ಬಡ ಹೆಂಗಸಾಗಿ ತನ್ನ ಜೀವಿತವನ್ನು ಪ್ರಾರಂಭಿಸಿದಳು.ಈಕೆ ಮೋವಾಬ್ಯರ ಗೋತ್ರದಿಂದ ಬಂದಿದ್ದಳು. ಈ ಗೋತ್ರವು ಹಾದರದಿಂದ ಬಂದದ್ದಾಗಿದ್ದರೂ ಸಹ ದೇವರು ಆಕೆಯನ್ನು ಆಶೀರ್ವದಿಸಿದನು(ಆದಿ 19:30-37) ಮತ್ತು ಇದು ದೇವರ ಸಭೆಯಲ್ಲಿ ಪ್ರವೇಶಿಸಲು ಅಪ್ಪಣೆ ಇರಲಿಲ್ಲ. (ಧರ್ಮೋ 23:3) ಆದರೂ ಸಹ ಈಕೆಯು ದಾವೀದ ರಾಜನ ಮುತ್ತಜ್ಜಿಯಾದಳು.
ಎರಡು ಪುಸ್ತಕಗಳು ನನಗೆ ದೇವರ ಚಿತ್ತವನ್ನು ಕಂಡುಕೊಳ್ಳಲು ಬಹಳ ಪ್ರಯೋಜನಕರವಾದವು. ಅವು ಲೈಂಗಿಕತೆ, ಪ್ರೀತಿ ಮತ್ತು ಮದುವೆ (ಕ್ರಿಸ್ತಿಯ ಮಾರ್ಗ) ಮತ್ತು ದೇವರ ಚಿತ್ತ ತಿಳಿಯುವುದು.(ಈ ಎರಡು ಪುಸ್ತಕಗಳು ಸಹ ಸಹೋದರ ಝಾಕ್ ಪೂನನ್ ರವರಿಂದ ಬರೆಯಲ್ಪಟ್ಟಿವೆ.
ಈ ಎರಡು ಪುಸ್ತಕಗಳು ಮದುವೆಯನ್ನು ನಾನು ದೇವರ ದೃಷ್ಟಿಕೋನದಲ್ಲಿ ನೋಡುವಂತೆ ಸಹಾಯಿಸಿತು. ಮೊದಲನೆಯ ಪುಸ್ತಕ ನಾನು ಜೀವಿತದ ಸಂಗಾತಿಯಲ್ಲಿ ಏನನ್ನು ಕಾಣಬೇಕೆಂಬುದಾಗಿ ತಿಳಿಯಲು ಸಹಾಯಿಸಿತು. ಆಮೇಲೆ ನಾನು ಪ್ರಕಾಶನ ಮತ್ತು ಅವನ ಕುಟುಂಬದ ಕುರಿತಾದ ಸಂಗತಿಗಳನ್ನು ಸಭೆಯ ಪಾಲಕರಲ್ಲಿ ಕೇಳಿದೆ.
ಈ ಮದುವೆಯ ಪ್ರಸ್ತಾಪದ ಬಗ್ಗೆ ನನ್ನ ತಂದೆ ತಾಯಿಗೆ ಸಹ ಪತ್ರ ಬರೆದೆ. ಅವರು ಇದರ ಬಗ್ಗೆ ಸಂತೋಷಪಡುವುದಿಲ್ಲವೆಂಬುದು ನನಗೆ ಗೊತ್ತಿತ್ತು. ನಾನು ಒಬ್ಬ ಶ್ರೀಮಂತನನ್ನು ಅಥವಾ ಹೊರದೇಶದಲ್ಲಿ ಕಲಸಮಾಡಿ ಬಹಳವಾಗಿ ಹಣ ಸಂಪಾದನೆ ಮಾಡುವವನನ್ನು ಮದುವೆಯಾಗಬೇಕೆಂಬುದು ಅವರ ಆಸೆ ಮತ್ತು ನಾನು ಅದಕ್ಕೆ ಒಪ್ಪದಿದ್ದರೆ ನನ್ನ ಜೀವಿತವಿಡೀ ಒಬ್ಬಂಟಿಗಳಾಗಿದ್ದುಕೊಂಡು ಅವರಿಗೆಸಹಾಯಮಾಡಬೇಕೆಂಬುದು ಅವರ ಆಲೋಚನೆ. ನಾನು ಅವರಿಗೆ ಗೌರವಾರ್ಹಾತೆಯಿಂದ ಪತ್ರ ಬರೆದು ಅವರು ನನ್ನ ಸಂತೋಷದಲ್ಲಿ ಆಸಕ್ತಿಯುಳ್ಳವರಾಗಿದ್ದಾರಾ? ಎಂದು ಕೇಳಿದೆ. ದೇವರ ಅವರ ಮನಸ್ಸನ್ನು ಬದಲಾಯಿಸಲೆಂದು ಈ ಪತ್ರವನ್ನು ಬಹಳ ಪ್ರಾರ್ಥಪೂರ್ವಕವಾಗಿ ಕಳುಹಿಸಿದೆ.
ಕೆಲವು ಸಂದರ್ಭಗಳಲ್ಲಿ ವಿಶಿಷ್ಟ ವ್ಯಕ್ತಿಯ ಹೆಂಡತಿಯಾಗುವ ಆಲೋಚನೆಯನ್ನು ತಡೆಯಲು ಅಸಾಧ್ಯವಾಗುತ್ತಿತ್ತು. ನನ್ನ ಇಡೀ ಜೀವಿತವನ್ನು ಬದಲಾಯಿಸುವ ಒಂದು ಗಂಭೀರ ಹೆಜ್ಜೆಯನ್ನು ತೆಗೆದುಕೊಳ್ಳುವುದನ್ನು ನೆನಸಿ ಕೆಸವು ವೇಳೆ ನಾನು ಸ್ವಲ್ಪ ಭಯ ಸಹ ಪಡುತ್ತಿದ್ದೆ. ನನ್ನ ಸಂಪೂರ್ತಿಯನ್ನು ಬೇರೊಬ್ಬ ವ್ಯಕ್ತಿಯೊಟ್ಟಿಗೆ ಹಂಚಿಕೊಳ್ಳುತ್ತೇನೆ. ಅದು ಹಾಸ್ಟೆಲಿನ ಕೋಣೆಯಲ್ಲಿ ಹೊಸ ಸಹೋದ್ಯೋಗಿಯು ಕಷ್ಟಕರಳಾಗಿದ್ದರೆ ಅವಳನ್ನು ಅಲಕ್ಷಮಾಡಬಹುದು. ಅಥವಾ ಬೇರೆ ಕೋಣೆಗೆ ಬದಲಾಯಿಸಿಕೊಳ್ಳಬಹುದು. ಆದರೆ ಒಬ್ಬ ಗಂಡನೊಂದಿಗೆ ಎಂದಿಗೂ ಆ ರೀತಿ ಮಾಡಲು ಸಾಧ್ಯವಿಲ್ಲ. ನಾನು ದೇವರ ಚಿತ್ತವನ್ನು ಕಳೆದುಕೊಳ್ಳಬಾರದೆಂದು ಬಹಳ ಆಸಕ್ತಿಯುಳ್ಳವಳಾಗಿ ಪ್ರಾರ್ಥಿಸಿದೆ. ಮತ್ತು ಒಂದು ವೇಳೆ ನಾನು ತಪ್ಪು ಮಾಡುತ್ತಿದ್ದರೆ ದೇವರು ಈ ಮದುವೆಯ ಪ್ರಸ್ತಾಪವನ್ನು ಈ ಹಂತದಲ್ಲೇ ನಿಲ್ಲಿಸಲೆಂದು ಪ್ರಾರ್ಥಿಸಿದೆ. ನಾನು ದೇವರ ಚಿತ್ತದಲ್ಲಿ ಕೇಂದ್ರಿಕರಿಸಲ್ಪಬೇಕೆಂಬುದೊಂದೇ ಮುಖ್ಯವಾಗಿತ್ತು.
ನನ್ನ ತಾಯಿಗೆ ಆದ ಹಾಗೆ ಅಸಂತೋಷದ ಮದುವೆ ನನಗೆ ಇಷ್ಟವಿರಲಿಲ್ಲ. ಈ ಮದುವೆಯ ಪ್ರಸ್ತಾಪದ ಬಗ್ಗೆ ಕೆಲವು ತಿಂಗಳುಗಳು ಕಳೆದ ನಂತರ ನನ್ನ ಆತ್ಮದಲ್ಲಿ ಒಂದು ವಿಧವಾದ ಸಮಾಧಾನವನ್ನು ಅನುಭವಿಸಿದೆ. ಇದು ದೇವರು ನನಗಾಗಿ ತನ್ನ ಚಿತ್ತದ ಬಗ್ಗೆ ತಿಳಿಸುತ್ತಿರುವುದೆಂಬುದು ನನಗೆ ಗೊತ್ತಿತ್ತು. ನನ್ನ ಸಭೆಯ ಪಾಲಕರಿಗೆ ಇದರ ಬಗ್ಗೆ ನಾನು ತಿಳಿಸಿದೆ. ಆ ಮರುದಿನವೇ ನನ್ನ ತಂದೆ ತಾಯಿಯಿಂದ ನನ್ನ ಮದುವೆಯ ಬಗ್ಗೆ ಅವರ ಸಮ್ಮತಿಯ ವಿಷಯವಾಗಿ ಪತ್ರ ಬಂದಿತು. ದೇವರ ಸಮಯ ಎಷ್ಟು ಸಂಪೂರ್ಣ. ನನ್ನ ತಂದೆ ತಾಯಿಯು ಪ್ರಕಾಶನ ಬಗ್ಗೆ ಕೆಲವು ವಿಚಾರಣೆಗಳನ್ನು ಸ್ನೇಹಿತರಿಂದ ಮಾಡಿದ್ದಾರೆ ಮತ್ತು ಆತನ ಬಗ್ಗೆ ಒಳ್ಳೆಯ ಅಭಿಪ್ರಾಯ ಸಿಕ್ಕಿದೆ.
ಒಂದು ದಿನ ಸಭಾಪಾಲಕರು ನಮ್ಮ ನಿಶ್ಚಿತಾರ್ಥದ ಬಗ್ಗೆ ಸಭೆಯಲ್ಲಿ ಪ್ರಕಟಿಸಿದರು. ಪ್ರಕಾಶನು ಮತ್ತು ನಾನು ಹಾಸ್ಟೆಲಿನ ಸಂಧರ್ಶಕರ ಕೊಠಡಿಯಲ್ಲಿ ಸಂದಿಸಿದೆವು ಮತ್ತು ಒಬ್ಬರನೊಬ್ಬರು ಸ್ವಲ್ಪ ಮಟ್ಟಿಗೆ ತಿಳಿದುಕೊಂಡೆವು. ಪ್ರಕಾಶನ ಬಗ್ಗೆ ನನ್ನ ಪ್ರೀತಿ ಬೆಳೆಯಲು ಪ್ರಾರಂಭಸಿತು. ಮತ್ತು ನಮ್ಮ ಭಾರತದ ಸಂಸ್ಕೃತಿಯ ಸಲುವಾಗಿ ಮಿತ ಬಾಷಿತ್ವ ಮತ್ತು ಪರಿಮಿತಿಯ ಸಲುವಾಗಿ ನಾವು ಒಬ್ಬೊರಿಗೊಬ್ಬರು ಹೇಳದಿದ್ದರೂ ನಮ್ಮ ಪ್ರೀತಿಯು ಅದಲು ಬದಲು ಆಗುತ್ತಿತ್ತು.
ದೇವರು ನನಗೆ ಎಷ್ಟು ಒಳ್ಳೆಯವನಾಗಿದ್ದನು ಮತ್ತು ಇಂತ ಅದ್ಭುತ ರೀತಿಯಲ್ಲಿ ನನಗಾಗಿ ಆತನು ಆರಿಸಿದ್ದ ವ್ಯಕ್ತಿಯ ಕಡೆಗೇ ನನ್ನನ್ನು ನಡೆಸಿದ. ನನ್ನ ಯೌವನದ ಕಾಲದಲ್ಲಿ ಮುರ್ಖಳಾಗಿ ನನ್ನ ಯೋಚನೆಯಲ್ಲಿ ಬೇರೆ ವ್ಯಕ್ತಿಗಳ ಬಗ್ಗೆ ಕಲ್ಪನಾ ಚಿತ್ರಗಳನ್ನು ನಿರ್ಮಿಸಿಕೊಳ್ಳುತ್ತಿದ್ದೆ. ಆದರೆ ಕರ್ತನು ನನ್ನನ್ನು ತನ್ನ ಕೃಪೆಯಿಂದ ಬೇರೆಯವರಿಗಾಗಿ ನನ್ನ ಪ್ರೀತಿಯನ್ನು ವ್ಯರ್ಥಗೊಳಿಸದ ಹಾಗೆ ಕಾಪಾಡಿದನು. ಆದರೂ ಇಂತಹ ತಪ್ಪುಗಳನ್ನು ಪರಿಹರಿಸಿ ನಾನು ಬಿದ್ದಿದ್ದರೆ ನನ್ನ ಪ್ರೀತಿಯ ರಕ್ಷಕನು ನನ್ನನ್ನು ಕ್ಷಮಿಸಿ, ನನ್ನ ಪಾಪಗಳನ್ನು ಪರಿಹರಿಸಿ ನಾನು ಹೊಸ ಜೀವಿತವನ್ನು ಪ್ರಾರಂಭಿಸಲು ಸಹಾಯಿಸುತ್ತಾನೆಂದು ಬಲ್ಲೆನು. ನಾವು ತಪ್ಪಿಹೋದ ನಂತರವು ದೇವರು ನಮಗೆ ಅನೇಕ ಸಂದರ್ಭಗಳನ್ನು ಒದಗಿಸಿಕೊಡುತ್ತಾನೆ ಮತ್ತು ನಮ್ಮ ಹಿಂದಿನವುಗಳನ್ನು ಸಂಪೂರ್ಣವಾಗಿ ಮರೆತು ಹೋಗಲು ಸಹಾಯಿಸುತ್ತಾನೆ. ನನ್ನನ್ನು ಈ ಎಲ್ಲಾ ವರ್ಷಗಳು ತನ್ನ ಬುದ್ದಿವಾದಗಳಿಂದ ಮತ್ತು ಪ್ರಾರ್ಥನೆಯಿಂದ ಕಾಯುತ್ತಾ ಬಂದ ಅಧ್ಯಕ್ಷ ಸ್ನೇಹಿತಳಿಗೆ ನನ್ನ ನಿಶ್ಚಿತಾರ್ಥದ ಬಗ್ಗೆ ಪತ್ರ ಬರೆದೆ. ಆಕೆಯು ಒಬ್ಬಂಟಿಗಳಾಗಿದ್ದರೂ ಸಹ ಕ್ರಿಸ್ತಿಯ ಶೈಲಿಯಲ್ಲಿ ನನ್ನ ಸಂತೋಷದಲ್ಲಿ ಭಾಗಿಯಾಗಿರುವುದಾಗಿ ಮರು ಪತ್ರ ಬರೆದಳು.
ನನ್ನ ಮದುವೆಯ ವಿಷಯದ ಬಗ್ಗೆ ನಾನು ನೀರಿಕ್ಷೆಯನ್ನು ಕಳೆದುಕೊಂಡಿದ್ದೆ ಮತ್ತು ನನ್ನ ತಂದೆ ತಾಯಿಗಳು ಸಹ ಸಹಾಯಿಸಲು ಸಾಧ್ಯವಾಗದೆ ಇರುವಾಗ ನನ್ನ ದೇವರು ಜೀವಿತದಲ್ಲಿ ಈ ವಿಷಯದ ಬಗ್ಗೆ ಮಾಡಿರುವ ಎಲ್ಲಾ ಸಂಗತಿಗಳನ್ನು ನೆನಸುವಾಗ ಮರಿಯಳು ಹೇಳಿದ ವಾಕ್ಯಗಳು ನನ್ನ ನೆನಪಿಗೆ ಬಂದಿತು. ನನ್ನ ಆತ್ಮವು ರಕ್ಷಕನಾದ ದೇವರ ವಿಷಯದಲ್ಲಿ ಉಲ್ಲಾಸಗೊಂಡಿದೆ. ಆತನು ತನ್ನ ದಾಸಿಯ ದೀನಸ್ಥಿತಿಯ ಮೇಲೆ ಲಕ್ಷವಿಟ್ಟಿದ್ದಾನೆ. ಇಗೋ, ಇಂದಿನಿಂದ ತಲತಲಾಂತರದವರೆಲ್ಲಾ ನನ್ನನ್ನು ಧನ್ಯಳೆಂದು ಹೊಗಳುವರು. ಶಕ್ತನಾಗಿರುವಾತನು ನನಗೆ ದೊಡ್ಡ ಉಪಕಾರಗಳನ್ನು ಮಾಡಿದ್ದಾನೆ. ಆತನ ನಾಮವು ಪರುಶುದ್ಧವಾದ್ದು. (ಲೂಕ1:47-49).
ಪ್ರಕಾಶನು ಮತ್ತು ನಾನು ವಾರದಲ್ಲಿ ಎರಡು ಸಾರಿ ಸಂದಿಸುತ್ತಿದ್ದೇವು ಮತ್ತು ಅವನ ಪ್ರತಿ ಸಂಧರ್ಶನಕ್ಕಾಗಿ ನಾನು ಕಾಯುತ್ತಿದ್ದೆ. ಅವನು ಕರ್ತನನ್ನು ಆಳವಾಗಿ ಪ್ರೀತಿಸುವುದನ್ನು ಕಂಡೆ. ಮತ್ತು ಅದು ಎಲ್ಲದಕ್ಕಿಂತಲೂಹೆಚ್ಚಾಗಿ ನಾನು ಸುರಕ್ಷಿತೆಯಲ್ಲಿರುವುದಾಗಿ ಮಾಡುತು. ನಾನು ಅವನ ಹೆಂಡತಿಯಾಗುವ ದಿನಕ್ಕಾಗಿ ಕಾಯುತ್ತಿದ್ದೆ. ಮತ್ತು ಅವನು ನಮ್ಮ ಜೀವಿತಕ್ಕಾಗಿ ಯೋಜನೆಗಳನ್ನು ಮಾಡಿದ ಪ್ರತಿ ಸಂದರ್ಶನವನ್ನು ನಾವು ಪ್ರಾರ್ಥನೆಯಿಂದ ಯೇಸುವು ನಮ್ಮ ಜೀವಿತದ ಕರ್ತನೆಂದು ಅರಿಕೆ ಮಾಡಿ ಮುಗಿಸುತ್ತಿದ್ದೆವು.ಈಗ ನನ್ನ ದಿನಗಳು ಸೂರ್ಯನ ಪ್ರಕಾಶದಿಂದ ತುಂಬಿದೆ.
ನಮ್ಮ ಮದುವೆಗಾಗಿ ಒಂದು ತಾರೀಖನ್ನು ನಿಗದಿಪಡಿಸಿದೆವು. ನನ್ನ ತಂದೆ ತಾಯಿ ಕೆಲವು ದಿವಸಗಳ ಮುಂಚೆಯೇ ಬಂದರು. ಅವರು ಪ್ರಕಾಶನ ನಡತೆಯಿಂದ ಪ್ರಭಾವಿಸಲ್ಪಟ್ಟರು.ಅವರ ಮನೋಭಾವನೆಗಳಲ್ಲಿ ನಿಜವಾದ ಬದಲಾವಣೆಗಳನ್ನು ದೇವರು ತಂದಿರುವುದನ್ನು ನಾನು ಕಂಡೆನು, ನಾವು ದೇವರನ್ನು ಗೌರವಿಸುವಾಗ ಆತನು ನಮ್ಮನ್ನು ಗೌರವಿಸುತ್ತಾನೆ.
ನಮ್ಮ ಮದುವೆಯು ಬಹಳ ಸರಳವಾಗಿತ್ತು.ಯಾಕಂದರೆ ನಮ್ಮಿಬ್ಬರಲ್ಲಿಯೂ ವಿಜ್ರಂಬಣೆಯಾಗಿ ಮಾಡಲು ಸಾಕಷ್ಟು ಹಣವಿರಲಿಲ್ಲ. ತಮ್ಮ ಮದುವೆಯ ಸತ್ಕಾರ ಕೂಟವು ವಿಜೃಂಭಣೆಯಾಗಿರಬೇಕೆಂದು ಸಾಲ ಮಾಡಿ ತಮ್ಮ ಜೀವಿತವನ್ನು ಸಾಲದಿಂದ ಪ್ರಾರಂಭಿಸಿದ ದಂಪತಿಗಳನ್ನು ನಾನು ಬಲ್ಲೆ.
ಪ್ರಕಾಶ ಮತ್ತು ನಾನು ನಮ್ಮ ಜೀವಿತದಲ್ಲಿ ಎಂದಿಗೂ ಸಾಲಕ್ಕೆ ಒಳಪಡುವುದಿಲ್ಲವೆಂಬುದಾಗಿ ತೀರ್ಮಾನಿಸಿಕೊಂಡೆವು. ಆದ್ದರಿಂದ ಪ್ರಕಾಶನ ಕೆಲವು ಸಂಬಂಧಿಕರನ್ನು ಸಭೆಯ ಸದಸ್ಯರನ್ನು ಮತ್ತು ಆಸ್ಪತ್ರೆಯಿಂದ ಕೆಲವು ಸ್ನೇಹಿತರನ್ನು ಮದುವೆಯ ಸತ್ಕಾರ ಕೂಟಕ್ಕೆ ಆಹ್ವಾನಿಸಿದೆವು. ನನ್ನ ಅಧ್ಯಕ್ಷ ಸ್ನೇಹಿತ ಸಹ ಅಲ್ಲಿದ್ದರು.
ಮದುವೆಯಲ್ಲಿ ಪ್ರಕಾಶ ಮತ್ತು ನಾನು ಸಂಕ್ಷಿಪ್ತವಾಗಿ ಕರ್ತನು ನಮಗೆ ಏನಾಗಿದ್ದಾನೆಂಬುದಾಗಿ ಸಾಕ್ಷಿ ಕೊಟ್ಟೆವು. ಇದು ಅಸಾಧಾರಣವಾಗಿತ್ತು. ಯಾಕೆಂದರೆ ಸಾಧಾರಣವಾಗಿ ಮದುಮಗನು ಮತ್ತು ಮದುಮಗಳು ತಮ್ಮ ಮದುವೆಯಲ್ಲಿ ಸಾಕ್ಷಿ ಕೊಡುವುದಿಲ್ಲ. ಆದರೆ ಮದುವೆಗೆ ಬಂದಿರುವ ಅವಿಶ್ವಾಸಿಗಳಾದ ಸಂಬಂಧಿಕರು ಮತ್ತು ಸ್ನೇಹಿತರಿಗೆ ಸುವಾರ್ತೆಯನ್ನು ಕೇಳಲು ಬೇರೆ ಸಂದರ್ಭ ಸಿಗುತ್ತದೋ ಅಥವಾ ಇಲ್ಲವೋ ಆದ್ದರಿಂದ ನಮ್ಮ ವಿಶ್ವಾಸದ ಬಗ್ಗೆ ಹಂಚಿಕೊಳ್ಳಲು ಇದು ಒಂದು ಒಳ್ಳೆ ಸಂದರ್ಭವೆಂದು ನಮ್ಮಿಬ್ಬರಿಗೂ ಅನ್ನಿಸಿತು. ಸಭಾಪಾಲಕರು ನಮಗೆ ತುಂಬಾ ಒಳ್ಳೆಯ ಬುದ್ದಿ ಮಾತುಗಳನ್ನು ಹೇಳಿದರು. ನಾನು ಅದನ್ನು ಬಹಳ ಗಂಬೀರವಾಗಿ ಕೇಳಿಸಿಕೊಂಡೆ ಮತ್ತು ಈಗಲೂ ಸಹ ಬಹಳ ಮಟ್ಟಿಗೆ ಅವರು ಮಾತನಾಡಿದ ಪ್ರತಿಯೊಂದು ಪದಗಳು ಸಹ ಜ್ಞಾಪಕವಿದೆ.
ಮದುವೆಯು ಒಂದು ತೋಟದ ಹಾಗಿದೆ ಎಂದು ಅವರು ಹೇಳಿದರು. ಗಂಡ ಮತ್ತು ಹೆಂಡತಿತೋಟಗಾರರು ತೋಟವು ಸುಂದರವಾಗಿರಬೇಕಾದರೆ ತೋಟದ ಅಧಿಕಾರಿಯಾದ ಕರ್ತನಾದ ಯೇಸುವಿನ ಸೂಚನೆಗಳನ್ನು ಸೂಕ್ಷ್ಮವಾಗಿ ಹಿಂಬಾಲಿಸಬೇಕು. ಅಂತಹ ತೋಟಗಳಲ್ಲಿ ಕರ್ತನು ಎದೆನ್ ತೋಟದಲ್ಲಿ ಇದ್ದ ಹಾಗೆ ತಾನು ಬಂದು ನಮ್ಮೊಂದಿಗೆ ನಡೆದು ನಮ್ಮೊಂದಿಗೆ ಮಾತನಾಡುತ್ತಾನೆ. ಮಾತಿನಲ್ಲಿ ಒರಟುತನ ಮತ್ತು ಅಡ್ಡಿ ಮಾಡುವ ಹಿಯ್ಯಾಳಿಕೆಯನ್ನು ನಾವು ತಡೆಗಟ್ಟಬೇಕೆಂದು ಅವರು ಹೇಳಿದರು ನಾವು ಯಾವಾಗಲೂ ಇಂಪಾಗಿ ಮಾತನಾಡುವುದನ್ನು ಬೆಳೆಸಿಕೊಳ್ಳಬೇಕು ಮತ್ತು ಸಿಟ್ಟು ಬರುವ ಹಾಗೆ ಮಾತನಾಡುವುದನ್ನು ಎಂದಿಗೂ ಮಾಡಬಾರದು. ಎಂದಾದರೂ ಸಿಟ್ಟಾಗುವುದು ಬೆಳೆಯುವುದನ್ನು ಕಂಡರೆ ಆ ಹೊಲಸಾದ ಕಳೆಯನ್ನು ತಕ್ಷಣವೇ ಕಿತ್ತು ಬಿಸಾಡಬೇಕು. ಮತ್ತು ಆ ಸ್ಥಳದಲ್ಲಿ ಪ್ರೀತಿಯ ಬೀಜವನ್ನು ತಕ್ಷಣವೇ ಬೆಳೆಸಬೇಕು. ಒಬ್ಬರನ್ನೊಬ್ಬರು ಹಿಯ್ಯಾಳಿಸುವುದು, ಕ್ಷಮಿಸಲಾರದ ಆತ್ಮ,ಮಂಕುತನ, ನಮ್ಮ ಸಂಗಾತಿಯನ್ನು ಇತರರೊಂದಿಗೆ ಹೋಲಿಸುವುದು, ಒಬ್ಬರನ್ನೊಬ್ಬರು ನಮ್ಮ ಕಳೆದ ತಪ್ಪುಗಳನ್ನು ಜ್ಞಾಪಿಸುವುದು ಅಥವಾ ನಮ್ಮ ಕಳೆದ ಸ್ನೇಹಿತರ ಬಗ್ಗೆ ನೆನಪಿಸುವುದು,ದ್ವೇಷವನ್ನು ಇಟ್ಟುಕೊಳ್ಳುವುದು, ಮತ್ತು ಅಸಮಧಾನಗಳು ಮುಂತಾದ ಇನ್ನೂ ಬೇರೆ ಕಳೆಗಳನ್ನು ನಾವು ನೋಡಬೇಕು.
ಕೆಲಸಗಳನ್ನು ನಾವು ಮಾಡುವ ಹಾಯೇ ನಮ್ಮ ಸಂಗಾತಿಯು ಮಾಡಬೇಕೆಂಬುದಾಗಿ ಅಪೇಕ್ಷಿಸಬಾರದೆಂದು ಪಾಲಕರು ಹೇಳಿತ್ತಿದ್ದರು ಆಕೆ ಅಥವಾ ಅವನು ಇದ್ದ ಹಾಗೆಯೇ ನಾವು ಸ್ವೀಕರಿಸಲು ಸಿದ್ಧವಾಗಿರಬೇಕು ಸಂದೇಹವು ಸಹ ತುಂಬಾ ಭಯಂಕರವಾದ ಕಳೆ ಎಂಬುದಾಗಿ ಅವರ ಜ್ಞಾಪಸಿದರು. ಅದು ಹೊಟ್ಟೆಕಿಚ್ಚಿಗೆ ಸಂಭಂದಿಸಿದೆ ಮತ್ತು ಈ ಎರಡು ಸಹ ತುಂಬಾ ವಿಷಕರವಾದ ಕಳೆಗಳು ತಿರಸ್ಕರಿಸಲ್ಪಟ್ಟ ತೋಟಗಳಲ್ಲಿ ಸುಲಭವಾಗಿ ಅದು ತನ್ನ ಬೇರನ್ನು ಬಿಡುತ್ತದೆ. ಅವು ಕಂಡು ಬಂದ ತಕ್ಷಣ ನಾವು ಈ ಕಳೆಗಳ ಬೇರನ್ನು ಕಿತ್ತು ಹಾಕಲು ಸಾಧ್ಯ.
ಸಂದೇಹದ ಹಾಗೆ ಕೆಲವು ವಿಷಕರವಾದ ಕಳೆಗಳ ಬಗ್ಗೆ ಅವರು ಹೇಳುತ್ತಾ ಹೋದರು. ಇವು ಸೈತಾನನಿಂದ ನೆಡಲ್ಪಟ್ಟಿದ್ದು, ಒಂದು ವೇಳೆ ನಾವು ಎಚ್ಚರವಾಗಿರದಿದ್ದರೆ ಅವು ಬಹಳ ಬೇಗ ಬೆಳೆದು ನಮ್ಮಿಬ್ಬರನ್ನು ಮತ್ತು ನಮ್ಮ ಮದುವೆಯ ಜೀವಿತವನ್ನು ಹಾಳುಮಾಡುತ್ತದೆ. ಭಯ, ಹಾಗೂ ಮನಗುಂದುವಿಕೆ ಹೆಮ್ಮರವಾಗಿ ಬೆಳೆದು ತೋಟದಲ್ಲಿನ ಸಣ್ಣ ಸಸಿಗಳನ್ನು ಬಹಳ ಸುಲಭವಾಗಿ ನಾಶಮಾಡುತ್ತದೆ. ಅವೆರಡು ಸಹ ಬೇರಿನ ಹಂತದಲ್ಲೇ ಕೀಳಲ್ಪಡಬೇಕು ಎಂದರು. ಸಭಾಪಾರಕರು ಭಯದ ಬಗ್ಗೆ ಮಾತನಾಡುತ್ತಿರುವಾಗ ನಾನು ಓದಿದ ಪುಸ್ತಕದಲ್ಲಿ ಬಹು ಭಯಗ್ರಸ್ತಳು ಎಂಬ ಹೆಸರುಳ್ಳ ಕುಂಟ ಹುಡುಗಿಯನ್ನು ಕರ್ತನು ಹೇಗೆ ಧೈರ್ಯಶಾಲಿಯನ್ನಾಗಿ ಮಾರ್ಪಡಿಸಿದನೆಂಬುದು ಜ್ಞಾಪಕವಾಯಿತು ಮತ್ತು ಯಾತ್ರಿಕನ ಸಂಚಾರ ಎಂಬ ಪುಸ್ತಕದಲ್ಲಿ ಅಸಾಧಾರಣ ಶಕ್ತಿಯುಳ್ಳ ಮನಗುಂದುವಿಕೆ ಎಂಬವನು ಕ್ರೈಸ್ತನನ್ನು ಬಂಧಿಸಿ ಬಹುಮಟ್ಟಿಗೆ ಅವನನ್ನು ಮರಣಕ್ಕೆ ನಡೆಸಿದೆ.
ಸಭಾಪಾಲಕರು ಅತೃಪ್ತಿಯು ಮತ್ತೊಂದು ವಿಷಕರ ಸಸ್ಯ. ಅದು ಗುಣಗುಟ್ಟುವಿಕೆ ದೂರು ಹೇಳುವುದು ಮತ್ತು ಪದೇ ಪದೇ ತಪ್ಪು ಕಂಡು ಹಿಡಿದು ಕಾಡಿಸುವುದೇ ಆಗಿದೆ. ಪದೇ ಪದೇ ತಪ್ಪು ಕಂಡು ಹಿಡಿಯುವುದು ಭಯಂಕರವಾಗಿ ಹೊಟ್ಟೆಯು ಸರಿಯಿಲ್ಲದೆ ಒಂದೆ ಸಮನೇ ಬೇದಿ ಆಗುವುದು ಎಂಬುದಕ್ಕೆ ಹೋಲಿಸಿ ತಮಾಷೆಯಾಗಿ ಹೇಳಿದರು. ಒಂದು ವೇಳೆ ನಾವು ಈ ಕೆಟ್ಟತನವನ್ನು ಬೇರು ಸಹಿತ ಕೀಳಲು ಎಚ್ಚರಿಕೆಯಾಗಿರದಿದ್ದರೆ ಅವು ಸೇಡು ತೀರಿಸುತ್ತಾ ನಾಶಮಾಡುತ್ತದೆ ಮತ್ತು ನಾಶ ನಮ್ಮ ಜೀವಿತದಲ್ಲಿಮಾತ್ರವಲ್ಲದೆ ಬೇರೆಯವರ ಜೀವತಗಲ್ಲಿ ಸಹ ಸಂಭವಿಸುತ್ತದೆ ಎಂದು ಹೇಳಿದರು.
ಅತೃಪ್ತರು ತಮ್ಮ ಸಂಪಾದನೆಗಿಂತ ಹೆಚ್ಚಾಗಿ ವಸ್ತುಗಳನ್ನು ಕೊಳ್ಳುವುದರ ಮೂಲಕ ಸಾಲಕ್ಕೆ ಒಳಗಾಗುತ್ತಾರೆ ಎಂಬುದಾಗಿ ಸಭಾಪಾಲಕರು ಮುಂದೆ ಹೇಳುತ್ತಾ ಹೋದರು. ಅವರ ಸಾಲ ಬಹಳವಾದಾಗ ಅನೇಕರು ಕಡೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು ತಮ್ಮ ಮಕ್ಕಳನ್ನು ತಂದೆ ಇಲ್ಲದ ಮಕ್ಕಳನ್ನಾಗಿ ಬಿಟ್ಟು ಹೋಗುತ್ತಾರೆ. ಈ ಪ್ರಪಂಚವನ್ನು ಪ್ರೀತಿಸುವವರ ತೋಟದಲ್ಲಿ ಎಲ್ಲಡೆಯಲ್ಲೂ ಈ ಗಿಡಗಳು ಬೆಳೆಯುತ್ತಿರುವುದನ್ನು ಕಾಣಬಹುದೆಂಬುದಾಗಿ ಸಭಾಪಾಲಕರು ನಮ್ಮನ್ನು ಎಚ್ಚರಿಸಿದರು.
ನಮ್ಮ ಮಕ್ಕಳಿಗೆ ಅಂಟು ರೋಗದಿಂದ ಅಂಟಿಸಬಹುದಾದ ಇತರರ ಬಗ್ಗೆ ಕೆಟ್ಟದ್ದಾಗಿ ಮಾತನಾಡುವುದು ಮತ್ತು ಚಾಡಿ ಹೇಳುವುದು ಎಂಬುವುಗಳನ್ನು ಎಂದಿಗೂ ತೋಟಗಳಲ್ಲಿ ನಾವು ಅನುಮತಿಸಿಬಾರದು. ಯಾವುದೇ ಒಂದು ಸಂಭಾಷಣೆಯಲ್ಲಿ ನನ್ನ ಮಾತೆ ಗೆಲ್ಲಬೇಕೆಂದಿರುವ ಸ್ವಭಾವ ಅಥವಾ ನಮ್ಮ ಮಾತೇ ಕೊನೆಯ ಮಾತಾಗಿರಬೇಕೆಂಬ ಹಾನಿಕರ ಗಿಡ ನಮ್ಮ ಇಡೀ ತೋಟವನ್ನು ದುರ್ವಾಸನೆನ್ನಾಗಿ ಮಾಡುತ್ತದೆ. ಕಳೆಯಂತ ಗಿಡಗಳನ್ನು ಮತ್ತು ಕಸವನ್ನು ತರುವವರನ್ನು ( ಚಾಡಿಯ ಮಾತು ಮತ್ತು ಕೆಟ್ಟದನ್ನು ಮಾತನಾಡುವವರನ್ನು) ತಡೆಗಟ್ಟಿ ಒಳ್ಳೆಯ ಗಿಡಗಳನ್ನು ನೆಡಲು ಇಷ್ಟಪಡುವವರ ಸಂಗಡ ಅನ್ನೋನ್ಯವಾಗಿರುವಂತೆ ನಮ್ಮನ್ನು ಪ್ರೇರೆಪಿಸಿದರು.
ಒಬ್ಬರನೊಬ್ಬನು ಕ್ಷಮಿಸಿಲು ಮುಂದಾಗಿರುವುದು ಒಬ್ಬರ ಅನ್ನಿಸಿಕೆಯನ್ನು ಒಬ್ಬರು ಆಲೋಚಿಸುವುದು ಒಬ್ಬರೊಟ್ಟಿಗೆ ಒಬ್ಬರು ತಮ್ಮ ಲೌಕಿಕ ವಸ್ತುಗಳನ್ನು ಹಂಚಿಕೊಳ್ಳುವುದು ಒಬ್ಬರೊಬ್ಬರ ಆಲೋಚನೆಗಳನ್ನು ಮಾದಮಾಡದೇ ಹಂಚಿಕೊಳ್ಳುವುದು, ಪ್ರತಿ ದಿನ ಪ್ರಾರ್ಥನೆ ಮತ್ತು ಸತ್ಯವೇದವನ್ನು ಓದುವುದು ಬೇರೆ ಕೆಲವು ಕ್ರೈಸ್ತರೊಂದಿಗೆ ಕ್ರಮವಾಗಿ ಅನ್ನೋನ್ಯತೆಯನ್ನು ಮಾಡುವುದು ಮತ್ತು ಶುಚಿತ್ವ ಸಹ ಮುಂತಾದ ಕೆಲವು ಒಳ್ಳೆಯ ಗಿಡಗಳನ್ನು ನಮ್ಮ ತೋಟಗಳಲ್ಲಿ ಕಳೆಗಳ ಬದಲಾಗಿ ಬೆಳೆಸಬಹುದು.
ಈ ಗಿಡಗಳು ಬಹವಾಗಿ ಮತ್ತು ಆರೋಗ್ಯವಾಗಿ ಬೆಳೆಯಬೇಕಾದರೆ ಈ ಗಿಡಗಳನ್ನು ಬಹಳ ಜಾಗರೂಕವಾಗಿ ನಾವು ಪಾಲನೆ ಮಾಡಬೇಕು. ಒಬ್ಬರೊಂದಿಗೆ ಮತ್ತೊಬ್ಬರು ಮಾತನಾಡುವಂತ ಮಾತುಗಳು ಗಿಡಗಳನ್ನು ಬೆಳೆಸಲು ಹಾಕುವ ನೀರಿನ ಹಾಗಿರುತ್ತದೆ. ಒಂದು ವೇಳೆ ನಮ್ಮ ಮಾತುಗಳು ಸಿಟ್ಟಿನಿಂದ ಕೂಡಿದ್ದರೆ ಅದು ಗಿಡಗಳ ಮೇಲೆ ಕುದಿಯುತ್ತಿರುವ ಬಿಸಿ ನೀರನ್ನು ಚೆಲ್ಲಿದ ಹಾಗೆ ಗಿಡಗಳನ್ನು ಹಾಳು ಮಾಡುತ್ತದೆ. ಕೀರ್ತನೆ 12:6 ರಲ್ಲಿ ಕರ್ತನ ಮಾತುಗಳನ್ನು ಏಳು ಸಾರಿ ಪುಟಕ್ಕೆ ಹಾಕಿದ ಬೆಳ್ಳಿಗೆ ಹೋಲಿಸಿದ್ದಾರೆ. ನಮ್ಮ ಮಾತುಗಳು ಸಹ ಅದೇ ರೀತಿ ಪುಟಕ್ಕೆ ಹಾಕಿದ್ದು ಮತ್ತು ಕರುಣೆಯುಳ್ಳದ್ದಾಗಿರಬೇಕು. ಒಳ್ಳೆಯ ಮರಗಳು ಬೆಳೆಯಲು ಅನೇಕ ವರ್ಷಗಳು ಬೇಕಾಗುತ್ತದೆಂದು ಅವರು ಹೇಳಿದರು. ಆದರೆ ಅವರ ಒಂದು ಸಾರಿ ಫಲ ಕೊಡಲು ಪ್ರಾರಂಭಿಸಿದರೆ, ಅದರ ಹಣ್ಣಿನ ಪೋಷಣೆಯಿಂದ ಅನೇಕರನ್ನು ಆಶೀರ್ವದಿಸುತ್ತಾರೆ ಮತ್ತು ಅದರ ಎಲೆಗಳು ಅನೇಕರನ್ನು ಸಹ ಗುಣಪಡಿಸುತ್ತದೆ. ಮತ್ತು ಅವರು ಜ್ಞಾನೋ 15:1 ರಲ್ಲಿ ಮೃದುವಾದ ಉತ್ತರ ಸಿಟ್ಟನ್ನು ಆರಿಸುತ್ತದೆಂಬುದಾಗಿ ಸಹ ಹೇಳಿದರು.
ನಮ್ಮನ್ನೆ ನಾವು ತೀರ್ಪುಮಾಡಿಕೊಳ್ಳಬೇಕೆಂಬ ಅವಶ್ಯವಾದ ಗಿಡ ನಮ್ಮ ತೋಟದಲ್ಲಿ ಕಂಡು ಬರಬೇಕೆಂಬುದಾಗಿ ಸಭಾ ಪಾಲಕರು ಹೇಳಿದರು. ಈ ಗಿಡಗಳು ತೆರೆದ ಸ್ಥಳಗಳಲ್ಲಿ ಬೆಳೆಯದೆ ಮನುಷ್ಯರ ಕಣ್ಣಿಗೆ ಕಾಣದೆ ನೆರಳಿನಲ್ಲಿ ಬೆಳೆಯುತ್ತದೆ. ಇದು ತುಂಬಾ ಮೃದುವಾಗಿರುವ ಗಿಡ. ಇದನ್ನು ಜಾಗರೂಕವಾಗಿ ಪಾಲಿಸದಿದ್ದರೆ ಇದು ಒಣಗಿ ಹೋಗುತ್ತದೆ. ಇದು ಆಕರ್ಷಿಕವಾಗಿರದ ಗಿಡವಾಗಿದೆ. ಆದರೆ ಇದು ತನ್ನಬಲವಾದ ಸುವಾಸನೆಯಿಂದ ತೋಟದ ಪ್ರತಿ ಭಾಗವನ್ನು ತುಂಬಬಲ್ಲದು.
ನಾವು ನಮ್ಮನ್ನು ತೀರ್ಪುಮಾಡಿಕೊಳ್ಳದಿದ್ದರೆ, ನಮ್ಮ ಪ್ರತ್ಯೇಕ ಜೀವಿತ ಮತ್ತು ನಮ್ಮ ಮದುವೆಯ ಜೀವಿತವೆಂಬ ತೋಟವು ಮನುಷ್ಯರು ಮಾಡಿರುವ ಪ್ಲಾಸ್ಟಿಕ ಹೂಗಳಿಂದ ತುಂಬಿದ್ದಾಗಿರುತ್ತದೆ. ಇವು ಮನುಷ್ಯರ ಮುಂದೆ ಕಾಣಲು ತುಂಬಾ ಸುಂದರವಾಗಿ ಕಾಣುತ್ತವೆ. ಆದರೆ ಜೀವವಿಲ್ಲದ್ದಾಗಿರುತ್ತವೆ. ಅನೇಕ ತೋಟಗಳು ಪ್ಲಾಸ್ಟಿಕ ಹೂಗಳಿಂದ ಕೂಡಿದ್ದು ಮನುಷ್ಯರನ್ನು ಮೋಸಗೊಳಿಸಿತು ಮತ್ತು ದೇವರನ್ನು ಮೋಸಗೊಳಿಸಲು ಆಗಲಿಲ್ಲ ಎಂಬುದಾಗಿ ಅವರು ನಮ್ಮನ್ನು ಎಚ್ಚರಿಸಿದರು.
ಅನೇಕರು ಇತರರನ್ನು ತೀರ್ಪು ಮಾಡುತ್ತಾರೆ ಆದರೆ ತಮ್ಮನ್ನು ತಾವೇ ತೀರ್ಪುಮಾಡುವವರು ಕಡಿಮೆ. ಎಲ್ಲಾ ಮನುಷ್ಯರನ್ನು ತೀರ್ಪು ಮಾಡಲು ಕರ್ತನು ಬರುವಾಗ ತಮ್ಮನ್ನು ತಾವೇ ತೀರ್ಪುಮಾಡಿಕೊಳ್ಳದವರು ಬಹಳ ಭಯಂಕರವಾದ ನ್ಯಾಯತೀರ್ಪನ್ನು ಎದುರಿಸಬೇಕಾಗುವುದು.
ಒಂದು ವೇಳೆ ತೋಟಕ್ಕೆ ಬೇಕಾದ ತಳಹದಿಯು ಒಬ್ಬರನ್ನು ಒಬ್ಬರು ಕ್ಷಮಾಪಣೆ ಕೇಳುವುದು ಮತ್ತು ಯಾವಾಗಲೂ ಒಬ್ಬರನ್ನೊಬ್ಬರು ಕ್ಷಮಿಸಲು ಸಿದ್ಧವಾಗಿರುವುದು ಎಂಬುದನ್ನು ಸಭಾ ಪಾರಕರು ಒತ್ತಿಹೇಳಿದರು.
ಅಧಿನತೆಯು ಒಂದು ಮೃದುವಾದ ಗಿಡ ಅದು ಯಾವಾಗಲೂ ಅವಶ್ಯವಾದದ್ದು ಮತ್ತುಅಮುಲ್ಯವಾದದ್ದೆಂಬುದನ್ನು ಹೆಂಡತಿಯರಿಗೆ ಅವರು ಹೇಳಿದರು ನಮ್ಮೆಲ್ಲರಿಗೂ ಬಹಳ ಬಲವಾದ ಚಿತ್ತವಿದೆ. ಅದನ್ನು ಯೇಸು ಹೇಳಿದ ಹಾಗೆ ನನ್ನ ಚಿತ್ತವಲ್ಲ ಆದರೆ ನಿನ್ನ ಚಿತ್ತವೇ ಆಗಲಿ ಎಂಬಂತೆ ನಮ್ಮ ಚಿತ್ತವನ್ನು ಬಿಟ್ಟುಕೊಡಲು ಸಿದ್ದರಿರಬೇಕು. ಸಭೆಯು ಕ್ರಿಸ್ತನಿಗೆ ಅಧೀನವಾಗಿರುವ ಪ್ರಕಾರ ಹೆಂಡತಿಯು ತಮ್ಮ ಗಂಡಂದಿರಿಗೆ ಅಧೀನರಾಗಿರುವುದು ದೇವರ ಚಿತ್ತ.
ಸುಗಂಧವಾಸನೆಯ ಭರಣಿಯನ್ನು ಹೊಡೆದು ಮರಿಯಳು ಯೇಸುವಿನ ಪಾದಗಳನ್ನು ತೊಳೆದಾಗ ಮನೆಯಲ್ಲಾ ಸುವಾಸನೆಯಿಂದ ತುಂಬಿಕೊಂಡಿತ್ತೋ ಅದೇ ರೀತಿ ಮುರಿಯಲ್ಪಟ್ಟ ಆತ್ಮ ಸುವಾಸನೆಯುಳ್ಳದ್ದಾಗಿರುತ್ತದೆ. ಕೀರ್ತನೆ 34:18.ರಲ್ಲಿ ಮನಮುರಿದವರಿಗೆ ದೇವರು ಹತ್ತಿರವಾಗಿದ್ದಾನೆ ಎಂದು ಬರೆದಿದೆ. ಕುರುಡಾದ ಪ್ರೀತಿಯು ಕಾರ್ಯದಲ್ಲಿ ದುಡುಕಿನ ತೀರ್ಮಾನಗಳನ್ನು ತೆಗೆದುಕೊಂಡು ಮದುವೆಗೆ ನುಗ್ಗಿದ ನನ್ನ ಸ್ನೇಹಿತರನ್ನು ಮತ್ತು ಬೇರೆ ಕೆಲವು ಲೌಕೀಕ ಲಾಭಕ್ಕಾಗಿ ಮತ್ತು ಗೌರವಕ್ಕಾಗಿ ಆಕರ್ಷಿಸಲ್ಪಟ್ಟವರ ಬಗ್ಗೆ ನನ್ನ ಮದುವೆಯಲ್ಲಿ ನಾನು ಯೋಚಿಸುತ್ತಿದ್ದೆ. ವಿಶ್ವಾಸಿ ದಾದಿಯರು ತಮ್ಮ ತಂದೆ ತಾಯಿಗಳನ್ನು ಮೆಚ್ಚಿಸಲು ಅಥವಾ ತಾವು ಅಮೇರಿಕಕ್ಕೆ ಹೋಗಬೇಕೆಂಬುದಾಗಿ ಅಥವಾ ಕೆಲವು ಮಧ್ಯ ಪೂರ್ವ ದೇಶಗಳಲ್ಲಿ ಹಣಗಳಿಸಲು ಅವಿಶ್ವಾಸಿಗಳನ್ನು ಮದುವೆಯಾದರು.
ನನ್ನನ್ನು ಇಂತಹ ಒಂದು ಕರ್ಮದಿಂದ ಕರ್ತನು ತಪ್ಪಿಸಿದ್ದಕ್ಕಾಗಿ ಆತನಿಗೆ ಕೃತಜ್ಞಳಾಗಿದ್ದೇನೆ. ನನ್ನನ್ನು ಕಾದಿದ್ದು ನನ್ನ ನಂಬಿಗಸ್ತಿಕೆಯಲ್ಲ. ಆದರೆ ಅದು ಕ್ರಿಸ್ತನ ಕರುಣೆಯೇ ಆಗಿದೆ
.ನಾನು ಒಬ್ಬಂಟಿಗಳಾಗಿದ್ದಾಗ ಸ್ವತಂತ್ರಳಾಗಿ ಜೀವಿಸುತ್ತಿದ್ದದನ್ನು ಪ್ರೀತಿಸಿದರೂ ಮದುವೆಯಾಗಲು ಸಂತೋಷಪಟ್ಟೆ. ಪ್ರಕಾಶನಿಗೆ ಅಧೀನತೆಯ ಹೆಂಡತಿಯಾಗಿ ಜೀವಿಸುವುದರ ಮೂಲಕ ಕರ್ತನಿಗಾಗಿ ಜೀವಿಸುವ ಜೀವಿತಕ್ಕಾಗಿ ಎದುರು ನೋಡುತ್ತಿದ್ದೆನೆ.
ನನ್ನ ಮದುವೆಯ ಜೀವಿತದಲ್ಲಿ ಜಯಗಳಿಸಿ ನನ್ನಂಥ ಬೇರೆ ಪಾಪಿಗಳಿಗೂ ದೇವರು ಎಲ್ಲವನ್ನು ಮಾಡಲು ಸಾಧ್ಯವೆಂಬುದನ್ನು ಲೋಕಕ್ಕೆ ತಿಳಿಸಲು ಬಯಸುತ್ತೇನೆ. ಪ್ರಕಾಶನಿಗೆ ಅಡ್ಡಿಯಾಗುವುದರ ಬದಲಾಗಿಸಹಾಯಕಳಾಗಿ ಆಶಿಸುತ್ತೇನೆ. ನಮ್ಮ ಜೀವಿತ ಪ್ರತಿಯೊಂದರಲ್ಲೂ ಸಮಾಧಾನಕರವಾಗಿರಬೇಕೆಂದುಇಷ್ಟಪಡುತ್ತೇನೆ. ಒಂದು ವೇಳೆ ಮುಂದೆ ಸಾಗುತ್ತಾ ನಾನು ದೀನಳಾಗಿದ್ದರೆ, ಕರ್ತನು ನನಗೆ ಪ್ರತಿಯೊಂದು ಸಂದರ್ಭದಲ್ಲೂ ಸಹಾಯಿಸುತ್ತಾನೆಂದು ಬಲ್ಲೆನು. ನಾನು ಪ್ರಕಾಶನ ತಂದೆತಾಯಿಗಳನ್ನು ಪ್ರೀತಿಸಿ ಅವರ ಪ್ರೀಯರಿಗೂ ಮತ್ತು ಅವರಿಗೂ ಒಳ್ಳೆಯವಳಾಗಿರಲು ಇಷ್ಟಪಡುತ್ತೇನೆ. ಯಾಕೋಬ 3:18.ನಾನು ನನ್ನ ಜೀವಿತದಲ್ಲಿ ಸಮಾಧಾನವಾಗಿ ಬಿತ್ತಿದರೆ ಮುಂದೆ ತಕ್ಕ ಸಮಯದಲ್ಲಿ ಸಮಾಧಾನದ ಮತ್ತು ನೀತಿಯ ಉದಾರವಾದ ಸುಗ್ಗಿಯನ್ನು ಎದುರು ನೋಡಬಹುದು.
ನನ್ನ ಜೀವಿತದಲ್ಲಿ ದೇವರ ಉದಾರವಾದ ಬಹುಮಾನಗಳಿಗಾಗಿ ಆತನನ್ನು ಸ್ತುತಿಸುತ್ತೇನೆ. ಅನೇಕ ವರ್ಷಗಳ ಹಿಂದೆ ಆತನು ಯೆಶಾಯ 58:11 ರಲ್ಲಿ ನನ್ನ ಜೀವಿತ ನೀರುಣಿಸಿದ ತೋಟದ ಹಾಗೆ ಮತ್ತು ಎಂದಿಗೂ ತಪ್ಪದ ಒರತೆಯ ನೀರಿನಂತೆ ಇರುತ್ತದೆಂದು ಆತನು ವಾಗ್ದಾನವನ್ನು ಕೊಟ್ಟಿದ್ದನು. ನನ್ನ ಒದಗಿಸುವಿಕೆಯ ಮೂಲವು ದೇವರು ಮಾತ್ರ. ಈಗ ದೇವರು ಈ ವಾಗ್ದಾನವನ್ನು ನೆರವೇರಿಸುತ್ತಿರುವುದನ್ನು ನಾನು ಕಾಣುತ್ತಿದ್ದೇನೆ.
ನಾನು ನನ್ನದೇ ಆದ ಒಂದು ಮನೆಯನ್ನು ಬಯಸಿದಾಗಲೂ, ನಾನು ಅದಕ್ಕೆ ಯೋಗ್ಯಳಲ್ಲದ ಕಾರಣ ಕರ್ತನು ಇಲ್ಲಿಯವರೆಗೆ ಅದನ್ನು ಒದಗಿಸಲಿಲ್ಲ. ಅವಶ್ಯಕತೆಯ ಕಾರಣದಿಂದಾಗಿ ನಾವು ಪ್ರಕಾಶನ ತಂದೆ ತಾಯಿಯ ಜೊತೆ ಜೀವಿಸಬೇಕಾಗಿತ್ತು. ಆದರೆ ಪ್ರಕಾಶನು ನಾನೂ ಇನ್ನೂ ದೇವರ ಕೃಪೆಗೆ ಜೀವಿತದಲ್ಲಿ ಜೊತೆ ಬಾಧ್ಯಸ್ಥರಾಗಿದ್ದೇವೆ. ಆದರಿಂದ ನಾವು ಉತ್ತಮವಾದ ದಂಪತಿಗಳಾಗಿದ್ದೇವೆ. ಇವೆಲ್ಲದಕ್ಕಿಂತ ಹೆಚ್ಚಾಗಿ ನಾವು ಕರ್ತನಲ್ಲಿ ಸಂತೋಷಸುತ್ತಿದ್ದೇವು.
ಪ್ರಕಾಶನ ತಂದೆ ತಾಯಿಗಳನ್ನು ಗೌರವಿಸಲು ಮತ್ತು ನನ್ನ ಸ್ವಂತದವರ ಹಾಗೆ ಅಂಗೀಕರಿಸಲು ಕಲಿತೆ. ಅವರು ನನಗೆ ಒಳ್ಳೆಯವರಾಗಿದ್ದರು ಮತ್ತು ಕೆಲಸಗಳನ್ನು ನಾನು ಅವರ ಹಾಗೆ ಮಾಜಲು ಕಲಿತೆ ಮತ್ತು ಕೆಲವು ವ್ಯವಹಾರಿಕ ಕೆಲಸಗಳನ್ನು ಸಹ ಅವರಿಂದ ಕಲಿತೆ. ನಾನು ದೀನತ್ವವನ್ನು ಮತ್ತು ಕಲಿಯುವ ಮನೋಭಾವವನ್ನು ಹೊಂದಿದ್ದರೆ ಅವರಿಂದ ಅನೇಕ ಸಂಗತಿಗಳನ್ನು ಕಲಿಯಬಹುದೆಂಬುದು ನನಗೆ ಗೊತ್ತಿತ್ತು. ನನ್ನ ತಂದೆ ತಾಯಿಯೊಟ್ಟಿಗೆ ಅವರನ್ನು ಎಂದಿಗೂ ಹೋಲಸದೆ ಅವರು ಇರುವ ಹಾಗೆಯೇ ನಾನು ಅವರನ್ನು ಅಂಗೀಕರಿಸಬೇಕೆಂದು ಕರ್ತನು ನನಗೆ ತಿಳಿಸಿದನು. ಹೀಗೆ ಮಾಡುವಾಗ ಇದಕ್ಕೆ ಪ್ರತಿಯಾಗಿ ನನ್ನನ್ನು ಸಹ ತಮ್ಮ ಮಗುವಿನ ಹಾಗೆ ಅವರು ಅಂಗೀಕರಿಸುತ್ತಾರೆ.
ನನ್ನ ಹೊಸ ಮನೆಗೆ ಹೋದ ತಕ್ಷಣ ನಾನು ಕೆಲವು ತೀರ್ಮಾನಗಳನ್ನು ತೆಗೆದುಕೊಂಡೆ.
ಪ್ರಕಾಶನ ತಂದೆ ತಾಯಿಗಳು ಅವನ ಜೊತೆಗೆ ಯಾವುದೇ ವೇಳೆಯಲ್ಲಿ ಸಮಯ ಕಳೆಯಲು ಇಷ್ಟಪಟ್ಟರೆ ನಾನು ಎಂದಿಗೂ ಕೋಪಿಸಿಕೊಳ್ಳುವುದಿಲ್ಲ. ಯಾಕೆಂದರೆ ಆತನು ಅವರ ಮಗನು.
ಪ್ರಕಾಶನ ಮತ್ತು ಅವರ ತಂದೆ ತಾಯಿಗಳ ನಡುವೆ ಯಾವುದೇ ಅಂತರವನ್ನು ತರುವಂತ ಸಂಗತಿಗಳನ್ನು ಮತ್ತು ಮಾತುಗಳನ್ನು ಎಂದಿಗೂ ಹೇಳುವುದಿಲ್ಲ.
ಪ್ರಕಾಶನ ಮತ್ತು ಅವನ ತಂದೆ ತಾಯಿಗಳ ನಡುವೆ ಪ್ರತ್ಯೇಕಿಸುವ ರೇಖೆಯನ್ನು ಯಾವಾಗ ಹಾಕಬೇಕೆಂಬುದನ್ನು ತೀರ್ಮಾನಿಸಲು ಪ್ರಕಾಶನಿಗೆ ಬಿಟ್ಟು ಬಿಟ್ಟೆ. (ಆದಿ 2:24.ರಲ್ಲಿ ಸತ್ಯವೇದವು ಕಲಿಸಿಕೊಡುತ್ತದೆ.) .ನಾನು ಈ ವಿಷಯದಲ್ಲಿ ತಲೆ ಹಾಕುವುದಿಲ್ಲ.
ಒಂದು ದಿನ ಹತ್ತಿರವಿರುವ ಕೊಳಚೆ ಪ್ರದೇಶದಿಂದ ಒಬ್ಬ ಹುಡುಗಿಯನ್ನು ಅವರ ತಂದೆ ತಾಯಿಗಳು ಬಡವರಾಗಿರುವುದರಿಂದ ಅವಳನ್ನು ಮಾರುತ್ತಾರೆಂಬುದನ್ನು ಕೇಳಿಸಿಕೊಂಡೆವು. ಉತ್ತರ ಭಾರತದಲ್ಲಿ ಇದು ಸಾಧಾರಣನವಾಗಿತ್ತು. ಯಾಕೆಂದರೆ ಅಲ್ಲಿರುವ ತಂದೆ ತಾಯಿಗಳು ಬಹಳ ಬಡವರು. ತಕ್ಷಣ ನಾವು ಅವರ ಬಳಿಗೆ ಹೋಗಿ ಅವರ ಮಗಳನ್ನು ನಾವು ನಮ್ಮೊಟ್ಟಿಗೆ ಇಟ್ಟುಕೊಳ್ಳುವುದಾಗಿ ಮತ್ತು ಹೀಗೆ ಅವಳನ್ನು ಮಾರದೆ ಅವರ ಬಳಿಯಲ್ಲೆ ಇಟ್ಟುಕೊಳ್ಳಬಹುದೆಬುದಾಗಿ ಹೇಳಿದೆವು. ನಾವು ಹತ್ತಿರದಲ್ಲಿ ವಾಸಿಸುತ್ತಿದ್ದರಿಂದ ಆಕೆ ಪ್ರತಿ ವಾರದ ಕೊನೆಯಲ್ಲಿ ಹೋಗಿ ತನ್ನ ತಂದೆ ತಾಯಿಗಳನ್ನು ನೋಡಬಹುದಾಗಿತ್ತು. ಅವರು ಸಂತೋಷದಿಂದ ಒಪಪಿಸಿದರು. ಈಗ ನನಗೆ ದೇವರ ಬಗ್ಗೆ ಮಾತನಾಡಲು ಮತ್ತು ಆತನ ಕಡೆಗೆ ನಡಿಸಲು ಒಬ್ಬರು ಸಿಕ್ಕಿದರು. ಅವಳನ್ನು ಸಮೀಪದ ಶಾಲೆಗೆ ಸಹ ಕಳುಹಿಸಲು ನಾವು ಯೋಜನೆ ಮಾಡಿದೆವು. ಈಗ ನನಗೆ ಲೌಕಿಕ ರೀತಿಯಲ್ಲಿ ನೀರ್ಗತಿಕರಾಗಿರುವವರಿಗೆ ಕರುಣೆಯನ್ನು ತೋರಿಸಲು ಒಂದು ಸಂದರ್ಭ ಸಿಕ್ಕಿತು. ಮತ್ತು ಈ ಮೂಲಕ ನಾನು ಸಣ್ಣವಳಾಗಿರುವಾಗ ನನಗೆ ಇತರರು ತೋರಿಸಿದ ಕರುಣೆಯನ್ನು ಪ್ರತಿಯಾಗಿ ತೋರಿಸಲುಮಾರ್ಗವಾಯುತು.
ಯೇಸುವು ಈ ಲೋಕಕ್ಕೆ ಎಲ್ಲಾ ಮನುಷ್ಯರ ಸೇವಕನಾಗಿರಲು ಬಂದನು. ನಾನು ಸಹ ನನ್ನ ಕರ್ತನ ಹಾಗೆ ನನ್ನನ್ನು ಹಾದು ಹೋಗುವ ಎಲ್ಲಾ ಮನುಷ್ಯರಿಗೆ ಮುಖ್ಯವಾಗಿ ಬಡವರಿಗೆ ಮತ್ತು ಅವಶ್ಯಕತೆಯಲ್ಲಿರುವವರಿಗೆ ಸೇವಕಿಯಾಗಿರಲು ಇಷ್ಟಪಡುತ್ತೇನೆ.
ನಾನು ಪ್ರಕಾಶನಿಗೆ ಒಳ್ಳೆಯ ಜೊತೆಗಾರ್ತಿಯಾಗಿರಲು ಪ್ರಯತ್ನಿಸುತ್ತಿದ್ದೆನೆ. ಮತ್ತು ನನ್ನ ದಿನಚರಿಗಳನ್ನು ಅವರ ದಿನಚರಿಗಳಿಗೆ ತಕ್ಕಂತೆ ಅನುಸರಿಸಲು ಪ್ರಯತ್ನಿಸುತ್ತಿದ್ದೆ. ನನ್ನ ಮತ್ತು ಅವರ ದೃಷ್ಟಿಗಳು ಕೆಲವು ಸಂಗತಿಗಳಲ್ಲಿ ಬೇರೆಯಾಗಿದ್ದರೂ ದಿನಗಳು ಕಳೆದಂತೆ ಕಾಮನ ಬಿಲ್ಲಿನ ಬಣ್ಣಗಳ ಹಾಗೆ ಒಂದಕ್ಕೊಂದು ಹೆಚ್ಚೆಚ್ಚಾಗಿ ಬೆರೆತು ಹೋಗುತ್ತಿತ್ತು. ಇದು ನಮ್ಮ ಜೀವಿತಗಳನ್ನು ಬಹಳ ಅರ್ಥಗರ್ಭಿತವಾಗಿ ಮತ್ತು ಸಂವೃದ್ಧಿಗೊಳಿಸಿತು. ಅಡಿಗೆ ಮಾಡುವುದು, ಬಟ್ಟೆ ಒಗೆಯುವುದು, ಮತ್ತು ಮನೆಯನ್ನು ಶುಚಿಮಾಡುವ ಮನೆ ಕೆಲಸಗಳನ್ನು ಮಾಡಲು ಆಗಾಗ ಬೇಸರವಾಗುತ್ತಿತ್ತು. ಆದರೆ ಸಹೋದರ ಲಾರೆನ್ಸ್ ರವರು ತಮ್ಮ ಒಂದಾನೊಂದು ಪುಸ್ತಕದಲ್ಲಿ ಅವರು ದೇವರು ಸಾನಿಧ್ಯವನ್ನು ರಾತ್ರಿ ಭೋಜನದಲ್ಲಿ ರೊಟ್ಟಿ ಮುರಿಯುವಾಗ ಅನುಭವಿಸುವಂತೆಯೂ ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ತೊಳೆಯುವಾಗಲೂ ಸಹ ಅನುಭವಿಸುತ್ತಿದ್ದರೆಂಬುದಾಗಿ ಹೇಳಿರುವುದು ನನ್ನ ನೆನಪಿಗೆ ಬಂದಿತು. ನನಗೂ ಸಹ ಅದೇ ರೀತಿ ಕರ್ತನ ಸಾನಿಧ್ಯ ಇರಲು ಆಶಿಸುತ್ತೇನೆ. ದೇವರಿಗೆ ಸ್ತೋತ್ರ ಗೀತೆಗಳನ್ನು ಹಾಡುವುದರಿಂದ ಪ್ರತಿ ಭಾರವು ಹಗುರವಾಗುತ್ತದೆ.
ನನ್ನಲ್ಲಿ ಕ್ರಿಸ್ತನಿಗೆ ಹೊರತಾದ ಸಂಗತಿಗಳನ್ನು ಹಟಮಾರಿತನ, ಬೇಸರ ಗೊಳ್ಳುವುದು ಮತ್ತು ಪ್ರಕಾಶನನ್ನು ಕಾಡಿಸುವುದು ಅಂತಹ ಸಂಗತಿಗಳನ್ನು ಜಯಿಸಲು ದೇವರ ಕೃಪೆಯನ್ನು ನಾನು ಇನ್ನೂ ಬಯಸಬೇಕಾಗಿದೆ ಎಂಬುದನ್ನು ಕಂಡುಕೊಂಡೆ. ಜ್ಞಾನೋ12:4,31:11 ರಲ್ಲಿ ತನ್ನ ಗಂಡನಿಗೆ ಕೀರಿಟದಂತಿರುವ ಹೆಂಡತಿ ಮತ್ತು ತನ್ನ ಗಂಡನ ಮನಸ್ಸು ಆಕೆಯಲ್ಲಿ ಯಾವಾಗಲೂ ಭರವಸೆಗೊಳ್ಳುತ್ತಿತ್ತು ಎಂಬದಾಗಿ ಹೇಳುವ ಹಾಗೆ ನಾನಿರಲು ಆಶಿಸುತ್ತೇನೆ.
“ಅದು ನನ್ನ ತಪ್ಪು ದಯವಿಟ್ಟು ನನ್ನನ್ನು ಕ್ಷಮಿಸಿ. ಅದಕ್ಕಾಗಿ ನಾನು ದುಃಖಿಸುತ್ತೇನೆ. ಎಂಬ ಮಾತುಗಳು ಅನೇಕ ಸಂದರ್ಭಗಳಲ್ಲಿ ಮತ್ತೆ ಮತ್ತೆ ಸ್ವಸ್ಥತೆಯನ್ನು ತಂದಿತು. ಇಲ್ಲವಾದರೆ ನಮ್ಮಿಬ್ಬರ ನಡುವೆ ಬಹಳವಾದ ಮಾನಸಿಕ ಉದ್ವೇಗ ಮತ್ತು ಸ್ಫೋಟನೆ ಉಂಟಾಗುತ್ತಿತ್ತು.
ಸಂತೋಷಕರವಾದ ಮದುವೆಯ ಜೀವಿತಕ್ಕೆ ದೊಡ್ಡ ರಹಸ್ಯವು ಒಬ್ಬರನ್ನೊಬ್ಬರು ಉತ್ತೇಜನಪಡಿಸುವುದು ಮತ್ತು ಒಬ್ಬರನ್ನೊಬ್ಬರು ಉತ್ತೇಜನಪಡಿಸುವುದು ಮತ್ತು ಒಬ್ಬರನ್ನೊಬ್ಬರು ಕೃತಜ್ಞತೆಯುಳ್ಳವರಾಗಿರುವುದು ಎಂಬುದಾಗಿ ನಾನು ಕಲಿತೆ. ಹೀಗೆ ಅಲ್ಲಿ ಯಾವುದೇ ಅಪಾರ್ಥಗಳಿಗೂ ಮತ್ತು ಮನಸ್ಥಾಪಗಳಿಗೂ ಅವಕಾಶವಿರುವುದಿಲ್ಲ.
ಕರ್ತನನ್ನು ತನ್ನ ಗಾಢವಾದ ಸ್ನೇಹಿತನನ್ನಾಗಿ ಮತ್ತು ಮಾರ್ಗದರ್ಶಕನನ್ನಾಗಿ ಕಂಡುಕೊಂಡಿರುವ ಹುಡುಗಿಯು ಎಷ್ಟೋ ಅದೃಷ್ಟವಂತಳು. ಅಂತಹ ಹುಡುಗಿಯನ್ನು ಮದುವೆಯಾಗಗಿರಲಿ ಅಥವಾ ಒಬ್ಬಂಟಿಗಳಾಗಿರಲಿ ತನ್ನ ಜೀವಿತದಲ್ಲಿ ಯಾವ ಕೊರತೆಯೂ ಇಲ್ಲದವಳಾಗಿರುತ್ತಾಳೆ.
ಸಂತೃಷ್ಟಿ ಸಹಿತವಾದ ಭಕ್ತಿಯು ದೊಡ್ಡ ಲಾಭವೇ ಸರಿ. ಮತ್ತು ಇದರ ಅರ್ಥ ದೇವರು ನಮ್ಮ ಜೀವಿತದಲ್ಲಿ ಯಾವುದನ್ನೆಲ್ಲಾ ನೇಮಿಸಿದ್ದಾರೋ ಅದರಲ್ಲಿ ಸಂತೃಪ್ತರಾಗಿರುವುದು.
ಒಂದು ವೇಳೆ ನಾನು ಆಶೀಸಿದ ಹಾಗೆ ನನ್ನದೆ ಆದ ಸ್ವಂತ ಮನೆಯು ಇರದೆ, ನನ್ನ ಗಂಡನ ತಂದೆ ತಾಯಿಗಳ ಜೊತೆಗೆ ಜೀವನವಿಡೀ ಇರಬೇಕಾಗಬಹುದು. ಆದರೂ ನಾನು ಸಂತೃಪ್ತಳಾಗಿರುತ್ತೇನೆ.
ಒಂದು ವೇಳೆ ನಾನು ದಾದಿಯ ಕೆಲಸವನ್ನು ಮುಂದುವರಿಸಿ ನನ್ನ ಕುಟುಂಬಕ್ಕೆ ಸಹಾಯಿಸಬೇಕಾದರೂ ನಾನು ಸಂತೃಪ್ತಳಾಗಿರುತ್ತೇನೆ.
ನನ್ನ ಜೀವಿತದ ಹಾದಿಯಲ್ಲಿ ಕರ್ತನು ಯಾವುದನ್ನೆಲ್ಲಾ ಆರಿಸಿ ಕಳುಹಿಸುತ್ತಾನೋ ಅದನ್ನೆಲ್ಲಾಪಡೆದುಕೊಳ್ಳಲು ನಾನು ಸಿದ್ಧಳಿದ್ದೇನೆ. ಯಾಕೆಂದರೆ ಆತನೇ ಈಗ ನನ್ನ ಜೀವಿತಕ್ಕೆ ಎಲ್ಲವನ್ನುಆರಿಸುವಂತವನಾಗಿದ್ದಾನೆ.
ಜ್ಞಾನೋಕ್ತಿ 31ರಲ್ಲಿ ಹೇಳಿರುವ ಹಾಗೆ ಸದ್ಗುಣ ಸ್ತ್ರೀಯಾಗಿರಲು ಇಷ್ಟ ಪಡುತ್ತೇನೆ. ಈ ಸದ್ಗುಣ ಸ್ತ್ರೀಯು ತನ್ನ ನಾಲಿಗೆಯಲ್ಲಿ ಕರುಣೆಯ ನಿಯಮವನ್ನು ಹೊಂದಿಕೊಂಡು ತನ್ನ ಭವಿಷ್ಯವನ್ನು ಎದುರಿಸುತ್ತಾಳೆ. ಆಗಾಗ ನಾನು ಧ್ಯಾನಿಸುವ ಸತ್ಯವೇದದ ಒಂದು ಅಧ್ಯಾಯ ಇದಾಗಿದೆ.
ನಾನು ಮದುವೆಯಾದ ನಂತರ ನನಗೆ ಆಗಾಗ ಕರ್ತನು ಜ್ಞಾಪಿಸುವಂತೆ ಮತ್ತೊಂದು ವಾಕ್ಯವೆಂದರೆ ಕೀರ್ತನೆ 45:10.ನಾನು ಮದುವೆಯಾಗಿರುವುದರಿಂದ ತಂದೆಯ ಮನೆಯನ್ನು ಮರೆಯು ಹೋಗು ಎಂಬದಾಗಿ ಇದು ಹೇಳಿತ್ತದೆ. ಇಸಾಕನನ್ನು ಮದುವೆಯಾದ ನಂತರ ರೆಬೆಕ್ಕಳು ನನ್ನ ಜನರಿಗೆ ಅಂಟಿಕೊಂಡಿರಲಿಲ್ಲ. ಒಂದು ಸಾರಿ ನಾನು ಕರ್ತನಾದ ಯೇಸುವನ್ನು ನನ್ನ ಕರ್ತನು ಮತ್ತು ರಕ್ಷಕನ್ನಾಗಿರುವಂತೆ ಆರಿಸಿಕೊಂಡಾಗ ನೇಗಿಲಿನ ಮೇಲೆ ಕೈ ಹಾಕಿ ಎಂದಿಗೂ ಹಿಂದಕ್ಕೆ ನೋಡಲಿಲ್ಲವೋ ಅದೇ ರೀತಿ ನನ್ನ ಲೌಕಿಕ ಶಿರಸ್ಸನ್ನಾಗಿ ಒಬ್ಬ ಗಂಡನನ್ನು ಆರಿಸಿಕೊಂಡ ಮೇಲೆ ಮತ್ತೊಂದು ನೇಗಿಲಿನ ಮೇಲೆ ಕೈ ಹಾಕಿದ ಹಾಗೆ ಮತ್ತು ಎಂದಿಗೂ ನಾನು ಹಿಂದಿರುಗಿ ನೋಡಲು ಇಷ್ಟವವಿಲ್ಲ. ಲೋಟನ ಹೆಂಡತಿ ಹಿಂದಕ್ಕೆ ತಿರುಗಿ ನೋಡಿ ತನ್ನನ್ನು ನಾಶಪಡಿಸಿಕೊಂಡಳು. ಅದೇ ರೀತಿಯ ತಪ್ಪನ್ನು ನಾನೂ ಸಹ ಮಾಡಲು ಇಷ್ಟಪಡುವುದಿಲ್ಲ. ನಾನು ನನ್ನ ತಂದೆ ತಾಯಿಗಳನ್ನು ಮತ್ತು ಸಂಭಂದಿಕರನ್ನು ಸಂಧಿಸಲು ಸಾಧ್ಯವಾಯಿತು. ಆದರೆ ನನ್ನ ಅಂಟಿಕೊಳ್ಳುವಿಕೆ ನನ್ನ ಗಂಡನಿಗೆ ಮಾತ್ರ ಸ್ತ್ರೀ ಪುರುಷ ಭೇದದ ಬಗ್ಗೆ ನನಗೆ ತಪ್ಪಾದ ಅಭಿಪ್ರಾಯವಿತ್ತು. ನಾನು ಒಬ್ಬಂಟಿಗಳಾಗಿದ್ದಾಗ ಎಲ್ಲಾ ಲೌಂಗೀಕ ಕ್ರಿಯೆಗಳು ತಪ್ಪು ಎಂಬುದಾಗಿ ತಿಳಿದಿದ್ದೆ. ಈಗ ಮದುವೆಯಾಗಿ ಸ್ತ್ರೀಯಾಗಿ ಅದು ಮದುವೆಯ ಮುಂಚೆ ತಪ್ಪೆಂಬುದನ್ನು ಅರಿತುಕೊಂಡೆ. ಸತ್ಯವೇದದಲ್ಲಿ ಲೈಂಗಿಕ ಸಂಭಂದವು ಮಗುವನ್ನು ಪಡೆಯಲು ಮಾತ್ರವಲ್ಲ, ಆದರೆ ಮಾಡದಿರಲು ಇಬ್ಬರೂ ಒಪ್ಪಿದಾಗ ಮಾತ್ರ ಬಿಟ್ಟು ಗಂಡ ಹೆಂಡತಿಯ ನಡುವೆ ಅವರು ಪೂರೈಸಬೇಕಾದ ಒಂದು ಕರ್ತವ್ಯವಾಗಿದೆ.
ಆದಿ 1:28ರಲ್ಲಿ ಮನುಷ್ಯನು ಪಾಪ ಮಾಡುವ ಮುಂಚೆಯೇ ಗಂಡ ಹೆಂಡತಿಯು ತನ್ನ ಪ್ರೀತಿಯನ್ನು ಒಬ್ಬರಿಗೊಬ್ಬರು ತೋರ್ಪಡಿಸಲು ದೇವರು ಈ ಲೈಂಗಿಕ ಕ್ರಿಯೆಯನ್ನು ಸೃಷ್ಟಿಸಿದನು ಎಂಬುದಾಗಿ ನಾನುಕಂಡೆ
.ಈಗ ನಾನು ಮದುವೆಯಾಗಿದ್ದೆನೆ. ಸತ್ಯವೇದವನ್ನು ಓದಲು, ಪ್ರಾರ್ಥಿಸಲು ಮತ್ತು ದೇವರೊಂದಿಗೆ ಸಮೀಪಳಾಗಿ ನಡೆಯುವುದನ್ನು ಕಾದುಕೊಳ್ಳುವುದರಲ್ಲಿ ನಾನು ಶಿಕ್ಷಿತಳಾಗಬೇಕು. ಯಾಕಂದರೆ ಇವು ನನ್ನ ಕೆಲಸ ಕಾರ್ಯಗಳಲ್ಲಿ ಹೊಂದಿಕೊಳ್ಳಬೇಕು. ನನ್ನ ಎಲ್ಲಾ ಕೆಲಸ ಕಾರ್ಯಗಳ ನಂತರ ರಾತ್ರಿ ಜಾವದಲ್ಲಿ ಹಾಸಿಗೆಗೆ ಹೋಗುವ ಮುನ್ನ ತಿಳಿಯಾದ ನೀರಿನ ಬಳಿ ಹೋಗುವ ಹಾಗೆ ನನ್ನ ಆತ್ಮದ ಕುರುಬನಾಗಿರುವವನ ಬಳಿ ಮಾತನಾಡುವುದು ಒಳ್ಳೆದೆನಿಸಿತು. ಆತನ ಸಾನಿಧ್ಯದಲ್ಲಿ ನನ್ನ ಹೃದಯದ ಭಾರವನ್ನು ಹಾಕುವಾಗ ನಾನುನಿಜವಾದ ಸಂತೋಷವನ್ನು ಪಡೆಯುತ್ತೇನೆ. ಅಲ್ಲಿ ಶುದ್ಧವಾದ ಮತ್ತು ಪರಲೋಕದ ಸಂತೋಷದಿಂದ ನಾನು ಚೈತನ್ಯಗೊಂಡೆ. ಅಲ್ಲಿ ಯಾವ ಪಾಪವು ನನ್ನ ಮೇಲೆ ಅಧಿಕಾರ ನಡೆಸಲಾರದು. ಅಲ್ಲಿ ನಿತ್ಯತ್ವದ ಆನಂದವನ್ನು ನಾನು ಕಂಡೆ. ಅನೇಕ ವರ್ಷಗಳಿಂದ ನಾನಾಗಿಯೇ ಹಾಡಿಕೊಳ್ಳುತ್ತಿದ್ದ ಹಾಡಿನ ನಿಜತ್ವವನ್ನು ಈಗ ಸ್ವಲ್ಪ ಮಟ್ಟಿಗೆ ನಾನು ಅನುಭವಿಸಿದೆ.
'ದೇವರ ಹೃದಯದ ಬಳಿ ಶಾಂತವಾದ ವಿಶ್ರಾಂತಿಯ ಸ್ಥಳವಿದೆ. ದೇವರ ಹೃದಯದ ಬಳಿ ಪಾಪವು ಉಪದ್ರವ ಕೊಡಲಾರದು'
ಒಂದು ರೀತಿಯಲ್ಲಿ ನನ್ನ ಹೃದಯವು ಅದ್ಭುತಗಳನ್ನು ನನಗಾಗಿ ಮಾಡಿದ ಕರ್ತನಿಗೆ ಸತತವಾಗಿ ಸ್ತೋತ್ರವನ್ನು ಎತ್ತಿ ಹಿಡಿಯುತ್ತದೆ. ಮತ್ತು ನಾನು ಯಾವಾಗಲೂ ಕರ್ತನ ಸನ್ನಿದಿಯಲ್ಲಿ ಇರುವ ಹಾಗೆ ಅನ್ನಿಸುತ್ತದೆ.
ಸ್ಥಳಿಯ ಸಭೆಯು ನಮ್ಮ ಹೃದಯದ ಬಡಿತವಾಯಿತು!!!ದೇವರ ಕುಟುಂಬವನ್ನು ನಮ್ಮ ನಿಜವಾದ ಕುಟುಂಬದ ಹಾಗೆ ನಾವು ಕಂಡೆವು.
ಈ ಜೀವಕರ ವಿಷಯದಲ್ಲಿ ಪ್ರಕಾಶನಿಗೂ ಸಹ ನನ್ನ ಹಾಗೆಯೇ ಒಂದೆ ರೀತಿಯ ದೃಷ್ಟಿ ಇರುವುದನ್ನು ಕಂಡು ಕೃತಜ್ಞತೆಯುಳ್ಳವಳಾಗಿದ್ದೇನೆ. ಯೇಸುವು ನನ್ನನ್ನು ಲೌಕೀಕ ಕುಟುಂಬದಿಂದ ಪ್ರತ್ಯೇಕಿಸಿ ತನ್ನ ಕುಟುಂಬದಲ್ಲಿ ಸೇರಿಸಿರುವುದನ್ನು ಕಂಡೆನು.
ಅಲ್ಲಿನ ಸಭೆಯು ಸುಮಾರು 60 ಜನ ವಿಶ್ವಾಸಿಗಳಿಂದ ಕೂಡಿರುವ ಸಣ್ಣ ಗುಂಪು. ಆದರೆ ನಾವು ಒಬ್ಬರನ್ನೊಬ್ಬರು ಪ್ರೀತಿಸಿದೆವು. ಒಬ್ಬರಿಗೊಬ್ಬರು ಸಹಾಯಿಸಿದೆವು. ಮತ್ತು ಒಬ್ಬರಿಗೊಬ್ಬರು ಚಿಂತಿಸಿದೆವು. ದೇವರಿಗೆ ಈ ವಿಧವಾದ ಸಭೆಯೇ ಬೇಕಾಗಿರುವುದೆಂಬುದನ್ನು ನಾನು ಕಂಡೆನು.
ಈ ವಿಧವಾದ ವಾತಾವರಣ ಸಭೆಯಲ್ಲಿ ಹೆಚ್ಚಾಗಿ ಕಂಡು ಬಂದದ್ದು ಅಲ್ಲಿನ ನಿಸ್ವಾರ್ಥ ಹಾಗೂ ದೇವರಿಗೆರೆಗೆ ಸೇವೆ ಸಲ್ಲಿಸಲು ಸ್ವಷ್ಟವಾದ ಕರೆಯನ್ನು ಹೊಂದಿರುವ ಸಭಾಪಾಲಕರ ದುಡಿಮೆಯೇ ಆಗಿದೆ. ಅನೇಕ ಸತ್ತ ಸಭೆಗಳನ್ನು ನಾನು ನನ್ನ ಜೀವಿತದಲ್ಲಿ ನೋಡಿದ್ದೇನೆ. ಈಗ ಅದಕ್ಕೆ ಒಂದು ಸಭೆಯು ಕಡೆಗೆ ತನ್ನ ನಾಯಕನಂತೆ ಆಗುತ್ತದೆ ಎಂಬ ಕಾರಣವು ಈಗ ನನಗೆ ತಿಳಿಯಿತು.
ಪ್ರಕಾಶ ಮತ್ತು ನಾನು ಭಾನುವಾರ ಬೆಳಿಗಿನ ಕೂಟ ಮತ್ತು ವಾರದ ಮಧ್ಯ ಸತ್ಯವೇದದ ಅಧ್ಯಾಯನ ಕೂಟಗಳಿಗೆ ತಪ್ಪದೆ ಭಾಗವಹಿಸುತ್ತಿದ್ದೆವು. ಈ ಎರಡೂ ಕೂಟಗಳನ್ನು ನಾನು ತಪ್ಪಿಸಿಕೊಳ್ಳದಂತೆ ನನ್ನ ಕೆಲಸದ ಸಮಯಗಳನ್ನು ಬೇರೆ ದಾದಿಯರೊಂದಿಗೆ ಕ್ರಮಪಡಿಸಲು ಸಾಧ್ಯವಾದಷ್ಟು ಪ್ರಯತ್ನಿಸುತ್ತಿದ್ದೆ. ಭಾನುವಾರ ಬೆಳಗಿನ ಕೂಟಗಳಲ್ಲಿ ಸ್ತೋತ್ರ ಮತ್ತು ಸಂಗೀತದ ಸಮಯಗಳು ನಿಜವಾಗಲೂ ಜೀವದಿಂದ ಕೂಡಿದ್ದು ಪ್ರತಿಸಾರಿಯೂ ನನ್ನ ಬಿಡುವಿನ ವೇಳೆಯಲ್ಲಿ ಓದುತ್ತಿದ್ದೆ ಮತ್ತು ನನಗೆ ಪ್ರಯೋಜನಕರವಾದ್ದದನ್ನು ಇತರ ದಾದಿಯರೊಂದಿಗೆ ಹಂಚಿಕೊಳ್ಳುತ್ತಿದ್ದೆ. ದೇವರ ವಾಕ್ಯವನ್ನು ಕಲಿಯಲು ನನ್ನ ಹೃದಯದ ಆಳದಲ್ಲಿ ದಾಹವನ್ನು ಕಂಡೆ.
ಸಭೆಯಲ್ಲಿ ಸ್ತ್ರೀಯರ ಸ್ಥಾನದ ಬಗ್ಗೆ ಸತ್ಯವೇದವು ಕಲಿಸಿರುವುದನ್ನು ನಾನು ಧ್ಯಾನಿಸಿದೆ. (1ತಿಮೋಥಿ 2:9-151ಕೊರಿಂಥ 4:34-38) ರಲ್ಲಿ ಪುರುಷನೇ ಸಭೆಯಲ್ಲಿ ನಾಯಕನಾಗಿರಬೇಕೆಂದು ಸತ್ಯವೇದದಲ್ಲಿ ಸ್ವಷ್ಟವಾಗಿ ತಿಳಿಸಿದೆ. ಸಣ್ಣ ಸಣ್ಣ ವಿಷಯಗಳಲ್ಲಿಯೂ ಸಹ ದೇವರ ವಾಕ್ಯಕ್ಕೆ ವಿಧೇಯಳಾಗಿರಲು ನಾನು ಇಷ್ಟಪಡುತ್ತೇನೆ. ಮತ್ತು ಅವರ ಸೇವೆಗಳಿಗಾಗಿ ಪ್ರಾರ್ಥಿಸಲು ಇಷ್ಟಪಡುತ್ತೇನೆ.
ನನ್ನ ಸಭೆಯ ಹಿರಿಯ ಸಹೋದರರಿಗೆ ಅಧೀನಳಾಗಿರಲು ಸಂತೋಷಿಸುತ್ತೇನೆ. ಮತ್ತು ಅವರ ಸೇವೆಗಳಿಗಾಗಿ ಪ್ರಾರ್ಥಿಸಲು ಇಷ್ಟಪಡುತ್ತೇನೆ.
ಸಭೆಯಲ್ಲಿ ಸಹೋದರಿಯರಿಗಾಗಿ ನನ್ನ ಕರೆಯು ಅತ್ಯಂತ ಪ್ರಭೆಯುಳ್ಳವಳಾಗಿರದೆ ತೆರೆಯ ಮರೆಯಲ್ಲಿ ಸಹಾಯಕಳಾಗಿರಬೇಕೆಂಬುದನ್ನು ಕಂಡೆನು. ಭಾನುವಾರ ಶಾಲೆಗಳಲ್ಲಿ ಮಕ್ಕಳಿಗೆ ಕಲಿಸಿಕೊಡುತ್ತಿದ್ದ ಸಹೋದರಿಯರ ಕೂಟಗಳಲ್ಲಿ ಮತ್ತು ದಾದಿಯರ ಕೂಟಗಳಲ್ಲಿ ವಾಕ್ಯವನ್ನು ಹಂಚಿಕೊಳ್ಳುತ್ತಿದ್ದೆ. ಕೂಟಗಳಲ್ಲಿ ನನ್ನ ತಲೆಯನ್ನು ಮುಚ್ಚಿಕೊಳ್ಳಲು ಉಪಯೋಗಿಸುತ್ತಿದ್ದ ಶಕ್ತಿ ಸಂಪ್ರದಾಯಕ್ಕಿಂತ ಹೆಚ್ಚಾದದ್ದಾಗಿತ್ತು. ಅದು ದೇವರ ಸಭೆಯ ನಾಯಕತ್ವದಲ್ಲಿ ಇಟ್ಟಿರುವ ಪುರುಷನಿಗೂ ಹಾಗೆ ನನ್ನ ಗಂಡನಿಗೂ ಅಧೀನಳಾಗಬೇಕೆಂಬುದಾಗಿ ನೇಮಿಸಿರುವ ಅಧೀನತೆಯ ಸ್ಥಾನವನ್ನು ಸೂಚಿಸುವ ಚಿಹ್ನೆಯಾಗಿದೆ (1ಕೊರಿಂಥ 11:3-16).
ಸಹೋದರಿಯಾಗಿ ಈ ಅಧೀನತೆಯ ಸ್ಥಾನವನ್ನು ಸಂತೋಷದಿಂದ ಸ್ವೀಕರಿಸುವಾಗ ನಾನು ಮಾಡುತ್ತಿರುವ ದೇವರ ಸೇವೆಯಲ್ಲಿ ಸಮೃದ್ಧಿಯಾದ ಫಲವನ್ನು ಕಂಡೆನು. ಮಕ್ಕಳಿಗೆ ದೇವರ ವಾಕ್ಯವನ್ನು ಕಲಿಸುವಾಗ ಮತ್ತು ಸಹೋದರಿಯರೊಟ್ಟಿಗೆ ದೇವರ ವಾಕ್ಯವನ್ನು ಹಂಚಿಕೊಳ್ಳುವಾಗ ಬಹಳವಾಗಿ ದೇವರ ಅಭಿಷೇಕವನ್ನು ನಾನು ಅನುಭವಿಸಿದೆ.
ಅಧೀನತೆಯು ನನ್ನ ಆತ್ಮದಲ್ಲಿನ ಉದ್ದೇಶ ಮತ್ತು ಕೇವಲ ಹೊರಗಿನ ಸಂಗತಿಯಲ್ಲ ಎಂಬುದನ್ನು ನಾನು ಕಂಡುಕೊಂಡೆ. ಅದು ಕರ್ತನಾದ ಯೇಸುವು ತನ್ನ ತಂದೆಗೆ ಭೂಲೋಕದ ಜೀವನವಿಡೀ ಅಧೀನತೆಯಲ್ಲಿದ್ದ ಆತ್ಮದಂತೆಯೇ ಇರುವುದನ್ನು ಕಂಡುಕೊಂಡೆ. ಈ ಆತ್ಮವು ನಮ್ಮ ಇಡೀ ಜೀವಿತವನ್ನು ಪ್ರವೇಶಿಸುವಾಗ ನಾವು ಇತರರಿಗೆ ಆಶೀರ್ವಾದವಾಗಿರುವಂತೆ ದೇವರು ನಮ್ಮನ್ನು ಆಶೀರ್ವದಿಸುತ್ತಾನೆ.
ತಿರುಗಿ ಬಿಳುವುದು ಸೈತಾನನ ಆತ್ಮವಾಗಿದೆ ಎಂಬುದನ್ನು ಸಹ ನಾನು ಕಂಡುಕೊಂಡೆ. ಒಂದು ವೇಳೆ ನಾನು ಬುದ್ದಿವಂತ ಹೆಂಡತಿಯಾಗಿದ್ದರೆ ಎಲ್ಲದರಲ್ಲೂ ಕ್ರಿಸ್ತನು ಸಭೆಯು ಹೇಗೆ ಅಧಿನವಾಗಿದೆಯೋ ಅದೇ ರೀತಿ ನಾನು ನನ್ನ ಗಂಡನಿಗೆ ಅಧೀನಳಾಗುವುದರ ಮೂಲಕ ನನ್ನ ಮನೆಯನ್ನು ನಾನು ಕಟ್ಟುತ್ತೇನೆ (ಎಫೆ 5:24, ಜ್ಞಾನೋ 14:1).ನನಗೂ ಮತ್ತು ಪ್ರಕಾಶ ಇಬ್ಬರಿಗೂ ದೇವರ ಕೆಲಸಕ್ಕಾಗಿ ಕ್ರಮವಾಗಿ ಕೊಡಬೇಕೆಂಬುದಾಗಿ ಅನ್ನಿಸಿತು. ಈ ವಿಷಯದಲ್ಲಿ ನಾವು ಯಾವುದೇ ನಿಯಮಕ್ಕೆ ಬಂಧಿಸಲ್ಪಟ್ಟಿರಲಿಲ್ಲ. ಅಥವಾ ಇದರ ಬಗ್ಗೆ ಬಲವಂತವಿರಲಿಲ್ಲ. ನಾವು ಸಂತೋಷವಾಗಿ ಕೊಟ್ಟೆವು. ಸ್ವಲ್ಪ ಹಣವನ್ನು ಸಭೆಯಲ್ಲಿ ಕಾಣಿಕೆಯಾಗಿ ಕೊಟ್ಟೆವು. ನಾವು ಸ್ವಲ್ಪ ಹಣವನ್ನು ಪ್ರತಿ ತಿಂಗಳು 2 ಮಿಷನರಿ ಸಂಸ್ಥೆಗಳಿಗೆ ಕಳುಹಿಸುತ್ತಿದ್ದೆವು. ಅಲ್ಲಿ ಕೆಲವು ಸ್ತ್ರೀ ಪುರುಷರು ಕರ್ತನಿಗಾಗಿ ದಕ್ಷಿಣ ಭಾರತದಲ್ಲಿ ಕೆಲಸಮಾಡುತ್ತಿದ್ದರು. ನಾವು ತಿಳಿದಂತ ದೇವರ ಸೇವಕರಿಗಾಗಿ ತಪ್ಪದೆ ಪ್ರಾರ್ಥಿಸುತ್ತಿದ್ದರು.
ನಮ್ಮ ಮನೆಯಲ್ಲಿ ಯಾವ ಕೊರತೆಯು ಇರಲಿಲ್ಲ. ಯಾಕಂದರೆ ನಾವು ದೇವರಿಗೆ ಕೊಟ್ಟೆವು ಮತ್ತು ಉಳಿದದ್ದನ್ನು ನಮಗೆ ಸಾಕಾಗುವುದಕ್ಕಿಂತ ಹೆಚ್ಚಾಗಿ ನಮ್ಮ ಅವಶ್ಯಕತೆಗಳನ್ನು ಸಂದಿಸುವ ಹಾಗೆ ಆತನು ಮಾಡಿದನು. ಹೀಗೆ ಕರ್ತನು ನಂಬಿಗಸ್ಥಿಕೆಯನ್ನು ಮತ್ತೆ ಮತ್ತೆ ನಾವು ನಿರೂಪಿಸಿದೆವು.
ಸ್ಥಳಿಯ ಸಭೆಯ ಪ್ರಕಾಶಮ ಮತ್ತು ನನ್ನ ಅಖಂಡವಾಗಿತ್ತು. ಸಭೆಯು ಕ್ರಿಸ್ತನ ದೇಹವಾಗಿದ್ದು. ಅದರಲ್ಲಿ ನಾವು ಸಜೀವ ಭಾಗವಾಗಿದ್ದೆವು. ದೇವ ಜನರೊಂದಿಗೆ ಅನ್ನೋನ್ಯತೆಯು ನಮ್ಮ ಜೀವಿತವನ್ನು ಅನೇಕ ರೀತಿಗಳಲ್ಲಿ ಸಮೃದ್ಧಿಗೊಳಿಸಿತು.
ನಾವು ತೊಂದರೆಗಳನ್ನು ಎದುರಿಸಬೇಕಾದಾಗ ದೇವ ಜನರೊಟ್ಟಿಗೆ ಸೇರಿ ಪ್ರಾರ್ಥಿಸುತ್ತಿದ್ದೆವು.ಜೀವಿತದಲ್ಲಿ ಸಮಸ್ಯೆಗಳನ್ನು ಮತ್ತು ಒತ್ತಡಗಳನ್ನು ಎದುರಿಸುವವರಿಗೆ ಸಹ ನಾವು ಸಹಾಯಿಸುತ್ತಿದ್ದೆವು.
ಕ್ರಿಸ್ತನ ದೇಹದಲ್ಲಿ ಒಬ್ಬೊಬ್ಬರಿಗೂ ನಿಕಟವಾಗಿ ಒಂದು ಗೂಡಿದ ಅಂಗಗಳಾಗಿರಬೇಕೆಂಬುದಾಗಿಯೇ ಕರ್ತನು ತನ್ನ ಮಕ್ಕಳಾದ ನಮಗೆ ಅನೇಕ ಸಮಸ್ಯೆಗಳನ್ನು ಅನುಮತಿಸಿದನು. ಸ್ಥಳಿಯ ಸಭೆಗಳಿಗೆ ಅನ್ನೋನ್ಯತೆಗೆ ಬೆಲೆ ಕೊಡದವರಿಗಾಗಿಯೂ ಹಾಗೂ ತಾವು ಅನ್ನೋನ್ಯತೆಯನ್ನು ಪಡೆಯಲು ಒಳ್ಳೆಯಸಭೆಯಿಲ್ಲದವರಿಗಾಗಿಯೂ ನಾನು ದುಃಖಿಸುತ್ತಿದ್ದೆ.
ನಮ್ಮ ಸಭೆಯಲ್ಲಿ ಸಹೋದರ ಮತ್ತು ಸಹೋದರಿಯರ ಮಧ್ಯೆ ಪರಲೋಕವನ್ನೆ ಪ್ರಕಾಶನು ಮತ್ತು ನಾನು ರುಚಿಸಿದ್ದೆವೆಂಬುದನ್ನು ಯಥಾರ್ಥವಾಗಿ ಹೇಳಬಲ್ಲೆ
.ಸ್ಥಳಿಯ ಸಭೆಯು ನಮ್ಮ ಹೃದಯದ ಬಡಿತವಾಯಿತು!!!ದೇವರ ಕುಟುಂಬವನ್ನು ನಮ್ಮ ನಿಜವಾದ ಕುಟುಂಬದ ಹಾಗೆ ನಾವು ಕಂಡೆವು.
ಈ ಜೀವಕರ ವಿಷಯದಲ್ಲಿ ಪ್ರಕಾಶನಿಗೂ ಸಹ ನನ್ನ ಹಾಗೆಯೇ ಒಂದೆ ರೀತಿಯ ದೃಷ್ಟಿ ಇರುವುದನ್ನು ಕಂಡು ಕೃತಜ್ಞತೆಯುಳ್ಳವಳಾಗಿದ್ದೇನೆ. ಯೇಸುವು ನನ್ನನ್ನು ಲೌಕೀಕ ಕುಟುಂಬದಿಂದ ಪ್ರತ್ಯೇಕಿಸಿ ತನ್ನ ಕುಟುಂಬದಲ್ಲಿ ಸೇರಿಸಿರುವುದನ್ನು ಕಂಡೆನು.
ಅಲ್ಲಿನ ಸಭೆಯು ಸುಮಾರು 60 ಜನ ವಿಶ್ವಾಸಿಗಳಿಂದ ಕೂಡಿರುವ ಸಣ್ಣ ಗುಂಪು. ಆದರೆ ನಾವು ಒಬ್ಬರನ್ನೊಬ್ಬರು ಪ್ರೀತಿಸಿದೆವು. ಒಬ್ಬರಿಗೊಬ್ಬರು ಸಹಾಯಿಸಿದೆವು. ಮತ್ತು ಒಬ್ಬರಿಗೊಬ್ಬರು ಚಿಂತಿಸಿದೆವು. ದೇವರಿಗೆ ಈ ವಿಧವಾದ ಸಭೆಯೇ ಬೇಕಾಗಿರುವುದೆಂಬುದನ್ನು ನಾನು ಕಂಡೆನು.
ಈ ವಿಧವಾದ ವಾತಾವರಣ ಸಭೆಯಲ್ಲಿ ಹೆಚ್ಚಾಗಿ ಕಂಡು ಬಂದದ್ದು ಅಲ್ಲಿನ ನಿಸ್ವಾರ್ಥ ಹಾಗೂ ದೇವರಿಗೆರೆಗೆ ಸೇವೆ ಸಲ್ಲಿಸಲು ಸ್ವಷ್ಟವಾದ ಕರೆಯನ್ನು ಹೊಂದಿರುವ ಸಭಾಪಾಲಕರ ದುಡಿಮೆಯೇ ಆಗಿದೆ. ಅನೇಕ ಸತ್ತ ಸಭೆಗಳನ್ನು ನಾನು ನನ್ನ ಜೀವಿತದಲ್ಲಿ ನೋಡಿದ್ದೇನೆ. ಈಗ ಅದಕ್ಕೆ ಒಂದು ಸಭೆಯು ಕಡೆಗೆ ತನ್ನ ನಾಯಕನಂತೆ ಆಗುತ್ತದೆ ಎಂಬ ಕಾರಣವು ಈಗ ನನಗೆ ತಿಳಿಯಿತು.
ಪ್ರಕಾಶ ಮತ್ತು ನಾನು ಭಾನುವಾರ ಬೆಳಿಗಿನ ಕೂಟ ಮತ್ತು ವಾರದ ಮಧ್ಯ ಸತ್ಯವೇದದ ಅಧ್ಯಾಯನ ಕೂಟಗಳಿಗೆ ತಪ್ಪದೆ ಭಾಗವಹಿಸುತ್ತಿದ್ದೆವು. ಈ ಎರಡೂ ಕೂಟಗಳನ್ನು ನಾನು ತಪ್ಪಿಸಿಕೊಳ್ಳದಂತೆ ನನ್ನ ಕೆಲಸದ ಸಮಯಗಳನ್ನು ಬೇರೆ ದಾದಿಯರೊಂದಿಗೆ ಕ್ರಮಪಡಿಸಲು ಸಾಧ್ಯವಾದಷ್ಟು ಪ್ರಯತ್ನಿಸುತ್ತಿದ್ದೆ. ಭಾನುವಾರ ಬೆಳಗಿನ ಕೂಟಗಳಲ್ಲಿ ಸ್ತೋತ್ರ ಮತ್ತು ಸಂಗೀತದ ಸಮಯಗಳು ನಿಜವಾಗಲೂ ಜೀವದಿಂದ ಕೂಡಿದ್ದು ಪ್ರತಿಸಾರಿಯೂ ನನ್ನ ಬಿಡುವಿನ ವೇಳೆಯಲ್ಲಿ ಓದುತ್ತಿದ್ದೆ ಮತ್ತು ನನಗೆ ಪ್ರಯೋಜನಕರವಾದ್ದದನ್ನು ಇತರ ದಾದಿಯರೊಂದಿಗೆ ಹಂಚಿಕೊಳ್ಳುತ್ತಿದ್ದೆ. ದೇವರ ವಾಕ್ಯವನ್ನು ಕಲಿಯಲು ನನ್ನ ಹೃದಯದ ಆಳದಲ್ಲಿ ದಾಹವನ್ನು ಕಂಡೆ.
ಸಭೆಯಲ್ಲಿ ಸ್ತ್ರೀಯರ ಸ್ಥಾನದ ಬಗ್ಗೆ ಸತ್ಯವೇದವು ಕಲಿಸಿರುವುದನ್ನು ನಾನು ಧ್ಯಾನಿಸಿದೆ. (1ತಿಮೋಥಿ 2:9-151ಕೊರಿಂಥ 4:34-38) ರಲ್ಲಿ ಪುರುಷನೇ ಸಭೆಯಲ್ಲಿ ನಾಯಕನಾಗಿರಬೇಕೆಂದು ಸತ್ಯವೇದದಲ್ಲಿ ಸ್ವಷ್ಟವಾಗಿ ತಿಳಿಸಿದೆ. ಸಣ್ಣ ಸಣ್ಣ ವಿಷಯಗಳಲ್ಲಿಯೂ ಸಹ ದೇವರ ವಾಕ್ಯಕ್ಕೆ ವಿಧೇಯಳಾಗಿರಲು ನಾನು ಇಷ್ಟಪಡುತ್ತೇನೆ. ಮತ್ತು ಅವರ ಸೇವೆಗಳಿಗಾಗಿ ಪ್ರಾರ್ಥಿಸಲು ಇಷ್ಟಪಡುತ್ತೇನೆ.
ನನ್ನ ಸಭೆಯ ಹಿರಿಯ ಸಹೋದರರಿಗೆ ಅಧೀನಳಾಗಿರಲು ಸಂತೋಷಿಸುತ್ತೇನೆ. ಮತ್ತು ಅವರ ಸೇವೆಗಳಿಗಾಗಿ ಪ್ರಾರ್ಥಿಸಲು ಇಷ್ಟಪಡುತ್ತೇನೆ.
ಸಭೆಯಲ್ಲಿ ಸಹೋದರಿಯರಿಗಾಗಿ ನನ್ನ ಕರೆಯು ಅತ್ಯಂತ ಪ್ರಭೆಯುಳ್ಳವಳಾಗಿರದೆ ತೆರೆಯ ಮರೆಯಲ್ಲಿ ಸಹಾಯಕಳಾಗಿರಬೇಕೆಂಬುದನ್ನು ಕಂಡೆನು. ಭಾನುವಾರ ಶಾಲೆಗಳಲ್ಲಿ ಮಕ್ಕಳಿಗೆ ಕಲಿಸಿಕೊಡುತ್ತಿದ್ದ ಸಹೋದರಿಯರ ಕೂಟಗಳಲ್ಲಿ ಮತ್ತು ದಾದಿಯರ ಕೂಟಗಳಲ್ಲಿ ವಾಕ್ಯವನ್ನು ಹಂಚಿಕೊಳ್ಳುತ್ತಿದ್ದೆ. ಕೂಟಗಳಲ್ಲಿ ನನ್ನ ತಲೆಯನ್ನು ಮುಚ್ಚಿಕೊಳ್ಳಲು ಉಪಯೋಗಿಸುತ್ತಿದ್ದ ಶಕ್ತಿ ಸಂಪ್ರದಾಯಕ್ಕಿಂತ ಹೆಚ್ಚಾದದ್ದಾಗಿತ್ತು. ಅದು ದೇವರ ಸಭೆಯ ನಾಯಕತ್ವದಲ್ಲಿ ಇಟ್ಟಿರುವ ಪುರುಷನಿಗೂ ಹಾಗೆ ನನ್ನ ಗಂಡನಿಗೂ ಅಧೀನಳಾಗಬೇಕೆಂಬುದಾಗಿ ನೇಮಿಸಿರುವ ಅಧೀನತೆಯ ಸ್ಥಾನವನ್ನು ಸೂಚಿಸುವ ಚಿಹ್ನೆಯಾಗಿದೆ (1ಕೊರಿಂಥ 11:3-16).
ಸಹೋದರಿಯಾಗಿ ಈ ಅಧೀನತೆಯ ಸ್ಥಾನವನ್ನು ಸಂತೋಷದಿಂದ ಸ್ವೀಕರಿಸುವಾಗ ನಾನು ಮಾಡುತ್ತಿರುವ ದೇವರ ಸೇವೆಯಲ್ಲಿ ಸಮೃದ್ಧಿಯಾದ ಫಲವನ್ನು ಕಂಡೆನು. ಮಕ್ಕಳಿಗೆ ದೇವರ ವಾಕ್ಯವನ್ನು ಕಲಿಸುವಾಗ ಮತ್ತು ಸಹೋದರಿಯರೊಟ್ಟಿಗೆ ದೇವರ ವಾಕ್ಯವನ್ನು ಹಂಚಿಕೊಳ್ಳುವಾಗ ಬಹಳವಾಗಿ ದೇವರ ಅಭಿಷೇಕವನ್ನು ನಾನು ಅನುಭವಿಸಿದೆ.
ಅಧೀನತೆಯು ನನ್ನ ಆತ್ಮದಲ್ಲಿನ ಉದ್ದೇಶ ಮತ್ತು ಕೇವಲ ಹೊರಗಿನ ಸಂಗತಿಯಲ್ಲ ಎಂಬುದನ್ನು ನಾನು ಕಂಡುಕೊಂಡೆ. ಅದು ಕರ್ತನಾದ ಯೇಸುವು ತನ್ನ ತಂದೆಗೆ ಭೂಲೋಕದ ಜೀವನವಿಡೀ ಅಧೀನತೆಯಲ್ಲಿದ್ದ ಆತ್ಮದಂತೆಯೇ ಇರುವುದನ್ನು ಕಂಡುಕೊಂಡೆ. ಈ ಆತ್ಮವು ನಮ್ಮ ಇಡೀ ಜೀವಿತವನ್ನು ಪ್ರವೇಶಿಸುವಾಗ ನಾವು ಇತರರಿಗೆ ಆಶೀರ್ವಾದವಾಗಿರುವಂತೆ ದೇವರು ನಮ್ಮನ್ನು ಆಶೀರ್ವದಿಸುತ್ತಾನೆ.
ತಿರುಗಿ ಬಿಳುವುದು ಸೈತಾನನ ಆತ್ಮವಾಗಿದೆ ಎಂಬುದನ್ನು ಸಹ ನಾನು ಕಂಡುಕೊಂಡೆ. ಒಂದು ವೇಳೆ ನಾನು ಬುದ್ದಿವಂತ ಹೆಂಡತಿಯಾಗಿದ್ದರೆ ಎಲ್ಲದರಲ್ಲೂ ಕ್ರಿಸ್ತನು ಸಭೆಯು ಹೇಗೆ ಅಧಿನವಾಗಿದೆಯೋ ಅದೇ ರೀತಿ ನಾನು ನನ್ನ ಗಂಡನಿಗೆ ಅಧೀನಳಾಗುವುದರ ಮೂಲಕ ನನ್ನ ಮನೆಯನ್ನು ನಾನು ಕಟ್ಟುತ್ತೇನೆ (ಎಫೆ 5:24, ಜ್ಞಾನೋ 14:1).ನನಗೂ ಮತ್ತು ಪ್ರಕಾಶ ಇಬ್ಬರಿಗೂ ದೇವರ ಕೆಲಸಕ್ಕಾಗಿ ಕ್ರಮವಾಗಿ ಕೊಡಬೇಕೆಂಬುದಾಗಿ ಅನ್ನಿಸಿತು. ಈ ವಿಷಯದಲ್ಲಿ ನಾವು ಯಾವುದೇ ನಿಯಮಕ್ಕೆ ಬಂಧಿಸಲ್ಪಟ್ಟಿರಲಿಲ್ಲ. ಅಥವಾ ಇದರ ಬಗ್ಗೆ ಬಲವಂತವಿರಲಿಲ್ಲ. ನಾವು ಸಂತೋಷವಾಗಿ ಕೊಟ್ಟೆವು. ಸ್ವಲ್ಪ ಹಣವನ್ನು ಸಭೆಯಲ್ಲಿ ಕಾಣಿಕೆಯಾಗಿ ಕೊಟ್ಟೆವು. ನಾವು ಸ್ವಲ್ಪ ಹಣವನ್ನು ಪ್ರತಿ ತಿಂಗಳು 2 ಮಿಷನರಿ ಸಂಸ್ಥೆಗಳಿಗೆ ಕಳುಹಿಸುತ್ತಿದ್ದೆವು. ಅಲ್ಲಿ ಕೆಲವು ಸ್ತ್ರೀ ಪುರುಷರು ಕರ್ತನಿಗಾಗಿ ದಕ್ಷಿಣ ಭಾರತದಲ್ಲಿ ಕೆಲಸಮಾಡುತ್ತಿದ್ದರು. ನಾವು ತಿಳಿದಂತ ದೇವರ ಸೇವಕರಿಗಾಗಿ ತಪ್ಪದೆ ಪ್ರಾರ್ಥಿಸುತ್ತಿದ್ದರು.
ನಮ್ಮ ಮನೆಯಲ್ಲಿ ಯಾವ ಕೊರತೆಯು ಇರಲಿಲ್ಲ. ಯಾಕಂದರೆ ನಾವು ದೇವರಿಗೆ ಕೊಟ್ಟೆವು ಮತ್ತು ಉಳಿದದ್ದನ್ನು ನಮಗೆ ಸಾಕಾಗುವುದಕ್ಕಿಂತ ಹೆಚ್ಚಾಗಿ ನಮ್ಮ ಅವಶ್ಯಕತೆಗಳನ್ನು ಸಂದಿಸುವ ಹಾಗೆ ಆತನು ಮಾಡಿದನು. ಹೀಗೆ ಕರ್ತನು ನಂಬಿಗಸ್ಥಿಕೆಯನ್ನು ಮತ್ತೆ ಮತ್ತೆ ನಾವು ನಿರೂಪಿಸಿದೆವು.
ಸ್ಥಳಿಯ ಸಭೆಯ ಪ್ರಕಾಶಮ ಮತ್ತು ನನ್ನ ಅಖಂಡವಾಗಿತ್ತು. ಸಭೆಯು ಕ್ರಿಸ್ತನ ದೇಹವಾಗಿದ್ದು. ಅದರಲ್ಲಿ ನಾವು ಸಜೀವ ಭಾಗವಾಗಿದ್ದೆವು. ದೇವ ಜನರೊಂದಿಗೆ ಅನ್ನೋನ್ಯತೆಯು ನಮ್ಮ ಜೀವಿತವನ್ನು ಅನೇಕ ರೀತಿಗಳಲ್ಲಿ ಸಮೃದ್ಧಿಗೊಳಿಸಿತು.
ನಾವು ತೊಂದರೆಗಳನ್ನು ಎದುರಿಸಬೇಕಾದಾಗ ದೇವ ಜನರೊಟ್ಟಿಗೆ ಸೇರಿ ಪ್ರಾರ್ಥಿಸುತ್ತಿದ್ದೆವು.ಜೀವಿತದಲ್ಲಿ ಸಮಸ್ಯೆಗಳನ್ನು ಮತ್ತು ಒತ್ತಡಗಳನ್ನು ಎದುರಿಸುವವರಿಗೆ ಸಹ ನಾವು ಸಹಾಯಿಸುತ್ತಿದ್ದೆವು.
ಕ್ರಿಸ್ತನ ದೇಹದಲ್ಲಿ ಒಬ್ಬೊಬ್ಬರಿಗೂ ನಿಕಟವಾಗಿ ಒಂದು ಗೂಡಿದ ಅಂಗಗಳಾಗಿರಬೇಕೆಂಬುದಾಗಿಯೇ ಕರ್ತನು ತನ್ನ ಮಕ್ಕಳಾದ ನಮಗೆ ಅನೇಕ ಸಮಸ್ಯೆಗಳನ್ನು ಅನುಮತಿಸಿದನು. ಸ್ಥಳಿಯ ಸಭೆಗಳಿಗೆ ಅನ್ನೋನ್ಯತೆಗೆ ಬೆಲೆ ಕೊಡದವರಿಗಾಗಿಯೂ ಹಾಗೂ ತಾವು ಅನ್ನೋನ್ಯತೆಯನ್ನು ಪಡೆಯಲು ಒಳ್ಳೆಯಸಭೆಯಿಲ್ಲದವರಿಗಾಗಿಯೂ ನಾನು ದುಃಖಿಸುತ್ತಿದ್ದೆ.
ನಮ್ಮ ಸಭೆಯಲ್ಲಿ ಸಹೋದರ ಮತ್ತು ಸಹೋದರಿಯರ ಮಧ್ಯೆ ಪರಲೋಕವನ್ನೆ ಪ್ರಕಾಶನು ಮತ್ತು ನಾನು ರುಚಿಸಿದ್ದೆವೆಂಬುದನ್ನು ಯಥಾರ್ಥವಾಗಿ ಹೇಳಬಲ್ಲೆ
.ನನ್ನ ಹಿಂದಿನ ಜೀವತವನ್ನು ಮರಳಿನೋಡುವಾಗ ನನ್ನ ಕರ್ತನು ಮತ್ತು ನನ್ನ ವಿಮೋಚಕನು ನನಗಾಗಿ ಮಾಡಿರುವುಗಳನ್ನೆಲ್ಲಾ ನೋಡಿ ನಾನು ಕೃತಜ್ಞತೆಯಿಂದ ತುಂಬಿರುವುದನ್ನು ಕಾಣುತ್ತೇನೆ.
ಒಂದು ಕಾಲದಲ್ಲಿ ಭದ್ರತೆಯಿಲ್ಲದ ಹುಡುಗಿಯಾದ ನನ್ನನ್ನು ಈಗ ದೇವರ ಮಗಳನ್ನಾಗಿ ಆತನು ಮಾಡಿದನು. ಮತ್ತು ಪರಪೂರ್ಣ ಲೌಕೀಕ ಬದ್ರತೆ ಹಾಗೂ ಪರಲೋಕದಲ್ಲಿ ನಿತ್ಯತ್ವದ ಭದ್ರತೆಯನ್ನು ಸಹ ಕೊಟ್ಟನು. ಪ್ರಕಾಶ ಮತ್ತು ಆತನ ತಂದೆ ತಾಯಿಗಳೊಟ್ಟಿಗೆ ಇರುವಾಗ ಈ ಕೆಲವು ತಿಂಗಳುಗಳಲ್ಲಿ ಬಹಳವಾಗಿ ಕಲಿಸಿಕೊಟ್ಟರು. ನಾನು ಈಗಾಗಲೇ ನಿಮಗೆ ಹೇಳಿದ ಹಾಗೆ ನನ್ನ ಸಣ್ಣ ವಯಸ್ಸಿನ ದಿನಗಳಲ್ಲಿ ಸಂತೋಷಕರ ವಾತಾವರಣವನ್ನು ಎಂದಿಗೂ ಅನುಭವಿಸಿರಲಿಲ್ಲ. ಹಾಸ್ಟೆಲಿನಲ್ಲಿ ಜೀವಿಸುವುದಕ್ಕಿಂತ ಸಂತೋಷಕರವಾಗಿ ಮನೆಯಲ್ಲಿ ಜೀವಿಸುವುದೇ ಎಷ್ಟೋ ಉತ್ತಮವೆಂದು ಈಗ ನನಗೆ ಅನ್ನಿಸಿತು.
ಮನೆಯಲ್ಲಿ ಒಬ್ಬರು ಕೊಡುವುದನ್ನು ಮತ್ತು ತೆಗೆದಿಕೊಳ್ಳುವುದನ್ನು ಕಲಿಯಬೇಕು. ಒಟ್ಟಿಗೆ ನಾವು ಜೀವಿಸುವಾಗ ಆಗಾಗ ನಾವು ಒಬ್ಬರನ್ನೊಬ್ಬರು ಕೆಣಕುತ್ತೇವೆ. ಮತ್ತು ಕೆಣಸಲ್ಪಡಲು ಸುಲಭವಾಗುತ್ತದೆ. ಆಗಾಗ ಕ್ಷಮಿಸುವುದನ್ನು ಮತ್ತು ಕ್ಷಮಿಸಿರಿ ಎಂಬುದಾಗಿ ಕೇಳುವುದನ್ನು ನಾನು ಕಲಿಯಬೇಕಾಗಿದೆ. ನನಗಿಂತ ಹಿರಿಯರನ್ನು ಸರಿಯಾದ ಗೌರವಾನಿತ ರೀತಿಯಲ್ಲಿ ಹೇಗೆ ಕರೆಯಬೇಕೆಂಬುದನ್ನು ನಾನು ಕಲಿತೆ. ಮನೆಯಲ್ಲಿ ಎಲ್ಲರೊಟ್ಟಿಗೆ ನನಗಿರುವ ಪ್ರತಿ ವಸ್ತುಗಳನ್ನು ಹೇಗೆ ಹಂಚಿಕೊಳ್ಳಬೇಕೆಂಬುದನ್ನು ನಾನು ಕಲಿಯಬೇಕಾಗಿದೆ. ಆಕಸ್ಮಿಕವಾಗಿ ಪ್ರಕಾಶನು ಮನೆಗೆ ಕರೆದು ತರುವ ಅಥಿತಿಗಳನ್ನು ಹೇಗೆ ನಾನು ಸ್ವೀಕರಿಸಬೇಕೆಂಬುದನ್ನು ನಾನು ಕಲಿಯಬೇಕಾಯಿತು ಮತ್ತು ಅವರಿಗೆ ಆಹಾರವನ್ನು ಕೊಡಬೇಕಾದಾಗ ನನ್ನ ಉಪಹಾರವನ್ನು ಹೇಗೆ ಹಂಚಿಕೊಳ್ಳಬೇಕು ಎಂಬುದನ್ನು ಕಲಿಯಬೇಕಾಗಿತ್ತು.
ನಾನು ತಯಾರಿಸುವ ಎಲ್ಲಾ ಆಹಾರ ಪದಾರ್ಥಗಳ ಮನೆಯಲ್ಲಿ ಎಲ್ಲರಿಗೂ ಸಮವಾದ ಭಾಗ ಸಿಗುವಂತೆ ನಾನು ನೋಡಿಕೊಳ್ಳಬೇಕೆಂದು ತೀರ್ಮಾನಿಸಿಕೊಂಡೆ. ಮುಖ್ಯವಾಗಿ ಒಳ್ಳೆಯ ಆಹಾರ ನನಗಾಗಿ ಎಂದು ಎರಡು ಸಾರಿ ತೆಗೆದುಕೊಂಡಿಲ್ಲ. ಒಂದು ವೇಳೆ ಪ್ರಕಾಶನಿಗೆ ಇಷ್ಟವುಳ್ಳ ಪದಾರ್ಥವಾಗಿದ್ದರೆ ರುಚಿನೋಡಲು ನಾನು ಮುಂಚಿತವಾಗಿಯೇ ಸ್ವಲ್ಪ ಕೊಡುತ್ತಿದ್ದೆ. ಕಾರಣ ಯಾವಾಗಲೂ ನನ್ನ ಅಡುಗೆಯನ್ನು ಹೊಗಳುತ್ತಿದ್ದರು. ಕಾಯಿಲೆಯಲ್ಲಿರುವ ತಂದೆ ತಾಯಿಗಳನ್ನು ಉಪಚರಿಸಲು ರಾತ್ರಿಯ ವೇಳೆಯಲ್ಲಿ ಹೇಗೆ ಕಾಯಬೇಕೆಂಬುದನ್ನು ನಾನು ಕಲಿಯಬೇಕಾಯಿತು. ನನಗಿಂತ ವ್ಯತ್ಯಾಸವುಳ್ಳವರಾಗಿರುವವರ ಜೊತೆಗೆ ನಾನು ಕ್ರಮಪಡಿಸಬೇಕೆಂಬುದನ್ನು ನಾನು ಕಲಿಯಬೇಕಾಯಿತು.
ಇವೆಲ್ಲದರ ನಡುವೆ ಬೇರೆ ಕಡೆ ವಾಸಿಸುವುದಕ್ಕಿಂತ (ನನ್ನ ಸ್ವಂತ ಮನೆ ಇಲ್ಲದಿದ್ದರೂ) ನಾನು ಇನ್ನೂ ಪ್ರಕಾಶನ ಜೊತೆಯಲ್ಲಿ ವಾಸಿಸಲು ಬಯಸುತ್ತೆನೆ. ಎಲ್ಲವನ್ನು ಪ್ರೀತಿಯಿಂದ ಮಾಡು ಎಂಬುದನ್ನು ನಾನು ಮುಖ್ಯವಾಗಿ ಕಲಿಯುತ್ತಿದ್ದೆ. ಆಗ ನಾನು ತಪ್ಪು ಮಾಡಿದರೂ ದೇವರ ದೃಷ್ಟಿಯಲ್ಲಿ ಅದು ಗಂಭೀರವಾದದ್ದಲ್ಲ. ನಾನು ಪ್ರಕಾಶನನ್ನು ಮೆಚ್ಚಲು ಪ್ರಾರಂಭಿಸಿದೆ. ಆತನು ಬಹಳ ಕಷ್ಟಪಟ್ಟು ದುಡಿಯುತ್ತಿದ್ದನು. ಕರ್ತನನ್ನು ಪ್ರೀತಿಸುತ್ತಿದ್ದನು. ಮತ್ತು ನನ್ನನ್ನು ಪ್ರೀತಿಸುತ್ತಿದ್ದನು. ಆದ್ದರಿಂದ ನಾವು ಆತ್ಮಧಿಕವಾದ ಸಂತೋಷದಲ್ಲಿದ್ದೇವೆ. ನಾವು ಪ್ರತಿ ದಿನ ಸಂಜೆ ವಿಹಾರಕ್ಕೆ ಹೋಗುತ್ತಿದ್ದೆವು. ಪ್ರತಿ ದಿನ ಅನುಭವಗಳನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳುತ್ತಿದ್ದರು. ಪ್ರತಿ ದಿನ ಇದಕ್ಕಾಗಿ ನಾನು ಎದುರುನೋಡುತ್ತಿದ್ದೆ.
ಎಲ್ಲಾ ಮದುವೆಯಾದ ಜೋಡಿಗಳಂತೆ ಕೆಲವು ಸಾರಿ ನಮ್ಮಲ್ಲಿ ತರ್ಕಗಳು ಇರುತ್ತಿದ್ದವು.ನಮ್ಮ ಹತೋಟಿ ತರ್ಕಗಳಲ್ಲಿ ಮೀರಿ ಹೋಗದ ಹಾಗೆ ನಾವು ಅದನ್ನು ನಮ್ಮ ಹತೋಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದೆವು. ದೇವರು ನನ್ನನ್ನು ಪ್ರಕಾಶನಿಗೆ ಸಹಕಾರಿಯಾಗಿರಲು ಕರೆದಿದ್ದೆನೆ ಹೊರತು ಬರೀ ಹೌದು ಎನ್ನುವ ಸ್ತ್ರೀಯಾಗಿಯಲ್ಲ. ಆದ್ದರಿಂದ ನನ್ನ ಅಭಿಪ್ರಾಯಕ್ಕೆ ಕಾರಣಗಳನ್ನು ಸಹ ತಿಳಿಸುತ್ತಿದ್ದೆ. ಆನಂತರ ಅದನ್ನು ಒಪ್ಪುವುದೋ ಅಥವಾ ಬಿಡುವುದೋ ಅದರ ತೀರ್ಮಾನವನ್ನು ಆತನಿಗೇ ಬಿಡುತ್ತಿದೆ.
ಆತನಿಗಿಂತ ನಾನು ಎಷ್ಟು ವ್ಯತ್ಯಾಸವಾಗಿದ್ದೇನೆಂಬುದನ್ನು ಕಂಡೆನು. ನನ್ನನ್ನು ಬಾಧಿಸುತ್ತಿದ್ದ ಸಣ್ಣ ವಿಷಯಗಳು ಆತನನ್ನು ಬಾಧಿಸುತ್ತಿದ್ದಂತೆ ಕಾಣುತ್ತಿರಲಿಲ್ಲ. ನಾನು ಸ್ತ್ರೀ ಮತ್ತು ಆತನು ಪುರುಷನಾಗಿರುವುದೇ ಇದಕ್ಕೆಕಾರಣವಿರಬೇಕು.
ಕೆಲವು ಸಾರಿ ನಾವು ಒಬ್ಬರನೊಬ್ಬರು ಹಂಗಿಸುತ್ತಾ ಒಟ್ಟಿಗೆ ನಗುತ್ತಿದ್ದೆವು. ಹೀಗೆ ನಮ್ಮ ಸಂಬಂದವು ನಿಜವಾಗಲೂ ಆರೋಗ್ಯಕರವಾಗಿದೆ ಎಂಬುದನ್ನು ನಾವು ತಿಳಿದಿದ್ದೆವೆ. ಒಟ್ಟಿಗೆ ನಮ್ಮ ಜೀವಿತ ನಿಜವಾಗಲೂ ಆರೋಗ್ಯಕರವಾಗಿದೆ ಎಂಬುದನ್ನು ನಾವು ತಿಳಿದಿದ್ದೇವೆ. ಒಟ್ಟಿಗೆ ನಮ್ಮ ಜೀವಿತ ನಿಜವಾಗಲೂ ಬಹಳ ಹಾಸ್ಯದಿಂದ ಕೂಡಿದೆ.
ಒಂದು ದಿನ ನಾನು ಕುಳಿತು ವಿಶೇಷವಾಗಿ ನನ್ನ ಸ್ವಂತ ಸಮಸ್ಯೆಗಳಾಗಿರುವುಗಳನ್ನು ಒಂದು ಪಟ್ಟಿ ಮಾಡಿದ ಮತ್ತು ಅವುಗಳನ್ನು ನಾನು ಹೇಗೆ ಎದುರಿಸಬೇಕೆಂಬುದಾಗಿ ದೇವರನ್ನು ಕೇಳಿದ.
ಮನೆಯನ್ನು ಬಿಟ್ಟ ದಿನದಿಂದ ಆಗಾಗ ನನಗೆ ಏಕಾಂತತೆ ಮತ್ತು ಮನೆಯ ಬಗ್ಗೆ ಚಿಂತೆ ಬರುತ್ತಿತ್ತು. ಮನೆಯ ಕಡೆಯ ಚಿಂತೆ ಮತ್ತು ಏಕಾಂತತೆಯು ಸಾಧಾರಣವಾಗಿ ನನ್ನ ದಿನಚರಿಯ ಜೀವಿತದಲ್ಲಿ ಏರುಪೇರುಗಳಾದಾಗ ಕಂಡು ಬರುತ್ತಿತ್ತು. ಆದರೆ ನಾನು ದೇವರನ್ನು ಹೆಚ್ಚೆಚ್ಚಾಗಿ ನನ್ನ ತಂದೆ ತಾಯಿ ಮತ್ತು ಸ್ನೇಹಿತನೆಂಬುದಾಗಿ ತಿಳಿದುಕೊಂಡಾಗ ನನ್ನ ಎಲ್ಲಾ ಚಿಂತೆಯನ್ನು ಆತನಲ್ಲಿ ಹೇಳಿ ಸಹಾಯಕ್ಕಾಗಿ ಕೇಳುವುದನ್ನು ಕಲಿತಾಗ ಈ ಏಕಾಂತತೆಯನ್ನು ನಿಯಂತ್ರಿಸಲು ಸಾಧ್ಯವಾಯಿತು.
ನಾನು ಬಹಳ ಅಂಜಿಕೆಯುಳ್ಳವಳು. ನಾನು ಕತ್ತಲೆಗೆ ಹೆದರುತ್ತಿದ್ದೆ. ಮತ್ತು ಅನೇಕ ವಿಷಯಗಳ ಬಗ್ಗೆ ಹೆದರುತ್ತಿದ್ದೆ. ನಾನು ದಾದಿಯಾಗಿ ಕೆಲಸ ಮಾಡುವಾಗ ಮರಣಕರವ್ಯಾದಿಯುಳ್ಳ ರೋಗಿಯನ್ನು ನೋಡಿಕೊಳ್ಳಬೇಕಾದ ನಾನು ಸಾಯಬಹುದು ಎಂಬದಾಗಿ ಭಯವಾಗಿತ್ತು.
ಒಂದು ದಿನ ದೇವರು ಭಯಪಡಬೇಡಿರಿ ಎಂಬದಾಗಿ ಹಳೆಯ ಒಡಂಬಡಿಕೆಯಲ್ಲಿ ಆತನನ್ನು ಪ್ರೀತಿಸುವ ಜನರಿಗೆ ಎಷ್ಟೋ ಸಾರಿ ಹೇಳಿರುವುದನ್ನು ನಾನು ಕಂಡೆ. ಮತ್ತು ಆಗಾಗ ಯೇಸುವು ಸಹ ತನ್ನ ಪ್ರೀತಿಯ ಶಿಷ್ಯರಿಗೆ ಇದೇ ರೀತಿಯ ಮಾತುಗಳನ್ನು ಹೇಳಿದನು. ಪ್ರೀತಿಸುವ ತಂದೆ ಮತ್ತು ಸ್ನೇಹಿತನೂ ಆಗಿರುವಾತನಿಂದ ಇದು ಒಂದು ಆಜ್ಞೆಯಂತೆಯೂ ಹಾಗೂ ಆದರಣೆಯ ಮಾತಿನಂತೆಯೂ ಇರುವುದನ್ನು ನಾನು ಕಂಡೆ. ಇದನ್ನು ನಾನು ಆಗಾಗ ಜ್ಞಾಪಿಸಿಕೊಳ್ಳುತ್ತಿರುತ್ತೇನೆ. ಭಯವು ಬಂದ ತಕ್ಷಣ ಅಥವಾ ನಾನು ಕೆಲವು ಕಾಲ ಈ ಭಯದೊಂದಿಗೆ ಹೋರಾಡಿದ ನಂತರ ಕರ್ತನು ನನ್ನಿಂದ ಅದನ್ನು ಹೋಗಲಾಡಿಸುತ್ತಾನೆ. ಕಾರಣವಿಲ್ಲದೆಯೇ ಅಳುವುದು ಅಥವಾ ಸಣ್ಣ ವಿಷಯಕ್ಕಾಗಿ ಅಳುವ ಕೆಟ್ಟ ಸ್ವಭಾವವು ನನ್ನಲ್ಲಿತ್ತು. ನಾನು ಈ ರೀತಿ ಅಳುವುದು ನನ್ನಲ್ಲಿರುವ ಕಾರಣವೇ ಆಗಿದೆ ಎಂಬುದು ಈಗ ನನಗೆ ತಿಳಿಯಿತು.ನನ್ನ ಪ್ರತಿಯೊಂದು ಕಣ್ಣೀರನ್ನು ಕರ್ತನು ಅಳಿಸಿಬಿಡುವುದಾಗಿ ವಾಗ್ದಾನ ನೀಡಿದ್ದನು.ನಾನು ಸಣ್ಣ ಹುಡುಗಿಯಾಗಿದ್ದಾಗ ಹಾಸ್ಟೆಲಿನಲ್ಲಿ ಕಲಿಯುತ್ತಿದ್ದ ಹಾಡನ್ನು ನಾನು ಬಹಳ ನೆನಸಿದೆ.
“ತನ್ನ ಸ್ವಂತ ದುಃಖಗಳಿಗಾಗಿ ಆತನಲ್ಲಿ (ಯೇಸು) ಕಣ್ಣೀರಿಡಲಿಲ್ಲ." ಆದರೆ ಬೆವರಿನ ಹನಿಗಳಂತೆ ರಕ್ತವನ್ನು ನನಗಾಗಿ ಸುರಿಸಿದನು.
ಕೆಲವು ವರ್ಷಗಳ ನಂತರ ಕಾರಣವಿಲ್ಲದೆ ಅಳುವ ಈ ಅಭ್ಯಾಸದಿಂದ ಬಿಡುಗಡೆ ಹೊಂದಲು ಮತ್ತುಬಹಳವಾಗಿ ಇತರರ ದುಃಖಗಳಿಗಾಗಿ ಚಿಂತಿಸುವಂತೆ ಆತನು ಸಹಾಯಿಸಿದನು.
ಅಭದ್ರತೆಯು ಮತ್ತೊಂದು ದೊಡ್ಡ ರಾಕ್ಷಸನಂತೆ ಬೇರೆ ಬೇರೆ ರೀತಿ ನನ್ನಲ್ಲಿ ಪ್ರಕಟವಾಗಿತ್ತು. ಇದು ನನ್ನ ಸ್ನೇಹಿತರನ್ನು ಮತ್ತು ನನ್ನ ವಸ್ತುಗಳನ್ನು ವಶೀಕರಣ ಮಾಡುವಂತೆ ಮಾಡಿತು. ಇತರರಿಂದ ಆಳವಾಗಿ ಪ್ರೀತಿಸಲ್ಪಡಬೇಕೆಂಬುದೇ ನನ್ನ ಆಶೆ. ನನ್ನ ಸ್ನೇಹಿತರು ಬೇರೆಯವರನ್ನು ಪ್ರೀತಿಸಿದರೆ ನಾನು ಹೊಟ್ಟೆ ಕಿಚ್ಚು ಪಡುತ್ತಿದ್ದೆ. ಅವರ ಸ್ನೇಹತ್ವ ನನಗಾಗಿ ಮಾತ್ರ ಇರಲು ಇಷ್ಟಪಡುತ್ತಿದ್ದೆ. ನಾನು ಹಾಸ್ಟೆಲಿನಲ್ಲಿ ಇರುವಾಗಲೂ ಸಹ ಈ ಮನೋಬಾವನೆಯನ್ನು ನನ್ನಲ್ಲಿ ಕಂಡಿದ್ದೆ. ಈ ಮನೋಭಾವನೆಯು ತಪ್ಪೆಂಬುದನ್ನು ನಾನು ತಿಳಿದಿದ್ದೆ. ಆದರೆ ಇದರ ಬಗ್ಗೆ ನಾನು ಏನು ಮಾಡಲು ಸಾಧ್ಯವಿರಲಿಲ್ಲ. ನಾನು ಮದುವೆಯಾದರ ನಂತರವೂ ಇದೇ ಆಕ್ರಮಿಸುವ ಮನೋಭಾವನೆಯನ್ನು ಪ್ರಕಾಶನ ಕಡೆಗೂ ಸಹ ನನ್ನಲ್ಲಿ ಕಂಡೆ.ಆತನ ನೆಂಟರಿಸ್ಟರು ಹತ್ತಿರವಾಗಿರುವುದನ್ನು ಸಹ ನಾನು ಸಹಿಸುತ್ತಿರಲಿಲ್ಲ. ಪ್ರಕಾಶನು ಈಗ ನನಗೆ ಸೇರಿದವನು ಎಂಬುದನ್ನು ಹೇಳಿಕೊಳ್ಳುವುದರ ಮೂಲಕ ನನ್ನನ್ನು ನಾನು ನೀತಿಕರಿಸಿಕೊಳ್ಳುತ್ತಿದ್ದೆ. ಆದರೆ ನನ್ನ ಮನೋಭಾವನೆಯು ತಪ್ಪೆಂಬುದನ್ನು ನಾನು ತಿಳಿದೆ. ನನ್ನನ್ನು ಮದುವೆಯಾದ ಮಾತ್ರಕ್ಕೆ ತನ್ನ ಮಗನನ್ನು ತಾಯಿ ಪ್ರೀತಿಸದೆ ಇರುವಂತೆ ನಾನು ಹೇಗೆ ತಾನೇ ಬಯಸಲು ಸಾಧ್ಯ. ಇತರರು ತಮ್ಮ ಪ್ರೀತಿಯನ್ನು ನನ್ನ ಮೇಲೆ ಸುರಿಸುತ್ತಿರುವುದನ್ನು ನಾನು ಅನುಭವಿಸಿದೆ. ತನ್ನ ಸ್ವಂತ ಸಂಭಂದಿಕರ ಪ್ರೀತಿಯನ್ನು ಅನುಭವಿಸಲು ಪ್ರಕಾಶನನ್ನು ಬಿಡದೆ ಇರುವುದು ನನ್ನ ಸ್ವಾರ್ಥತೆ. ಸ್ತ್ರೀಯರಲ್ಲಿ ಕಂಡುಬರುವ ಮತ್ತೊಂದು ಲಕ್ಷಣವನ್ನು ಒಂದು ವೇಳೆ ದೇವರ ಮಗುವಾಗಿ ನಾನು ಎದುರಿಸಬೇಕಾಗಿತ್ತು.
ವಸ್ತುಗಳನ್ನು ಕೊಳ್ಳುವ ಹುಚ್ಚು ನನ್ನಲ್ಲಿ ಬಹಳವಾಗಿತ್ತು. ನಾನು ಕೊಳ್ಳಬೇಕೆಂಬುದಾಗಿ ಇರುವಂತದನ್ನು ಪ್ರಕಾಶನು ಕೊಳ್ಳುವುದಿಲ್ಲ ಮತ್ತು ನನಗೆ ಅವಶ್ಯವೆಂದು ಕಂಡು ಬರುವಂತದ್ದು ಪ್ರಕಾಶನಿಗೆ ಅವಶ್ಯವೆಂದು ಕಾಣದಿರಬಹುದು. ಮತ್ತು ನಾನು ಬಹಳವಾಗಿ ಹಣವನ್ನು ಖರ್ಚುಮಾಡುವುದನ್ನು ಪ್ರಕಾಶನು ಇಷ್ಟಪಡುವುದಿಲ್ಲವೆಂಬದಾಗಿ ನಾನು ನೆನಸಿದೆ. ಆದ್ದರಿಂದ ಕೆಲವು ಸಾರಿ ಆತನನ್ನು ಕೇಳದೆಯೇ ಕೆಲವು ವಸ್ತುಗಳನ್ನು ಕೊಂಡುಕೊಳ್ಳುತ್ತಿದ್ದೆ. ಆದರೆ ನಾನು ಸರಳ ಹಾಗೂ ಸಾಧುವಾಗಿದುದ್ದರಿಂದ ಆಗಾಗ ಆ ಪಟ್ಟಣದ ಜನರಿಂದ ವಂಚಿಸಲ್ಪಡುತ್ತಿದ್ದೆ. ಆನಂತರ ನಾನು ಯಾವುದೇ ಬೆಲೆಬಾಳುವ ವಸ್ತುಗಳನ್ನು ಕೊಳ್ಳಬೇಕಾಗಿದ್ದರೂ ಪ್ರಕಾಶನ ಜೊತೆಯಲ್ಲಿಯೇ ಮಾತ್ರ ವ್ಯಾಪಾರ ಮಾಡುವುದು ಉತ್ತಮವೆಂದು ತಿಳಿದೆ.
ಕೆಲವು ಸಂದರ್ಭಗಳಲ್ಲಿ ಪ್ರಕಾಶನು ನವೀನ ಮಾದರಿಯ ಉಡುಪುಗಳನ್ನು ಕೊಳ್ಳಬಹುದೆಂಬದಾಗಿ ನಿರೀಕ್ಷಿಸಿದೆ.ಆದರೆ ಅಂತಹ ಕೋರಿಕೆಗಳು ಇತರರನ್ನು ಪ್ರವಾವಿಸಬೇಕೆಂಬುವ ಆಶೆಯಿಂದ ಹುಟ್ಟಿತ್ತದೆಂಬದನ್ನು ನಾನು ಕಂಡೆ. ಮತ್ತು ನಾನು ಅದಕ್ಕಾಗಿ ಪಶ್ಚಾತ್ತಾಪ ಪಟ್ಟೆ. ನಾನು ಲೌಕೀಕತೆಯನ್ನು ತೊರೆಯಬೇಕು ಮತ್ತು ಲೌಕಿಕ ಮಾದರಿಯ ಬಗ ೆ ಬಯಸುವುದನ್ನು ನಿಲ್ಲಿಸಬೇಕು. ನನಗಿಂತಲೂ ಬಡವರಾಗಿರುವವರ ಜೊತೆಗೆ ನನ್ನ ಹತ್ತಿರವಿರುವ ವಸ್ತುಗಳನ್ನು ಹಂಚಿಕೊಳ್ಳುವುದನ್ನು ಕಲಿಯುವ ಅವಶ್ಯವಾದದ್ದನ್ನು ಕೊಡುತ್ತಾರೆ.
ಕೆಲವು ಸಂದರ್ಭಗಳಲ್ಲಿ ನಾನು ನನ್ನ ಅತ್ತೆಯವರ ಜೊತೆಯಲ್ಲಿ ಕೋಪದಿಂದ ಇದ್ದು ಬಹಳ ಕಾಲದವರೆಗೆಮಾತನಾಡದೇ ಇರುತ್ತಿದ್ದೆ.ಆಕೆಯ ಖಂಡಿಸುವ ಸಂಭಾಷಣೆ ಮತ್ತು ಬುದ್ದಿ ಮಾತುಗಳಿಗಾಗಿ ನಾನು ಕೋಪಿಸಿಕೊಳ್ಳುತ್ತಿದ್ದೆ. ನಾನು ಮೌನವಾಗಿರುವುದರ ಮೂಲಕ ಸೇಡನ್ನು ತೀರಿಸಿಕೊಳ್ಳುತ್ತಿದ್ದೆ. ಮಾತನಾಡದೇ ಇರುವುದು ಕೋಪಗೊಳ್ಳುವುದಕ್ಕಿಂತ ಕೀಳಾದದ್ದೆಂಬದನ್ನು ನಾನು ಈಗ ಗ್ರಹಿಸಿದೆ. ಈ ಪಾಪಮಯವಾದ ಸ್ವಭಾವದಿಂದ ಬಿಡುಗಡೆ ಮಾಡುವಂತೆ ನಾನು ಕರ್ತನನ್ನು ಕೇಳಿಕೊಂಡೆನು. ನಾನು ದೇವರೊಂದಿಗೆಅನುದಿನವೂ ನಡೆಯುವಾಗ ಉದಾಸೀನವಾಗಿರುವಾಗಲೇ ಪಾಪದಲ್ಲಿ ಬಿದ್ದಿರುವುದನ್ನು ನಾನು ಕಂಡುಕೊಂಡೆ. ನಾನು ಈ ಪಾಪವನ್ನು ಗ್ರಹಿಸುವಾಗ ಕರ್ತನು ನನ್ನನ್ನು ಕ್ಷಮಿಸುವಂತೆ ಆತನನ್ನು ಕೇಳಿಕೊಳ್ಳಳ್ಳುತ್ತಿದ್ದೆ. ಮತ್ತು ನನ್ನ ಅತ್ತೆಯವರಿಂದ ಕ್ಷಮಾಪಣೆಯನ್ನು ಕೇಳುತ್ತಿದ್ದೆ.
ಪ್ರಕಾಶನ ಜೊತೆಗೆ ಬೇರೆ ಸ್ತ್ರೀಯರು ಮಾತನಾಡುವಾಗ ನನ್ನ ಸ್ವಾದೀನ ಸ್ವಭಾವದ ಸಲುವಾಗಿ ಮತ್ತು ಅಭದ್ರತೆಯ ಶಾಖೆಯ ಸಲುವಾಗಿ ನಾನು ಹೊಟ್ಟೆಕಿಚ್ಚು ಪಡುತ್ತಿದ್ದೆ. ನನ್ನ ಹೊರತು ಬೇರೆ ಯಾವುದೇ ಸ್ತ್ರೀಯ ಮೇಲೆ ಪ್ರಕಾಶನಿಗೆ ಆಸಕ್ತಿ ಇಲ್ಲವೆಂಬುದು ನನಗೆ ಚೆನ್ನಾಗಿ ತಿಳಿದಿತ್ತು. ಆತನಂತೆ ನಂಬಿಗಸ್ತರು ಬೇರೆ ಯಾರೂ ಇರಲಾರರು. ಆದರೂ ನನ್ನ ಸ್ವಾದೀನ ಪಡಿಸುವ ಸ್ವಭಾವ ನನ್ನನ್ನೆ ಹೊಟ್ಟೆಕಿಚ್ಚು ಪಡುವಂತೆ ಮಾಡಿತು. ಪ್ರಕಾಶನನ್ನು ಈ ರೀತಿ ದೂಷಿಸುವುದು ಅಥವಾ ಅವನ ಬಗ್ಗೆ ಸಂಶಯ ಪಡುವುದು ಮತ್ತು ಈ ಮೂಲಕ ಆತನಿಗೆ ಜೀವಿತವನ್ನು ಕಷ್ಟಗೊಳಿಸುವುದು ತಪ್ಪೆಂಬುದನ್ನ ಕರ್ತನು ನನಗೆ ಕಲಿಸಿಕೊಟ್ಟನು. ಒಂದು ವೇಳೆ ನಾನು ಈ ರೀತಿ ವರ್ತಿಸಿದ್ದು ನನ್ನ ಸ್ವಂತ ತಂದೆಯೇ ನನ್ನ ತಾಯಿಗೆಅಪನಂಬಿಗಸ್ಥರಾಗಿರುವುದನ್ನು ನಾನು ತಿಳಿದಿದ್ದುದ್ದೆ ಕಾರಣವಾಗಿರಬಹುದು. ಅಥವಾ ಎಲ್ಲಾ ಸ್ತ್ರೀಯರು ಸಹ ಇದೇ ರೀತಿ ಇರಬಹುದು.
ಆದರೆ ನಾನು ಆಸ್ಪತ್ರೆಯಲ್ಲಿ ಕೆಲಸ ಮಾಡುವಾಗ ಕೆಲವು ಗಂಡಸರ ಜೊತೆ ಆಗಾಗಮಾತನಾಡಬೇಕಾಗಿರುವುದನ್ನು ನಾನು ಯೋಚಿಸಿದೆ. ಅದರಲ್ಲಿ ಏನು ತಪ್ಪು?ನನ್ನ ಮನೋಭಾವನೆಯೇ ತಪ್ಪಾದದ್ದು. ಮತ್ತು ಅದು ಬದಲಾಗಬೇಕಾಗಿತ್ತು. ಪ್ರಕಾಶನು ನನ್ನ ಜೊತೆ ಎಷ್ಟು ತಾಳ್ಮೆಯಿಂದ ಇದ್ದಿರಬಹುದು.
ನಾನು ಸಣ್ಣ ಹುಡುಗಿಯಾಗಿದ್ದಾಗ ನಾನು ಮತ್ತು ನನ್ನ ತಾಯಿ ಸಂಧಿಸಿದ ಆ ಸ್ತ್ರೀಯಿಂದ ನನ್ನ ತಾಯಿ ಪಡೆದುಕೊಂಡ ಆ ಬುದ್ದಿ ಮಾತುಗಳನ್ನು ನಾನು ಆಗಾಗ ನೆನಪಿಸಿಕೊಳ್ಳುತ್ತೇನೆ.
ಒಂದು ವೇಳೆ ನಿಮ್ಮ ಗಂಡನು ಅಪನಂಬಿಗಸ್ಥನಾಗಿದ್ದರೆ, ನೀವು ಅವನನ್ನು ಕ್ಷಮಿಸಿಬೇಕು. ಮತ್ತು ಬಹಳವಾಗಿ ಪ್ರೀತಿಯನ್ನೆ ತೋರಿಸಿಬೇಕು. ಆ ಪ್ರೀತಿಯ ಶಕ್ತಿಯ ನಿಮಿತ್ತ ಆಯಸ್ಕಾಂತದ ಕಡೆಗೆ ಕಬ್ಬಣದ ಚೂರುಗಳು ಆಕರ್ಷಿಸುವ ಹಾಗೆ ಅವನು ನಿಮ್ಮ ಕಡೆಗೆ ಬರುವನು. ಹೀಗೆ ಒಬ್ಬ ಬುದ್ದಿವಂತ ಹೆಂಡತಿಯು ತನ್ನ ಗಂಡನನ್ನು ಅನೇಕ ಬೀಳುವಿಕೆಯಿಂದ ತಪ್ಪಿಸುವಳು.
ಒಂದು ದಿನ ಕ್ಯಾನ್ಸರಿನಿಂದ ಸಾಯುತ್ತಿದ್ದ ಒಬ್ಬ ಮನುಷ್ಯನು ನಮ್ಮ ಆಸ್ಪತ್ರೆಯಲ್ಲಿ ದಾಖಲಾದ. ಕುಟುಂಬದಿಂದ ದೂರವಿದ್ದು ಬೇರೆ ಪಟ್ಟಣದಲ್ಲಿ ಕೆಲಸಮಾಡುತ್ತಿದ್ದಾಗ ಒಬ್ಬ ಸ್ತ್ರೀ ಜೊತೆ ಪಾಪ ಮಾಡಿ ಆಕೆಗೆ ಒಂದು ಮಗುವಾಗಿತ್ತೆಂಬುದನ್ನು ನಾನು ಕೇಳಿಸಿಕೊಂಡೆ.ಅವನ ಹೆಂಡತಿಯು ಒಬ್ಬ ವಿಶ್ವಾಸಿಯಾಗಿದ್ದು ಅವನನ್ನು ಆಸ್ಪತ್ರೆಗೆ ದಾಖಲೆಮಾಡಿ ಸಾಯುವವರೆಗೂ ಅವನನ್ನು ಆಸಕ್ತಿಯಿಂದ ನೋಡಿಕೊಂಡಳು. ಆನಂತರ ತನ್ನ ಗಂಡನು ಪಾಪ ಮಾಡಿದ್ದ ಆ ಸ್ತ್ರೀ ಜೊತೆ ಸ್ನೇಹ ಬೆಳೆಸಿದಳೆಂಬುದಾಗಿ ಕೇಳಿಸಿಕೊಂಡೆ. ಆಕೆಗೆ ಹುಟ್ಟಿದ ಮಗುವನ್ನು ದತ್ತು ತೆಗೆದುಕೊಂಡು ತನ್ನ ಸ್ವಂತ ಮಗುವಿನಂತೆ ಬೆಳೆಸಿದಳು. ಆಕೆಯ ಈ ಮಗುವನ್ನು ನಾನುಪ್ರೀತಿಸುತ್ತೇನೆ. ಯಾಕಂದರೆ ಇದು ನನ್ನ ಗಂಡನಿಂದ ಬಂದ ಸಂತಾನ ಎಂದು ಇತರರಿಗೆ ಹೇಳುತ್ತಿದ್ದಳು. ಒಬ್ಬ ಮಾನವ ಜೀವಿಯು ಇಷ್ಟು ಪ್ರೀತಿಸುವ ಮತ್ತು ಕ್ಷಮಿಸುವ ಅದ್ಭುತವನ್ನು ಕ್ರಿಸ್ತನು ಮಾತ್ರ ಮಾಡಲು ಸಾಧ್ಯ. ಇಂತಹ ಉದಾಹರಣೆಗಳು ನನ್ನ ಗಂಡನನ್ನು ಪ್ರೀತಿಸುವ ಹೆಂಡತಿಯಾಗಿರಲು ನನ್ನನ್ನು ಉತ್ತೇಜಿಸುತ್ತದೆ. ಮದುವೆಯಲ್ಲಿ ಬಹಳ ದೊಡ್ಡ ಅವಶ್ಯಕತೆಯೆಂದರೆ ಮರಣದವರೆಗೂ ಪ್ರೀತಿಯಲ್ಲಿ ಸಿದ್ದಿಗೆ ಬರುವಂತದು ಎಂಬುದನ್ನು ನಾನು ಕಲಿತೆ. ಪ್ರೀತಿಯು ಗಂಡನ ತಪ್ಪು ದೋಷಗಳನ್ನು ಮತ್ತು ಪಾಪಗಳನ್ನು ಉಚ್ಚುತ್ತದೆ. ಆತನ ಹಿಂದಿನ ಪಾಪಗಳನ್ನು ಲಕ್ಷಿಸದೆ ಅವುಗಳನ್ನು ಉದಾಸೀನ ಮಾಡುತ್ತದೆ.
ಪ್ರತಿ ಸಾರಿ ನಾನು ಪ್ರೀತಿಯ ಬಗ್ಗೆ ಬರೆದಿರುವ ಅಧ್ಯಾಯವನ್ನು (1ಕೊರಿಂಥ 13) ದೇವರ ಮಟ್ಟಕ್ಕೆ ಹೋಲಿಸುವಾಗ ನಾವು ಬಹಳ ಕೆಳಮಟ್ಟದಲ್ಲಿದ್ದೆವೆಂಬುದನ್ನು ಅನ್ನಿಸುತ್ತದೆ. ಮತ್ತು ಅದನ್ನು ತಲುಪಲು ಬಹಳ ದೂರ ಸಾಗಬೇಕು ಎಂಬುದನ್ನು ನಾನು ಕಂಡುಕೊಂಡೆ.
ದೇವರ ಪ್ರೀತಿ ಮಾತ್ರ ಈ ಪ್ರಪಂಚದ ಕತ್ತಲೆಯಲ್ಲಿ ಬದಲಾಗದ ಬೆಳಗುವ ಬೆಳಕಾಗಿದೆ. ದೇವರು ನನ್ನನ್ನು ಬಹಳ ಪ್ರೀತಿಸಿದ್ದಾನೆ. ಈ ಮೂಲಕ ನನ್ನ ಸುತ್ತಲಿರುವವರಿಗೆ ನನ್ನನ್ನು ಆತನ ಪ್ರೀತಿಯ ಸಾಲಗಾರಳನ್ನಾಗಿ ಮತ್ತು ನನ್ನ ಹಾದಿಯಲ್ಲಿ ಬರುವವರಿಗೆ ಈ ಪ್ರೀತಿಯಿಂದ ಯಾವಾಗಲೂ ನನ್ನ ಹೃದಯ ತುಂಬಿರಬೇಕಾದರೆ ನಾನು ಯಾವಾಗಲೂ ಪವಿತ್ರಾತ್ಮನಿಂದ ತುಂಬಿರುವುದು ಅವಶ್ಯವೆಂಬುದನ್ನು ನಾನು ಕಂಡುಕೊಂಡೆ. ನನಗಾಗಿ ತನ್ನ ಮಗನನ್ನು ಸಹ ಬಿಡದೆ ಈ ಲೋಕಕ್ಕೆ ಕಳುಹಿಸಿದ ದೇವರು ನನಗಾಗಿ ಎಲ್ಲಾ ಸಂಗತಿಗಳನ್ನು ನನ್ನ ಜೀವನವಿಡೀ ಧಾರಾಳವಾಗಿ ಕೊಡುವನೆಂದು ತಿಳಿದಿದ್ದೇನೆ.
ಎಂಥಹ ಆಶ್ಚರ್ಯಕರವಾದ ರಕ್ಷಣೆಯನ್ನು ನಾನು ಪಡೆದಿದ್ದೇನೆ.
ನನ್ನ ಸಣ್ಣ ವಯಸ್ಸಿನಿಂದಲೂ ನಾನು ಬೇಡದವಳಾಗಿದ್ದೆ. ಆದರೆ ಈಗ ಇಡೀ ಪ್ರಪಂಚದಲ್ಲಿ ನನ್ನ ಹಾಗೆ ಸಂತೋಷವುಳ್ಳವರು ಇದ್ದಾರೋ ಎಂಬುದಾಗಿ ಅನ್ನಿಸುವಷ್ಟು ಕೃಪೆಯನ್ನು ಕರ್ತನಿಂದ ನಾನು ಹೊಂದಿದ್ದೇನೆ. ನನ್ನ ಸ್ವಂತದ್ದು ಎಂದು ಹೇಳಲಾಗದ ಮನೆ ಇಲ್ಲದಿದ್ದರೂ ನನ್ನ ಗಂಡನ ತಂದೆ ತಾಯಿಗಳ ಜೊತೆಗೆ ಜೀವಿಸುತ್ತಿದ್ದರೂ ಹೇಗೆ ನಾನು ಇಷ್ಟು ಸಂತೋಷವುಳ್ಳವಳಾಗಿದ್ದೇನೆ ಎಂಬುದಾಗಿ ಆಶ್ಚರ್ಯ ಪಡಬಹುದು. ನನ್ ಸಂತೋಷವನ್ನು ನಾನು ಕಂಡಿರುವುದು ನನ್ನ ಸಂದರ್ಭಗಳಲ್ಲಿ ಅಲ್ಲ. ನನ್ನ ಕರ್ತನಲ್ಲಿ ಇವೆಲ್ಲದಕ್ಕೂಕಾರಣ
.'ಸಂತೃಪ್ತಿಕರವಾದ ಭಕ್ತಿಯು ಎಷ್ಟೋ ಲಾಭ'
ನಾನು ಸಂಧಿಸಿರುವ ಅನೇಕ ಕ್ರೈಸ್ತರು ಅಸಂತೋಷವಾಗಿರಲು ಕಾರಣ ನನಗೆ ಈಗ ತಿಳಿಯಿತು. ಲೌಕೀಕ ಬಯಕೆಗಳಲ್ಲಿ ಅವರು ಅತೃಪ್ತರಾಗಿದ್ದಾರೆ. ಅವರಿಗೆ ಒಂದು ಅಥವಾ ಅನೇಕ ವಸ್ತುಗಳು ಇರಬೇಕು. ಅದು ಇಲ್ಲದೆ ಏನನ್ನು ಮಾಡಲು ಸಾಧ್ಯವಿಲ್ಲವೆಂದು ಅವರು ನೆನಸುತ್ತಾರೆ. ಹೀಗೆ ಅವರುಅವಿಶ್ರಾಂತರಾಗುತ್ತಾರೆ.ನನಗೆ ಪವಿತ್ತಾತ್ಮನ ಅಭಿಷೇಕವಾದಾಗ ನಾನು ಕರ್ತನಿಗೆ ಕರ್ತನಾದ .ಯೇಸುವೇ ಈಗಿನಿಂದ ಈ ಲೋಕದಲ್ಲಿ ನಾನು ನಿನ್ನನ್ನಲ್ಲದೆ ಬೇರೆ ಯಾವುದನ್ನು ಆಶಿಸುವುದಿಲ್ಲ ಎಂಬುದಾಗಿ ಹೇಳಿದ್ದು ನನಗೆ ಚುರುಕಾಗಿ ಜ್ಞಾಪಕವಾಗುತ್ತದೆ (ಕೀರ್ತನೆ 73:25). ನಾನು ನನ್ನ ಮಾತನ್ನುಉಳಿಸಿಕೊಂಡಿದ್ದೆನಾ? ಎಂಬುದಾಗಿ ದನಾ ನನ್ನನ್ನು ಪರೀಕ್ಷಿಸಿಕೊಳ್ಳುತ್ತೇನೆ. ಆಗ ನಾನು ಹಿಂಜಾರಿರುವುದು ಕಂಡು ಬಂದಿತು. ನಾನು ಪಶ್ಚಾತ್ತಾಪ ಪಟ್ಟು ಕರ್ತನನ್ನು ನನ್ನ ಹೃದಯಪೂರ್ವಕವಾಗಿ ಪ್ರೀತಿಸಲು ವಾಗ್ದಾನವನ್ನು ಪುಃನ ನವೀಕರಿಸಿದೆ.
ಹೀಗೆ ಕರ್ತನು ನನ್ನನ್ನು ಕಾಪಾಡಿದನು. ನನ್ನ ಜೀವಿತದ ಅಂತ್ಯದವರೆಗೂ ನನ್ನನ್ನು ಆತನು ತನ್ನ ಪ್ರೀತಿಯಲ್ಲಿನೆಲೆಗೊಳಿಸುತ್ತಾನೆಂದು ನಾನು ನಂಬುತ್ತೇನೆ.
ನನ್ನ ಹೆಸರಿಗೆ ತಕ್ಕಂತೆ ನನ್ನ ಅನುಭವ ಸಹ ಇದೆ. ನಾನು ಕೃಪೆಯ ಮೇಲೆ ಕೃಪೆಯನ್ನು ಪಡೆದಿದ್ದೇನೆ. ಕರ್ತನಾದ ಯೇಸುವಿಗೆ ಎಲ್ಲಾ ಪ್ರಭಾವ ಮತ್ತು ಗೌರವವನ್ನು ಕೊಡಲು ಆಶಿಸುತ್ತೇನೆ.
'ಯೇಸುವೇ ನನ್ನ ಕರ್ತನೇ, ನಾನು ಸಂಪೂರ್ಣವಾಗಿ ಅಧೀನತೆಯಲ್ಲಿ ತಲೆ ಬಾಗುತ್ತೇನೆ. ಯಾಕಂದರೆ ನೀನು ನನ್ನನ್ನು ಆ ಕಲ್ವಾರಿಯಲ್ಲಿ ಕೊಂಡುಕೊಂಡಿದ್ದೆ. ಈಗ ನಾನು ನಿನ್ನವಳು ಮತ್ತು ಎಂದೆಂದಿಗೂ ನಿನ್ನವಳು ಮಾತ್ರ. ನನ್ನ ನಿತ್ಯತ್ವಕ್ಕೆ ನೀನೇ ನನ್ನ ಪಾಲು.